ಬ್ರೇಕಿಂಗ್ ನ್ಯೂಸ್
09-12-21 12:07 pm HK Desk news ದೇಶ - ವಿದೇಶ
ಕಾರ್ಕಳ, ಡಿ.9 : ತಮಿಳುನಾಡಿನ ಊಟಿಯ ಬಳಿ ದುರಂತಕ್ಕೀಡಾದ ಹೆಲಿಕಾಪ್ಟರ್ ನಲ್ಲಿ ಮಡಿದ ಯೋಧರ ಪೈಕಿ ಕಾರ್ಕಳದ ಅಳಿಯನೊಬ್ಬ ಇದ್ದಾರೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ. ದುರಂತದಲ್ಲಿ ಮರಣವನ್ನಪ್ಪಿದ ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ಕಾರ್ಕಳ ಮೂಲದ ಸೇನೆಯಲ್ಲಿ ಕರ್ತವ್ಯದಲ್ಲಿರುವ ಯುವತಿಯನ್ನು ಮದುವೆಯಾಗಿದ್ದರು.
ಕಾರ್ಕಳ ತಾಲೂಕಿನ ಸಾಲ್ಮರದ ನಿವಾಸಿಗಳಾದ ದಿವಂಗತ ಫೆಲಿಕ್ಸ್ ಮಿನೇಜಸ್ ಮತ್ತು ಮೇರಿ ಮಿನೇಜಸ್ ದಂಪತಿಯ ಮಗಳು ಆಗ್ನೆಸ್ ಪ್ರಫುಲ್ಲ ಮಿನೇಜಸ್ ಸೇನೆಯಲ್ಲಿ ಕರ್ತವದಲ್ಲಿದ್ದಾರೆ. ಹಲವು ವರ್ಷಗಳಿಂದ ಇಂಡಿಯನ್ ಆರ್ಮಿಯಲ್ಲಿ ಕರ್ತವದಲ್ಲಿರುವ ಆಗ್ನೆಸ್ ಪ್ರಫುಲ್ಲ ಸದ್ಯ ಲೆಫ್ಟಿನೆಂಟ್ ಹುದ್ದೆಯಲ್ಲಿದ್ದಾರೆ.
ಕರ್ತವ್ಯದ ಮಧ್ಯೆ ಹರ್ಜಿಂದರ್ ಸಿಂಗ್ ಮತ್ತು ಆಗ್ನೆಸ್ ಪ್ರಫುಲ್ಲ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯಾದ ಬಳಿಕ ತಂದೆ- ತಾಯಿ ನೆಲೆಸಿದ್ದ ಸಾಲ್ಮರಕ್ಕೆ ದಂಪತಿ ಹಲವು ಬಾರಿ ಭೇಟಿ ನೀಡಿದ್ದರು. ರಜೆ ಸಂದರ್ಭಗಳಲ್ಲಿ ಹರ್ಜಿಂದರ್ ಸಿಂಗ್ ಮತ್ತು ಆಗ್ನೆಸ್ ಊರಿಗೆ ಬಂದು ಹೋಗುತ್ತಿದ್ದರು ಎಂದು ಅಲ್ಲಿನ ಸಂಬಂಧಿಕರು ನೆನೆಯುತ್ತಾರೆ.
ಆಗ್ನೆಸ್ ಪ್ರಫುಲ್ಲ ಅವರ ತಾಯಿ ಮೇರಿ ಮಿನೇಜಸ್ ಈಗಲೂ ಸಾಲ್ಮರದ ಮೂಲ ಮನೆಯಲ್ಲೇ ಇದ್ದಾರೆ. ಡಿ.8ರ ಹೆಲಿಕಾಪ್ಟರ್ ದುರಂತದಲ್ಲಿ ಹರ್ಜಿಂದರ್ ಸಿಂಗ್ ಹೆಸರೂ ಇರುವುದು ತಿಳಿಯುತ್ತಿದ್ದಂತೆ, ಸಂಬಂಧಿಕರು ಮತ್ತು ಮನೆಮಂದಿ ಶೋಕಕ್ಕೆ ಒಳಗಾಗಿದ್ದಾರೆ.
Karkala has lost its son-in-law in the helicopter crash which happened in Coonoor on Wednesday December 8. Lt Col Harjinder Singh happened to be the son-in-law of Karkala origin Late Felix Menezes and Mary Menezes. Harjinder Singh had married Lt Agnes Prafulla Menezes, daughter of the late Felix and Mary Menezes of Salmara here in Karkala.
08-10-25 11:04 pm
Bangalore Correspondent
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
09-10-25 12:12 pm
HK News Desk
Navi Mumbai International Airport, PM Narendr...
08-10-25 08:57 pm
Nirmala Sitharaman, Cybersecurity: ನನ್ನ ಹೆಸರಿ...
08-10-25 08:40 pm
ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದಲ್ಲಿ ಮತ್ತೆ ಆರ...
08-10-25 05:49 pm
ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ ; ಅವಶೇಷಗಳಡಿ ಸ...
08-10-25 09:24 am
09-10-25 11:58 am
Mangalore Correspondent
Ullal, Fish Meal Factory Fire Breaks: ಉಳ್ಳಾಲ...
08-10-25 10:09 pm
ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಹಕ್ಕಿದೆ, ಸಹಕಾ...
08-10-25 06:07 pm
ತಲಪಾಡಿಯಲ್ಲಿ ಮಾನವ ಅಸ್ಥಿಪಂಜರ ಪತ್ತೆ ಪ್ರಕರಣ ; ಬಿಹ...
07-10-25 11:14 pm
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
08-10-25 08:47 pm
HK News Desk
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am