ಬ್ರೇಕಿಂಗ್ ನ್ಯೂಸ್
10-11-21 11:13 pm HK News Desk ದೇಶ - ವಿದೇಶ
ನವದೆಹಲಿ, ನ. 10: ಅಂತರರಾಷ್ಟ್ರೀಯ ಕುಸ್ತಿಪಟು ನಿಶಾ ದಾಹಿಯಾ ಮತ್ತಾಕೆಯ ಸಹೋದರನನ್ನು ಗುಂಡಿಟ್ಟು ಹತ್ಯೆಗೈಯಲಾಗಿದೆ ಎಂಬ ಸುದ್ದಿ ಕೆಲ ಹೊತ್ತಿನ ಮೊದಲು ಮಾಧ್ಯಮಗಳಲ್ಲಿ ರಾಚಿತ್ತು. ಆದರೆ ಅದೃಷ್ಟಕ್ಕೆ ನಕಲಿ ಎಂಬುದು ಗೊತ್ತಾಗಿದೆ. ಈ ಸುದ್ದಿಯನ್ನು ಸ್ವತಃ ನಿಶಾ ಅವರೇ ತಳ್ಳಿಹಾಕಿದ್ದಾರೆ.
ತಾನಿನ್ನೂ ಜೀವಂತವಾಗಿರುವುದಾಗಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆಕೆ ಮಾತನಾಡಿರುವ ವಿಡಿಯೋವನ್ನೂ ಎಎನ್ಐ ಪೋಸ್ಟ್ ಮಾಡಿದೆ. ಆದರೆ, ಸೋನೆಪತ್ನಲ್ಲಿ ನಿಶಾ ದಾಹಿಯಾ ಎಂಬ ಇನ್ನೊಬ್ಬ ಮಹಿಳೆಯ ಹತ್ಯೆಯಾಗಿರುವ ಸುದ್ದಿ ನಿಜ ಎನ್ನಲಾಗಿದೆ.
“ನಾನು ಗೋಂಡಾದಲ್ಲಿ ನ್ಯಾಷನಲ್ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ನನ್ನ ಸಾವಿನ ಸುದ್ದಿ ಸುಳ್ಳು. ನಾನು ಚೆನ್ನಾಗಿದ್ದೇನೆ” ಎಂದು ಮಹಿಳಾ ಕುಸ್ತಿಪಟು ನಿಶಾ ದಾಹಿಯಾ ಈ ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ.
ಒಲಿಂಪಿಕ್ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್ ಕೂಡ ಟ್ವೀಟ್ ಮಾಡಿದ್ದು, ನಿಶಾ ದಾಹಿಯಾ ಬದುಕಿದ್ದಾರೆ ಎಂದು ತಿಳಿಸಿದ್ಧಾರೆ.
ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಇತ್ತೀಚೆಗಷ್ಟೆ ಪದಕ ಗೆದ್ದು ಹೆಸರು ಮಾಡಿದ್ದ ಪ್ರತಿಭಾನ್ವಿತ ಮಹಿಳಾ ಕುಸ್ತಿಪಟು ನಿಶಾ ದಾಹಿಯಾ ಹಾಗೂ ಆಕೆಯ ಒಬ್ಬ ಸಹೋದರನನ್ನು ಆಗುಂತಕರು ಇಂದು ಬುಧವಾರ ಗುಂಡಿಟ್ಟು ಹತ್ಯೆಗೈದ ಘಟನೆ ಹರಿಯಾಣದಲ್ಲಿ ನಡೆದಿದೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಬಿತ್ತರವಾಗಿತ್ತು. ಸೋನೆಪತ್ನ ಹಲಾಲ್ಪುರ್ನಲ್ಲಿ ಈ ಕೃತ್ಯ ನಡೆದಿದೆ. ಈ ಘಟನೆಯಲ್ಲಿ ನಿಶಾ ದಾಹಿಯ ತಾಯಿಯ ಮೇಲೂ ಅಪರಿಚಿತರು ಗುಂಡು ಹೊಡೆದಿದ್ದಾರೆ. ಧನ್ಪತಿ ಅವರು ಗಂಭೀರವಾಗಿ ಗಾಯಗೊಂಡಿದ್ಧಾರೆ. ಅವರನ್ನ ರೋಹ್ಟಕ್ನಲ್ಲಿರುವ ಪಿಜಿಐ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಈ ಸುದ್ದಿಯಲ್ಲಿ ತಿಳಿಸಲಾಗಿದೆ..
ಆದರೆ, ಹತ್ಯೆಯಾದ ನಿಶಾ ದಾಹಿಯಾ ಕುಸ್ತಿಪಟುವಲ್ಲ. ಕುಸ್ತಿಪಟು ನಿಶಾ ಬೇರೆ ಹತ್ಯೆಯಾದ ನಿಶಾ ಬೇರೆ. ಕುಸ್ತಿಪಟು ನಿಶಾ ಅವರು ಪಾನಿಪತ್ನವರು ಎಂದು ಸೋನಿಪತ್ ಎಸ್ಪಿ ರಾಹುಲ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.
ಕಳೆದ ಶುಕ್ರವಾರವಷ್ಟೇ ನಿಶಾ ದಾಹಿಯಾ ಅವರು ಸರ್ಬಿಯಾ ದೇಶದ ಬೆಲ್ಗ್ರೇಡ್ನಲ್ಲಿ ನಡೆದ ಅಂಡರ್-23 ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ 65 ಕಿಲೋ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು. ಈ ಟೂರ್ನಿಯಲ್ಲಿ ಭಾರತದ ಇತರ ಕೆಲ ಕುಸ್ತಿಪಟುಗಳೂ ಮಿಂಚಿ ಪದಕ ಜಯಿಸಿದ್ದರು. ಪ್ರಧಾನಿ ಮೋದಿ ಅವರು ನಿಶಾ ಸೇರಿದಂತೆ ಎಲ್ಲಾ ಕುಸ್ತಿಪಟುಗಳನ್ನ ಅಭಿನಂದಿಸಿದ್ದರು.
Wrestler Nisha Dahiya has released a video this evening saying she is absolutely fine after reports emerged that she had been shot dead in Haryana. With Olympic medallist Sakshi Malik by her side, Nisha says in the video that she is in Gonda, Uttar Pradesh, for the senior national meet.
08-10-25 11:04 pm
Bangalore Correspondent
ಕಳ್ಳತನ ಪ್ರಕರಣದಲ್ಲಿ ರಿಕವರಿ ಮಾಡಿದ್ದ 2 ಕಿಲೋ ಚಿನ್...
08-10-25 09:21 am
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
08-10-25 08:57 pm
HK News Desk
Nirmala Sitharaman, Cybersecurity: ನನ್ನ ಹೆಸರಿ...
08-10-25 08:40 pm
ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದಲ್ಲಿ ಮತ್ತೆ ಆರ...
08-10-25 05:49 pm
ಹಿಮಾಚಲ ಪ್ರದೇಶದಲ್ಲಿ ಭಾರೀ ಭೂಕುಸಿತ ; ಅವಶೇಷಗಳಡಿ ಸ...
08-10-25 09:24 am
ಚಿನ್ನ ಅಡವಿಟ್ಟು ಸಾಲ ; ಕಳೆನಾಶಕ ಕೆಮಿಕಲ್ ಸೇವಿಸಿ ದ...
07-10-25 11:16 pm
08-10-25 10:09 pm
Mangalore Correspondent
ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರಕ್ಕೆ ಹಕ್ಕಿದೆ, ಸಹಕಾ...
08-10-25 06:07 pm
ತಲಪಾಡಿಯಲ್ಲಿ ಮಾನವ ಅಸ್ಥಿಪಂಜರ ಪತ್ತೆ ಪ್ರಕರಣ ; ಬಿಹ...
07-10-25 11:14 pm
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
Ullal News, Mangalore, BJP, Police: ಉಳ್ಳಾಲ ಶಾ...
07-10-25 05:17 pm
08-10-25 08:47 pm
HK News Desk
ಸುರತ್ಕಲ್, ಮೂಡುಬಿದ್ರೆಯಲ್ಲಿ ಅಕ್ರಮ ಕಸಾಯಿಖಾನೆಗೆ ಪ...
08-10-25 12:23 pm
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am