ಬ್ರೇಕಿಂಗ್ ನ್ಯೂಸ್
21-09-21 03:21 pm Headline Karnataka News Network ದೇಶ - ವಿದೇಶ
ಚೆನ್ನೈ, ಸೆ.21: ಕಳೆದ ಜೂನ್ ತಿಂಗಳಲ್ಲಿ ಮಂಗಳೂರು ಪೊಲೀಸರ ಬಲೆಗೆ ಬಿದ್ದಿದ್ದ 38 ಮಂದಿ ಲಂಕನ್ನರ ಪ್ರಕರಣದಲ್ಲಿ ಎನ್ಐಎ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ತಮಿಳುನಾಡಿನ ರಾಮೇಶ್ವರ ಜಿಲ್ಲೆಯಲ್ಲಿ ಹಲವರನ್ನು ವಿಚಾರಣೆ ನಡೆಸಿದ್ದಾರೆ.
ಶ್ರೀಲಂಕಾದಿಂದ ಮೀನುಗಾರರ ಸೋಗಿನಲ್ಲಿ ಬರುವ ಮಂದಿಯನ್ನು ರಾಮೇಶ್ವರದಲ್ಲಿ ಕೆಲವರು ಉಳಿಯಲು ವ್ಯವಸ್ಥೆ ಮಾಡುತ್ತಾರೆ. ಅಲ್ಲದೆ, ಅಕ್ರಮವಾಗಿ ಭಾರತಕ್ಕೆ ನುಸುಳಲು ಸಹಾಯ ಮಾಡಿದ ಮಾಹಿತಿ ಆಧರಿಸಿ ಎನ್ಐಎ ಅಧಿಕಾರಿಗಳು ತಮಿಳುನಾಡು ಕರಾವಳಿಯ ಶಂಕಿತರ ವಿಚಾರಣೆಗೆ ಮುಂದಾಗಿದ್ದಾರೆ.
ಈಗಾಗ್ಲೇ ಮಂಗಳೂರಿನಲ್ಲಿ ಬಂಧಿಸಲ್ಪಟ್ಟ 38 ಮಂದಿಯನ್ನು ಬೆಂಗಳೂರಿಗೆ ಕರೆದೊಯ್ದಿರುವ ಅಧಿಕಾರಿಗಳು ಅವರ ಮಾಹಿತಿ ಆಧರಿಸಿ, ತಮಿಳುನಾಡಿಗೆ ತೆರಳಿದ್ದಾರೆ. ರಾಮೇಶ್ವರ ಜಿಲ್ಲೆಯ ಮರೈಕಾಯರ್ ಪಟ್ನಂ, ವೇದಲೈ, ಸೀನಿಯಪಾದರಾ ಎನ್ನುವ ಕರಾವಳಿ ತೀರ ಪ್ರದೇಶಗಳಲ್ಲಿ ಲಂಕನ್ನರಿಗೆ ವಸತಿ ಒದಗಿಸಲಾಗಿತ್ತು. ಇದರ ಬಗ್ಗೆ ಅಲ್ಲಿನ ನಿವಾಸಿಗಳಿಂದ ಎನ್ಐಎ ಮಾಹಿತಿ ಕಲೆಹಾಕಿದ್ದಾರೆ. ಲಂಕಾದಿಂದ ಡ್ರಗ್ ಕಳ್ಳಸಾಗಣಿಕೆ ಆಗುತ್ತಿರುವ ಬಗ್ಗೆಯೂ ಅಧಿಕಾರಿಗಳು ಮಾಹಿತಿ ಪಡೆದಿದ್ದಾರೆ.
ಲಂಕಾದ ನಿವಾಸಿಗಳು ತಲಾ 6ರಿಂದ 10 ಲಕ್ಷ ಶ್ರೀಲಂಕಾ ರೂಪಾಯಿ ಏಜಂಟರಿಗೆ ಕೊಟ್ಟು ತಮಿಳುನಾಡಿಗೆ ಬಂದಿದ್ದು, ಅಲ್ಲಿಂದ ಬೆಂಗಳೂರು ಬಳಿಕ ಮಂಗಳೂರಿಗೆ ಬಂದಿದ್ದರು. ಮಂಗಳೂರಿನಿಂದ ಕೆನಡಾಕ್ಕೆ ಒಯ್ಯುವ ಪ್ಲಾನ್ ಹಾಕಿದ್ದರು. ಮಾ.17ರಂದು ಲಂಕಾದಲ್ಲಿ ಹೊರಟಿದ್ದ ನಿವಾಸಿಗಳು ಮಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ವೇಳೆ ಸಿಕ್ಕಿಬಿದ್ದಿದ್ದರು. ಪೊಲೀಸರು ವಿಚಾರಣೆ ನಡೆಸಿದಾಗ ಕೆನಡಾಕ್ಕೆ ಮಾನವ ಕಳ್ಳಸಾಗಾಣಿಕೆ ಮಾಡಲಾಗುತ್ತಿದೆ ಎನ್ನುವ ವಿಚಾರ ತಿಳಿದುಬಂದಿತ್ತು. ಆನಂತರ, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ರಾಷ್ಟ್ರೀಯ ತನಿಖಾ ದಳ ತನಿಖೆಯನ್ನು ಕೈಗೆತ್ತಿಕೊಂಡಿದ್ದರು.
The National Investigation Agency (NIA) on Sunday held enquiries in the coastal villages of Rameswaram in the district in connection with a case related to the detention of 38 Sri Lankan nationals in June for alleged their illegal stay in the country.
29-03-24 03:43 pm
Bangalore Correspondent
CT Ravi, Amit Shah, Yathindra Siddaramaiah: ಯ...
29-03-24 03:40 pm
ರಾಜ್ಯದಲ್ಲಿ ಬರದ ಬೇಗೆಯ ನಡುವೆ ಉಷ್ಣ ಮಾರುತ ; 5 ದಿನ...
29-03-24 03:03 pm
ಹಾಸನ ; ಐದು ವರ್ಷದಲ್ಲಿ ಪ್ರಜ್ವಲ್ ರೇವಣ್ಣ ಆಸ್ತಿ ನಾ...
28-03-24 11:00 pm
DK Suresh, Assets : ಡಿಕೆಶಿ ಸೋದರ ಡಿ.ಕೆ.ಸುರೇಶ್...
28-03-24 09:45 pm
28-03-24 10:51 pm
HK News Desk
Arawind Kejriwal, Delhi HC: ಬಂಧಿತ ಕೇಜ್ರಿವಾಲ್...
28-03-24 04:36 pm
80 ವರ್ಷದ ಅಜ್ಜಿಗೆ ಮೊಮ್ಮಗ, ಪತ್ನಿಯಿಂದ ಮನಬಂದಂತೆ ಹ...
28-03-24 01:15 pm
Tamil Nadu MP Ganeshamurthi dies: ಟಿಕೆಟ್ ಕೈತಪ...
28-03-24 11:48 am
AAPs Lone Lok Sabha, MP Sushil Rinku: ಆಮ್ ಆದ್...
27-03-24 10:24 pm
29-03-24 01:49 pm
Mangalore Correspondent
ಏರ್ಪೋರ್ಟ್, ಎನ್.ಎಂ.ಪಿ.ಟಿ., ಕೆ.ಪಿ.ಟಿ.ಸಿ.ಎಲ್ ಕಾಂ...
28-03-24 10:56 pm
ಸರಕಾರಿ ಉದ್ಯೋಗ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಕ...
28-03-24 07:12 pm
Manjunath Bhandary, KPCC working president: ಕ...
28-03-24 05:20 pm
Fire at seafood factory in Baikampady, Mangal...
28-03-24 04:52 pm
29-03-24 09:32 am
HK NEWS
Mangalore Valachil police raid: ವಳಚ್ಚಿಲ್ ; ಮನ...
28-03-24 10:30 pm
Udupi murder Nejar, Praveen Chowgule news: ಉಡ...
28-03-24 02:18 pm
Mangalore Police, CCB, Drugs; ಆಂಧ್ರಪ್ರದೇಶದಿಂದ...
27-03-24 11:12 pm
Bank vehicle robbery, ATM in Kasaragod: ಕಾಸರಗ...
27-03-24 06:20 pm