ಬ್ರೇಕಿಂಗ್ ನ್ಯೂಸ್
16-09-21 04:00 pm Headline Karnataka News Network ದೇಶ - ವಿದೇಶ
ಪಾಟ್ನಾ, ಸೆ.16: ಬ್ಯಾಂಕ್ ಸಿಬಂದಿಯ ತಪ್ಪಿನಿಂದಾಗಿ ಗ್ರಾಮಸ್ಥನೊಬ್ಬನ ಖಾತೆಗೆ 1.61 ಲಕ್ಷ ರೂಪಾಯಿ ಪಾವತಿ ಆಗಿತ್ತು. ಬ್ಯಾಂಕಿನಿಂದ ತನ್ನಿಂತಾನೇ ತನ್ನ ಖಾತೆಗೆ ಇಷ್ಟೊಂದು ಹಣ ಬಿದ್ದಿರುವುದನ್ನು ಕಂಡ ಆ ವ್ಯಕ್ತಿ ಪ್ರಧಾನಿ ಮೋದಿಯೇ ತನ್ನ ಖಾತೆಗೆ ಹಣ ಹಾಕಿದ್ದಾಗಿ ತಿಳಿದು ಖರ್ಚು ಮಾಡತೊಡಗಿದ್ದ. ಆನಂತರ ಬ್ಯಾಂಕ್ ಸಿಬಂದಿ ಎಡವಟ್ಟು ತಿಳಿದು ಆತನಲ್ಲಿ ಹಣ ಕೇಳಿದಾಗ, ಮೋದಿ ಕೊಟ್ಟ ಹಣವೆಂದು ಹೇಳಿ ಹಿಂತಿರುಗಿಸಲು ನಿರಾಕರಿಸಿದ್ದಾನೆ.
ಮಾನ್ಸಿ ಎಂಬಲ್ಲಿ ಈ ಘಟನೆ ನಡೆದಿದ್ದು ದಕ್ಷಿಣ್ ಗ್ರಾಮೀಣ ಬ್ಯಾಂಕಿನ ಭಕ್ತಿಯಾರ್ ಪುರ ಶಾಖೆಯ ಸಿಬಂದಿ ಬೇರೆಯವರ ಖಾತೆಗೆ ಹಾಕಬೇಕಿದ್ದ ಹಣವನ್ನು ತಪ್ಪಾಗಿ ರಂಜಿತ್ ಕುಮಾರ್ ದಾಸ್ ಎನ್ನುವ ವ್ಯಕ್ತಿಗೆ ಹಾಕಿದ್ದರು. ಬರೋಬ್ಬರಿ 1,60,970 ರೂಪಾಯಿ ಹಣ ಹೆಚ್ಚುವರಿಯಾಗಿ ತನ್ನ ಖಾತೆಗೆ ಬಿದ್ದಿದ್ದನ್ನು ನೋಡಿದ ರಂಜಿತ್ ಕುಮಾರ್ ದಾಸ್, ಮೋದಿ ತನ್ನ ಖಾತೆಗೆ ಹಣ ಹಾಕಿದ್ದಾರೆಂದು ತಿಳಿದು ಬೇಕಾಬಿಟ್ಟಿ ಖರ್ಚು ಮಾಡಲಾರಂಭಿಸಿದ್ದ. ಮೋದಿ ಯಾವುದೋ ಯೋಜನೆ ಹೆಸರಲ್ಲಿ, ತನ್ನ ಖಾತೆಗೆ ಹಣ ಹಾಕಿಸಿದ್ದಾರೆ ಎಂದುಕೊಂಡಿದ್ದ.
ಆನಂತರ, 85 ವರ್ಷದ ಮಹಿಳೆಯ ಖಾತೆಗೆ ಹಣ ಪಾವತಿಯಾಗದೇ ಇರುವ ಬಗ್ಗೆ ಆಕೆಯ ಕುಟುಂಬಸ್ಥರು ಬ್ಯಾಂಕ್ ಸಿಬಂದಿಯಲ್ಲಿ ವಿಚಾರಿಸಿದ್ದರು. ಬ್ಯಾಂಕ್ ಸಿಬಂದಿ ಪರಿಶೀಲನೆ ನಡೆಸಿದಾಗ ರಂಜಿತ್ ಕುಮಾರ್ ಹೆಸರಲ್ಲಿ ಹಣ ವರ್ಗಾವಣೆಯಾಗಿದ್ದು ಕಂಡುಬಂದಿತ್ತು. ರಂಜಿತ್ ಬಳಿ ಹಣ ಹಿಂತಿರುಗಿಸುವಂತೆ ಹೇಳಿದರೆ, ಆತ ನಿರಾಕರಿಸಿದ್ದಾನೆ. ಮೋದಿಯೇ ನನಗೆ ಹಣ ಹಾಕಿದ್ದಾರೆ. ಅದನ್ನು ನಾನು ಯಾಕೆ ಹಿಂತಿರುಗಿಸಬೇಕು ಎಂದು ಕೇಳಿದ್ದಾನೆ.
ರಂಜಿತ್ ಗೆ ಬ್ಯಾಂಕ್ ಮ್ಯಾನೇಜರ್ ನೋಟೀಸ್ ನೀಡಿದರೂ, ಕ್ಯಾರ್ ಮಾಡಿಲ್ಲ. ಆಬಳಿಕ, ಬ್ಯಾಂಕ್ ಮ್ಯಾನೇಜರ್ ಸತ್ಯನಾರಾಯಣ ಪ್ರಸಾದ್ ಮಾನ್ಸಿ ಠಾಣೆಯಲ್ಲಿ ರಂಜಿತ್ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ರಂಜಿತ್ ನನ್ನು ಬಂಧಿಸಿದ್ದಾರೆ. 85 ವರ್ಷದ ತಾರಾದೇವಿ ಎಂಬ ಮಹಿಳೆಯ ಖಾತೆಗೆ ಹಣ ಹಾಕಬೇಕಿತ್ತು. ಬ್ಯಾಂಕ್ ಸಿಬಂದಿಯ ತಪ್ಪಿನಿಂದಾಗಿ ತಾನು ದುಡಿದಿಟ್ಟ ಹಣ ಯಾರದ್ದೋ ಪಾಲಾಗಿದ್ದು ಚಿಂತೆಗೆ ಕಾರಣವಾಗಿತ್ತು. ಅಜ್ಜಿಯ ಕುಟುಂಬಸ್ಥರು ದೂರು ನೀಡಿದ ಬಳಿಕ ಬ್ಯಾಂಕ್ ಸಿಬಂದಿ ಕೊನೆಗೂ ಪೊಲೀಸ್ ಮೆಟ್ಟಿಲೇರಿದ್ದಾರೆ. ಮೋದಿ ಹಣದ ಆಸೆಯಲ್ಲಿದ್ದ ಗ್ರಾಮಸ್ಥ ಜೈಲುಪಾಲಾಗಿದ್ದಾನೆ.
A resident of Bihar’s Khagaria received Rs 1.61 lakh in his account after a bank error and has now refused to let go of the money saying it was sent by Prime Minister Narendra Modi as financial aid.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
17-08-25 09:09 pm
HK News Desk
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
17-08-25 11:06 pm
Mangalore Correspondent
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am