ಬ್ರೇಕಿಂಗ್ ನ್ಯೂಸ್
06-09-21 01:12 pm Headline Karnataka News Network ದೇಶ - ವಿದೇಶ
ಕಾಬೂಲ್, ಸೆ.6: ತಾಲಿಬಾನ್ ಪಡೆಗಳಿಗೆ ತೀವ್ರ ಪ್ರತಿರೋಧ ಒಡ್ಡುತ್ತಿರುವ ಪಂಜ್ ಶೀರ್ ಯೋಧರ ಮೇಲೆ ಪಾಕಿಸ್ಥಾನದ ವಾಯುಪಡೆ ಯೋಧರು ಎರಗಿದ್ದಾರೆ. ತಾಲಿಬಾನ್ ಮತ್ತು ಪಾಕಿಸ್ಥಾನಿ ಪಡೆಗಳ ಜಂಟಿ ದಾಳಿಯಿಂದಾಗಿ ಪಂಜ್ ಶೀರ್ ಮೇಲೆ ನಿಯಂತ್ರಣ ಸಾಧಿಸುವತ್ತ ಮುನ್ನುಗ್ಗಿದ್ದಾರೆ. ಇದೇ ವೇಳೆ, ಪಂಜ್ ಶೀರ್ ನಲ್ಲಿ ಪ್ರತಿರೋಧ ಪಡೆಗಳ ನೇತೃತ್ವ ವಹಿಸಿದ್ದ ಮಹಮ್ಮದ್ ಸಲೇ ಅವರನ್ನು ಕೊಂದು ಹಾಕಿರುವುದಾಗಿ ತಾಲಿಬಾನಿಗಳು ಹೇಳಿಕೊಂಡಿದ್ದಾರೆ.
ಭಾನುವಾರದಿಂದ ಪಂಜ್ ಶೀರ್ ನಲ್ಲಿ ಪಾಕ್ ವಾಯುಪಡೆ ಯೋಧರು ಡ್ರೋಣ್ ದಾಳಿ ಆರಂಭಿಸಿದ್ದರು. ಒಂದೆಡೆ ವಾಯುಪಡೆ ದಾಳಿ, ಇನ್ನೊಂದೆಡೆ ತಾಲಿಬಾನಿ ಪಡೆಗಳ ದಾಳಿಯಿಂದಾಗಿ ಪಂಜ್ ಶೀರ್ ಪ್ರಾಂತ್ಯದ ಪ್ರತಿರೋಧ ಪಡೆಗಳು ತೀವ್ರ ಕಂಗೆಟ್ಟಿದ್ದವು. ನಿನ್ನೆ ರಾತ್ರಿಯೂ ದಾಳಿ ಕಾರ್ಯಾಚರಣೆ ಮುಂದುವರಿದಿತ್ತು ಎನ್ನಲಾಗುತ್ತಿದ್ದು ಇಂದು ಬೆಳಗ್ಗೆ ತಾಲಿಬಾನಿಗಳು ಪಂಜ್ ಶೀರ್ ಪ್ರಾಂತ್ಯವನ್ನು ಪೂರ್ತಿಯಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಪಂಜ್ ಶೀರ್ ಪ್ರತಿರೋಧ ಪಡೆಯ ಸದಸ್ಯರು ಈ ಸುದ್ದಿಯನ್ನು ನಿರಾಕರಿಸಿದ್ದಾರೆ.


ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಈ ಬಗ್ಗೆ ಹೇಳಿಕೆ ನೀಡಿದ್ದು, ಪಂಜ್ ಶೀರ್ ಪ್ರಾಂತ್ಯವನ್ನು ಸಂಪೂರ್ಣ ನಮ್ಮ ಹತೋಟಿಗೆ ತಂದಿದ್ದೇವೆ. ಅಲ್ಲಿನ ಜನರು ಕೂಡ ನಮ್ಮ ಸೋದರರೇ. ಅವರನ್ನು ಗೌರವದಿಂದ ನಡೆಸಿಕೊಳ್ಳುತ್ತೇವೆ. ಎಲ್ಲ ರೀತಿಯ ಸಹಕಾರ ಕೊಡುವುದಾಗಿ ಹೇಳಿದ್ದಾರೆ. ಫಾಹಿಮ್ ದಶ್ತಿ, ಅಹಮ್ಮದ್ ಮಸೂದ್ ಸೇರಿದಂತೆ ಪಂಜ್ ಶೀರ್ ಪ್ರಾಂತದ ಹಲವು ನಾಯಕರು ಸತ್ತಿದ್ದಾಗಿ ಹೇಳಲಾಗಿತ್ತು.
ಆದರೆ ಇದೇ ವೇಳೆ, ತಾಲಿಬಾನ್ ಪಡೆಗಳ ಹೇಳಿಕೆಯನ್ನು ಪಂಜ್ ಶೀರ್ ಪ್ರಾಂತ್ಯದ ಮುಂಚೂಣಿ ನಾಯಕ ಮಹಮ್ಮದ್ ಸಲೇ ನಿರಾಕರಿಸಿದ್ದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ತಾಲಿಬಾನ್ ಪಡೆಗಳು ಮತ್ತು ಪಾಕಿಸ್ಧಾನದ ಕಾಪ್ಟರ್ ಗಳು ಪರ್ವತ ಶ್ರೇಣಿಯ ತುದಿಯಲ್ಲಿ ನಿಂತು ಈ ಹೇಳಿಕೆ ನೀಡಿವೆ. ಆದರೆ ತಾಲಿಬಾನ್ ವಿರುದ್ಧ ನಮ್ಮ ಹೋರಾಟ ಮುಂದುವರಿದಿದೆ ಎಂದು ಸಲೇ ಹೇಳಿಕೆ ನೀಡಿದ್ದಾಗಿ ಇಂಡಿಯಾ ಟುಡೇ ಹೇಳಿದೆ. ಹೀಗಾಗಿ ಅಲ್ಲಿನ ವಾಸ್ತವ ಚಿತ್ರಣ ಮುಚ್ಚಿಡಲು ತಾಲಿಬಾನಿಗಳು ಸುಳ್ಳು ಹೇಳಿಕೆ ನೀಡುತ್ತಿರುವ ಬಗ್ಗೆ ಸಂಶಯ ಉಂಟಾಗಿದೆ.
The Taliban have claimed that Panjshir province was "completely conquered", adding that the country was now finally out of the vortex of war. However, the resistance forces have denied their claim.
22-08-26 10:15 pm
HK News Staffer
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
22-08-26 01:37 pm
HK News Staffer
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
Mfc Hotel Raid, Mangalorr: ಕೆಎಫ್ ಸಿ ಬಳಿಕ ಮಂಗಳ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
22-08-26 12:43 pm
HK News Staffer
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm