ಬ್ರೇಕಿಂಗ್ ನ್ಯೂಸ್
06-09-21 01:12 pm Headline Karnataka News Network ದೇಶ - ವಿದೇಶ
ಕಾಬೂಲ್, ಸೆ.6: ತಾಲಿಬಾನ್ ಪಡೆಗಳಿಗೆ ತೀವ್ರ ಪ್ರತಿರೋಧ ಒಡ್ಡುತ್ತಿರುವ ಪಂಜ್ ಶೀರ್ ಯೋಧರ ಮೇಲೆ ಪಾಕಿಸ್ಥಾನದ ವಾಯುಪಡೆ ಯೋಧರು ಎರಗಿದ್ದಾರೆ. ತಾಲಿಬಾನ್ ಮತ್ತು ಪಾಕಿಸ್ಥಾನಿ ಪಡೆಗಳ ಜಂಟಿ ದಾಳಿಯಿಂದಾಗಿ ಪಂಜ್ ಶೀರ್ ಮೇಲೆ ನಿಯಂತ್ರಣ ಸಾಧಿಸುವತ್ತ ಮುನ್ನುಗ್ಗಿದ್ದಾರೆ. ಇದೇ ವೇಳೆ, ಪಂಜ್ ಶೀರ್ ನಲ್ಲಿ ಪ್ರತಿರೋಧ ಪಡೆಗಳ ನೇತೃತ್ವ ವಹಿಸಿದ್ದ ಮಹಮ್ಮದ್ ಸಲೇ ಅವರನ್ನು ಕೊಂದು ಹಾಕಿರುವುದಾಗಿ ತಾಲಿಬಾನಿಗಳು ಹೇಳಿಕೊಂಡಿದ್ದಾರೆ.
ಭಾನುವಾರದಿಂದ ಪಂಜ್ ಶೀರ್ ನಲ್ಲಿ ಪಾಕ್ ವಾಯುಪಡೆ ಯೋಧರು ಡ್ರೋಣ್ ದಾಳಿ ಆರಂಭಿಸಿದ್ದರು. ಒಂದೆಡೆ ವಾಯುಪಡೆ ದಾಳಿ, ಇನ್ನೊಂದೆಡೆ ತಾಲಿಬಾನಿ ಪಡೆಗಳ ದಾಳಿಯಿಂದಾಗಿ ಪಂಜ್ ಶೀರ್ ಪ್ರಾಂತ್ಯದ ಪ್ರತಿರೋಧ ಪಡೆಗಳು ತೀವ್ರ ಕಂಗೆಟ್ಟಿದ್ದವು. ನಿನ್ನೆ ರಾತ್ರಿಯೂ ದಾಳಿ ಕಾರ್ಯಾಚರಣೆ ಮುಂದುವರಿದಿತ್ತು ಎನ್ನಲಾಗುತ್ತಿದ್ದು ಇಂದು ಬೆಳಗ್ಗೆ ತಾಲಿಬಾನಿಗಳು ಪಂಜ್ ಶೀರ್ ಪ್ರಾಂತ್ಯವನ್ನು ಪೂರ್ತಿಯಾಗಿ ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ, ಪಂಜ್ ಶೀರ್ ಪ್ರತಿರೋಧ ಪಡೆಯ ಸದಸ್ಯರು ಈ ಸುದ್ದಿಯನ್ನು ನಿರಾಕರಿಸಿದ್ದಾರೆ.
ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಈ ಬಗ್ಗೆ ಹೇಳಿಕೆ ನೀಡಿದ್ದು, ಪಂಜ್ ಶೀರ್ ಪ್ರಾಂತ್ಯವನ್ನು ಸಂಪೂರ್ಣ ನಮ್ಮ ಹತೋಟಿಗೆ ತಂದಿದ್ದೇವೆ. ಅಲ್ಲಿನ ಜನರು ಕೂಡ ನಮ್ಮ ಸೋದರರೇ. ಅವರನ್ನು ಗೌರವದಿಂದ ನಡೆಸಿಕೊಳ್ಳುತ್ತೇವೆ. ಎಲ್ಲ ರೀತಿಯ ಸಹಕಾರ ಕೊಡುವುದಾಗಿ ಹೇಳಿದ್ದಾರೆ. ಫಾಹಿಮ್ ದಶ್ತಿ, ಅಹಮ್ಮದ್ ಮಸೂದ್ ಸೇರಿದಂತೆ ಪಂಜ್ ಶೀರ್ ಪ್ರಾಂತದ ಹಲವು ನಾಯಕರು ಸತ್ತಿದ್ದಾಗಿ ಹೇಳಲಾಗಿತ್ತು.
ಆದರೆ ಇದೇ ವೇಳೆ, ತಾಲಿಬಾನ್ ಪಡೆಗಳ ಹೇಳಿಕೆಯನ್ನು ಪಂಜ್ ಶೀರ್ ಪ್ರಾಂತ್ಯದ ಮುಂಚೂಣಿ ನಾಯಕ ಮಹಮ್ಮದ್ ಸಲೇ ನಿರಾಕರಿಸಿದ್ದಾಗಿ ಇಂಡಿಯಾ ಟುಡೇ ವರದಿ ಮಾಡಿದೆ. ತಾಲಿಬಾನ್ ಪಡೆಗಳು ಮತ್ತು ಪಾಕಿಸ್ಧಾನದ ಕಾಪ್ಟರ್ ಗಳು ಪರ್ವತ ಶ್ರೇಣಿಯ ತುದಿಯಲ್ಲಿ ನಿಂತು ಈ ಹೇಳಿಕೆ ನೀಡಿವೆ. ಆದರೆ ತಾಲಿಬಾನ್ ವಿರುದ್ಧ ನಮ್ಮ ಹೋರಾಟ ಮುಂದುವರಿದಿದೆ ಎಂದು ಸಲೇ ಹೇಳಿಕೆ ನೀಡಿದ್ದಾಗಿ ಇಂಡಿಯಾ ಟುಡೇ ಹೇಳಿದೆ. ಹೀಗಾಗಿ ಅಲ್ಲಿನ ವಾಸ್ತವ ಚಿತ್ರಣ ಮುಚ್ಚಿಡಲು ತಾಲಿಬಾನಿಗಳು ಸುಳ್ಳು ಹೇಳಿಕೆ ನೀಡುತ್ತಿರುವ ಬಗ್ಗೆ ಸಂಶಯ ಉಂಟಾಗಿದೆ.
The Taliban have claimed that Panjshir province was "completely conquered", adding that the country was now finally out of the vortex of war. However, the resistance forces have denied their claim.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
17-08-25 09:09 pm
HK News Desk
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
17-08-25 05:26 pm
Mangalore Correspondent
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
Dharmasthala, BJP MLA S.R. Vishwanath: ಸೌಜನ್ಯ...
16-08-25 09:19 pm
ಕಾವೂರು ಮೊಸರು ಕುಡಿಕೆ ಉತ್ಸವದಲ್ಲಿ ಡಿಜೆ ಬಳಕೆ ; ಸೌ...
16-08-25 08:26 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am