ಬ್ರೇಕಿಂಗ್ ನ್ಯೂಸ್
05-09-21 05:00 pm Headline Karnataka News Network ದೇಶ - ವಿದೇಶ
ಕೊಚ್ಚಿ, ಸೆ.5 : ಅತ್ಯಾಚಾರಕ್ಕೀಡಾಗಿ ಗರ್ಭಿಣಿಯಾಗಿದ್ದ ಅಪ್ರಾಪ್ತ ಯುವತಿಯೊಬ್ಬಳು ಆಸ್ಪತ್ರೆಗೆ ತೆರಳಿದ್ದ ವೇಳೆ ಹೊಟ್ಟೆ ನೋವೆಂದು ಟಾಯ್ಲೆಟ್ ಗೆ ಹೋಗಿ ಪ್ರೌಢಾವಸ್ಥೆಗೆ ಬಾರದ ಶಿಶುವನ್ನು ಹೆತ್ತು ಟಾಯ್ಲೆಟ್ ಗುಂಡಿಯಲ್ಲೇ ಬಿಟ್ಟು ಬಂದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
20 ವರ್ಷದ ಯುವಕನಿಂದ ಲೈಂಗಿಕ ಕಿರುಕುಳಕ್ಕೀಡಾಗಿದ್ದ ಅಪ್ರಾಪ್ತ ಯುವತಿ ಕಳೆದ ಬುಧವಾರ ತಾಯಿ ಜೊತೆ ಕೊಚ್ಚಿಯಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಿದ್ದಳು. ಆಸ್ಪತ್ರೆಯಲ್ಲಿ ಟೆಸ್ಟಿಂಗ್ ತೆರಳಿದ್ದಾಗಲೇ ಯುವತಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತಾಯಿಯನ್ನು ಬಿಟ್ಟು ಹುಡುಗಿ ಟಾಯ್ಲೆಟಿಗೆ ತೆರಳಿದ್ದಳು. ಅಲ್ಲಿದ್ದಾಗಲೇ ಭ್ರೂಣಾವಸ್ಥೆಯಲ್ಲಿದ್ದ ಶಿಶು ತಾಯಿ ಹೊಟ್ಟೆಯಿಂದ ಹೊರಬಂದಿದ್ದು, ಯುವತಿ ಅದನ್ನು ಫ್ಲಷ್ ಮಾಡಿ ಟಾಯ್ಲೆಟ್ ಗುಂಡಿಗೆ ಹೋಗುವಂತೆ ಮಾಡಿದ್ದಾಳೆ. ಆದರೆ, ಅದು ಹೋಗದೇ ಅಲ್ಲಿಯೇ ಬಾಕಿಯಾಗಿತ್ತು. ಹುಡುಗಿ ಹಾಗೆಯೇ ಮರಳಿದ್ದು, ಆಸ್ಪತ್ರೆ ಸ್ಕ್ಯಾನಿಂಗ್ ಸೆಂಟರಿಗೆ ತೆರಳಿದ್ದಳು.
ಆನಂತರ ಸ್ವಲ್ಪ ಹೊತ್ತಲ್ಲಿ ಬೇರೆ ಪೇಶಂಟ್ ಒಬ್ಬರು ಟಾಯ್ಲೆಟ್ ತೆರಳಿದ್ದಾಗ, ಅಲ್ಲಿ ನವಜಾತ ಶಿಶುವಿನ ರೀತಿಯ ಭ್ರೂಣ ಕಂಡುಬಂದಿದ್ದು, ಆಸ್ಪತ್ರೆ ಸಿಬಂದಿಗೆ ತಿಳಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಬಂದಿದ್ದು, ಸಿಸಿಟಿವಿ ಆಧರಿಸಿ ಚೆಕ್ ಮಾಡಿದಾಗ ಅಪ್ರಾಪ್ತ ಯುವತಿ ಟಾಯ್ಲೆಟ್ ಹೋಗಿದ್ದನ್ನು ತಿಳಿದು ಆಕೆಯನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ನಡೆಸಿದಾಗ ತನಗೆ ಹೆರಿಗೆಯಾಗಿದ್ದನ್ನು ಪೊಲೀಸರಲ್ಲಿ ಒಪ್ಪಿಕೊಂಡಿದ್ದಾಳೆ.
ಆಬಳಿಕ 20 ವರ್ಷದ ಯುವಕ ತನ್ನ ಮೇಲೆ ಅತ್ಯಾಚಾರ ಮಾಡಿರುವ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾಳೆ. ಆಕೆಯ ತಾಯಿ ನೀಡಿದ ದೂರಿನಂತೆ, ವಯನಾಡ್ ಜಿಲ್ಲೆಯ ಮೂಲದ ಯುವಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
A minor rape survivor -- who was pregnant -- delivered a premature baby inside the washroom of a private hospital in Kerala’s Kochi, police said, adding that she, however, flushed down the newborn. As per reports, the minor girl was allegedly raped by a 20-year-old youth. A minor rape survivor -- who was pregnant -- delivered a premature baby inside the washroom of a private hospital in Kerala’s Kochi, police said, adding that she, however, flushed down the newborn.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
17-08-25 09:09 pm
HK News Desk
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
Dharmasthala, Dk Shivakumar, Pralhad Joshi: ಧ...
16-08-25 03:34 pm
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
17-08-25 05:26 pm
Mangalore Correspondent
Mangalore, Talapady Toll Plaza Fight: ಟೋಲ್ ತಪ...
17-08-25 04:13 pm
Landslide at Shiradi Ghat: ಭಾರೀ ಮಳೆಗೆ ಶಿರಾಡಿ...
16-08-25 11:11 pm
Dharmasthala, BJP MLA S.R. Vishwanath: ಸೌಜನ್ಯ...
16-08-25 09:19 pm
ಕಾವೂರು ಮೊಸರು ಕುಡಿಕೆ ಉತ್ಸವದಲ್ಲಿ ಡಿಜೆ ಬಳಕೆ ; ಸೌ...
16-08-25 08:26 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am