ಬ್ರೇಕಿಂಗ್ ನ್ಯೂಸ್
17-08-21 10:29 pm Headline Karnataka Newz ದೇಶ - ವಿದೇಶ
ನವದೆಹಲಿ, ಆ.17: ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸದ ಮಧ್ಯೆ ಜನರು ದೇಶ ಬಿಟ್ಟು ಓಡಿ ಹೋಗುತ್ತಿದ್ದಾರೆ. ಅಲ್ಲಿನ ಮೂಲ ನಿವಾಸಿಗಳು ಸೇರಿ ಮುಸ್ಲಿಮರು, ಇತರ ಧರ್ಮೀಯರು ಮತ ಭೇದ ಇಲ್ಲದೆ ದೇಶ ಬಿಟ್ಟು ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ. ಈ ನಡುವೆ, ರಾಜಧಾನಿ ಕಾಬೂಲ್ನಲ್ಲಿರುವ ಹಿಂದು ದೇವಾಲಯದ ಅರ್ಚಕರೊಬ್ಬರು ಮಾತ್ರ ಏನೇ ಆದ್ರೂ ದೇವಸ್ಥಾನ ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ರತನ್ ನಾಥ್ ಎಂಬ ದೇವಸ್ಥಾನದ ಈ ಅರ್ಚಕನ ಹೆಸರು ಪಂಡಿತ್ ರಾಜೇಶ್ ಕುಮಾರ್. ಭಾರತಕ್ಕೆ ಹೋಗಿ ನೆಲಸುವಂತೆ ಹೇಳಿ, ಎಲ್ಲಾ ಖರ್ಚುಗಳನ್ನ ನೋಡಿಕೊಳ್ಳುವುದಾಗಿ ಸ್ನೇಹಿತರು ಹೇಳಿದರೂ ಇವರು ಮಾತ್ರ ತಾನು ಎಲ್ಲಿಯೂ ಹೋಗುವುದಿಲ್ಲ ಎನ್ನುತ್ತಿದ್ದಾರೆ.
ನನ್ನ ಪೂರ್ವಜರ ಕಾಲದಿಂದ ನೂರಾರು ವರ್ಷಗಳಿಂದ ಇದೇ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ತಾಲಿಬಾನಿಗರು ನನ್ನನ್ನು ಕೊಂದರೂ, ಅದನ್ನ ಸೇವೆ ಎಂದೇ ಪರಿಗಣಿಸುತ್ತೇನೆ. ನಾನು ಈ ದೇವಸ್ಥಾನವನ್ನು ಬಿಟ್ಟು ಬರುವುದಿಲ್ಲ ಎಂದು ಪಂಡಿತ್ ರಾಜೇಶ್ ಕುಮಾರ್ ಹೇಳಿದ್ದಾಗಿ ಭಾರದ್ವಜ್ ಎಂಬವರು ಟ್ವೀಟ್ ಮಾಡಿದ್ದಾರೆ.
ರಾಜೇಶ್ ಕುಮಾರ್ ಆಫ್ಘಾನಿಸ್ತಾನದಲ್ಲಿರುವ ಏಕೈಕ ಹಿಂದೂ ಮಂದಿರದ ಅರ್ಚಕ. ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಆಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರಾದು ಸಿಖ್ ಮತ್ತು ಹಿಂದುಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಆಫ್ಘಾನಿಸ್ತಾನದಲ್ಲಿ ಸಿಖ್ ಮತ್ತು ಹಿಂದುಗಳು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಇವರಿಗೆ ಸಹಾಯ ಮಾಡಲು ಭಾರತ ಸರ್ಕಾರ ಮುಂದಾಗಿದೆ. ಆಫ್ಘಾನ್ನಿಂದ ಹೊರಬರಲು ಬಯಸುವ ಜನರಿಗೆ ಸೂಕ್ತ ನೆರವು ನೀಡಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಹೇಳಿದ್ದಾರೆ.
ಆಫ್ಘಾನಿಸ್ತಾನದಲ್ಲಿ ಉಳಿದುಕೊಂಡಿರುವ ಸಿಖ್ ಮತ್ತು ಹಿಂದು ಸಮುದಾಯದ ಹೆಚ್ಚಿನ ಮಂದಿ ಕಾಬೂಲ್ ನಗರದಲ್ಲಿದ್ದಾರೆ. ಕಾಬೂಲ್ ನಗರ ತಾಲಿಬಾನ್ ವಶವಾಗುತ್ತಿದ್ದಂತೆ ಈ ಪೈಕಿ ಅನೇಕರು ಸಿಖ್ ಗುರುದ್ವಾರ ಒಂದರಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿ 320 ಮಂದಿ ಇದ್ದಾರೆಂದು ಹೇಳಲಾಗುತ್ತಿದೆ.
With chaos unfolding in Kabul, thousands of people are fleeing Afghanistan, fearful of what lies ahead in the second Taliban regime. Heart-wrenching visuals from the airport in the capital city show people crowding airplanes leaving the war-torn country. While many minorities are fleeing Afghanistan fearing atrocities by the incoming Taliban regime, few are choosing to stay and face whatever fate comes their way. One such person is the last Hindu priest in the country, Pt. Rajesh Kumar of the Rattan Nath temple in Kabul. Several of his Hindu acquaintances have reportedly offered to arrange for Pandit Kumar to leave Afghanistan. But the loyal priest is preferring to stay put and keep the prayer bells in his temple ringing for as long as possible.
08-10-25 09:21 am
Bangalore Correspondent
ಪರಿಶಿಷ್ಟ ಜಾತಿಗೆ ಸೇರಿದವರು ಬೌದ್ಧ ಧರ್ಮಕ್ಕೆ ಮತಾಂತ...
07-10-25 11:20 pm
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
Big Boss Kannada Closed: ಕನ್ನಡ ಶೋ ಬಿಗ್ ಬಾಸ್ ಗ...
07-10-25 07:32 pm
08-10-25 09:24 am
HK News Desk
ಚಿನ್ನ ಅಡವಿಟ್ಟು ಸಾಲ ; ಕಳೆನಾಶಕ ಕೆಮಿಕಲ್ ಸೇವಿಸಿ ದ...
07-10-25 11:16 pm
ವಿಶ್ವಸಂಸ್ಥೆ ಮಹಾಧಿವೇಶನಕ್ಕೆ ಪಿಪಿ ಚೌಧರಿ ನೇತೃತ್ವದ...
07-10-25 01:53 pm
ಮೊಘಲ್ ಆಕ್ರಮಣದಿಂದ ವಿಷ್ಣು ಮೂರ್ತಿ ಭಗ್ನ ; ಪ್ರತಿಮೆ...
06-10-25 07:56 pm
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
07-10-25 11:14 pm
Mangalore Correspondent
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
Ullal News, Mangalore, BJP, Police: ಉಳ್ಳಾಲ ಶಾ...
07-10-25 05:17 pm
Talapady, Mangalore, Crime: ತಲಪಾಡಿ ಅಕ್ಷಯ ಫಾರ್...
07-10-25 05:04 pm
ಫಿಶ್ ಮೀಲ್ ಲಾರಿಗಳಿಂದ ಉಳ್ಳಾಲದಲ್ಲಿ ಗಬ್ಬುನಾತ ! ರಸ...
07-10-25 03:33 pm
08-10-25 12:23 pm
Mangalore Correspondent
ಉಡುಪಿಯಲ್ಲಿ ಶಾಲಾ, ಕಾಲೇಜು ಬಸ್ಗಳ ನಕಲಿ ವಿಮಾ ಜಾಲ...
08-10-25 09:17 am
ಸುರತ್ಕಲ್ ನಲ್ಲಿ ಪಿಕಪ್ ಕಳವು ; ಅಂತರಾಜ್ಯ ಕುಖ್ಯಾತ...
07-10-25 10:13 pm
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am
Kali Yogish, Arrest, Mangalore: ಮಂಗಳೂರು, ಮೈಸೂ...
05-10-25 03:22 pm