ಬ್ರೇಕಿಂಗ್ ನ್ಯೂಸ್
17-08-21 10:29 pm Headline Karnataka Newz ದೇಶ - ವಿದೇಶ
ನವದೆಹಲಿ, ಆ.17: ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಟ್ಟಹಾಸದ ಮಧ್ಯೆ ಜನರು ದೇಶ ಬಿಟ್ಟು ಓಡಿ ಹೋಗುತ್ತಿದ್ದಾರೆ. ಅಲ್ಲಿನ ಮೂಲ ನಿವಾಸಿಗಳು ಸೇರಿ ಮುಸ್ಲಿಮರು, ಇತರ ಧರ್ಮೀಯರು ಮತ ಭೇದ ಇಲ್ಲದೆ ದೇಶ ಬಿಟ್ಟು ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ. ಈ ನಡುವೆ, ರಾಜಧಾನಿ ಕಾಬೂಲ್ನಲ್ಲಿರುವ ಹಿಂದು ದೇವಾಲಯದ ಅರ್ಚಕರೊಬ್ಬರು ಮಾತ್ರ ಏನೇ ಆದ್ರೂ ದೇವಸ್ಥಾನ ಬಿಟ್ಟು ಹೋಗುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿದ್ದಾರೆ.
ರತನ್ ನಾಥ್ ಎಂಬ ದೇವಸ್ಥಾನದ ಈ ಅರ್ಚಕನ ಹೆಸರು ಪಂಡಿತ್ ರಾಜೇಶ್ ಕುಮಾರ್. ಭಾರತಕ್ಕೆ ಹೋಗಿ ನೆಲಸುವಂತೆ ಹೇಳಿ, ಎಲ್ಲಾ ಖರ್ಚುಗಳನ್ನ ನೋಡಿಕೊಳ್ಳುವುದಾಗಿ ಸ್ನೇಹಿತರು ಹೇಳಿದರೂ ಇವರು ಮಾತ್ರ ತಾನು ಎಲ್ಲಿಯೂ ಹೋಗುವುದಿಲ್ಲ ಎನ್ನುತ್ತಿದ್ದಾರೆ.
ನನ್ನ ಪೂರ್ವಜರ ಕಾಲದಿಂದ ನೂರಾರು ವರ್ಷಗಳಿಂದ ಇದೇ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದೇವೆ. ತಾಲಿಬಾನಿಗರು ನನ್ನನ್ನು ಕೊಂದರೂ, ಅದನ್ನ ಸೇವೆ ಎಂದೇ ಪರಿಗಣಿಸುತ್ತೇನೆ. ನಾನು ಈ ದೇವಸ್ಥಾನವನ್ನು ಬಿಟ್ಟು ಬರುವುದಿಲ್ಲ ಎಂದು ಪಂಡಿತ್ ರಾಜೇಶ್ ಕುಮಾರ್ ಹೇಳಿದ್ದಾಗಿ ಭಾರದ್ವಜ್ ಎಂಬವರು ಟ್ವೀಟ್ ಮಾಡಿದ್ದಾರೆ.
ರಾಜೇಶ್ ಕುಮಾರ್ ಆಫ್ಘಾನಿಸ್ತಾನದಲ್ಲಿರುವ ಏಕೈಕ ಹಿಂದೂ ಮಂದಿರದ ಅರ್ಚಕ. ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ ಆಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರಾದು ಸಿಖ್ ಮತ್ತು ಹಿಂದುಗಳು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಆಫ್ಘಾನಿಸ್ತಾನದಲ್ಲಿ ಸಿಖ್ ಮತ್ತು ಹಿಂದುಗಳು ಕಡಿಮೆ ಸಂಖ್ಯೆಯಲ್ಲಿದ್ದಾರೆ. ಇವರಿಗೆ ಸಹಾಯ ಮಾಡಲು ಭಾರತ ಸರ್ಕಾರ ಮುಂದಾಗಿದೆ. ಆಫ್ಘಾನ್ನಿಂದ ಹೊರಬರಲು ಬಯಸುವ ಜನರಿಗೆ ಸೂಕ್ತ ನೆರವು ನೀಡಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಹೇಳಿದ್ದಾರೆ.
ಆಫ್ಘಾನಿಸ್ತಾನದಲ್ಲಿ ಉಳಿದುಕೊಂಡಿರುವ ಸಿಖ್ ಮತ್ತು ಹಿಂದು ಸಮುದಾಯದ ಹೆಚ್ಚಿನ ಮಂದಿ ಕಾಬೂಲ್ ನಗರದಲ್ಲಿದ್ದಾರೆ. ಕಾಬೂಲ್ ನಗರ ತಾಲಿಬಾನ್ ವಶವಾಗುತ್ತಿದ್ದಂತೆ ಈ ಪೈಕಿ ಅನೇಕರು ಸಿಖ್ ಗುರುದ್ವಾರ ಒಂದರಲ್ಲಿ ಆಶ್ರಯ ಪಡೆದಿದ್ದಾರೆ. ಅಲ್ಲಿ 320 ಮಂದಿ ಇದ್ದಾರೆಂದು ಹೇಳಲಾಗುತ್ತಿದೆ.
With chaos unfolding in Kabul, thousands of people are fleeing Afghanistan, fearful of what lies ahead in the second Taliban regime. Heart-wrenching visuals from the airport in the capital city show people crowding airplanes leaving the war-torn country. While many minorities are fleeing Afghanistan fearing atrocities by the incoming Taliban regime, few are choosing to stay and face whatever fate comes their way. One such person is the last Hindu priest in the country, Pt. Rajesh Kumar of the Rattan Nath temple in Kabul. Several of his Hindu acquaintances have reportedly offered to arrange for Pandit Kumar to leave Afghanistan. But the loyal priest is preferring to stay put and keep the prayer bells in his temple ringing for as long as possible.
16-08-25 10:03 pm
Bangalore Correspondent
ಸೆ.9ರಂದು ಉಪ ರಾಷ್ಟ್ರಪತಿ ಚುನಾವಣೆ ; ಬಿಹಾರ ರಾಜ್ಯಪ...
16-08-25 09:58 pm
Dharmasthala, Eshwar kandre: ಧರ್ಮಸ್ಥಳ ತಲೆಬುರು...
16-08-25 09:15 pm
BJP, Dharmasthala, DK Shivakumar, SIT Probe:...
16-08-25 08:05 pm
ಧರ್ಮಸ್ಥಳ ಪ್ರಕರಣದಲ್ಲಿ ಸುಳ್ಳು ಹೇಳಿ, ಅಪಪ್ರಚಾರ ಮಾ...
15-08-25 10:29 pm
16-08-25 03:34 pm
HK News Desk
ಕೆಂಪುಕೋಟೆಯಲ್ಲಿ ಸತತ 12ನೇ ಬಾರಿಗೆ ಸ್ವಾತಂತ್ರ್ಯೋತ್...
15-08-25 08:46 pm
ಜಮ್ಮು -ಕಾಶ್ಮೀರದಲ್ಲಿ ಭೀಕರ ಮೇಘಸ್ಫೋಟ: 46 ಜನ ಮೃತ್...
15-08-25 01:32 pm
ಕದನ ವಿರಾಮದಲ್ಲಿ ಪಾಲು ಸಿಗದ್ದಕ್ಕೆ ಭಾರತದ ಸರಕುಗಳಿಗ...
14-08-25 07:24 pm
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
16-08-25 11:11 pm
Mangalore Correspondent
Dharmasthala, BJP MLA S.R. Vishwanath: ಸೌಜನ್ಯ...
16-08-25 09:19 pm
ಕಾವೂರು ಮೊಸರು ಕುಡಿಕೆ ಉತ್ಸವದಲ್ಲಿ ಡಿಜೆ ಬಳಕೆ ; ಸೌ...
16-08-25 08:26 pm
Dharmasthala Panchayat, RTI: 38 ವರ್ಷಗಳಲ್ಲಿ 27...
16-08-25 04:45 pm
Expert PU College Announces ‘Xcelerate 2025’...
15-08-25 09:04 pm
16-08-25 10:49 pm
Mangalore Correspondent
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am
Headline karnataka Impact, Lucky Scheme, Frau...
15-08-25 09:22 pm