ಬ್ರೇಕಿಂಗ್ ನ್ಯೂಸ್
11-07-21 03:55 pm Headline Karnataka News Network ದೇಶ - ವಿದೇಶ
ಮುಂಬೈ, ಜುಲೈ 11: ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಅಮೀರ್ ಖಾನ್ ಮತ್ತು ಕಿರಣ್ ರಾವ್ ವಿಚ್ಛೇದನ ಮತ್ತು ಅವರ ಮಕ್ಕಳ ಬಗ್ಗೆ ಮಾತನಾಡಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಅಂತರ್ ಧರ್ಮ ವಿವಾಹದ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.
ಒಂದು ಸಮಯದಲ್ಲಿ ಪಂಜಾಬ್ನಲ್ಲಿ ಈ ರೀತಿ ಮದುವೆಗಳಾದರೆ ಒಂದು ಮಗುವನ್ನು ಹಿಂದು, ಇನ್ನೊಂದು ಮಗುವನ್ನು ಸಿಖ್ ಹೆಸರಲ್ಲಿ ಗುರುತಿಸಿ ಬೆಳೆಸುತ್ತಿದ್ದರು. ಆದರೆ ಹಿಂದು - ಮುಸ್ಲಿಮರ ಮಧ್ಯೆ ಈ ಟ್ರೆಂಡ್ ಯಾವತ್ತೂ ಕಂಡುಬಂದಿಲ್ಲ. ಅಥವಾ ಮುಸ್ಲಿಮರನ್ನು ಮದಯವೆಯಾದ ಬೇರೆ ಯಾವುದೆ ಧರ್ಮದ ಫ್ಯಾಮಿಯಲ್ಲೂ ಈ ಟ್ರೆಂಡ್ ಇಲ್ಲ. ಅಮೀರ್ ಖಾನ್ ಎರಡನೇ ವಿಚ್ಛೇದನದ ನಂತರ ನನಗೆ ಅಚ್ಚರಿಯಾಗಿ ಕಂಡುಬರುತ್ತಿರುವ ವಿಚಾರವಿದು. ಅಂತರ್ ಧರ್ಮ ವಿವಾಹದಲ್ಲಿ ಮಕ್ಕಳು ಮಾತ್ರ ಮುಸ್ಲಿಂ ಆಗಿ ಮಾತ್ರ ಗುರುತಿಸಲ್ಪಡೋದ್ಯಾಕೆ ಎಂದು ಪ್ರಶ್ನಿಸಿದ್ದಾರೆ.
ಮಕ್ಕಳು ಹಿಂದೂಗಳಾಗಿರಲು ಏಕೆ ಸಾಧ್ಯವಿಲ್ಲ? ಬದಲಾಗುತ್ತಿರುವ ಸಮಯದೊಂದಿಗೆ ನಾವು ಇದನ್ನು ಕೂಡ ಬದಲಾಯಿಸಬೇಕಲ್ಲ. ಈ ಪದ್ಧತಿ ಹಳೆಯದಾಗಿದೆ. ಒಂದು ಕುಟುಂಬದಲ್ಲಿ ಹಿಂದೂ, ಜೈನ, ಬೌದ್ಧ, ಸಿಖ್ ಮತ್ತು ನಾಸ್ತಿಕರು ಒಟ್ಟಿಗೆ ಬದುಕಲು ಸಾಧ್ಯವಾದರೆ ಮುಸ್ಲಿಮರನ್ನು ಮದುವೆಯಾಗಲು ಒಬ್ಬರ ಧರ್ಮವನ್ನು ಏಕೆ ಬದಲಾಯಿಸಬೇಕು ಎಂದು ಕಂಗನಾ ಪ್ರಶ್ನಿಸಿದ್ದಾರೆ.

ಅಮೀರ್ ಮತ್ತು ಕಿರಣ್ ರಾವ್ ಮದುವೆಯಾದ 15 ವರ್ಷಗಳ ನಂತರ ಪತ್ರಿಕಾಗೋಷ್ಠಿಯಲ್ಲಿ ವಿಚ್ಛೇದನೆ ಪ್ರಕಟಿಸಿದ್ದಾರೆ. “ಈಗ ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಬಯಸುತ್ತೇವೆ. ಇನ್ನು ಮುಂದೆ ಗಂಡ ಮತ್ತು ಹೆಂಡತಿಯಾಗಿ ಇರುವುದಿಲ್ಲ. ಆದರೆ ಮಗುವಿಗೆ ಪೋಷಕರಾಗಿ ಮುಂದುವರಿಯಲಿದ್ದೇವೆ. ನಮ್ಮ ಮಗ ಆಜಾದ್ಗೆ ಪೋಷಕರಾಗಿ ಉಳಿದಿದ್ದೇವೆ. ಅವನನ್ನು ನಾವು ಒಟ್ಟಿಗೆ ಬೆಳೆಸುತ್ತೇವೆ ಎಂದಿದ್ದರು.
ಅಮಿರ್ ಖಾನ್ ಮೊದಲ ಪತ್ನಿಯಾಗಿ ಹಿಂದು ಯುವತಿಯನ್ನು ಮದುವೆಯಾಗಿದ್ದರು. ಅದರಲ್ಲಿ ಇಬ್ಬರು ಮಕ್ಕಳಿದ್ದು ಇಬ್ಬರ ಹೆಸರು ಕೂಡ ಖಾನ್ ಆಗಿಯೇ ಇದೆ. 2001ರ ಲಗಾನ್ ಚಿತ್ರ ಹಿಟ್ ಆಗುತ್ತಿದ್ದಂತೆ ಅದರಲ್ಲಿ ಸಣ್ಣ ಪಾತ್ರ ಮಾಡಿದ್ದ ಕಿರಣ್ ರಾವ್ ಅವರನ್ನು ಪ್ರೀತಿಸಿ 2002ರಲ್ಲಿ ಮದುವೆಯಾಗಿದ್ದರು. ಅವರಿಗೆ ಹುಟ್ಟಿದ ಮಗುವಿಗೆ ಆಜಾದ್ ಖಾನ್ ಎಂದು ಹೆಸರಿಡಲಾಗಿತ್ತು. ಈಗ ಎರಡನೇ ಪತ್ನಿಗೂ ಅಮೀರ್ ವಿಚ್ಚೇದನ ನೀಡಿದ್ದಾರೆ. ಈ ವಿಚಾರದಲ್ಲಿ ಕಂಗನಾ ಪ್ರಶ್ನೆ ಮಾಡಿದ್ದು ಬಾಲಿವುಡ್ ನಲ್ಲಿ ಬಹಳಷ್ಟು ಹಿಂದು - ಮುಸ್ಲಿಂ ಮದುವೆಗಳು ನಡೆದಿವೆ. ಆದರೆ ಮಕ್ಕಳ ಹೆಸರು ಮಾತ್ರ ಮುಸ್ಲಿಂ ಆಗಿಯೇ ಇರುವುದೇಕೆ. ಮದುವೆಯಾದ ಮಾತ್ರಕ್ಕೆ ಪತ್ನಿ ಮುಸ್ಲಿಂ ಆಗಿ ಮತಾಂತರ ಆಗುವುದೇಕೆ ಎಂದು ಮಾರ್ಮಿಕ ಪ್ರಶ್ನೆ ಪ್ರಶ್ನೆ ಎತ್ತಿದ್ದಾರೆ.
Bollywood actress Kangana Ranaut is known for speaking her mind, and more often than not it has landed her in trouble. On Aamir Khan and Kiran Rao's recent divorce announcement, the Queen actress shared her thoughts.
14-01-26 03:34 pm
Bangalore Correspondent
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
ಇಲೆಕ್ಟ್ರಾನಿಕ್ ಸಿಟಿ ಪಕ್ಕದಲ್ಲೇ ಬಾಂಗ್ಲಾ ವಲಸಿಗರ ಅ...
13-01-26 03:04 pm
13-01-26 06:39 pm
HK News Desk
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನ...
12-01-26 05:01 pm
ಎಕ್ಸ್ ನಲ್ಲಿ ಅಶ್ಲೀಲ ಕಂಟೆಂಟ್ ; ಐಟಿ ಸಚಿವಾಲಯದ ಒತ್...
11-01-26 06:07 pm
14-01-26 03:15 pm
Mangalore Correspondent
ಕುಂದಾಪುರ -ತಲಪಾಡಿ, ಸುರತ್ಕಲ್- ಬಿ.ಸಿ.ರೋಡ್ ಹೆದ್ದಾ...
13-01-26 10:30 pm
Ayyappa Death, Mangalore: ಶಬರಿಮಲೆ ಹೊರಟಿದ್ದ ಅಯ...
12-01-26 08:03 pm
ಭಾರತ ರಕ್ತಪಾತಕ್ಕೆ ಇನ್ನಷ್ಟು ಸಿದ್ಧವಾಗಬೇಕು ; ಚೀನಾ...
11-01-26 10:39 pm
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
14-01-26 05:22 pm
HK News Desk
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm
ಡಿಜಿಟಲ್ ಅರೆಸ್ಟ್ ನೆಪದಲ್ಲಿ ದೆಹಲಿಯ ವೃದ್ಧ ವೈದ್ಯ...
13-01-26 03:37 pm
ಡ್ರಗ್ಸ್ ನೆಟ್ವರ್ಕ್ ಭೇದಿಸಿದ ಮಂಗಳೂರು ಪೊಲೀಸರು ; ಬ...
12-01-26 06:28 pm
Mangalore Crime: ಬಾಂಗ್ಲಾದವನೆಂದು ಹೇಳಿ ವಲಸೆ ಕಾರ...
12-01-26 01:54 pm