ಬ್ರೇಕಿಂಗ್ ನ್ಯೂಸ್
26-06-21 09:04 pm Headline Karnataka News Network ದೇಶ - ವಿದೇಶ
Photo credits : khaleej Times
ದುಬೈ, ಜೂನ್ 26: ಭಾರತದ ಜೊತೆಗಿನ ವಿಮಾನ ಸಂಚಾರ ನಿರ್ಬಂಧವನ್ನು ಯುಎಇ ಮತ್ತೆ ಮುಂದುವರಿಸಿದ್ದು, ಮುಂದಿನ ಆದೇಶದ ವರೆಗೂ ಜಾರಿಯಲ್ಲಿ ಇರಲಿದೆ ಎಂದು ತಿಳಿಸಿದೆ. ಯುಎಇ ಪ್ರಜೆಗಳು, ರಾಜತಾಂತ್ರಿಕ ಅಧಿಕಾರಿಗಳು, ಬಿಸಿನೆಸ್ ಉದ್ದೇಶಿತ ಉದ್ಯಮದಾರರ ವಿಮಾನಗಳು ಮತ್ತು ಗೋಲ್ಡನ್ ವೀಸಾ ಹೊಂದಿರುವರ ವಿಮಾನ ಸಂಚಾರ ಹೊರತುಪಡಿಸಿ ಉಳಿದೆಲ್ಲ ರೀತಿಯ ವೈಮಾನಿಕ ಸಂಚಾರವನ್ನು ನಿರ್ಬಂಧಿಸಿ ಯುಎಇ ಜನರಲ್ ಸಿವಿಲ್ ಏವಿಯೇಶನ್ ಅಥಾರಿಟಿ ಆದೇಶ ಮಾಡಿದೆ.
ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಿದ ಕಾರಣ ಕಳೆದ ಎಪ್ರಿಲ್ 24ರಿಂದ ಯುಎಇ ಭಾರತದ ಜೊತೆಗೆ ವಿಮಾನ ಸಂಚಾರವನ್ನು ನಿರ್ಬಂಧಿಸಿ ಆದೇಶ ಮಾಡಿತ್ತು. ಜೂನ್ 19ರಂದು ಯುಎಇ ವಿಪತ್ತು ನಿರ್ವಹಣಾ ಕಮಿಟಿ ಸಭೆ ಸೇರಿ ಭಾರತ, ನೈಜೀರಿಯಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ನಡುವೆ ಜೂನ್ 23ರಿಂದ ಪ್ಯಾಸೆಂಜರ್ ವಿಮಾನಗಳ ಸಂಚಾರಕ್ಕೆ ಕೆಲವು ಷರತ್ತಿನ ಮೇರೆಗೆ ಅನುವು ಮಾಡಿತ್ತು. ಅದರಂತೆ, ಜೂನ್ 24ರಂದು ಏರ್ ಇಂಡಿಯಾ ಕಮರ್ಶಿಯಲ್ ವಿಮಾನ ಸಂಚಾರವನ್ನು ಆರಂಭಿಸಿತ್ತು. ಆದರೆ, ಈಗ ಮತ್ತೆ ಯುಎಇ ವಿಮಾನ ಪ್ರಾಧಿಕಾರವು ಭಾರತದ ಜೊತೆಗಿನ ವೈಮಾನಿಕ ಸಂಚಾರಕ್ಕೆ ನಿರ್ಬಂದ ವಿಧಿಸಿದೆ.
ಷರತ್ತಿನ ಪ್ರಕಾರ, ಯುಎಇಗೆ ಆಗಮಿಸುವ ಪ್ರಯಾಣಿಕರು ರೆಸಿಡೆನ್ಶಿಯಲ್ ವೀಸಾ ಹೊಂದಿರಬೇಕು. ಅಲ್ಲದೆ, ಯುಎಇ ಅಂಗೀಕಾರ ನೀಡಿರುವ ಲಸಿಕೆಯನ್ನು ಎರಡೂ ಡೋಸ್ ಹಾಕಿಸಿಕೊಂಡಿರಬೇಕು. ಫೈಜರ್, ಸ್ಪುಟ್ನಿಕ್ ವಿ, ಆಸ್ಟ್ರಾಜೆನೆಕಾ, ಸಿನೋಫಾರ್ಮ್ ಇವುಗಳಲ್ಲಿ ಒಂದನ್ನು ಲಸಿಕೆಯಾಗಿ ಪಡೆದಿರಬೇಕು. ಅಲ್ಲದೆ, ಪ್ರಯಾಣಿಕರು ತಮಗೆ ಕೋವಿಡ್ ಇಲ್ಲವೆಂದು ಖಚಿತಪಡಿಸಲು 48 ಗಂಟೆ ಒಳಗೆ ಪರೀಕ್ಷೆ ಮಾಡಿರುವ ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರಬೇಕು. ಯುಎಇ ತಲುಪಿದ ಬಳಿಕ ಮತ್ತೆ ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಪಟ್ಟು ಹತ್ತು ದಿನಗಳ ಕ್ವಾರಂಟೈನ್ ಇರಬೇಕೆಂದು ಷರತ್ತು ವಿಧಿಸಲಾಗಿತ್ತು.
UAE’s General Civil Aviation Authority (GCAA) has announced that inbound passenger traffic from India would remain suspended until further notice. Referring to this, an official in the know-how stated, “As far as inbound passenger traffic from India is concerned, the status quo remains.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am