ಬ್ರೇಕಿಂಗ್ ನ್ಯೂಸ್
31-05-21 07:34 pm Headline Karnataka News Network ದೇಶ - ವಿದೇಶ
ಲಕ್ನೋ, ಮೇ 31: ತನ್ನನ್ನು ಕ್ರೈಂ ಬ್ರಾಂಚ್ ಇನ್ ಸ್ಪೆಕ್ಟರ್ ಎಂದು ಪರಿಚಯಿಸಿಕೊಂಡು ಹಿಂದು ಯುವತಿಯನ್ನು ಯಾಮಾರಿಸಿ ಮದುವೆಯಾಗಿದ್ದಲ್ಲದೆ, ಬ್ಲಾಕ್ಮೇಲ್ ಮಾಡಿ ಮುಸ್ಲಿಂ ಆಗಿ ಮತಾಂತರಿಸಿದ ಪ್ರಕರಣ ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಅಜಾಂಘಡ ಜಿಲ್ಲೆಯ ಆಬಿದ್ ಹವಾರಿ ಎನ್ನುವಾತ ಈ ರೀತಿ ಯುವತಿಯನ್ನು ಯಾಮಾರಿಸಿದ ಆರೋಪಿಯಾಗಿದ್ದು ಪೊಲೀಸರು ಆತನನ್ನು ಮತಾಂತರ ನಿಷೇಧ ಕಾಯ್ದೆಯಡಿ ಬಂಧಿಸಿದ್ದಾರೆ.
ಯುವತಿ ನೀಡಿರುವ ಹೇಳಿಕೆ ಪ್ರಕಾರ, ಆಕೆಯನ್ನು ಪ್ರೀತಿಸಿ ಮದುವೆಯಾಗಿದ್ದಲ್ಲದೆ, ಖಾಸಗಿ ದೃಶ್ಯಗಳನ್ನು ಚಿತ್ರೀಕರಿಸಿ ಬ್ಲಾಕ್ಮೇಲ್ ಮಾಡಿದ್ದಾನೆ. ಅಲ್ಲದೆ, ವಿಡಿಯೋ ಮುಂದಿಟ್ಟು ಇಸ್ಲಾಂ ಆಗಿ ಮತಾಂತರ ಆಗಲು ಒತ್ತಡ ಹೇರಿದ್ದಾನೆ. ಕೊನೆಗೆ ಬಲವಂತದಿಂದ ಮತಾಂತರ ಮಾಡಿದ್ದಾನೆ.
2015ರಲ್ಲಿ ಬಾಡಿಗೆ ಮನೆ ಹುಡುಕುವ ನೆಪದಲ್ಲಿ ಆಬಿದ್ ಯುವತಿಗೆ ಪರಿಚಯ ಆಗಿದ್ದ. ತನ್ನನ್ನು ಇನ್ ಸ್ಪೆಕ್ಟರ್ ಆದಿತ್ಯ ಎಂದು ಪರಿಚಯ ಮಾಡಿಕೊಂಡಿದ್ದ ಬಳಿಕ ಪ್ರೀತಿಸಿ ಮದುವೆಯಾಗಿದ್ದಾನೆ. ಅಲ್ಲದೆ, ಆನಂತರ ಫ್ಲಾಟ್ ಖರೀದಿಸಿ ಅದರಲ್ಲೇ ಕಚೇರಿ ಮಾಡಿಕೊಂಡಿದ್ದ. ಇನ್ ಸ್ಪೆಕ್ಟರ್ ಆಗಿರುವುದಕ್ಕೆ ಪೊಲೀಸ್ ಯೂನಿಫಾರ್ಮಲ್ಲಿದ್ದ ಫೋಟೋ ತೋರಿಸುತ್ತಿದ್ದ ಆಬಿದ್ ಹೊರಗಡೆ ಹೋಗುತ್ತಿದ್ದಾಗ ಸಾದಾ ಬಟ್ಟೆಯನ್ನೇ ಧರಿಸುತ್ತಿದ್ದ. ಯುವತಿ ಕೇಳಿದಾಗ, ಕ್ರೈಂ ಬ್ರಾಂಚ್ ನವರು ಸಿವಿಲ್ ಡ್ರೆಸ್ ನಲ್ಲಿಯೇ ಇರೋದು. ಯುನಿಫಾರ್ಮ್ ಹಾಕೋದಿಲ್ಲ ಎಂದು ನಂಬಿಸುತ್ತಿದ್ದ.
2016ರಲ್ಲಿ ಮದುವೆಯಾದ ಬಳಿಕ ಆದಿತ್ಯ ಸಿಂಗ್ ಅಸಲಿ ಮುಖ ಬಯಲಾಗಿದ್ದು, ತನ್ನ ನಿಜಮುಖವನ್ನು ತೋರಿಸಿದ್ದಾನೆ. ಯುವತಿ ಜೊತೆಗಿದ್ದ ಖಾಸಗಿ ದೃಶ್ಯಗಳನ್ನು ಮೊಬೈಲಿನಲ್ಲಿ ಚಿತ್ರೀಕರಿಸಿ ಅದನ್ನು ಮುಂದಿಟ್ಟು ಬ್ಲಾಕ್ಮೇಲ್ ಮಾಡುತ್ತಿದ್ದ. ಆನಂತರ ವಿಡಿಯೋ ಮುಂದಿಟ್ಟು ಬಲವಂತದಿಂದ ಮುಸ್ಲಿಂ ಆಗಿ ಮತಾಂತರ ಮಾಡಿದ್ದ. ಇದರಿಂದ ಸಿಟ್ಟಿಗೆದ್ದ ಯುವತಿ ಆತನ ನೈಜ ವಿಚಾರ ತಿಳಿದುಕೊಳ್ಳಲು ಅಜಂ ಘಡಕ್ಕೆ ತೆರಳಿದ್ದಾಳೆ.
ಅಲ್ಲಿ ಆತನ ಸ್ವಂತ ಮನೆಯನ್ನು ಪತ್ತೆ ಮಾಡಿದ್ದಲ್ಲದೆ, ಅಲ್ಲಿ ಮುಸ್ಲಿಂ ಯುವತಿಯನ್ನು ಮದುವೆಯಾಗಿದ್ದಲ್ಲದೆ ಏಳು ಮಕ್ಕಳನ್ನು ಹೊಂದಿರುವ ವಿಚಾರ ತಿಳಿದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಈ ಬಗ್ಗೆ ಇಂದಿರಾನಗರ ಠಾಣೆಯಲ್ಲಿ ಆಬಿದ್ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ. ಈ ನಡುವೆ, ಕಳೆದ ಫೆಬ್ರವರಿಯಲ್ಲೂ ಆತ ಮತ್ತೊಬ್ಬ ಯುವತಿಯನ್ನು ಮದುವೆಯಾಗಿರುವ ವಿಚಾರವೂ ಬಯಲಾಗಿದೆ.
ಪೊಲೀಸರ ಪ್ರಕಾರ, ಆಬಿದ್ ತಾನು ಪೊಲೀಸ್ ಎಂದು ಹೇಳಿಕೊಂಡು ಬಹಳಷ್ಟು ಮಂದಿಗೆ ವಂಚನೆ ನಡೆಸಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಸುತ್ತಿದ್ದಾರೆ. ಲವ್ ಜಿಹಾದ್ ತಪ್ಪಿಸಲು ಉತ್ತರ ಪ್ರದೇಶ ಸರಕಾರ ಇತ್ತೀಚೆಗೆ ಜಾರಿಗೆ ತಂದಿದ್ದ ಕಾಯ್ದೆಯಡಿ ಆಬಿದ್ ವಿರುದ್ಧ ಪ್ರಕರಣ ದಾಖಲಾಗಿದೆ.
Uttar Pradesh Police arrested a married Muslim man identified as Abid Hawari from Azamgarh under the anti-conversion law. Abid, who pretended to be an officer named Aditya Singh in the crime branch of UP Police, is accused of deceiving Hindu women while concealing his religious identity and lying about his occupation.
07-10-25 11:20 pm
Bangalore Correspondent
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
Big Boss Kannada Closed: ಕನ್ನಡ ಶೋ ಬಿಗ್ ಬಾಸ್ ಗ...
07-10-25 07:32 pm
ದಸರಾ ರಜಾ ಅವಧಿ ವಿಸ್ತರಣೆ ಮಾಡಿ ಎಂದು ಮನವಿ ; 10 ದಿ...
07-10-25 05:23 pm
07-10-25 11:16 pm
HK News Desk
ವಿಶ್ವಸಂಸ್ಥೆ ಮಹಾಧಿವೇಶನಕ್ಕೆ ಪಿಪಿ ಚೌಧರಿ ನೇತೃತ್ವದ...
07-10-25 01:53 pm
ಮೊಘಲ್ ಆಕ್ರಮಣದಿಂದ ವಿಷ್ಣು ಮೂರ್ತಿ ಭಗ್ನ ; ಪ್ರತಿಮೆ...
06-10-25 07:56 pm
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
07-10-25 11:14 pm
Mangalore Correspondent
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
Ullal News, Mangalore, BJP, Police: ಉಳ್ಳಾಲ ಶಾ...
07-10-25 05:17 pm
Talapady, Mangalore, Crime: ತಲಪಾಡಿ ಅಕ್ಷಯ ಫಾರ್...
07-10-25 05:04 pm
ಫಿಶ್ ಮೀಲ್ ಲಾರಿಗಳಿಂದ ಉಳ್ಳಾಲದಲ್ಲಿ ಗಬ್ಬುನಾತ ! ರಸ...
07-10-25 03:33 pm
07-10-25 10:13 pm
Mangalore Correspondent
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am
Kali Yogish, Arrest, Mangalore: ಮಂಗಳೂರು, ಮೈಸೂ...
05-10-25 03:22 pm
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm