ಬ್ರೇಕಿಂಗ್ ನ್ಯೂಸ್
08-04-21 01:53 pm Headline Karnataka News Network ದೇಶ - ವಿದೇಶ
ದುಬೈ,ಎ.8 : ಕೆಲವು ದಿನಗಳ ಹಿಂದೆ ದುಬೈನಲ್ಲಿ ನಡೆದ ಘಟನೆಯೊಂದು ಭರ್ಜರಿ ಸುದ್ದಿಯಾಗಿತ್ತು. ಒಂದಷ್ಟು ರೂಪದರ್ಶಿಯರು ಬಾಲ್ಕನಿಯಲ್ಲಿ ನಿಂತು ಬೆತ್ತಲೆ ಪೋಸ್ ಕೊಟ್ಟಿದ್ದರು. ಅದಾದ ಮೇಲೆ ಆ ರೂಪದರ್ಶಿಯರು ಹಾಗೂ ಫೋಟೋ, ವಿಡಿಯೋ ಶೂಟ್ ಮಾಡಿದ ಫೋಟೋಗ್ರಾಫರ್ನನ್ನು ಪೊಲೀಸರು ಬಂಧಿಸಿದ್ದರು.
ದುಬೈನ ಮರಿನಾ ಪ್ರದೇಶದಲ್ಲಿ ಅಪಾರ್ಟ್ಮೆಂಟ್ವೊಂದರ ಬಾಲ್ಕನಿಯಲ್ಲಿ ಸುಮಾರು 18 ಮಹಿಳೆಯರು ಸಂಪೂರ್ಣವಾಗಿ ಬೆತ್ತಲಾಗಿ ಫೋಸ್ ಕೊಟ್ಟ ಫೋಟೋ, ವಿಡಿಯೋಗಳು ಸಂಯುಕ್ತ ಅರಬ್ ರಾಷ್ಟ್ರಾದ್ಯಂತ ಕೋಲಾಹಲವನ್ನೇ ಉಂಟು ಮಾಡಿದ್ದವು. ಸಂಯುಕ್ತ ಅರಬ್ ರಾಷ್ಟ್ರ ಹೇಳಿಕೇಳಿ ಸಂಪ್ರದಾಯ, ಕಠಿಣ ಕಾನೂನು ಪಾಲಿಸುವ ರಾಷ್ಟ್ರ. ಹಾಗಾಗಿ ತುಸು ಜಾಸ್ತಿ ಎನ್ನಿಸುವಷ್ಟು ವಿವಾದ ಸೃಷ್ಟಿಯಾಗಿತ್ತು.
ಯುಎಇನಲ್ಲಿ ಸಾರ್ವಜನಿಕವಾಗಿ ಚುಂಬಿಸುವದನ್ನೇ ನಿಷೇಧಿಸಲಾಗಿದ್ದು, ಅಂಥವರನ್ನೂ ಜೈಲಿಗೆ ಕಳಿಸಲಾಗುತ್ತದೆ. ಅಂಥದ್ದರಲ್ಲಿ ಹೀಗೆಲ್ಲ ಬೆತ್ತಲೆ ಪೋಸ್ ಕೊಟ್ಟರೆ ಬಿಡುತ್ತಾರೆಯೇ? ಅದರಂತೆ ವಿಡಿಯೋ ಗಮನಕ್ಕೆ ಬರುತ್ತಿದ್ದಂತೆ ಪೊಲೀಸರು ಇವರೆಲ್ಲರನ್ನೂ ಬಂಧಿಸಿದ್ದರು.
ಇನ್ನು ಈ ರೂಪದರ್ಶಿಯರೆಲ್ಲ ಯಾರೂ ಮೂಲತಃ ಯುಎಇಗೆ ಸೇರಿದವರಲ್ಲ. ರೂಪದರ್ಶಿಯರು ಉಕ್ರೇನ್ ದೇಶದವರಾಗಿದ್ದು, ಫೋಟೋಗ್ರಾಫರ್ ರಷ್ಯಾದವನಾಗಿದ್ದಾನೆ ಎಂದು ದುಬೈ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಪಷ್ಟಪಡಿಸಿದೆ. ಹಾಗೇ ಉಕ್ರೇನಿಯನ್ ರೂಪದರ್ಶಿಗಳೊಂದಿಗೆ ಇದ್ದ ಕೆಲವು ಮಹಿಳೆಯರನ್ನೂ ಬಂಧಿಸಲಾಗಿದೆ. ಆದರೆ ಅವರು ಎಲ್ಲಿಯವರು ಎಂದು ಗೊತ್ತಾಗಿಲ್ಲ ಎಂದು ತಿಳಿಸಿದೆ.
ಬಾಲ್ಕನಿಯಲ್ಲಿ ಬೆತ್ತಲಾಗಿದ್ದ ಉಕ್ರೇನಿಯನ್ ಮಹಿಳೆಯರನ್ನು, ಫೋಟೋ ಶೂಟ್ ಮಾಡಿದವರನ್ನು ಎಲ್ಲರನ್ನೂ ಅವರ ದೇಶಕ್ಕೆ ಗಡೀಪಾರು ಮಾಡುವ ಸಿದ್ಧತೆ ನಡೆಯುತ್ತಿದೆ. ವಿಚಾರಣೆ, ಕಾನೂನು ಪ್ರಕ್ರಿಯೆಗಳು ಬಹುತೇಕ ಮುಗಿದಿದೆ ಎಂದು ದುಬೈ ಅಟಾರ್ನಿ ಜನರಲ್ ಇಸ್ಸಾಂ ಇಸ್ಸಾ ಅಲ್ ಹುಮಾಯಿದ್ದೀನ್ ತಿಳಿಸಿದ್ದಾರೆ.
ಅಸಭ್ಯ ವರ್ತನೆ, ಸಾರ್ವಜನಿಕ ಶಿಸ್ತು ಉಲ್ಲಂಘನೆಗೆ ಯುಎಇ ಕಾನೂನಿನಲ್ಲಿ ಆರು ತಿಂಗಳ ಜೈಲು ಶಿಕ್ಷೆ, 5000 ದಿಹ್ರಾಮ್ಗಳಷ್ಟು ದಂಡ ಹಾಕಬಹುದಾಗಿದೆ. ಅಶ್ಲೀಲ, ಬೆತ್ತಲೆ ಫೋಟೋಗಳನ್ನು ಹಂಚಿಕೊಳ್ಳುವುದು ಈ ಅಸಭ್ಯವರ್ತನೆಯಡಿಯೇ ಬರುತ್ತದೆ ಎಂದು ಸ್ಥಳೀಯ ಮಾಧ್ಯಮಗಳು ಹೇಳಿವೆ.
Dubai is set to deport about a dozen Ukrainian women and one Russian man detained after a nude photoshoot they staged on a high-rise balcony sparked outrage in the glitzy, conservative Gulf city state.
06-10-25 10:47 pm
Bangalore Correspondent
ಕಫ್ ಸಿರಪ್ ದುರಂತ ; ರಾಜ್ಯದಲ್ಲಿ ಕಟ್ಟೆಚ್ಚರ, ಎಲ್ಲ...
06-10-25 05:27 pm
Basavaraj Rayareddy, Mallikarjuna kharge, CM...
05-10-25 09:41 pm
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
06-10-25 07:56 pm
HK News Desk
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
06-10-25 10:42 pm
Mangalore Correspondent
ದಕ್ಷಿಣ ಕನ್ನಡದ 38 ಕಡೆ ಆಯುಷ್ಮಾನ್ ಭಾರತ್- ಆರೋಗ್ಯ...
06-10-25 07:19 pm
ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಹೃದ್ರೋಗ...
06-10-25 04:57 pm
ಟ್ರಾಫಿಕ್ ಸಿಬಂದಿ ಕಾರು ನಿಲ್ಲಿಸಲೆತ್ನಿಸಿ ಒಡೆದ ಗಾಜ...
06-10-25 02:58 pm
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
07-10-25 10:31 am
HK News Desk
Kali Yogish, Arrest, Mangalore: ಮಂಗಳೂರು, ಮೈಸೂ...
05-10-25 03:22 pm
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm