ಬ್ರೇಕಿಂಗ್ ನ್ಯೂಸ್
31-03-21 02:35 pm Headline Karnataka News Network ದೇಶ - ವಿದೇಶ
ನವದೆಹಲಿ, ಮಾ.31: ಆಧಾರ್ ಮತ್ತು ಪಾನ್ ಕಾರ್ಡ್ ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಆಗಿಲ್ಲವೇ ? ಲಿಂಕ್ ಮಾಡಲು ನೀಡಿದ್ದ ಗಡುವು ಇಂದಿಗೆ ಕೊನೆಗೊಂಡಿದ್ದು, ಎಪ್ರಿಲ್ 1ರಿಂದ ಭಾರೀ ದಂಡ ತೆರಬೇಕಾಗುತ್ತದೆ.
ಮಾರ್ಚ್ 31ರ ಮಧ್ಯರಾತ್ರಿ ಒಳಗೆ ಲಿಂಕ್ ಆಗಿಲ್ಲದಿದ್ದರೆ ಎಪ್ರಿಲ್ ಒಂದರಿಂದಲೇ ದಂಡ ವಿಧಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಪಾನ್ ಕಾರ್ಡ್ ಹೊಂದಿರುವ ಪ್ರತಿ ವ್ಯಕ್ತಿಯೂ ತನ್ನ ಆಧಾರ್ ಜೊತೆಗೆ ಲಿಂಕ್ ಮಾಡಿಸಿರಬೇಕು. ಇಲ್ಲದೇ ಇದ್ದರೆ, ಈ ಬಾರಿ ಲೋಕಸಭೆ ಜಾರಿಗೆ ತಂದಿರುವ ಫೈನಾನ್ಸ್ ಬಿಲ್ ಪ್ರಕಾರ ಪ್ರತಿ ವ್ಯಕ್ತಿಯ ಮೇಲೆ ದಂಡ ವಿಧಿಸಲು ಅಧಿಕಾರಿಗಳಿಗೆ ಅವಕಾಶ ನೀಡುತ್ತದೆ. ಇದಲ್ಲದೆ, ಯಾವುದೇ ಪಾನ್ ಕಾರ್ಡ್ ಆಧಾರ್ ಜೊತೆಗೆ ಲಿಂಕ್ ಆಗದೇ ಇದ್ದರೆ ತನ್ನಿಂತಾನೇ ಅಸ್ತಿತ್ವ ಕಳಕೊಳ್ಳಲಿದೆ.
ಯಾವುದೇ ಬ್ಯಾಂಕ್ ವಹಿವಾಟಿಗೆ ಪಾನ್ ಕಾರ್ಡ್ ಅಗತ್ಯವಾಗಿರುವುದರಿಂದ ಪಾನ್ ನಂಬರ್ ಇಲ್ಲದೆ ವಹಿವಾಟು ಸಾಧ್ಯವಿಲ್ಲ. 50 ಸಾವಿರಕ್ಕಿಂತ ಮೇಲಿನ ಹಣದ ವಹಿವಾಟು ನಡೆಸಲು ಪಾನ್ ಕಾರ್ಡ್ ಅಗತ್ಯವಾಗಿರುತ್ತದೆ. ಹೀಗಾಗಿ ಪಾನ್ ಕಾರ್ಡ್ ಎಲ್ಲ ರೀತಿಯ ವಹಿವಾಟುಗಳಿಗೆ ಈಗ ಕಡ್ಡಾಯ ಮಾಡಲಾಗಿದೆ. ಕಳೆದ 2017ರ ಜುಲೈನಲ್ಲಿ ಪಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಾಗಿತ್ತು. ಆಬಳಿಕ ಸರಣಿಯಂತೆ ಹಲವು ಬಾರಿ ಗಡುವು ನೀಡಲಾಗಿದ್ದು, 2021ರ ಮಾರ್ಚ್ 31 ಕೊನೆಯ ದಿನವಾಗಿರುತ್ತದೆ.
ಆದರೆ, ಪಾನ್ ಲಿಂಕ್ ಮಾಡಿಲ್ಲದ ಸಾಮಾನ್ಯ ನಾಗರಿಕರಿಗೆ ದಂಡದ ಮೊತ್ತ ಒಂದು ಸಾವಿರ ಮೀರದ ಹಾಗೆ ವಿಧಿಸಲು ಸೂಚನೆ ನೀಡಲಾಗಿದೆ. ಅದೇ ಸಂದರ್ಭದಲ್ಲಿ ಯಾವ ವ್ಯಕ್ತಿ ಆದಾಯ ತೆರಿಗೆ ಕಟ್ಟಬಲ್ಲವನಾಗಿದ್ದು, ಪಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳದೆ ತನ್ನ ಬ್ಯಾಂಕ್ ಅಕೌಂಟನ್ನು ಪ್ರತ್ಯೇಕವಾಗಿ ಇರಿಸಿದ್ದು ಕಂಡುಬಂದರೆ ಆತನಿಗೆ ಹತ್ತು ಸಾವಿರದ ವರೆಗೂ ದಂಡ ವಿಧಿಸಬಹುದು. ಇದಲ್ಲದೆ, ಇದೇ ವೇಳೆ ಪಾನ್ ಕಾರ್ಡ್ ಲಿಂಕ್ ಆಗದೆ ಅಸ್ತಿತ್ವ ಕಳಕೊಂಡಲ್ಲಿ ಅದನ್ನು ಮತ್ತೆ ಪಡೆಯಬೇಕಿದ್ದಲ್ಲಿ ದುಪ್ಪಟ್ಟು ದಂಡ ವಿಧಿಸುವ ಪ್ರಸ್ತಾಪವೂ ಕಾನೂನಿನಲ್ಲಿದೆ.
ಆದಾಯ ತೆರಿಗೆ ವಿಚಾರದಲ್ಲಿ ಪಾರದರ್ಶಕ ತರುವ ನಿಟ್ಟಿನಲ್ಲಿ ಇದೇ ಮಾರ್ಚ್ 23ರಂದು ನೂತನ ಹಣಕಾಸು ಮಸೂದೆಯನ್ನು ಕೇಂದ್ರ ಸರಕಾರ ದೇಶದಲ್ಲಿ ಜಾರಿಗೆ ತಂದಿದೆ.
The last date for linking the Permanent Account Number (PAN) to Aadhaar is tomorrow - March 31, 2021, otherwise the PAN card is likely to become invalid. If not linked, one may also be liable to pay a penalty of Rs 1,000 as per the Finance Bill 2021.
14-08-25 03:51 pm
Bangalore Correspondent
DK Shivakumar, Dharmasthala, Virendra Heggade...
14-08-25 03:49 pm
IPS Alok Kumar, News: ಪೊಲೀಸ್ ಶಾಲೆಗಳಲ್ಲೇ ಲಂಚ,...
14-08-25 01:48 pm
Dharmasthala Case, Dinesh Gundu Rao: ಮತ್ತೆ ಗು...
13-08-25 07:03 pm
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
14-08-25 07:24 pm
HK News Desk
ಯುಎಇ ಸುದ್ದಿ ; ಆರೇ ತಿಂಗಳಲ್ಲಿ ದುಬೈನಲ್ಲಿ 3,600ಕ್...
14-08-25 07:02 pm
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೋಡಿ ಮಾಡಲಿದ್ದಾರ...
14-08-25 11:26 am
ತಾಯಿ ಜೊತೆ ಅಂಡಮಾನ್ ಹೋಗ್ತೀನಿ ಎಂದಿದ್ದ ಮಗಳು ; ಬೇಡ...
13-08-25 11:56 am
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
14-08-25 10:29 pm
Mangalore Correspondent
SCDCC Bank Launches Special Independence Day...
14-08-25 01:12 pm
Bantwal Deputy Tahsildar, Lokayukta: 20 ಸಾವಿರ...
13-08-25 10:22 pm
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
14-08-25 05:31 pm
Bangalore Correspondent
Supreme Court, Actor Darshan Jail Order: ಸುಪ್...
14-08-25 11:51 am
Fake Stock Market Scam, Fraud: 10 ಲಕ್ಷ ಹೂಡಿಕೆ...
13-08-25 05:40 pm
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm