ಬ್ರೇಕಿಂಗ್ ನ್ಯೂಸ್
16-02-21 07:17 pm Headline Karnataka News Network ದೇಶ - ವಿದೇಶ
ಲಂಡನ್, ಫೆ.16: ಎನ್ನೆಂಸಿ ಹೆಲ್ತ್ ಕೇರ್ ಸಮೂಹ ಸಂಸ್ಥೆಗಳ ಸ್ಥಾಪಕ, ಉಡುಪಿ ಮೂಲದ ದುಬೈ ಉದ್ಯಮಿ ಬಿ.ಆರ್. ಶೆಟ್ಟಿಗೆ ಸೇರಿದ ಜಗತ್ತಿನಾದ್ಯಂತ ಇರುವ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಲು ಲಂಡನ್ ಕೋರ್ಟ್ ಆದೇಶ ಮಾಡಿದೆ.
ಅಬುಧಾಬಿ ಕಮರ್ಷಿಯನ್ ಬ್ಯಾಂಕ್ ಒಂದಕ್ಕೇ ಒಂದು ಬಿಲಿಯನ್ ಡಾಲರ್ ಸಾಲ ಬಾಕಿ ಇರುವ ಕಾರಣ ಬ್ಯಾಂಕ್ ಆಡಳಿತ, ಶೆಟ್ಟಿ ಮತ್ತು ಅವರ ಸಂಸ್ಥೆಯ ವಿರುದ್ಧ ಕಳೆದ ಎಪ್ರಿಲ್ ನಲ್ಲಿ ಕ್ರಿಮಿನಲ್ ದೂರು ದಾಖಲಿಸಿತ್ತು. ಮಾಹಿತಿ ಪ್ರಕಾರ, ಬಿ.ಆರ್.ಶೆಟ್ಟಿ ಸೇರಿದಂತೆ ಎನ್ನೆಂಸಿಯ ವಹಿವಾಟು ನೋಡಿಕೊಂಡಿದ್ದ ಸಿಇಓ ಪ್ರಶಾಂತ್ ಮಂಗಟ್, ಪಾಲುದಾರಿಕೆ ಹೊಂದಿದ್ದ ದುಬೈನವರೇ ಆದ ಖಲೀಫಾ ಅಲ್ ಮುಹೈರಿ, ಸಯೀದ್ ಅಲ್ ಖೆಬೈಸಿ ಅವರ ಖಾತೆಗಳನ್ನೂ ಸೀಜ್ ಮಾಡಲು ಆದೇಶ ಮಾಡಲಾಗಿದೆ. ಇದರಂತೆ, ಇವರು ಜಗತ್ತಿನ ಯಾವುದೇ ಕಡೆಯಲ್ಲಿ ತಮ್ಮ ಹೆಸರಲ್ಲಿ ಹೊಂದಿರುವ ಸ್ಥಿರ ಆಸ್ತಿಗಳನ್ನು ಮಾರುವಂತಿಲ್ಲ.
1970ರಲ್ಲಿ ಬಿ.ಆರ್ ಶೆಟ್ಟಿ ದುಬೈನಲ್ಲಿ ಹೆಲ್ತ್ ಕೇರ್ ಸಂಸ್ಥೆ ಸ್ಥಾಪನೆ ಮಾಡಿದ್ದು, 50 ವರ್ಷಗಳಲ್ಲಿ ಯುಎಇಯಲ್ಲೇ ಅತಿ ದೊಡ್ಡ ಹೆಲ್ತ್ ಕೇರ್ ಸಂಸ್ಥೆಯಾಗಿ ಮಾರ್ಪಾಟಾಗಿತ್ತು. ಆದರೆ, ಬ್ಯಾಂಕುಗಳಿಗೆ ನಕಲಿ ಮಾಹಿತಿ ನೀಡಿ ಆಸ್ತಿಗೆ ಮೀರಿದ ಸಾಲ ಪಡೆದಿದ್ದ ಬಗ್ಗೆ ಲೆಕ್ಕ ಪರಿಶೋಧನಾ ಸಂಸ್ಥೆಯ ವರದಿ ಆಧಾರದಲ್ಲಿ ಇಡೀ ಸಂಸ್ಥೆಯೇ ದಿವಾಳಿಯಾಗಿತ್ತು. ಎನ್ನೆಂಸಿ ಸಂಸ್ಥೆಯ ಒಟ್ಟು ಸಾಲ 4.5 ಬಿಲಿಯನ್ ಡಾಲರ್ ಎಂದು ಲೆಕ್ಕ ಪರಿಶೋಧನಾ ಸಂಸ್ಥೆ ವರದಿ ನೀಡಿತ್ತು. ನಷ್ಟದ ಹಿನ್ನೆಲೆಯಲ್ಲಿ ಲಂಡನ್ ಮೂಲದ ಕಂಪನಿ, ಎನ್ನೆಂಸಿಯನ್ನು ವಶಕ್ಕೆ ಪಡೆದಿದ್ದು ಸಾಲದಾರರಿಗೆ ಹಣ ತುಂಬುವ ಭರವಸೆ ನೀಡಿದೆ.
ಈಗಾಗ್ಲೇ ದುಬೈ ಮತ್ತು ಭಾರತದಲ್ಲಿ ಇರುವ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡುವಂತೆ ಲಂಡನ್ ಕೋರ್ಟ್, ಈ ರಾಷ್ಟ್ರಗಳಿಗೆ ಕೇಳಿಕೊಂಡಿದೆ. ದುಬೈ ಅಲ್ಲದೆ, ಬಿ.ಆರ್. ಶೆಟ್ಟಿ ಭಾರತದ ಬರೋಡಾ ಬ್ಯಾಂಕ್, ಫೆಡರಲ್ ಬ್ಯಾಂಕಿನಲ್ಲೂ ಸಾಲ ಹೊಂದಿದ್ದಾರೆ. ಬರೋಡಾ ಬ್ಯಾಂಕಿನಲ್ಲಿ 250 ಮಿಲಿಯನ್ ಡಾಲರ್ ಸಾಲವನ್ನು ಬಾಕಿ ಉಳಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.
The assets of BR Shetty, the founder of the troubled healthcare operator NMC Health, were frozen by a UK court. The freeze order reportedly applies worldwide, and was won by the Abu Dhabi Commercial Bank as its exposure to the company is more than $1 billion.
06-10-25 10:47 pm
Bangalore Correspondent
ಕಫ್ ಸಿರಪ್ ದುರಂತ ; ರಾಜ್ಯದಲ್ಲಿ ಕಟ್ಟೆಚ್ಚರ, ಎಲ್ಲ...
06-10-25 05:27 pm
Basavaraj Rayareddy, Mallikarjuna kharge, CM...
05-10-25 09:41 pm
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
06-10-25 07:56 pm
HK News Desk
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
06-10-25 10:42 pm
Mangalore Correspondent
ದಕ್ಷಿಣ ಕನ್ನಡದ 38 ಕಡೆ ಆಯುಷ್ಮಾನ್ ಭಾರತ್- ಆರೋಗ್ಯ...
06-10-25 07:19 pm
ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಹೃದ್ರೋಗ...
06-10-25 04:57 pm
ಟ್ರಾಫಿಕ್ ಸಿಬಂದಿ ಕಾರು ನಿಲ್ಲಿಸಲೆತ್ನಿಸಿ ಒಡೆದ ಗಾಜ...
06-10-25 02:58 pm
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm