ಬ್ರೇಕಿಂಗ್ ನ್ಯೂಸ್
10-02-21 02:43 pm Headline Karnataka News Network ದೇಶ - ವಿದೇಶ
ನವದೆಹಲಿ, ಫೆಬ್ರವರಿ 10: ದೇಶದ ಮೂರು ಕೃಷಿ ಕಾನೂನುಗಳ ವಿರುದ್ಧ ಜನವರಿ 26 ರಂದು ದೆಹಲಿಯಲ್ಲಿ ನಡೆದ ಹಿಂಸಾಚಾರದ ರೀತಿಯಲ್ಲಿ, ಪ್ರಚೋದಿಸುತ್ತಿರುವವರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದ್ದು, ಅದರ ಭಾಗವಾಗಿ ಈಗಾಗಲೇ ಟ್ವಿಟ್ಟರ್ ಅನೇಕ ಖಾತೆಗಳ ವಿರುದ್ಧ ಕ್ರಮ ಕೈಗೊಂಡಿದೆ.
ಸಾಮಾಜಿಕ ಮಾಧ್ಯಮಗಳ ಮೂಲಕ ಜನರನ್ನು ಪ್ರಚೋದಿಸುವವರ ವಿರುದ್ಧ ಸರ್ಕಾರ ಕ್ರಮ ಕೈಗೊಂಡಿದ್ದು, 1178 ಟ್ವಿಟರ್ ಖಾತೆಗಳನ್ನು ತೆಗೆದುಹಾಕುವಂತೆ ಟ್ವಿಟರ್ಗೆ ಸೂಚಿಸಿದೆ. ಸರ್ಕಾರದ ಈ ನಿರ್ದೇಶನದ ನಂತರ, ಟ್ವಿಟರ್ ಅಂತಹ ಖಾತೆಯ ವಿರುದ್ಧ ಕ್ರಮ ತೆಗೆದುಕೊಳ್ಳಲು ಪ್ರಾರಂಭಿಸಿದೆ. ಈಗಾಗಲೇ ಸುಮಾರು 500ಕ್ಕೂ ಹೆಚ್ಚು ಖಾತೆಗಳನ್ನ ನಿರ್ಬಂಧಿಸಿದೆ.
ಸರ್ಕಾರದ ನಿರ್ದೇಶನವನ್ನು ಅನುಸರಿಸಿ ಟ್ವಿಟರ್ ಈ ಆಕ್ಷೇಪಾರ್ಹ ಟ್ವಿಟರ್ ಖಾತೆಗಳನ್ನು ನಿರ್ಬಂಧಿಸಲು ಪ್ರಾರಂಭಿಸಿದೆ. ವಾಸ್ತವವಾಗಿ, ಟ್ವಿಟರ್ ತನ್ನ ಕಂಪನಿಯ ಉನ್ನತ ಅಧಿಕಾರಿಗಳನ್ನು ಬಂಧಿಸುವುದನ್ನು ತಪ್ಪಿಸಲು ಮತ್ತು ಯಾವುದೇ ರೀತಿಯ ಆರ್ಥಿಕ ದಂಡವನ್ನು ತಪ್ಪಿಸಲು ಈ ಕ್ರಮವನ್ನು ತೆಗೆದುಕೊಂಡಿದೆ.
ಟ್ವಿಟರ್ ಪ್ರಕಾರ, ಇದುವರೆಗೆ ಸುಮಾರು 709 ಖಾತೆಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಮೂಲಗಳ ಪ್ರಕಾರ, ಈ ಟ್ವಿಟರ್ ಹ್ಯಾಂಡಲ್ಗಳಲ್ಲಿ 257 #ModiPlanningFarmerGenocide ಎಂಬ ಹ್ಯಾಶ್ಟ್ಯಾಗ್ ಬಳಸಿ ಟ್ವೀಟ್ ಮಾಡಿದೆ. ಈ ಪೈಕಿ 126 ಟ್ವಿಟರ್ ಹ್ಯಾಂಡಲ್ಗಳನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಕಾನೂನಿನ ಪ್ರಕಾರ ಭಾರತಕ್ಕೆ ಆಲೋಚನಾ ಸ್ವಾತಂತ್ರ್ಯವಿದೆ ಎಂದು ಟ್ವಿಟರ್ ಸ್ಪಷ್ಟಪಡಿಸಿದ್ದರೂ, ಮಾಧ್ಯಮಗಳು, ಪತ್ರಕರ್ತರು, ಕಾರ್ಯಕರ್ತರು ಮತ್ತು ನಾಯಕರ ಖಾತೆಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.
ಅದೇ ಸಮಯದಲ್ಲಿ ನಾವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇನ್ನಷ್ಟು ಮುಂದುವರಿಸುತ್ತೇವೆ ಎಂದು ಟ್ವಿಟ್ಟರ್ ಮೂಲಕ ಹೇಳಲಾಗಿದೆ. ಕಳೆದ 10 ದಿನಗಳ ಅವಧಿಯಲ್ಲಿ, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಟ್ವಿಟರ್ ಹಲವಾರು ಖಾತೆಗಳನ್ನು ನಿರ್ಬಂಧಿಸುವ ಆದೇಶಗಳನ್ನು ನೀಡಿದೆ.
ನೋಟಿಸ್ಗೆ ಟ್ವಿಟರ್ ಸಂಸ್ಥೆ ಪ್ರತಿಕ್ರಿಯೆ:
ಸರಕಾರದ ಆದೇಶವು ಭಾರತದ ಕಾನೂನಿಗೆ ಪೂರಕವಾಗಿಲ್ಲ ಹಾಗೂ ಕೆಲ ಖಾತೆಗಳನ್ನು ಸಂಪೂರ್ಣವಾಗಿ ತಡೆಹಿಡಿಯುವ ಬದಲು ಅವುಗಳಿಗೆ ಭಾರತದೊಳಗೆ ನಿರ್ಬಂಧ ಹೇರಿರುವುದಾಗಿ ಹಾಗೂ ಈ ಖಾತೆಗಳು ಭಾರತದ ಹೊರಗೆ ಲಭ್ಯವಿರುವುದಾಗಿ ತಿಳಿಸಿದೆ.
ತಾನು ಕೈಗೊಂಡ ಕ್ರಮದ ಕುರಿತು ಕೇಂದ್ರ ಸರಕಾರಕ್ಕೆ ನೀಡಿರುವ ಮಾಹಿತಿ ಕುರಿತು ಬ್ಲಾಗ್ ಒಂದರಲ್ಲಿ ಬರೆದಿರುವ ಟ್ವಿಟ್ಟರ್ ಜಗತ್ತಿನಾದ್ಯಂತ ಮುಕ್ತ ಅಂತರ್ಜಾಲ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ ಎಂದು ಹೇಳಿದೆ.
"ನಾವು ತೆಗೆದುಕೊಳ್ಳಬೇಕಾದ ಕ್ರಮದ ಕುರಿತು ಸರಕಾರ ನೀಡಿದ ಸೂಚನೆ ಭಾರತದ ಕಾನೂನಿನಡಿ ಪೂರಕವಾಗಿಲ್ಲದ ಕಾರಣ ಹಾಗೂ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ನಾವು ಸುದ್ದಿ ತಾಣಗಳು, ಪತ್ರಕರ್ತರು, ಹೋರಾಟಗಾರರು ಹಾಗೂ ರಾಜಕಾರಣಿಗಳ ಖಾತೆಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಗೇನಾದರೂ ಕ್ರಮ ಕೈಗೊಂಡಲ್ಲಿ ಅದು ಭಾರತೀಯ ಕಾನೂನಿನಂತೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ" ಎಂದು ಟ್ವಿಟ್ಟರ್ ಹೇಳಿದೆ.
ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಐಟಿ ಕಾಯಿದೆಯ ಸೆಕ್ಷನ್ 691ಎ ಅನ್ವಯ ಟ್ವಿಟ್ಟರ್ ಖಾತೆಗಳನ್ನು ಬ್ಲಾಕ್ ಮಾಡುವ ಕುರಿತು ಹಲವು ಆದೇಶಗಳನ್ನು ನೀಡಿತ್ತು. ತುರ್ತಾಗಿ ಬ್ಲಾಕ್ ಮಾಡುವಂತೆ ದೊರೆತ ಎರಡು ಸೂಚನೆಗಳನ್ನು ನಾವು ತಾತ್ಕಾಲಿಕವಾಗಿ ಪಾಲಿಸಿದರೂ ನಂತರ ಅವುಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿದ್ದೇವೆ. ಇದನ್ನು ಸಚಿವಾಲಯಕ್ಕೆ ತಿಳಿಸಿದ ನಂತರ ಆದೇಶ ಪಾಲನೆಯಾಗಿಲ್ಲದ ಕುರಿತು ನೋಟಿಸ್ ಜಾರಿಯಾಯಿತು ಎಂದು ಟ್ವಿಟ್ಟರ್ ಹೇಳಿದೆ. ಹಾನಿಕಾರಕ ಕಂಟೆಂಟ್ ಇರುವ ಹ್ಯಾಶ್ ಟ್ಯಾಗ್ ವಿಸಿಬಿಲಿಟಿಯನ್ನು ಕಡಿಮೆಗೊಳಿಸಲು ಕ್ರಮ ಕೈಗೊಂಡಿರುವುದಾಗಿಯೂ ಅದು ತಿಳಿಸಿದೆ. ಟ್ವಿಟ್ಟರ್ ಸರಕಾರದ ಸೂಚನೆಯನ್ನು ಪಾಲಿಸಬೇಕು ಇಲ್ಲವೇ ಕ್ರಮ ಎದುರಿಸಬೇಕೆಂದು ಸರಕಾರಿ ಮೂಲಗಳು ಹೇಳಿವೆ.
The Ministry of Electronics and Information Technology has sent a fresh list of nearly 1200 accounts to Twitter, asking it to either suspend or block them in India, sources said. These accounts, the new notice sent on February 4 said, “were flagged by security agencies as accounts of Khalistan sympathisers or backed by Pakistan”.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:00 am
HK News Desk
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
Masood Azhar: ಜೈಶ್ ಮೊಹಮ್ಮದ್ ಉಗ್ರರ ನೆಲೆ ಧ್ವಂಸ...
07-05-25 10:45 pm
08-05-25 10:54 pm
Mangalore Correspondent
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
Mangalore, Suhas Shetty, NIA, Sunil Kumar: ಸು...
08-05-25 04:14 pm
MLA Harish Poonja, High Court: ಮುಸ್ಲಿಮರ ಬಗ್ಗೆ...
07-05-25 10:30 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm