ಬ್ರೇಕಿಂಗ್ ನ್ಯೂಸ್
08-01-21 02:37 pm Headline Karnataka News Network ದೇಶ - ವಿದೇಶ
ನವದೆಹಲಿ, ಜ.8 : ರೂಪಾಂತರಿ ಕೊರೋನಾ ವೈರಸ್ ಆತಂಕದ ಮಧ್ಯೆಯೇ ಬ್ರಿಟನ್ನಿಂದ ವಿಮಾನ ಆಗಮಿಸಿದ್ದು ಏರ್ ಇಂಡಿಯಾದಲ್ಲಿ 246 ಪ್ರಯಾಣಿಕರನ್ನು ಹೊತ್ತು ದೆಹಲಿಗೆ ತಂದಿದೆ.
ಹೊಸ ವೈರಸ್ ಕಾಣಿಸಿಕೊಂಡ ಬೆನ್ನಿಗೆ ಕೇಂದ್ರ ಸರಕಾರವು ಡಿಸೆಂಬರ್ 23 ರಂದು ಬ್ರಿಟನ್ಗೆ ತೆರಳುವ ಹಾಗೂ ಅಲ್ಲಿಂದ ಬರುವ ವಿಮಾನಗಳನ್ನು ಡಿ.31ರ ತನಕ, ಆ ನಂತರ ಜ.6ರ ತನಕ ನಿರ್ಬಂಧಿಸಿತ್ತು. ಈಗಾಗಲೇ ಬ್ರಿಟನ್ ನಿಂದ ಬಂದವರಿಗೆ ಕಾಣಿಸಿಕೊಂಡಿರುವ ರೂಪಾಂತರಿ ವೈರಸ್ ಪ್ರಕರಣಗಳ ಸಂಖ್ಯೆ ದೇಶದಲ್ಲಿ 82ಕ್ಕೇರಿದ್ದು ಇದರ ನಡುವಲ್ಲೇ ಜ.7ರಿಂದ ಮತ್ತೆ ಭಾರತ- ಬ್ರಿಟನ್ ನಡುವಿನ ವಿಮಾನ ಸಂಚಾರ ಆರಂಭಿಸಲಾಗಿದೆ.
ಪ್ರತಿವಾರ 30 ವಿಮಾನಗಳು ಕಾರ್ಯಾಚರಿಸಲಿದ್ದು ಭಾರತ ಹಾಗೂ ಬ್ರಿಟನ್ ನಿಂದ ತಲಾ 15 ವಿಮಾನಗಳು ವಿನಿಮಯ ಆಗಲಿವೆ. ಜನವರಿ 23ರ ತನಕ ವಿಮಾನ ಹಾರಾಟಕ್ಕೆ ಮಿತಿ ಹೇರಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಬ್ರಿಟನ್ ನಲ್ಲಿ ಕೋವಿಡ್ ಪರಿಸ್ಥಿತಿ ಗಂಭೀರವಾಗಿದೆ. ಹೀಗಾಗಿ ಬ್ರಿಟನ್ನಿಂದ ಬರುವ- ಅಲ್ಲಿಗೆ ಹೋಗುವ ವಿಮಾನಗಳಿಗೆ ಕನಿಷ್ಠ ಜನವರಿ 31ರ ತನಕ ನಿಷೇಧ ಮುಂದುವರಿಸಬೇಕೆಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರವಾಲ್ ಕೇಂದ್ರ ಸರಕಾರವನ್ನು ವಿನಂತಿಸಿದ್ದಾರೆ.
ಇಂಥ ಸಂಕಷ್ಟದ ಸಮಯದಲ್ಲಿ ಸರಕಾರ ಯಾಕೆ ಬ್ರಿಟನ್ ವಿಮಾನಕ್ಕೆ ಅವಕಾಶ ಕೊಡಬೇಕು. ಇದರಿಂದ ಜನರನ್ನು ಅಪಾಯಕ್ಕೆ ಒಡ್ಡಿದಂತಾಗಲ್ಲವೇ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಬ್ರಿಟನ್ ನಿಂದ ಆಗಮಿಸುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಹೊಂದಿರಬೇಕು. ಅಲ್ಲದೆ, ನೆಗೆಟಿವ್ ಆಗಿದ್ದರೂ ಇಲ್ಲಿ ಬಂದ ಮೇಲೆ 14 ದಿನ ಕ್ವಾರಂಟೈನ್ ಇರಬೇಕು ಎಂದು ಹೊಸ ಮಾರ್ಗಸೂಚಿ ನೀಡಲಾಗಿದೆ.
An Air India flight from UK has landed in Delhi with 246 passengers on board amid concerns about a mutant fast-spreading strain of the coronavirus that emerged in Britain.
07-05-25 04:07 pm
Bangalore Correspondent
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
Mysuru, Prison, Arrest, Siddaramaiah: ಬೆಳಗಾವಿ...
06-05-25 09:38 pm
ಓಬಳಾಪುರಂ ಅಕ್ರಮ ಮೈನಿಂಗ್ ಪ್ರಕರಣ ; ಮಾಜಿ ಸಚಿವ ಗಾಲ...
06-05-25 08:18 pm
Hubballi Accident, Sagara, Five Killed: ಹುಬ್ಬ...
06-05-25 01:35 pm
07-05-25 06:14 pm
HK News Desk
Kasaragod Toll, Kumbla: ತಲಪಾಡಿ – ಚೆರ್ಕಳ ಆರು ಪ...
07-05-25 12:20 pm
India strikes terror camps in Pak; ಪಾಕಿಸ್ತಾನದ...
07-05-25 09:54 am
ವಿಶ್ವಸಂಸ್ಥೆಯಲ್ಲಿ ಬೆತ್ತಲಾದ ಪಾಕ್ ; ಚೀನಾ ಬಿಟ್ಟು...
06-05-25 02:45 pm
ಭಾರತ - ಪಾಕ್ ಯುದ್ಧ ಸನ್ನಿವೇಶ ; ದೇಶಾದ್ಯಂತ ಮೇ 7ರಂ...
05-05-25 11:10 pm
07-05-25 03:36 pm
Mangalore Correspondent
Hindu Maha Sabha, Mangalore, Rajesh Pavitran:...
07-05-25 02:36 pm
Mangalore, Satish Kumapla, U T Khader: ಚಿಕ್ಕಮ...
06-05-25 06:36 pm
Suhas Shetty Murder, Bommai, Dinesh Gundurao:...
06-05-25 06:17 pm
Mangalore, Kodikere Loki Arrest: ಕಮ್ಯುನಲ್ ಕೇಸ...
06-05-25 04:02 pm
03-05-25 02:16 pm
Mangalore Correspondent
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm
Mangalore Mudipu Murder, Mob, Police, Crime:...
29-04-25 09:59 pm