ಬ್ರೇಕಿಂಗ್ ನ್ಯೂಸ್
28-12-20 04:51 pm Headline Karnataka News Network ದೇಶ - ವಿದೇಶ
ವುಹಾನ್, ಡಿ.28: ಕೊರೊನಾ ವೈರಸ್ ಸೋಂಕಿನ ಬಗ್ಗೆ ಮೊದಲ ಬಾರಿಗೆ ವರದಿ ಮಾಡಿದ್ದ ಸಿಟಿಜನ್ ಜರ್ನಲಿಸ್ಟ್ ಅನ್ನು ಚೀನಾದ ಕೋರ್ಟ್ ನಾಲ್ಕು ವರ್ಷದ ಜೈಲು ಶಿಕ್ಷೆ ವಿಧಿಸಿದೆ.
37 ವರ್ಷದ ಝಂಗ್ ಝಾನ್, ಕೋರ್ಟಿನಿಂದ ಶಿಕ್ಷೆಗೊಳಗಾದ ಮಹಿಳೆ. ಈಕೆ, ಚೀನಾದ ಶಾಂಘೈ ನಿವಾಸಿಯಾಗಿದ್ದು, ಕಳೆದ ಫೆಬ್ರವರಿ 1ರಂದು ವುಹಾನ್ ನಗರಕ್ಕೆ ಬಂದಿದ್ದಳು. ಅಲ್ಲಿನ ಸ್ಥಿತಿಯನ್ನು ನೋಡಿ ಅವಕ್ಕಾದ ಝಾನ್, ಸೋಂಕಿಗೊಳಗಾದ ಜನರು ಆಸ್ಪತ್ರೆಯಲ್ಲಿ ಕ್ಯೂ ನಿಂತಿರುವುದು, ಅಲ್ಲಿನ ಆಸ್ಪತ್ರೆಯ ಸ್ಥಿತಿಗತಿ ಮತ್ತು ನಗರದ ಬೀದಿಗಳು ಖಾಲಿ ಖಾಲಿಯಾಗಿರುವುದನ್ನು ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಳು. ಅಲ್ಲೀ ವರೆಗೂ ಸೋಂಕಿನ ಬಗ್ಗೆ ಅಲ್ಲಿನ ಮಾಧ್ಯಮಗಳಾಗಲೀ, ಸರಕಾರವಾಗಲೀ ಹೊರ ಜಗತ್ತಿಗೆ ತಿಳಿಸಿರಲಿಲ್ಲ. ತಾನೇ ಸ್ವಂತ ಕಾಳಜಿಯಿಂದ ಮಾಡಿದ್ದ ವರದಿ ಈಗ ಆಕೆಯನ್ನು ಜೈಲಿಗೆ ಅಟ್ಟುವಂತೆ ಮಾಡಿದೆ.

ಇದಾಗುತ್ತಿದ್ದಂತೆ, ಝನ್ ಝಾಂಗ್ ನನ್ನು ಪೊಲೀಸರು ಬಂಧಿಸಿದ್ದರು. ಎಂಟು ತಿಂಗಳ ಬಂಧಿಸಿಟ್ಟು ಕೋರ್ಟಿನಲ್ಲಿ ವಾದ- ವಿವಾದ ನಡೆದು ಈಗ ತೀರ್ಪು ಹೊರಬಿದ್ದಿದೆ. ಅಭಿಪ್ರಾಯ ಸ್ವಾತಂತ್ರ್ಯದ ಹಕ್ಕನ್ನು ನಾನು ಚಲಾಯಿಸಿದ್ದೇನೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ ಎಂದು ಕೋರ್ಟಿನಲ್ಲಿ ಝಾಂಗ್ ಹೇಳಿಕೆ ನೀಡಿದ್ದಾಳೆ. ಆದರೆ, ಕೋರ್ಟ್ ಈ ವರದಿಯ ಬಗ್ಗೆ ಬೇರೆಯೇ ಅಭಿಪ್ರಾಯ ಪಟ್ಟಿದೆ. ಇಂಥ ವರದಿಯಿಂದ ಜನರ ನಡುವೆ ಸಂಘರ್ಷ, ಘರ್ಷಣೆಗೆ ಕಾರಣವಾಗಿದ್ದೀಯ ಎಂದು ಹೇಳಿದೆ. ಇದಕ್ಕಾಗಿ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ.

ವುಹಾನ್ ನಗರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ವೈರಸ್, ಆಬಳಿಕ ಇಡೀ ಜಗತ್ತಿಗೆ ಹಬ್ಬಿದೆ. ಜಗತ್ತಿನಲ್ಲಿ 80 ಮಿಲಿಯ ಜನರಿಗೆ ಸೋಂಕು ಹರಡಿದರೆ, ಇದರಿಂದಾಗಿ 1.76 ಮಿಲಿಯ ಜನರು ಸಾವು ಕಂಡಿದ್ದಾರೆ. ಶಾಂಘೈ ನಗರದಲ್ಲಿ ಕೋರ್ಟ್ ವಿಚಾರಣೆ ನಡೆಯುತ್ತಿದ್ದಾಗ ಹೊರಭಾಗದಲ್ಲಿ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದರು. ಸೋಂಕನ್ನು ಯಶಸ್ವಿಯಾಗಿ ನಿಭಾಯಿಸಿದ್ದಕ್ಕೆ ಚೀನಾದ ಮಾಧ್ಯಮಗಳು ಅಲ್ಲಿನ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ರನ್ನು ಹೊಗಳಿದೆ.
A Chinese citizen journalist who covered Wuhan's virus outbreak is facing up to five years in jail, according to newly released documents.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am