ಬ್ರೇಕಿಂಗ್ ನ್ಯೂಸ್
28-12-20 04:51 pm Headline Karnataka News Network ದೇಶ - ವಿದೇಶ
ವುಹಾನ್, ಡಿ.28: ಕೊರೊನಾ ವೈರಸ್ ಸೋಂಕಿನ ಬಗ್ಗೆ ಮೊದಲ ಬಾರಿಗೆ ವರದಿ ಮಾಡಿದ್ದ ಸಿಟಿಜನ್ ಜರ್ನಲಿಸ್ಟ್ ಅನ್ನು ಚೀನಾದ ಕೋರ್ಟ್ ನಾಲ್ಕು ವರ್ಷದ ಜೈಲು ಶಿಕ್ಷೆ ವಿಧಿಸಿದೆ.
37 ವರ್ಷದ ಝಂಗ್ ಝಾನ್, ಕೋರ್ಟಿನಿಂದ ಶಿಕ್ಷೆಗೊಳಗಾದ ಮಹಿಳೆ. ಈಕೆ, ಚೀನಾದ ಶಾಂಘೈ ನಿವಾಸಿಯಾಗಿದ್ದು, ಕಳೆದ ಫೆಬ್ರವರಿ 1ರಂದು ವುಹಾನ್ ನಗರಕ್ಕೆ ಬಂದಿದ್ದಳು. ಅಲ್ಲಿನ ಸ್ಥಿತಿಯನ್ನು ನೋಡಿ ಅವಕ್ಕಾದ ಝಾನ್, ಸೋಂಕಿಗೊಳಗಾದ ಜನರು ಆಸ್ಪತ್ರೆಯಲ್ಲಿ ಕ್ಯೂ ನಿಂತಿರುವುದು, ಅಲ್ಲಿನ ಆಸ್ಪತ್ರೆಯ ಸ್ಥಿತಿಗತಿ ಮತ್ತು ನಗರದ ಬೀದಿಗಳು ಖಾಲಿ ಖಾಲಿಯಾಗಿರುವುದನ್ನು ವಿಡಿಯೋ ಮಾಡಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಳು. ಅಲ್ಲೀ ವರೆಗೂ ಸೋಂಕಿನ ಬಗ್ಗೆ ಅಲ್ಲಿನ ಮಾಧ್ಯಮಗಳಾಗಲೀ, ಸರಕಾರವಾಗಲೀ ಹೊರ ಜಗತ್ತಿಗೆ ತಿಳಿಸಿರಲಿಲ್ಲ. ತಾನೇ ಸ್ವಂತ ಕಾಳಜಿಯಿಂದ ಮಾಡಿದ್ದ ವರದಿ ಈಗ ಆಕೆಯನ್ನು ಜೈಲಿಗೆ ಅಟ್ಟುವಂತೆ ಮಾಡಿದೆ.
ಇದಾಗುತ್ತಿದ್ದಂತೆ, ಝನ್ ಝಾಂಗ್ ನನ್ನು ಪೊಲೀಸರು ಬಂಧಿಸಿದ್ದರು. ಎಂಟು ತಿಂಗಳ ಬಂಧಿಸಿಟ್ಟು ಕೋರ್ಟಿನಲ್ಲಿ ವಾದ- ವಿವಾದ ನಡೆದು ಈಗ ತೀರ್ಪು ಹೊರಬಿದ್ದಿದೆ. ಅಭಿಪ್ರಾಯ ಸ್ವಾತಂತ್ರ್ಯದ ಹಕ್ಕನ್ನು ನಾನು ಚಲಾಯಿಸಿದ್ದೇನೆ. ಇದರಲ್ಲಿ ನನ್ನದೇನೂ ತಪ್ಪಿಲ್ಲ ಎಂದು ಕೋರ್ಟಿನಲ್ಲಿ ಝಾಂಗ್ ಹೇಳಿಕೆ ನೀಡಿದ್ದಾಳೆ. ಆದರೆ, ಕೋರ್ಟ್ ಈ ವರದಿಯ ಬಗ್ಗೆ ಬೇರೆಯೇ ಅಭಿಪ್ರಾಯ ಪಟ್ಟಿದೆ. ಇಂಥ ವರದಿಯಿಂದ ಜನರ ನಡುವೆ ಸಂಘರ್ಷ, ಘರ್ಷಣೆಗೆ ಕಾರಣವಾಗಿದ್ದೀಯ ಎಂದು ಹೇಳಿದೆ. ಇದಕ್ಕಾಗಿ ನಾಲ್ಕು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಕಟಿಸಿದೆ.
ವುಹಾನ್ ನಗರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿದ್ದ ವೈರಸ್, ಆಬಳಿಕ ಇಡೀ ಜಗತ್ತಿಗೆ ಹಬ್ಬಿದೆ. ಜಗತ್ತಿನಲ್ಲಿ 80 ಮಿಲಿಯ ಜನರಿಗೆ ಸೋಂಕು ಹರಡಿದರೆ, ಇದರಿಂದಾಗಿ 1.76 ಮಿಲಿಯ ಜನರು ಸಾವು ಕಂಡಿದ್ದಾರೆ. ಶಾಂಘೈ ನಗರದಲ್ಲಿ ಕೋರ್ಟ್ ವಿಚಾರಣೆ ನಡೆಯುತ್ತಿದ್ದಾಗ ಹೊರಭಾಗದಲ್ಲಿ ಪೊಲೀಸರು ಬಿಗಿ ಭದ್ರತೆ ಏರ್ಪಡಿಸಿದ್ದರು. ಸೋಂಕನ್ನು ಯಶಸ್ವಿಯಾಗಿ ನಿಭಾಯಿಸಿದ್ದಕ್ಕೆ ಚೀನಾದ ಮಾಧ್ಯಮಗಳು ಅಲ್ಲಿನ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ರನ್ನು ಹೊಗಳಿದೆ.
A Chinese citizen journalist who covered Wuhan's virus outbreak is facing up to five years in jail, according to newly released documents.
06-10-25 05:27 pm
HK News Desk
Basavaraj Rayareddy, Mallikarjuna kharge, CM...
05-10-25 09:41 pm
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
06-10-25 07:56 pm
HK News Desk
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
06-10-25 07:19 pm
Mangalore Correspondent
ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಹೃದ್ರೋಗ...
06-10-25 04:57 pm
ಟ್ರಾಫಿಕ್ ಸಿಬಂದಿ ಕಾರು ನಿಲ್ಲಿಸಲೆತ್ನಿಸಿ ಒಡೆದ ಗಾಜ...
06-10-25 02:58 pm
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm