ಬ್ರೇಕಿಂಗ್ ನ್ಯೂಸ್
27-09-25 05:53 pm HK News Desk ದೇಶ - ವಿದೇಶ
ನವದೆಹಲಿ, ಸೆ.27: ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕುಗಳಲ್ಲಿ ಒಂದಾಗಿರುವ ಎಚ್ ಡಿಎಫ್ ಸಿ ಬ್ಯಾಂಕಿನ ದುಬೈ ಶಾಖೆಯಲ್ಲಿ ಹಣಕಾಸು ವಹಿವಾಟಿಗೆ ನಿರ್ಬಂಧ ವಿಧಿಸಲಾಗಿದೆ. ದುಬೈ ಹಣಕಾಸು ಸೇವೆಗಳ ಪ್ರಾಧಿಕಾರವು(ಡಿಎಫ್ಎಸ್ಎ) ಈ ನಿರ್ಬಂಧ ಹಾಕಿದ್ದು, ಮುಂದಿನ ಆದೇಶದ ವರೆಗೆ ಬ್ಯಾಂಕು ದುಬೈನಲ್ಲಿ ಹೊಸ ಗ್ರಾಹಕರಿಗೆ ಯಾವುದೇ ರೀತಿಯ ಸೇವೆಗಳನ್ನು ನೀಡುವಂತಿಲ್ಲ ಎಂದು ಹೇಳಿದೆ.
ಎಚ್ ಡಿಎಫ್ ಸಿ ಬ್ಯಾಂಕಿನ ಶಾಖೆ ದುಬೈ ಇಂಟರ್ನ್ಯಾಶನಲ್ ಫೈನಾನ್ಶಿಯಲ್ ಸೆಂಟರ್ (ಡಿಐಎಫ್ ಸಿ) ಹೊಸತಾಗಿ ಹಣಕಾಸು ವರ್ಗಾವಣೆ, ಠೇವಣಿ, ಸಾಲ ಇನ್ನಿತರ ರೂಪದಲ್ಲಿ ಹೊಸತಾಗಿ ಗ್ರಾಹಕರಿಗೆ ಯಾವುದೇ ರೀತಿಯ ಸೇವೆಗಳನ್ನು ನೀಡುವಂತಿಲ್ಲ. ಹಾಲಿ ಇರುವ ಗ್ರಾಹಕರ ಸೇವೆಗಳಿಗೆ ತೊಂದರೆ ಇರುವುದಿಲ್ಲ ಎಂದು ಈ ಕುರಿತು ಡಿಎಫ್ಎಸ್ ಎ ಹೊರಡಿಸಿರುವ ನೋಟೀಸಿನಲ್ಲಿ ಹೇಳಲಾಗಿದೆ.

ಡಿಐಎಫ್ ಸಿ ಹಣಕಾಸು ಸೇವೆಗಳಲ್ಲಿ ವಿಳಂಬ ಮತ್ತು ಸ್ಥಳೀಯ ನಿಯಮಗಳನ್ನು ಪಾಲಿಸುವಲ್ಲಿ ವಿಫಲಗೊಂಡ ವಿಚಾರದಲ್ಲಿ ಗ್ರಾಹಕರು ಧ್ವನಿಯೆತ್ತಿದ್ದಕ್ಕೆ ಡಿಎಫ್ ಎಸ್ಎ ಕ್ರಮ ಜರುಗಿಸಿದೆ ಎನ್ನಲಾಗುತ್ತಿದೆ. 2023ರಲ್ಲಿ ಸಿರಿವಂತ ಎನ್ಆರ್ ಐಗಳಿಗೆ ಬ್ಯಾಂಕಿನ ಸಾಲಪತ್ರಗಳ ಬಾಂಡ್ ಗಳನ್ನು ಮಾರಾಟ ಮಾಡಿದ್ದು, ಎಚ್ ಡಿಎಫ್ ಸಿ ಬ್ಯಾಂಕಿನ ದುಬೈ ಶಾಖೆಯ ಸಿಬಂದಿ ಅದನ್ನು ಸುಳ್ಳು ಹೇಳಿ ಮಾಡಿಸಿದ್ದರು ಎಂಬ ಆರೋಪಗಳಿವೆ. ಸ್ವಿಸ್ ಬ್ಯಾಂಕ್ ಆರ್ಥಿಕ ಕುಸಿತ ಆದ ಸಂದರ್ಭದಲ್ಲಿಯೇ ಈ ರೀತಿ ಮಾಡಿದ್ದು ಎನ್ಆರ್ ಐಗಳ ಆಕ್ಷೇಪಕ್ಕೆ ಕಾರಣವಾಗಿತ್ತು.
ಹೀಗಾಗಿ ಈ ಬಗ್ಗೆ ಸಲಹೆ ನೀಡಿದ ಬ್ಯಾಂಕಿನ ಸಿಬಂದಿ, ರಿಲೇಶನ್ ಶಿಪ್ ಮ್ಯಾನೇಜ್ಮೆಂಟ್ ನೋಡಿಕೊಂಡಿದ್ದ ದುಬೈ ಪ್ರತಿನಿಧಿಗಳು, ಬಹ್ರೈನ್ ಬ್ರಾಂಚ್ ಮೂಲಕ ಅಕೌಂಟ್ ಬುಕ್ಕಿಂಗ್ ಆಗಿದೆಯೆಂಬ ಮಾಹಿತಿ ಬಗ್ಗೆಯೂ ತನಿಖೆ ನಡೆಸಲು ಡಿಎಫ್ಎಸ್ಎ ಮುಂದಾಗಿದೆ. ನಿರ್ಬಂಧ ವಿಚಾರದ ಬಗ್ಗೆ ಎಚ್ ಡಿಎಫ್ ಸಿ ಬ್ಯಾಂಕ್ ಆಡಳಿತವು ಪ್ರತಿಕ್ರಿಯಿಸಿದ್ದು, ದುಬೈ ಶಾಖೆಯ ಮೇಲಿನ ನಿರ್ಬಂಧವು ಬ್ಯಾಂಕಿನ ಜಗತ್ತಿನಾದ್ಯಂತ ಇರುವ ಇತರ ಶಾಖೆಗಳ ವಹಿವಾಟಿಗೆ ತೊಂದರೆ ಮಾಡುವುದಿಲ್ಲ. ಆ ಶಾಖೆಯಲ್ಲಿ 2025ರ ಸೆ.23ರ ವರೆಗೆ 1489 ಗ್ರಾಹಕರಿಗೆ ಸೇವೆಗಳನ್ನು ನೀಡಿದ್ದು, ಬ್ಯಾಂಕಿನ ಒಟ್ಟು ಗ್ರಾಹಕರು ಮತ್ತು ಸೇವೆಗಳಿಗೆ ಹೋಲಿಸಿದರೆ ಇದು ತೀರಾ ಸಣ್ಣದು ಎಂದಿದೆ. ಡಿಎಫ್ ಎಸ್ ಎ ನಿಯಮಗಳನ್ನು ಪಾಲಿಸಿ, ಅದರ ತನಿಖೆಯನ್ನೂ ಎದುರಿಸುತ್ತದೆ ಎಂದೂ ಹೇಳಿದೆ.
The Dubai Financial Services Authority (DFSA) has imposed restrictions on the Dubai branch of HDFC Bank, one of India’s largest private sector banks. The order bars the branch from offering services to any new customers until further notice, though existing clients will not be affected.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am