ಬ್ರೇಕಿಂಗ್ ನ್ಯೂಸ್
24-09-25 01:07 pm HK News Desk ದೇಶ - ವಿದೇಶ
ಹ್ಯೂಸ್ಟನ್, ಸೆ.24 : ಅಮೆರಿಕದ ಟೆಕ್ಸಾಸ್ ರಾಜ್ಯದ ಶುಗರ್ ಲ್ಯಾಂಡ್ ಪಟ್ಟಣದಲ್ಲಿ ನಿರ್ಮಿಸಲಾಗಿರುವ 90 ಅಡಿ ಎತ್ತರದ ಕಂಚಿನ ಹನುಮಂತನ ಪ್ರತಿಮೆ ಕುರಿತು ಅಮೆರಿಕದಲ್ಲಿ ವಿವಾದ ಭುಗಿಲೆದ್ದಿದೆ. ಅಮೆರಿಕ ಕ್ರಿಶ್ಚಿಯನ್ ರಾಷ್ಟ್ರವಾಗಿದ್ದು ಟೆಕ್ಸಾಸ್ ರಾಜ್ಯದಲ್ಲಿ ಹಿಂದೂ ದೇವರಾದ ಹನುಮಂತನ ನಕಲಿ ಪ್ರತಿಮ ನಿರ್ಮಿಸಲಾಗಿದೆ. ನಾವಿದಕ್ಕೆ ಏಕೆ ಅನುಮತಿಸಬೇಕು? ಎಂದು ಸ್ಥಳೀಯ ರಿಪಬ್ಲಿಕನ್ ನಾಯಕ ಅಲೆಕ್ಸಾಂಡರ್ ಡಂಕನ್ ವಿಡಿಯೊ ಸಮೇತ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದು, ಭಾರಿ ವಿವಾದಕ್ಕೆ ಕಾರಣವಾಗಿದೆ.
ಇನ್ನೊಂದು ಪೋಸ್ಟ್ನಲ್ಲಿ ಅವರು ಬೈಬಲ್ ಉಲ್ಲೇಖಿಸಿ, ''ನನ್ನ ನಂಬಿಕೆಯ ದೇವರು ಹೊರತುಪಡಿಸಿ ನಿಮಗೆ ಬೇರೆ ದೇವರು ಇರಬಾರದು. ನೀವು ನಿಮಗಾಗಿ ಯಾವುದೇ ರೀತಿಯ ವಿಗ್ರಹವನ್ನು ಸ್ವರ್ಗದಲ್ಲಿ, ಭೂಮಿಯಲ್ಲಿ ಅಥವಾ ಸಮುದ್ರದಲ್ಲಿ ಮಾಡಿಟ್ಟುಕೊಳ್ಳಬಾರದು," ಎಂದು ಬರೆದು ಉದ್ಧಟತನ ತೋರಿದ್ದಾರೆ.
ಡಂಕನ್ ಅವರ ಈ ಮಾತಿಗೆ ಅಮೆರಿಕದಲ್ಲಿರುವ ಹಿಂದೂ ಸಂಘಟನೆಗಳಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಹಿಂದೂ ಅಮೆರಿಕನ್ ಫೌಂಡೇಷನ್, ಇದೊಂದು ಹಿಂದೂ ವಿರೋಧಿ ಮತ್ತು ಪ್ರಚೋದನಕಾರಿ ಹೇಳಿಕೆಯಾಗಿದೆ. ಟೆಕ್ಸಾಸ್ ಆಡಳಿತ, ನಿಮ್ಮ ಸ್ವಂತ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಮತ್ತು ಹಿಂದೂ ವಿರೋಧಿ ದ್ವೇಷ ಹರಡುತ್ತಿರುವ ನಿಮ್ಮ ಪಕ್ಷದ ಸೆನೆಟ್ ಅಭ್ಯರ್ಥಿ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಡೊನಾಲ್ಡ್ ಟ್ರಂಪ್ ಅವರನ್ನು 'ಎಕ್ಸ್'ನಲ್ಲಿ ಆಗ್ರಹಿಸಿದೆ. ಈ ಹೇಳಿಕೆಯು ಧಾರ್ಮಿಕ ತಾರತಮ್ಯವನ್ನು ಉತ್ತೇಜಿಸುತ್ತದೆ ಮತ್ತು ಅಮೆರಿಕ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದೂ ಎಚ್ ಎಎಫ್ ಹೇಳಿದೆ.
'ಎಕ್ಸ್' ಬಳಕೆದಾರರೊಬ್ಬರು, "ನೀವು ಹಿಂದೂ ಅಲ್ಲದ ಕಾರಣಕ್ಕೆ ಹನುಮನನ್ನು ಸುಳ್ಳು ದೇವ ಎಂದು ಹೇಳಲು ಸಾಧ್ಯವಿಲ್ಲ. ಯೇಸು ಭೂಮಿಗೆ ಬರುವ 2 ಸಾವಿರ ವರ್ಷಗಳ ಮೊದಲೇ ವೇದಗಳನ್ನು ರಚಿಸಲಾಗಿದೆ ಎಂದು ಕುಟುಕಿದ್ದಾರೆ. ಟೆಕ್ಸಾಸ್ನ ಅಷ್ಟಲಕ್ಷ್ಮಿ ದೇವಸ್ಥಾನದಲ್ಲಿ ಭಗವಾನ್ ಹನುಮಂತನ 90 ಅಡಿ ಕಂಚಿನ ಪ್ರತಿಮೆ ಇದೆ. ಈ ಪ್ರತಿಮೆಯನ್ನು 2024ರಲ್ಲಿ ಅನಾವರಣಗೊಳಿಸಲಾಗಿದ್ದು, 'ಸ್ಟಾಚ್ಯೂ ಆಫ್ ಯೂನಿಯನ್' ಎಂದು ಕರೆಯಲಾಗುತ್ತಿದೆ. ಆಗಲೂ ಇದರ ವಿರುದ್ಧ ಟ್ರಂಪ್ ಬೆಂಬಲಿಗರಿಂದ ಅಭಿಯಾನ ನಡೆದಿತ್ತು.
A 90-foot-tall bronze statue of Hindu deity Hanuman in Sugar Land, Texas, has triggered controversy after a local Republican leader questioned why such a monument was allowed in what he described as a “Christian nation.”
02-05-26 06:35 pm
HK News Staffer
ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬ...
02-05-26 04:48 pm
ಮಲ್ಲಿಕಾnರ್ಜುನ ಖರ್ಗೆ ಸಿಎಂ ಬದಲಾವಣೆ ಇಲ್ಲ ಎಂದಿರುವ...
01-05-26 08:33 pm
ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ, ನಾನು ಸ...
30-04-26 08:16 pm
ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳ...
30-04-26 11:53 am
02-05-26 08:26 pm
HK News Staffer
ಆನ್ಲೈನ್ ಗೇಮ್ ವಿರುದ್ಧ ಕೇಂದ್ರ ಗದಾಪ್ರಹಾರ ; ಮಕ್ಕಳ...
02-05-26 11:18 am
Actor Vijay, Election, Poll: ಚುನಾವಣೋತ್ತರ ಸಮೀಕ...
29-04-26 11:18 pm
ಇದು ಫ್ರೆಂಡ್ಲಿ ಫೆಡರಲ್ ಅಸ್ಸಾಸಿನ್, ಟ್ರಂಪ್ ಅತ್ಯಾಚ...
27-04-26 02:48 pm
ಶ್ವೇತಭವನದ ಡಿನ್ನರ್ ಪಾರ್ಟಿಯಲ್ಲಿ ಗುಂಡಿನ ದಾಳಿ ; ಭ...
26-04-26 12:49 pm
02-05-26 11:05 pm
Mangalore Correspondent
ತುಂಬೆ ಅಣೆಕಟ್ಟಿನಲ್ಲಿ ಕೃತಕ ಅಭಾವ ಸೃಷ್ಟಿ ; ಸ್ಥಳಕ್...
02-05-26 08:58 pm
Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ...
29-04-26 11:05 pm
ತಾಲೂಕು ಆಸ್ಪತ್ರೆ ಖಾಸಗಿ ವಶಕ್ಕೆ ; ಆರೋಗ್ಯ ಸಚಿವರ ಉ...
28-04-26 09:18 pm
ASI Assault Case, Mangalore: ಎಎಸ್ಐ ಮೇಲೆ ಹಲ್ಲೆ...
28-04-26 01:35 pm
02-05-26 08:35 pm
HK News Staffer
ಕುಕ್ಕರ್ ಬಾಂಬರ್ ಗೆ 10 ವರ್ಷ ಶಿಕ್ಷೆ ; ಎನ್ಐಎ ಅಧಿಕ...
02-05-26 12:19 pm
ಕೋರ್ಟ್ ಜಟಾಪಟಿ ಬಳಿಕ ಕುದ್ರೋಳಿ ಕ್ಷೇತ್ರಕ್ಕೆ ಹೊಸ ಕ...
01-05-26 09:24 pm
ಸಹೋದ್ಯೋಗಿ ಮೇಲೆ ಆಸಿಡ್ ದಾಳಿ ; ಕೇರಳ ಮೂಲದ ವ್ಯಕ್...
01-05-26 07:18 pm
Rakesh Gladson Dsouza: ಮಂಗಳೂರಿನ ಯುವ ಉದ್ಯಮಿ ರಾ...
01-05-26 06:36 pm