ಬ್ರೇಕಿಂಗ್ ನ್ಯೂಸ್
16-09-25 10:11 pm HK News Desk ದೇಶ - ವಿದೇಶ
ಲಖನೌ, ಸೆ.16: ದೇಶದಾದ್ಯಂತ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಅದರ ಪರ ಹಾಗೂ ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಇದರ ನಡುವೆಯೇ ಉತ್ತರ ಪ್ರದೇಶದಲ್ಲಿರುವ ಯೋಗಿ ಆದಿತ್ಯನಾಥ್ ಸರ್ಕಾರ ಬೀದಿನಾಯಿಗಳ ಬಗ್ಗೆ ಹೊಸತೊಂದು ಆದೇಶ ಜಾರಿಗೊಳಿಸಿದೆ. ಅದೇನೆಂದರೆ, ಮನುಷ್ಯರಿಗೆ ಎರಡು ಬಾರಿ ಕಚ್ಚುವ ನಾಯಿಗೆ ಆಜೀವ ಪರ್ಯಂತ ಶಿಕ್ಷೆಯನ್ನು ವಿಧಿಸುವಂತೆ ಅಲ್ಲಿನ ಸರ್ಕಾರ ಆದೇಶಿಸಿದೆ.
ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಮೃತ್ ಅಭಿಜಿತ್ ಅವರ ಕಚೇರಿಯಿಂದ ಹೊರಬಿದ್ದಿರುವ ಆದೇಶದಲ್ಲಿ ಹೀಗಿದೆ... ಪದೇ ಪದೇ ರೊಚ್ಚಿಗೇಳುವ ನಾಯಿಗಳು ಯಾವುದೇ ಮನುಷ್ಯನನ್ನು ಕಚ್ಚಿದರೆ, ಆ ನಾಯಿಯನ್ನು ಹತ್ತಿರದ ಶ್ವಾನಕೇಂದ್ರಕ್ಕೆ ಸ್ಥಳೀಯ ಸರ್ಕಾರ ಕರೆದೊಯ್ಯಬೇಕು. ಅಲ್ಲಿ ಆ ನಾಯಿಗೆ ಈ ಹಿಂದೆ ಸಂತಾನಹರಣ ಶಸ್ತ್ರಚಿಕಿತ್ಸೆ ಆಗಿದೆಯೇ ಎಂಬುದನ್ನು ಪರೀಕ್ಷಿಸಬೇಕು. ಒಂದು ವೇಳೆ ಅಂಥ ಶಸ್ತ್ರಚಿಕಿತ್ಸೆ ಆಗಿಲಿದಿದ್ದರೆ ಆ ನಾಯಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿ 10 ದಿನಗಳವರೆಗೆ ಶ್ವಾನಕೇಂದ್ರದಲ್ಲೇ ಅವಗಾಹನೆಗಾಗಿ ಬಿಡಬೇಕು.
ಒಂದು ವೇಳೆ, ಸಂತಾನಹರಣ ಶಸ್ತ್ರಚಿಕಿತ್ಸೆ ಆಗಿದ್ದರೂ 10 ದಿನಗಳ ಕಾಲ ಶ್ವಾನಕೇಂದ್ರದಲ್ಲೇ ಆ ನಾಯಿಗಳನ್ನು ಇರಿಸಬೇಕು. ಅಲ್ಲಿಂದ ಆ ಶ್ವಾನಗಳನ್ನು ಬಿಡುಗಡೆ ಮಾಡುವಾಗ ಅದಕ್ಕೆ ಮೈಕ್ರೋ ಚಿಪ್ ಅಳವಡಿಸಲಾಗುತ್ತದೆ. ಆ ಮೂಲಕ ಆ ನಾಯಿಯು ಮತ್ಯಾರನ್ನಾದರೂ ಕಚ್ಚುತ್ತದೆಯೇ ಎಂಬದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ. ಒಂದು ವೇಳೆ ಅದು ಮತ್ತೊಮ್ಮೆ ಮನುಷ್ಯರಿಗೆ ಕಚ್ಚಿದರೆ, ಶ್ವಾನಕೇಂದ್ರದಲ್ಲೇ ಅದನ್ನು ಶಾಶ್ವತವಾಗಿ ಇರಿಸಬೇಕು ಅಂದರೆ, ಆಜೀವ ಪರ್ಯಂತ ಅದಕ್ಕೆ ಜೈಲು ಶಿಕ್ಷೆಯ ರೀತಿಯಲ್ಲಿ ಅದನ್ನು ಶ್ವಾನಕೇಂದ್ರದಲ್ಲೇ ಇರಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.
Amid growing nationwide concern over the menace of stray dog attacks, the Yogi Adityanath-led Uttar Pradesh government has introduced a strict new policy: any stray dog that bites a human twice will face lifetime detention in a government-run dog shelter.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 12:56 pm
Mangaluru Staffer
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
Dr Meenakshi Jain at Mangaluru Lit Fest: ಉಪನಿ...
10-01-26 07:21 pm
ಕರಾವಳಿ ಟೂರಿಸಂ ಅಭಿವೃದ್ಧಿಗೆ ಜನಪ್ರನಿಧಿಗಳು, ಉದ್ಯಮ...
10-01-26 06:23 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm