ಬ್ರೇಕಿಂಗ್ ನ್ಯೂಸ್
12-07-25 02:15 pm HK News Desk ದೇಶ - ವಿದೇಶ
ನವದೆಹಲಿ, ಜುಲೈ 12 : ಉತ್ತರ ಪ್ರದೇಶದಲ್ಲಿ ಸಾಮೂಹಿಕ ಮತಾಂತರ ಕಾರ್ಯ ನಡೆಸುತ್ತಿದ್ದ ಆರೋಪದಲ್ಲಿ ಬಂಧಿತನಾಗಿರುವ ಸ್ವಯಂಘೋಷಿತ ದೇವಮಾನವ ಜಲಾಲುದ್ದೀನ್ ಅಲಿಯಾಸ್ ಚಾಂಗೂರ್ ಬಾಬಾ ಕಳೆದ ಮೂರು ವರ್ಷಗಳಲ್ಲಿ ಮತಾಂತರ ಉದ್ದೇಶಕ್ಕಾಗಿ ಸುಮಾರು 500 ಕೋಟಿಯಷ್ಟು ದೇಣಿಗೆಯನ್ನು ಪಡೆದಿದ್ದಾನೆ ಎಂದು ಎಟಿಎಸ್ ಪೊಲೀಸರು ಬಹಿರಂಗಪಡಿಸಿದ್ದಾರೆ.
ಈ ಪೈಕಿ 200 ಕೋಟಿಯಷ್ಟು ದೇಣಿಗೆ ಅಧಿಕೃತ ಮೂಲಗಳಿಂದ ಪಡೆದಿದ್ದರೆ, 300 ಕೋಟಿಯಷ್ಟು ಮೊತ್ತವನ್ನು ನೇಪಾಳ ಇನ್ನಿತರ ಕಳ್ಳದಾರಿಗಳಿಂದ ಹವಾಲಾ ರೂಪದಲ್ಲಿ ಪಡೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಉದ್ದೇಶಕ್ಕಾಗಿ ಭಾರತ- ನೇಪಾಳ ಗಡಿಭಾಗದ ಕಾಠ್ಮಂಡು, ನವಾಲ್ ಪಾರಸಿ, ರೂಪಾಂದೇಹಿ, ಬಾಂಕೇ ಜಿಲ್ಲೆಗಳಲ್ಲಿ ನೂರಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆದಿದ್ದು, ಬೇನಾಮಿ ವ್ಯಕ್ತಿಗಳ ಮೂಲಕ ವಹಿವಾಟು ಮಾಡಿಸುತ್ತಿದ್ದ ಎಂದು ಪತ್ತೆ ಮಾಡಿದ್ದಾರೆ.


ಪ್ರಮುಖವಾಗಿ ಈ ದೇಣಿಗೆಯನ್ನು ಪಾಕಿಸ್ತಾನ, ಸೌದಿ ಅರೇಬಿಯಾ, ಟರ್ಕಿ, ದುಬೈನಂತಹ ಮುಸ್ಲಿಂ ಬಾಹುಳ್ಯದ ದೇಶಗಳಿಂದ ಸ್ವೀಕರಿಸಲಾಗಿತ್ತು. ಇದರಲ್ಲಿ ಏಜಂಟರಾಗಿ ಕಾರ್ಯ ನಿರ್ವಹಿಸುತ್ತಿದ್ದವರು 4-5 ಶೇಕಡಾ ಕಮಿಷನ್ ಪಡೆದು ಈ ಹಣವನ್ನು ಚಾಂಗೂರ್ ಬಾಬಾನಿಗೆ ಮುಟ್ಟಿಸುತ್ತಿದ್ದರು. ಹೆಚ್ಚಿನ ಸಂದರ್ಭಗಳಲ್ಲಿ ಕ್ಯಾಶ್ ಡಿಪಾಸಿಟ್ ಮೆಷಿನ್ ಗಳಲ್ಲಿ ಈ ಹಣವನ್ನು ಬೇರೆ ಬೇರೆ ಖಾತೆಗಳಿಗೆ ಡಿಪಾಸಿಟ್ ಮಾಡಲಾಗುತ್ತಿತ್ತು. ನೇಪಾಳ ಗಡಿಭಾಗದ ಬಿಹಾರಿ ಜಿಲ್ಲೆಗಳಾದ ಬಲರಾಮ್ ಪುರ್, ಶ್ರಾವಸ್ತಿ, ಬಹ್ರೈಚ್, ಲಖೀಂಪುರ್ ಭಾಗದಲ್ಲಿ ಈ ಹಣದ ವಹಿವಾಟು ಹೆಚ್ಚಾಗಿ ಆಗುತ್ತಿತ್ತು. ಸ್ಥಳೀಯ ಮನಿ ಎಕ್ಸ್ ಚೇಂಜ್ ಗಳಲ್ಲಿ ನೇಪಾಳಿ ಕರೆನ್ಸಿಯನ್ನು ಭಾರತೀಯ ಕರೆನ್ಸಿಯಾಗಿ ಬದಲಿಸಲಾಗುತ್ತಿತ್ತು.
ಬಿಹಾರದ ಜಿಲ್ಲೆಗಳಾದ ಮಧುಬನಿ, ಸೀತಾಮಹಿ, ಪೂರ್ನಿಯಾ, ಕಿಷನ್ಗಂಜ್, ಚಂಪಾರಣ್, ಸೂಪೌಲ್ ಭಾಗದಲ್ಲಿ ಹೆಚ್ಚು ಏಜಂಟರಿದ್ದು, ನೇಪಾಳದಿಂದ ಬರುತ್ತಿದ್ದ ಫಂಡ್ ಅನ್ನು ಗುಪ್ತವಾಗಿ ಚಾಂಗೂರ್ ಬಾಬಾಗೆ ತಲುಪಿಸುತ್ತಿದ್ದರು. ಅಯೋಧ್ಯಾ ಜಿಲ್ಲೆಗೆ ಅತಿ ಹೆಚ್ಚು ಹಣವನ್ನು ಬಳಕೆ ಮಾಡಲಾಗಿದ್ದು, ಅಲ್ಲಿರುವ ಹಿಂದು ಮಹಿಳೆಯರನ್ನು ಮತಾಂತರಿಸಲು ಟಾರ್ಗೆಟ್ ಮಾಡಿದ್ದರು. ಈ ಕುರಿತಾಗಿ ಚಾಂಗೂರ್ ಬಾಬಾ ಮತ್ತು ಆತನ ಸಹಚರರು ಹೊಂದಿದ್ದ 40 ಬ್ಯಾಂಕ್ ಖಾತೆಗಳನ್ನು ಪೊಲೀಸರು ತಪಾಸಣೆ ನಡೆಸಿದ್ದಾರೆ. ಎಟಿಎಸ್ ಪೊಲೀಸರು ಹತ್ತು ವರ್ಷಗಳ ಆದಾಯ ತೆರಿಗೆ ದಾಖಲೆಯನ್ನು ಸಲ್ಲಿಸುವಂತೆ ಆರೋಪಿಗಳಿಗೆ ಸೂಚಿಸಿದ್ದಾರೆ. ಇದೇ ವೇಳೆ, ಚಾಂಗೂರ್ ಬಾಬಾ ಸಹಚರ ಎನ್ನಲಾದ ನವೀನ್ ರೋಹ್ರಾ ಎಂಬ ಹೆಸರಿನಲ್ಲಿರುವ ಆರು ಖಾತೆಗಳಲ್ಲಿ 34.22 ಕೋಟಿ ಇರುವುದನ್ನು ಎಟಿಎಸ್ ಪತ್ತೆ ಮಾಡಿದೆ. ನಸ್ರೀನ್ ಎಂಬ ಮಹಿಳೆಯ ಖಾತೆಯಲ್ಲಿ 13.90 ಕೋಟಿ ರೂ. ಇರುವುದನ್ನು ಪತ್ತೆ ಮಾಡಲಾಗಿದೆ.
ಇದಲ್ಲದೆ, ಚಾಂಗೂರ್ ಬಾಬಾ ದುಬೈ, ಶಾರ್ಜಾ, ಯುಎಇ ದೇಶಗಳ ವಿದೇಶಿ ಬ್ಯಾಂಕ್ ಗಳಲ್ಲೂ ಖಾತೆಗಳನ್ನು ಹೊಂದಿದ್ದು ಅದನ್ನೂ ಎಟಿಎಸ್ ತಪಾಸಣೆ ನಡೆಸಲು ಮುಂದಾಗಿದೆ. ಇದೇ ವೇಳೆ, ಬಲರಾಂಪುರದಲ್ಲಿ 5 ಕೋಟಿ ವೆಚ್ಚದಲ್ಲಿ ಸರ್ಕಾರಿ ಜಾಗವನ್ನು ಕಬಳಿಸಿ ಚಾಂಗೂರ್ ಬಾಬಾ ನಿರ್ಮಿಸಿದ್ದ ಕಟ್ಟಡವನ್ನು ಸಂಪೂರ್ಣ ನೆಲಸಮ ಮಾಡಲಾಗಿದೆ. 40 ಕೊಠಡಿಗಳಿದ್ದ ಸಂಪೂರ್ಣ ಮಾರ್ಬಲ್ ಲೇಪಿತ ಬಂಗಲೆಯನ್ನು ಹತ್ತು ಬುಲ್ಡೋಜರ್ ಬಳಸಿ ನೆಲಸಮ ಮಾಡಲಾಗಿದೆ. ಚಾಂಗೂರ್ ಬಾಬಾ ಉತ್ತರ ಪ್ರದೇಶದಲ್ಲಿ 1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಮತಾಂತರ ಮಾಡಿದ್ದಾನೆ ಮತ್ತು ಇದಕ್ಕಾಗಿ ನೂರಾರು ಕೋಟಿ ಹಟವನ್ನು ವಿದೇಶಗಳಿಂದ ಫಂಡಿಂಗ್ ಪಡೆದಿದ್ದಾನೆಂದು ಎಟಿಎಸ್ ಪೊಲೀಸರು ಪತ್ತೆ ಮಾಡಿದ್ದು, ದೇಶಾದ್ಯಂತ ಸಂಚಲನ ಮೂಡಿಸಿದೆ. (ಮಾಹಿತಿ-ಇಂಡಿಯಾ ಟುಡೇ)
In a startling revelation, the Uttar Pradesh Anti-Terrorism Squad (ATS) has disclosed that self-proclaimed godman Jalaluddin, also known as Changur Baba—arrested recently on charges of orchestrating mass religious conversions—received foreign funding amounting to nearly ₹500 crore over the past three years.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am