ಬ್ರೇಕಿಂಗ್ ನ್ಯೂಸ್
07-07-25 08:45 pm HK News Desk ದೇಶ - ವಿದೇಶ
ಪಾಟ್ನಾ, ಜುಲೈ 7 : ಫೇಸ್ಬುಕ್ ನಲ್ಲಿ ಪರಿಚಯವಾದ ಮುಸ್ಲಿಂ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದ ಹಿಂದು ಯುವತಿಯನ್ನು ಗೋಮಾಂಸ ತಿನ್ನಿಸಿ ಇಸ್ಲಾಮಿಗೆ ಮತಾಂತರವಾಗುವಂತೆ ಒತ್ತಡ ಹೇರಿದ ಘಟನೆ ಬಿಹಾರದಲ್ಲಿ ನಡೆದಿದ್ದು, ಯುವತಿ ಪೊಲೀಸ್ ದೂರು ನೀಡಿ ತನ್ನನ್ನು ತನ್ನದೇ ಊರಿಗೆ ತಲುಪಿಸುವಂತೆ ಗೋಗರೆದಿದ್ದಾಳೆ.
ಯುವತಿ ಮಧ್ಯಪ್ರದೇಶದ ಇಂದೋರ್ ಮೂಲದ ಆರತಿ ಎಂಬಾಕೆಯಾಗಿದ್ದು, ಬಿಹಾರದ ಬೆಗುಸರಾಯ್ ಜಿಲ್ಲೆಯ ನಿವಾಸಿ ಮೊಹಮ್ಮದ್ ಶಹಬಾಜ್ ಎಂಬಾತನನ್ನು ಐದು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದಳು. ಇದೀಗ ತನ್ನನ್ನು ಗೋಮಾಂಸ ತಿನ್ನುವಂತೆ ಹಾಗೂ ಇಸ್ಲಾಮಿಗೆ ಮತಾಂತರ ಆಗಲು ಒತ್ತಡ ಹೇರುತ್ತಿದ್ದಾನೆ. ನನ್ನ ಮೊಬೈಲಿನಲ್ಲಿದ್ದ ಹಿಂದು ದೇವರ ಫೋಟೋಗಳನ್ನು ಡಿಲೀಟ್ ಮಾಡಿದ್ದಾನೆ. ನಿರಾಕರಿಸಿದ್ದಕ್ಕೆ ಹಲ್ಲೆ ಮಾಡಿದ್ದಾನೆಂದು ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ.
ಫೇಸ್ಬುಕ್ ನಲ್ಲಿ ಪರಿಚಯವಾದ ಸಂದರ್ಭದಲ್ಲಿ ತನ್ನನ್ನು ಚಿನ್ನ ಮತ್ತು ಬೆಳ್ಳಿಯ ವ್ಯಾಪಾರಿಯೆಂದು ಶಹಬಾಜ್ ಪರಿಚಯಿಸಿಕೊಂಡಿದ್ದ. ಆದರೆ ಇಲ್ಲಿ ಬಂದು ನೋಡಿದಾಗ ಆತ ಅಂಗಡಿ ಒಂದರಲ್ಲಿ ಮಾಲೆ ನೇಯುವ ಕೆಲಸ ಮಾಡುತ್ತಿದ್ದ. ಆದರೂ ಜೊತೆಗೆ ವಾಸ ಮಾಡಿದ್ದೆ. ಈಗ ಈ ರೀತಿ ಮಾಡುತ್ತಿರುವುದರಿಂದ ನನ್ನನ್ನು ಬದುಕಲು ಬಿಡುತ್ತಾನೆಂಬ ನಂಬಿಕೆ ಇಲ್ಲ ಎಂದು ಹೇಳಿರುವ ಯುವತಿ, ನಾನು ಆತನ ವಿರುದ್ಧ ದೂರು ಕೊಟ್ಟು ಎಫ್ಐಆರ್ ದಾಖಲಿಸಲು ಹೇಳುವುದಿಲ್ಲ. ನನ್ನನ್ನು ಮರಳಿ ಇಂದೋರ್ ತಲುಪಿಸಿ ಎಂದು ಪೊಲೀಸರಲ್ಲಿ ಕೇಳಿಕೊಂಡಿದ್ದಾಳೆ.
ಮದುವೆಯಾಗಿ ಬಂದ ನಂತರ ಹೆತ್ತವರ ಜೊತೆಗೆ ಸಂಪರ್ಕ ಇಟ್ಟುಕೊಂಡಿಲ್ಲ. ಅವರು ನಾನು ಸತ್ತಿರಬಹುದು ಎಂದು ಭಾವಿಸಿರಬಹುದು. ಆದರೆ ಮರಳಿ ನನ್ನ ಊರಿಗೆ ಹೋಗಲೇಬೇಕೆಂದು ಈಗ ಬಯಕೆಯಾಗಿದೆ ಎಂದು ಆಕೆ ತಿಳಿಸಿದ್ದಾಳೆ. ಆದರೆ ಶಹಬಾಜ್ ತನ್ನ ಮೇಲಿನ ಆರೋಪವನ್ನು ನಿರಾಕರಿಸಿದ್ದು, ಆಕೆ ಮಕ್ಕಳಾಗದಂತೆ ಆಪರೇಶನ್ ಮಾಡಿಕೊಂಡಿದ್ದು, ಮುಂದೆಯೂ ಮಕ್ಕಳು ಆಗಲ್ಲ. ಬೇರೆ ಪುರುಷರ ಜೊತೆಗೂ ಸಂಬಂಧ ಹೊಂದಿದ್ದು, ನನ್ನ ಜೊತೆಗಿದ್ದ ಐದು ವರ್ಷದಲ್ಲಿ ಮೂರು ಬಾರಿ ಮನೆಯಿಂದ ಓಡಿ ಹೋಗಿದ್ದಾಳೆ ಎಂದು ಹೇಳಿದ್ದಾನೆ. ಎಸ್ಪಿ ಸುಬೋಧ್ ಕುಮಾರ್, ಆಕೆ ದೂರು ಕೊಡಲು ಮುಂದೆ ಬರುತ್ತಿಲ್ಲ. ತನ್ನನ್ನು ಮರಳಿ ಇಂದೋರ್ ತಲುಪಿಸುವಂತೆ ದೂರಿನಲ್ಲಿ ಕೇಳಿಕೊಂಡಿದ್ದಾಳೆ. ಸದ್ಯಕ್ಕೆ ನಿಗಾ ಕೇಂದ್ರದಲ್ಲಿ ಇರಿಸಿದ್ದು, ಇಂದೋರ್ ತಲುಪಿಸಲು ಏರ್ಪಾಡು ಮಾಡುತ್ತೇವೆ ಎಂದಿದ್ದಾರೆ.
A woman from Indore alleged that her husband from Begusarai, Bihar forced her to eat beef and change her religion after marriage. The couple met on Facebook and married five years ago.
06-07-25 08:48 pm
Bangalore Correspondent
ತುರ್ತು ಪರಿಸ್ಥಿತಿ ಕೆಟ್ಟ ಘಟನೆಯಾಗಿದ್ದು, ಅದನ್ನು ಯ...
06-07-25 06:25 pm
Vandalism in Shivamogga Raghigudda: ಶಿವಮೊಗ್ಗ...
06-07-25 04:50 pm
Women's Commission Chairperson Nagalakshmi; ಥ...
04-07-25 10:44 pm
Heart attack news, Karnataka: ರಾಜ್ಯದಲ್ಲಿ ಹೃದಯ...
04-07-25 10:18 pm
07-07-25 08:45 pm
HK News Desk
ಅಮೆರಿಕದ ಟೆಕ್ಸಾಸ್ನಲ್ಲಿ ಭೀಕರ ಪ್ರವಾಹ ; 28 ಮಕ್ಕಳ...
07-07-25 04:11 pm
ಟೆಕ್ಸಾಸ್ ನಲ್ಲಿ ದಿಢೀರ್ ಪ್ರವಾಹ ; 27 ಮಂದಿ ಸಾವು,...
06-07-25 03:53 pm
ಹಿಜಾಬ್ ; ಪರೀಕ್ಷಾ ಕೊಠಡಿಗೆ ನುಗ್ಗಿ ಆವಾಜ್, ಪಿಇಎಸ್...
02-07-25 11:05 pm
Adult Film Star Kylie Page Death: ನೀಲಿ ಚಿತ್ರ...
02-07-25 05:31 pm
07-07-25 05:02 pm
Mangalore Correspondent
Mangalore Car Accident, Thumbe: ಹಳೆ ಸ್ವಿಫ್ಟ್...
05-07-25 05:16 pm
Ivan Dsouza, Mangaluru: ಮಂಗಳೂರು ಬ್ರಾಂಡ್ ನೇಮ್,...
05-07-25 04:19 pm
MLA Vedavyas Kamath: ಸೌತ್ ಕೆನರಾ ಬ್ರಿಟಿಷರ ಹೆಸರ...
05-07-25 02:32 pm
Hindu Jagarana Vedike, Moodbidri, Obscene vid...
05-07-25 12:56 pm
07-07-25 10:31 pm
Mangalore Correspondent
Job Fraud, Mangalore, Doctor: ದುಬೈನ ಎನ್ಎಂಸಿ ಹ...
07-07-25 10:18 pm
ಹದಿನಾರರ ವಯಸ್ಸು ಹುಚ್ಚುಕೋಡಿ ಮನಸ್ಸು ; 16ರ ಹುಡುಗಿ...
07-07-25 07:13 pm
Digital Arrest, Cyber Fraud, Mangalore: ಡಿಜಿಟ...
07-07-25 03:30 pm
Moral policing, Puttur, Mangalore Crime: ನೀನು...
07-07-25 12:20 pm