ಬ್ರೇಕಿಂಗ್ ನ್ಯೂಸ್
16-06-25 01:33 pm HK News Desk ದೇಶ - ವಿದೇಶ
ನವದೆಹಲಿ, ಜೂನ್.16: ಇಸ್ರೇಲ್- ಇರಾನ್ ನಡುವೆ ಸತತ ನಾಲ್ಕನೇ ದಿನವೂ ದಾಳಿ- ಪ್ರತಿದಾಳಿ ಮುಂದುವರಿದಿದ್ದು, ಇರಾನ್ ಮೇಲೆ ಇಸ್ರೇಲಿ ಮಿಲಿಟರಿ ತೀವ್ರ ರೀತಿಯಲ್ಲಿ ಕ್ಷಿಪಣಿ ದಾಳಿ ನಡೆಸಿದೆ. ಇರಾನ್ ರಾಜಧಾನಿ ಟೆಹ್ರಾನ್ ಮತ್ತು ಇತರ ನಗರಗಳ ಮೇಲೆಯೂ ದಾಳಿಯಾಗಿದ್ದು, ನೂರಾರು ಮಂದಿ ಸಾವಿಗೀಡಾಗಿದ್ದಾರೆ. ಇರಾನ್ ಗುಪ್ತಚರ ಸಂಸ್ಥೆ ರೆವೊಲ್ಯುಶನರಿ ಗಾರ್ಡ್ಸ್ ಮುಖ್ಯಸ್ಥ ಮೊಹಮ್ಮದ್ ಖಾಜಿಂ ಕೊಲ್ಲಲ್ಪಟ್ಟಿದ್ದಾರೆ.
ಇಸ್ರೇಲ್ ರಾಜಧಾನಿ ಟೆಲ್ ಅವೀವ್ ಮೇಲೆಯೂ ಇರಾನ್ ಮಿಸೈಲ್ ದಾಳಿ ಮಾಡಿದ್ದು, ಐರನ್ ಡೋಮ್ ಸಿಸ್ಟಮ್ ನಿಂದಾಗಿ ಹೆಚ್ಚಿನ ನಾಶ – ನಷ್ಟ ಸಂಭವಿಸಿಲ್ಲ. ಆದರೂ ಮಕ್ಕಳು ಸೇರಿದಂತೆ 13 ಮಂದಿ ಇಸ್ರೇಲಿನಲ್ಲಿ ಸಾವಿಗೀಡಾಗಿದ್ದಾರೆ. ಇದೇ ವೇಳೆ, ಇರಾನ್ ನಲ್ಲಿ 240 ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು, 380ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾಗಿ ಸಿಎನ್ಎನ್ ವರದಿ ಮಾಡಿದ. ಇಸ್ರೇಲಿನ ಕ್ಷಿಪಣಿಗಳು ಜನವಸತಿ ಸೇರಿದಂತೆ ಇರಾನ್ ರಾಜತಾಂತ್ರಿಕ ಮುಖ್ಯಸ್ಥರ ನಿವಾಸಗಳನ್ನು ಗುರಿಯಾಗಿಸಿ ದಾಳಿ ಮಾಡಿವೆ. ಇದೇ ವೇಳೆ, ವಿಶ್ವ ರಾಷ್ಟ್ರಗಳು ಎರಡೂ ಕಡೆಯ ನಾಯಕರಿಗೆ ಕದನ ವಿರಾಮಕ್ಕಾಗಿ ಒತ್ತಾಯಿಸಿವೆ. ಅಮೆರಿಕದ ಅಧ್ಯಕ್ಷ ಟ್ರಂಪ್ ಕೂಡ ಮಾತುಕತೆ ಮಾಡಿಕೊಳ್ಳುವಂತೆ ಇರಾನ್ ನಾಯಕರಿಗೆ ಸಲಹೆ ಮಾಡಿದ್ದಾರೆ. ಆದರೆ ಇರಾನ್ ನಿರಾಕರಿಸಿದ್ದು, ಇಸ್ರೇಲ್ ದಾಳಿ ನಿಲ್ಲಿಸದ ಹೊರತು ಮಾತುಕತೆ ಸಾಧ್ಯವಿಲ್ಲ ಎಂದಿದೆ.








ಯುದ್ಧ ನಿಲ್ಲಿಸಿ, ಮಾತುಕತೆ ಮಾಡಿಕೊಳ್ಳುವಂತೆ ಟ್ರಂಪ್ ಸಲಹೆ ಮಾಡಿದ್ದರೆ, ಇಸ್ರೇಲ್ ಮತ್ತು ಇರಾನ್ ನಾಯಕರು ಟ್ರಂಪ್ ಸಲಹೆಯನ್ನು ನಿರಾಕರಿಸಿದ್ದಾರೆ. ಇರಾನ್ ನಮ್ಮನ್ನು ಗುರಿಯಾಗಿಸಿ ಅಣ್ವಸ್ತ್ರಗಳ ಸಂಗ್ರಹಿಸುವುದನ್ನು ನಿಲ್ಲಿಸಲಿ, ಆಮೇಲೆ ದಾಳಿ ನಿಲ್ಲಿಸುತ್ತೇವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ, ನಾವು ತಲೆ ಬಗ್ಗಿಸಿಲ್ಲ ಎಂದು ದಾಳಿ ಮಾಡುತ್ತಿದ್ದಾರೆ, ನಾವು ರಾಜಕೀಯ ಕಾರಣಕ್ಕೆ ತಲೆ ಬಗ್ಗಿಸೋಲ್ಲ ಎಂದಿದ್ದಾರೆ.

ಇತಿಹಾಸದಿಂದ ನಾವು ಪಾಠ ಕಲಿತುಕೊಳ್ಳದಿದ್ದರೆ..!
ಇದೇ ವೇಳೆ, ಇಸ್ರೇಲ್ ವಿದೇಶಾಂಗ ಸಚಿವ ಜಿಡಿಯಾನ್ ಸಾರ್ ಸಿಎನ್ಎನ್ ಚಾನೆಲ್ ಗೆ ಪ್ರತಿಕ್ರಿಯಿಸಿದ್ದು, ಇರಾನ್ ಭೂಪ್ರದೇಶ ಬದಲಾವಣೆ ಮಾಡುವುದು ನಮ್ಮ ಗುರಿಯಾಗಿಲ್ಲ. ನಮ್ಮ ದಾಳಿಯ ಬಗ್ಗೆ ಇರಾನ್ ಜನರು ನಿರ್ಧರಿಸಬೇಕು. ಇರಾನ್ ತನ್ನ ಅಣ್ವಸ್ತ್ರಗಳ ಸಾಮರ್ಥ್ಯ ಹೆಚ್ಚಿಸುವುದನ್ನು ನಾವು ಬಯಸುವುದಿಲ್ಲ. ಅವರ ಬ್ಯಾಲಿಸ್ಟಿಕ್ ಮಿಸೈಲ್ ಪವರ್ ಕಡಿಮೆಗೊಳಿಸುವುದೇ ನಮ್ಮ ಗುರಿ. ನಾವೇನು ಮಾಡುತ್ತಿದ್ದೇವೋ, ಅಮೆರಿಕದ ಮಿತ್ರನಾಗಿ, ಪಾಶ್ಚಾತ್ಯ ರಾಷ್ಟ್ರಗಳ ನಾಗರಿಕರ ಪರವಾಗಿ ಮಾಡುತ್ತಿದ್ದೇವೆ. ನಾವು ಇದನ್ನು ಮಾಡದೇ ಇದ್ದರೆ ನಾವು ಈ ಜಗತ್ತಿನಲ್ಲಿ ಉಳಿದುಕೊಳ್ಳಲು ಸಾಧ್ಯವಿಲ್ಲ. ನಾವು ಇತಿಹಾಸದಿಂದ ಪಾಠ ಕಲಿತುಕೊಳ್ಳದಿದ್ದರೆ, ನಾವೇ ಈ ಜಗತ್ತಿನಿಂದ ಖಾಲಿಯಾಗುತ್ತೇವೆ. ಜೂಯಿಗಳು ಹೇಳಿದ ಮಾತನ್ನು ನಾವು ನೆನಪಲ್ಲಿಟ್ಟುಕೊಳ್ಳಬೇಕು ಎಂದಿದ್ದಾರೆ.



ಟೆಹ್ರಾನ್ ಮಿಸೈಲ್ ಲಾಂಚರ್ ಸ್ಫೋಟ
ಇದೇ ವೇಳೆ, ಟೆಹ್ರಾನ್ ಬಳಿ ಇರಾನ್ ರೂಪಿಸಿಕೊಂಡಿದ್ದ ಭೂಮಿಯಿಂದ ಆಕಾಶಕ್ಕೆ ಮಿಸೈಲ್ ಉಡಾಯಿಸುವ ಕೇಂದ್ರವನ್ನು ಉಡಾಯಿಸಿದ್ದಾಗಿ ಇಸ್ರೇಲ್ ಸೇನೆ ಹೇಳಿಕೊಂಡಿದೆ. ನಮ್ಮ ವಾಯುಪಡೆಯು ಅಲ್ಲಿನ ಶಸ್ತ್ರಗಳನ್ನು ಸ್ಫೋಟಿಸಿದ್ದು, ಲಾಂಚರ್ ಅನ್ನು ನಿಷ್ಕ್ರಿಯ ಮಾಡಿದೆ. ಇರಾನ್ ವಾಯುನೆಲೆ ಮಾಡಿಕೊಂಡಿರುವ ಎಲ್ಲ ವ್ಯವಸ್ಥೆಯನ್ನು ಛಿದ್ರಗೊಳಿಸುತ್ತೇವೆ ಎಂದು ಇಸ್ರೇಲ್ ಸೇನೆಯು ಉಪಗ್ರಹ ಚಿತ್ರಗಳನ್ನು ಆಧರಿಸಿ ಹೇಳಿಕೆ ಬಿಡುಗಡೆ ಮಾಡಿದೆ.
The escalating conflict between Iran and Israel has now entered its fourth day, with relentless missile exchanges claiming hundreds of lives and causing widespread destruction across both nations. The overnight barrage, which wounded at least 100 additional civilians, represents Tehran’s continued retaliation against Israel’s preemptive strikes targeting Iran’s nuclear facilities and ballistic missile programs.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am