ಬ್ರೇಕಿಂಗ್ ನ್ಯೂಸ್
12-06-25 05:13 pm HK News Desk ದೇಶ - ವಿದೇಶ
ಅಹ್ಮದಾಬಾದ್, ಜೂ 12 : ಅಹಮದಾಬಾದ್ನ ಮೇಘನಿನಗರದಲ್ಲಿ ನಡೆದಿರೋ ಈ ವಿಮಾನ ಅಪಘಾತದ ಸುದ್ದಿ ನಿಜಕ್ಕೂ ಆಘಾತಕಾರಿ. ಏರ್ ಇಂಡಿಯಾಕ್ಕೆ ಸೇರಿದ ವಿಮಾನವೊಂದು ಲಂಡನ್ಗೆ ಹೊರಟಿತ್ತು. ಆದರೆ, ಟೇಕ್ ಆಫ್ ಆದ ಕೇವಲ ಹತ್ತು ನಿಮಿಷಗಳಲ್ಲೇ ಭೀಕರ ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ 242 ಜನ ಪ್ರಯಾಣಿಕರಿದ್ದರು ಅಂತಾ ವರದಿಯಾಗಿದೆ.
ಅಪಘಾತ ಎಷ್ಟು ಭೀಕರವಾಗಿತ್ತು ಅಂದ್ರೆ ವಿಮಾನ ಅಕ್ಷರಶಃ ಛಿದ್ರ ಛಿದ್ರವಾಗಿತ್ತು. ವಿಮಾನದ ಭಾಗಗಳು ಸುತ್ತಮುತ್ತಲಿನ ಕಟ್ಟಡಗಳ ಮೇಲೆ ಬಿದ್ದಿದ್ದವು. ಅಪಘಾತ ಆದ ತಕ್ಷಣ ಅಲ್ಲಿ ದಟ್ಟವಾದ ಹೊಗೆ ಆವರಿಸಿತ್ತು. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಸುದ್ದಿ ತಲುಪಿದ್ದು, ಸುಮಾರು 22 ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಪೈಲಟ್ನಿಂದ "ಮೇಡೇ" ಕರೆ !
ಡಿಜಿಸಿಎ (ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್) ಬಿಡುಗಡೆ ಮಾಡಿರೋ ಹೇಳಿಕೆ ಪ್ರಕಾರ, ವಿಮಾನದ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರು ಏರ್ ಟ್ರಾಫಿಕ್ ಕಂಟ್ರೋಲ್ (ATC) ಗೆ "ಮೇಡೇ" ಕರೆ ಮಾಡಿದ್ದಾರಂತೆ. "ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರಿಗೆ 8200 ಗಂಟೆಗಳ ಹಾರಾಟದ ಅನುಭವ ಇತ್ತು. ಅಷ್ಟೇ ಅಲ್ಲ, ಸಹ-ಪೈಲಟ್ಗೆ 1100 ಗಂಟೆಗಳ ಅನುಭವವಿತ್ತು" ಅಂತಾ ಡಿಜಿಸಿಎ ತಿಳಿಸಿದೆ.
ಎಟಿಸಿ ಮಾಹಿತಿ ಪ್ರಕಾರ, ವಿಮಾನ ಅಹಮದಾಬಾದ್ನ ರನ್ವೇ 23 ರಿಂದ ಮಧ್ಯಾಹ್ನ 1:39ಕ್ಕೆ (ಭಾರತೀಯ ಕಾಲಮಾನ) ಟೇಕ್ ಆಫ್ ಆಗಿತ್ತು. "ಮೇಡೇ" ಕರೆ ಮಾಡಿದ ಮೇಲೆ ವಿಮಾನದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ರನ್ವೇ 23 ರಿಂದ ಹೊರಟ ತಕ್ಷಣವೇ ವಿಮಾನ ನಿಲ್ದಾಣದ ಹೊರಗಡೆ ನೆಲಕ್ಕೆ ಬಿದ್ದಿದೆ. ಅಪಘಾತ ಸ್ಥಳದಿಂದ ಕಪ್ಪು ಹೊಗೆ ಬರ್ತಿದ್ದ ದೃಶ್ಯ ನಿಜಕ್ಕೂ ಆತಂಕಕಾರಿ ಅಂತಾ ಡಿಜಿಸಿಎ ಹೇಳಿದೆ.
ಇನ್ನೂ ವಿಮಾನ ಪತನಗೊಳ್ಳುವ ಒಂದು ನಿಮಿಷದ ಮುನ್ನ ಪೈಲೆಟ್ ಮೇಡೇ ಅಂತ ಹೇಳಿದ್ದಾರೆ. ಅದಾದ ನಂತರ ಒಂದು ಮಾತು ಕೂಡ ಪೈಲೆಟ್ ಕಡೆಯಿಂದ ಬರಲಿಲ್ಲ.
ಈ ದುರ್ಘಟನೆಯಲ್ಲಿ ಗಾಯಗೊಂಡಿರೋ ಹಲವಾರು ಪ್ರಯಾಣಿಕರನ್ನು ನಗರದ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಅಂತಾ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆದ್ರೆ, ಎಷ್ಟು ಜನ ಸಾವನ್ನಪ್ಪಿದ್ದಾರೆ ಅನ್ನೋ ಬಗ್ಗೆ ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ರಕ್ಷಣಾ ಕಾರ್ಯಾಚರಣೆ ಮತ್ತು ತನಿಖೆ ಎರಡೂ ನಡೀತಾ ಇವೆ.
ಏನಿದು "ಮೇಡೇ" ಕರೆ ?
"ಮೇಡೇ" ಅನ್ನೋದು ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟಿರೋ ಒಂದು ತುರ್ತು ಸಂಕೇತ. ಪೈಲಟ್ಗಳು, ನಾವಿಕರು ಅಥವಾ ಇನ್ನಿತರ ವೃತ್ತಿಪರರು ತಕ್ಷಣದ ಸಹಾಯ ಬೇಕಾದಾಗ ಈ ಪದವನ್ನು ಬಳಸುತ್ತಾರೆ. ಇದು ವಿಮಾನದಲ್ಲಿ ಗಂಭೀರ ತಾಂತ್ರಿಕ ಸಮಸ್ಯೆ, ಅಪಘಾತ ಅಥವಾ ಪ್ರಯಾಣಿಕರಿಗೆ ಯಾವುದೇ ಅಪಾಯ ಎದುರಾದಾಗ ಜೀವಕ್ಕೆ ಅಪಾಯ ಎದುರಾಗಿದೆ ಅನ್ನೋದನ್ನ ಸೂಚಿಸುತ್ತೆ.
A tragic aviation disaster struck Ahmedabad’s Meghaninagar area today as an Air India flight bound for London crashed just minutes after takeoff, leaving the entire nation in shock. According to initial reports, the flight took off from Runway 23 of the Sardar Vallabhbhai Patel International Airport at 1:39 PM IST. Within just ten minutes of takeoff, the aircraft encountered a critical emergency.
31-07-25 11:20 pm
Bangalore Correspondent
Kolar woman blood group: ಕೋಲಾರದ ಮಹಿಳೆಯಲ್ಲಿ ವಿ...
31-07-25 10:20 am
Pranab Mohanty, SIT, Dharmasthala; ಎಡಿಜಿಪಿ ಪ್...
30-07-25 06:28 pm
Dharmasthala Burial Site, Atm, Pan Card Found...
30-07-25 05:42 pm
Al Qaeda Arrest, Bangalore: ಕರ್ನಾಟಕ ರಾಜಧಾನಿಗೂ...
30-07-25 11:40 am
31-07-25 10:08 pm
HK News Desk
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಆಪರೇಶನ್ ಮಹಾದೇವ್,...
28-07-25 11:07 pm
31-07-25 11:16 pm
Mangalore Correspondent
MCC Bank to Inaugurate 20th Branch in Byndoor...
31-07-25 10:14 pm
KMC Hospital Attavar Trains Armed Forces Doct...
31-07-25 09:14 pm
Mangalore KMC Attavar, Workshop: ಅತ್ತಾವರ ಕೆಎಂ...
31-07-25 09:05 pm
Human Skull, Multiple Bones, Dharmasthala, SI...
31-07-25 08:45 pm
31-07-25 06:04 pm
Mangalore Correspondent
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm
Mangalore Crime, Arrest: ಉದ್ಯಮಿಗಳಿಗೆ ನಕಲಿ ಆಸ್...
30-07-25 08:48 pm
Mysuru Drugs, Crime, Mumbai Police: ಮೈಸೂರಿನಲ್...
30-07-25 11:37 am
ಮಕ್ಕಳಾಗಿಲ್ಲ ಅಂತ ಗಂಡನ ಮೇಲೆ ಸಿಟ್ಟು ; ಪ್ರಿಯಕರನಿಂ...
29-07-25 08:54 pm