ಬ್ರೇಕಿಂಗ್ ನ್ಯೂಸ್
12-06-25 01:40 pm HK News Desk ದೇಶ - ವಿದೇಶ
ನವದೆಹಲಿ, ಜೂ 12 : ನಿಜಕ್ಕೂ ಇದು ಬಹುತೇಕ ಮಹಿಳೆಯರಿಗೆ ಸಿಹಿ ಸುದ್ದಿ. ಕೇಂದ್ರ ಸರ್ಕಾರವು ವಾಹನಗಳಲ್ಲಿ, ಮನೆಗಳಲ್ಲಿ ಅಥವಾ ಕಚೇರಿಗಳಲ್ಲಿ ಬಳಸುವ ಎ.ಸಿ. ತಾಪಮಾನಕ್ಕೆ ಲಗಾಮು ಹಾಕಲು ನಿರ್ಧರಿಸಿದೆ. ಕಾರಿನಲ್ಲಿ ಹೋಗೋವಾಗ ಗಂಡ ಎಸಿ ಆನ್ ಮಾಡಿದರೆ ಸಾಕು ಸಿಡಿಮಿಡಿಗೊಳ್ಳುವ ಹೆಂಡತಿಯು ಕೇಂದ್ರ ಸರ್ಕಾರ ಈ ಹೊಸ ನಿಯಮದಿಂದ ಖುಷಿಯಾಗಬಹುದು.
ಎ.ಸಿ.ಗಳ ನಿಯಂತ್ರಣದ ಬಗ್ಗೆ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಮಾಹಿತಿ ನೀಡಿದ್ದಾರೆ. ಎ.ಸಿ.ಗಳ ತಾಪಮಾನವನ್ನು 20 ಡಿಗ್ರಿಯಿಂದ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ವರೆಗೆ ಸೀಮಿತಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಉದಾಹರಣೆಗೆ, ನಿಮ್ಮಎಸಿಯಲ್ಲಿ ಈಗ ಸದ್ಯಕ್ಕೆ ತಾಪಮಾನ ಸೆಟ್ಟಿಂಗ್ಸ್ ಕನಿಷ್ಟ 18 ಡಿಗ್ರಿ ಸೆಲ್ಸಿಯಸ್ (ಕೆಲವೊಮ್ಮೆ 16 ಡಿಗ್ರಿ ಸೆಲ್ಸಿಯಸ್) ವರೆಗೆ ಇರುತ್ತದೆ. ಗರಿಷ್ಠ ತಾಪಮಾನ 30 ಡಿಗ್ರಿವರೆಗೆ ಇರುತ್ತದೆ. ಹೊಸ ನಿಯಮದ ಪ್ರಕಾರ, ಎ.ಸಿ. ತಾಪಮಾನವನ್ನು 20ರಿಂದ 27 ಡಿಗ್ರಿ ಸೆಲ್ಸಿಯಸ್ ವರೆಗೆ ಮಾತ್ರ ಹೊಂದಿಸಲು ಸಾಧ್ಯವಾಗುತ್ತದೆ. ಅಂದರೆ, ಬಳಕೆದಾರರು 20 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಅಥವಾ 30 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚು ತಾಪಮಾನವನ್ನು ಹೊಂದಿಸಲು ಸಾಧ್ಯವಿಲ್ಲ.
ಸರ್ಕಾರದ ಉದ್ದೇಶವೇನು?
ಎ.ಸಿ.ಗಳಲ್ಲಿ 20 ಡಿಗ್ರಿಗಿಂತ ಕಡಿಮೆ ತಾಪಮಾನ ಸೆಟ್ ಮಾಡಿದಾಗ ಅದು ಅಧಿಕ ವಿದ್ಯುತ್ ಎಳೆಯುತ್ತದೆ. ಹಾಗಾಗಿ, 20 ಡಿಗ್ರಿಗೆ ಲಗಾಮು ಹಾಕಲು ನಿರ್ಧರಿಸಲಾಗಿದೆ. ಈ ಮೂಲಕ, ಎಸಿಗಳಿಂದ ಆಗುವ ವಿದ್ಯುತ್ ಅಪವ್ಯವಯವನ್ನು ತಪ್ಪಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶದಲ್ಲಿ ದಿನೇ ದಿನೇ ವಿದ್ಯುತ್ ಬೇಡಿಕೆ ಹೆಚ್ಚಾಗುತ್ತಿದೆ. ಅಗತ್ಯಕ್ಕೆ ತಕ್ಕಷ್ಟು ವಿದ್ಯುತ್ತನ್ನು ಬಳಸಿ, ಉಳಿಕೆ ವಿದ್ಯುತ್ತನ್ನು ಅಗತ್ಯ ಇರುವವರಿಗೆ ನೀಡಲು ಕೇಂದ್ರ ಸರ್ಕಾರ ಆಲೋಚಿಸಿದೆ. ಅದರಿಂದ, ಗೃಹ ಹಾಗೂ ಕಚೇರಿ ಬಳಕೆಯ ವಿದ್ಯುತ್ ಉಪಕರಣಗಳಲ್ಲಿ ಬಳಕೆಯಾಗುವ ವಿದ್ಯುತ್ತಿನ ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಲು ಅದು ನಿರ್ಧರಿಸಿದೆ. ಆ ನಿಟ್ಟಿನಲ್ಲಿ ಎ.ಸಿ.ಗಳ ಮೇಲೆ ಈ ಪ್ರಯೋಗ ಮಾಡಲು ಮುಂದಾಗಿದೆ. ಎ.ಸಿ.ಗಳಿಗಾಗಿ ರೂಪಿಸಲಾಗುವ ಈ ನಿಯಮಗಳು ಶೀಘ್ರದಲ್ಲೇ ಜಾರಿಗೆ ಬರಲಿವೆ.
ಈ ಯೋಜನೆ ಆರಂಭಿಕ ಹಂತದಲ್ಲಿದ್ದರೂ, ವಿದ್ಯುತ್ ಬಳಕೆಯ ಏರಿಕೆಯಿಂದ ಇಂಧನ ದಕ್ಷತೆಯನ್ನು ಹೆಚ್ಚಿಸುವ ಸರ್ಕಾರದ ಗುರಿಯನ್ನು ಒತ್ತಿ ಹೇಳಿದೆ. ಇತ್ತೀಚಿನ ವರ್ಷಗಳಲ್ಲಿ ಏಪ್ರಿಲ್ನಿಂದ ಜೂನ್ವರೆಗಿನ ಬೇಸಗೆಯಲ್ಲಿ ವಿದ್ಯುತ್ ಉತ್ಪಾದನೆಗಿಂತ ಬೇಡಿಕೆ ಹೆಚ್ಚಾಗಿದ್ದು, ಕೆಲವು ಭಾಗಗಳಲ್ಲಿ ಕೊರತೆ ಉಂಟಾಗಿದೆ. ಎಸಿಗಳು ಗರಿಷ್ಠ ಬೇಡಿಕೆಯ 50 ಗಿಗಾವ್ಯಾಟ್ಗಳಷ್ಟು, ಅಂದರೆ ಒಟ್ಟು ಲೋಡ್ನ ಐದನೇ ಒಂದು ಭಾಗವನ್ನು ಒಳಗೊಂಡಿವೆ ಎಂದು ಸಚಿವಾಲಯದ ಅಧಿಕಾರಿ ಪಂಕಜ್ ಅಗರ್ವಾಲ್ ಹೇಳಿದ್ದಾರೆ.
ಪ್ರತಿ ಒಂದು ಡಿಗ್ರಿ ತಾಪಮಾನ ಹೆಚ್ಚಳವು ಇಂಧನ ಬಳಕೆಯನ್ನು 6% ಕಡಿಮೆ ಮಾಡುತ್ತದೆ. ಕನಿಷ್ಠ ತಾಪಮಾನವನ್ನು 20 ಡಿಗ್ರಿಗೆ ಏರಿಸಿದರೆ, 3 ಗಿಗಾವ್ಯಾಟ್ಗಳಷ್ಟು ಗರಿಷ್ಠ ಬೇಡಿಕೆ ಉಳಿತಾಯವಾಗಬಹುದು ಎಂದು ಅಗರ್ವಾಲ್ ತಿಳಿಸಿದ್ದಾರೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಅಧ್ಯಯನವು, ಶೀತಲೀಕರಣದ ದಕ್ಷತೆಯನ್ನು ಕಠಿಣಗೊಳಿಸಿದರೆ 2035ರ ವೇಳೆಗೆ 60 ಗಿಗಾವ್ಯಾಟ್ಗಳಷ್ಟು ಉಳಿತಾಯವಾಗಿ, 7.5 ಟ್ರಿಲಿಯನ್ ರೂಪಾಯಿಗಳ ($88 ಬಿಲಿಯನ್) ಮೂಲಸೌಕರ್ಯ ವೆಚ್ಚ ತಪ್ಪಬಹುದು ಎಂದು ಹೇಳಿದೆ.
ಭಾರತದಲ್ಲಿ 10 ಕೋಟಿ ಎಸಿ ಯೂನಿಟ್ಗಳಿದ್ದು, ವಾರ್ಷಿಕವಾಗಿ 1.5 ಕೋಟಿ ಸೇರ್ಪಡೆಯಾಗುತ್ತಿವೆ. ಕಳೆದ ಬೇಸಗೆಯಲ್ಲಿ ಬೇಡಿಕೆ 250 ಗಿಗಾವ್ಯಾಟ್ಗೆ ಏರಿತು. ಈ ವರ್ಷ 8% ಏರಿಕೆಯಾಗುವ ನಿರೀಕ್ಷೆಯಿದೆ. “270 ಗಿಗಾವ್ಯಾಟ್ಗೆ ತಲುಪಿದರೂ ನಾವು ಸಿದ್ಧರಿದ್ದೇವೆ” ಎಂದು ಮನೋಹರ್ ಲಾಲ್ ಭರವಸೆ ನೀಡಿದ್ದಾರೆ. ಜತೆಗೆ 30 ಗಿಗಾವ್ಯಾಟ್-ಅವರ್ನ ಬ್ಯಾಟರಿ ಸಂಗ್ರಹ ಯೋಜನೆಗಳಿಗೆ ಕಂಪನಿಗಳನ್ನು ಆಹ್ವಾನಿಸಲು ಸರ್ಕಾರ ಯೋಜಿಸುತ್ತಿದೆ. ಇದರಿಂದ ನವೀಕರಣ ಇಂಧನ ಬಳಕೆ ವಿಸ್ತರಿಸಿ, ಪಳೆಯುಳಿಕೆ ಇಂಧನದ ಅವಲಂಬನೆ ಕಡಿಮೆಯಾಗಲಿದೆ.
Union Minister of Housing & Urban Affairs, Manohar Lal Khattar on Tuesday said that India will be soon be holding an experiment regarding standardisation of AC temperatures, restricting air conditioners from cooling below 20°C or heating beyond 28°C. This comes amid India's Meteorological Department (IMD) issuing orange alert over a heatwave in Delhi and residents reeling under hot spell.
04-10-25 10:54 pm
Bangalore Correspondent
ಸ್ವತಃ ಕಾಂಗ್ರೆಸ್ ನಾಯಕರೇ ಸಿದ್ದು ಯಾವಾಗ ಸಿಎಂ ಪಟ್ಟ...
04-10-25 10:16 pm
ಮಹಾರಾಷ್ಟ್ರದ ಸಮುದ್ರದಲ್ಲಿ ಘೋರ ದುರಂತ ; ಬೆಳಗಾವಿಯ...
04-10-25 09:18 pm
Belagavi Heart Attack, SSLC: ಬೆಳಗಾವಿ ; SSLC ಓ...
04-10-25 07:22 pm
ಐಟಿ ನಗರಿ ಬೆಂಗಳೂರು 'ಸೈಬರ್ ಕ್ರೈಮ್' ಕ್ಯಾಪಿಟಲ್...
03-10-25 06:08 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm