ಬ್ರೇಕಿಂಗ್ ನ್ಯೂಸ್
23-05-25 08:08 pm HK News Desk ದೇಶ - ವಿದೇಶ
ನವದೆಹಲಿ, ಮೇ 23 : ಡಿಎಂಕೆ ಸಂಸದೆ ಕನಿಮೋಳಿ ನೇತೃತ್ವದ ಸರ್ವಪಕ್ಷಗಳ ಸಂಸದರ ನಿಯೋಗವು ಶುಕ್ರವಾರ ಬೆಳಗ್ಗೆ ರಷ್ಯಾ ತಲುಪಿದೆ. ಆದರೆ ಭಯೋತ್ಪಾದನೆ ವಿಚಾರದಲ್ಲಿ ತೆರಳಿದ್ದ ಭಾರತದ ತಂಡಕ್ಕೆ ರಷ್ಯಾದಲ್ಲೂ ಭಯೋತ್ಪಾದನೆಯ ನೆರಳು ಕಾಡಿದೆ. ರಾಜಧಾನಿ ಮಾಸ್ಕೋ ಏರ್ಪೋರ್ಟ್ ನಲ್ಲಿ ಭಾರತದ ನಿಯೋಗ ಇದ್ದ ವಿಮಾನ ಲ್ಯಾಂಡ್ ಆಗುವ ಸಂದರ್ಭದಲ್ಲೇ ಡ್ರೋಣ್ ದಾಳಿಯಾಗಿದ್ದು 45 ನಿಮಿಷ ಕಾಲ ಆಗಸದಲ್ಲೇ ವಿಮಾನ ಹಾರಾಡುವ ಸ್ಥಿತಿಯಾಗಿತ್ತು.
ಶುಕ್ರವಾರ ಬೆಳಗ್ಗೆ ಭಾರತದ ಏಳು ಸಂಸದರು ಮತ್ತು ಅಧಿಕಾರಿಗಳಿದ್ದ ವಿಮಾನವು ಮಾಸ್ಕೋ ವಿಮಾನ ನಿಲ್ದಾಣಕ್ಕೆ ತಲುಪಿದೆ. ಆದರೆ ವಿಮಾನ ಇಳಿಯುವುದಕ್ಕೆ ಏರ್ಪೋರ್ ಅಧಿಕಾರಿಗಳು ಅವಕಾಶ ನೀಡಲಿಲ್ಲ. ಯುಕ್ರೇನ್ ಕಡೆಯಿಂದ ಡ್ರೋಣ್ ದಾಳಿಯಾಗಿದ್ದರಿಂದ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿತ್ತು. ಹೀಗಾಗಿ 45 ನಿಮಿಷ ಕಾಲ ಭಾರತದ ನಿಯೋಗ ಇದ್ದ ವಿಮಾನವು ಆಗಸದಲ್ಲಿಯೇ ಸುತ್ತು ಹಾಕುವಂತಾಗಿತ್ತು. ಆನಂತರ, ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆ ಸಂಸದೆ ಕನಿಮೋಳಿ ನೇತೃತ್ವದ ತಂಡವಿದ್ದ ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
ಕನಿಮೋಳಿ ನೇತೃತ್ವದ ತಂಡದಲ್ಲಿ ಮಾಜಿ ಹೈಕಮಿಷನ್ ಅಧಿಕಾರಿಗಳಾದ ಮಂಜೀವ್ ಸಿಂಗ್ ಪುರಿ ಮತ್ತು ಜಾವೇದ್ ಅಶ್ರಫ್ ಇದ್ದಾರೆ. ಇದಲ್ಲದೆ, ಈ ತಂಡದಲ್ಲಿ ಆಪ್ ಸಂಸದ ಅಶೋಕ್ ಕುಮಾರ್ ಮಿತ್ತಲ್, ಮಂಗಳೂರು ಮೂಲದ ಬಿಜೆಪಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಮಿಯಾನ್ ಅಲ್ತಾಫ್ ಅಹ್ಮದ್ (ಎನ್ ಸಿ), ರಾಜೀವ್ ರೇ (ಎಸ್ಪಿ) ಮತ್ತು ಪ್ರೇಮ್ ಚಂದ್ ಗುಪ್ತಾ(ಆರ್ ಜೆಡಿ) ತಂಡದಲ್ಲಿದ್ದಾರೆ. ಇವರ ತಂಡವು ಮೊದಲಿಗೆ ರಷ್ಯಾ ಭೇಟಿ ನೀಡಿದ್ದು, ಆನಂತರ ಸ್ಪೇನ್, ಸ್ಲೊವೇನಿಯಾ, ಲಾತ್ವಿಯಾ, ಗ್ರೀಸ್ ದೇಶಗಳಿಗೆ ತೆರಳಲಿದ್ದು, ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ ಭಯೋತ್ಪಾದಕ ರಾಷ್ಟ್ರ ಎಂಬುದನ್ನು ಪ್ರಚಾರ ಪಡಿಸಲಿದೆ. ಭಾರತ- ಪಾಕಿಸ್ತಾನಕ್ಕೆ ಸಮಾನ ಆದ್ಯತೆ ನೀಡದಿರಿ ಮತ್ತು ಪಾಕಿಸ್ತಾನದ ಭಯೋತ್ಪಾದನೆಯಿಂದಾಗಿ ಬಹಳಷ್ಟು ಭಾರತೀಯರು ನೋವು ಪಟ್ಟಿದ್ದಾರೆ ಎಂಬುದನ್ನು ಸಾರಿ ಹೇಳಲಿದ್ದಾರೆ.
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಆಪರೇಶನ್ ಸಿಂಧೂರ ಕಾರ್ಯಾಚರಣೆ ಮತ್ತು ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳಿಗೆ ಪೋಷಿಸುತ್ತಿರುವುದನ್ನು ಜಾಗತಿಕ ಮಟ್ಟದಲ್ಲಿ ಪ್ರಚುರಪಡಿಸಲು ಮೋದಿ ನೇತೃತ್ವದ ಸರಕಾರ ರಾಜತಾಂತ್ರಿಕ ಕ್ರಮದ ಭಾಗವಾಗಿ ಭಾರತದಿಂದ ಏಳು ನಿಯೋಗಗಳನ್ನು 33 ದೇಶಗಳಿಗೆ ಕಳಿಸಿಕೊಟ್ಟಿದೆ. ಇದರಲ್ಲಿ ವಿವಿಧ ಪಕ್ಷಗಳ ನುರಿತ ಸಂಸದರು ಮತ್ತು ಅಧಿಕಾರಿಗಳನ್ನು ಒಳಗೊಂಡ 59 ಮಂದಿ ಇದ್ದಾರೆ.
Several flights were halted at Moscow airport following a drone attack, including the flight carrying DMK's Kanimozhi-led all-party delegation. Russia and Ukraine have deployed drones against one another regularly since Russia launched its military offensive on Ukraine over three years ago, but Moscow has rarely been targeted. Drone attacks have intensified in recent days.
05-10-25 07:38 pm
HK News Desk
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
ಮಕ್ಕಳ ಸಿರಪ್ ; ರಾಜ್ಯದಲ್ಲಿ ಪೂರೈಕೆ ಇಲ್ಲ, ಆತಂಕ ಪಡ...
04-10-25 10:54 pm
ಸ್ವತಃ ಕಾಂಗ್ರೆಸ್ ನಾಯಕರೇ ಸಿದ್ದು ಯಾವಾಗ ಸಿಎಂ ಪಟ್ಟ...
04-10-25 10:16 pm
ಮಹಾರಾಷ್ಟ್ರದ ಸಮುದ್ರದಲ್ಲಿ ಘೋರ ದುರಂತ ; ಬೆಳಗಾವಿಯ...
04-10-25 09:18 pm
04-10-25 04:45 pm
HK Staffer
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದಿದ್ದರೆ ಭ...
03-10-25 09:09 pm
ಮಕ್ಕಳ ವಿಡಿಯೋ ಗೇಮ್ ನಲ್ಲೂ ಸೈಬರ್ ಅಪರಾಧ ; ಶಾಲಾ ಹಂ...
03-10-25 04:50 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm