ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕಥುವಾ, ಸಾಂಬಾ, ಜಲಂಧರ್ ನಲ್ಲಿ ಡ್ರೋಣ್ ಪತ್ತೆ, ಹೊಡೆದು ಹಾಕಿದ ಭಾರತದ ಸೇನೆ

12-05-25 11:21 pm       HK Staff   ದೇಶ - ವಿದೇಶ

ಆಪರೇಷನ್ ಸಿಂದೂರ ಕಾರ್ಯಾಚರಣೆ ಬಗ್ಗೆ ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಪಾಕ್ ಗಡಿಭಾಗ ಜಮ್ಮು ಕಾಶ್ಮೀರದ ಕಥುವಾ, ಸಾಂಬಾ, ಪಂಜಾಬಿನ ಜಲಂಧರ್ ನಲ್ಲಿ ಡ್ರೋನ್ ದಾಳಿ ಮುಂದುವರೆಸಿದೆ.

ನವದೆಹಲಿ, ಮೇ 12: ಆಪರೇಷನ್ ಸಿಂದೂರ ಕಾರ್ಯಾಚರಣೆ ಬಗ್ಗೆ ಪ್ರಧಾನಿ ಮೋದಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಪಾಕ್ ಗಡಿಭಾಗ ಜಮ್ಮು ಕಾಶ್ಮೀರದ ಕಥುವಾ, ಸಾಂಬಾ, ಪಂಜಾಬಿನ ಜಲಂಧರ್ ನಲ್ಲಿ ಡ್ರೋನ್ ದಾಳಿ ಮುಂದುವರೆಸಿದೆ. ಡ್ರೋಣ್ ಮೂಲಕ ದಾಳಿಗೆ ಯತ್ನಿಸಿದ್ದು ಭಾರತೀಯ ಸೇನೆ ಅದನ್ನು ಹೊಡೆದು ಹಾಕಿ ತಕ್ಕ ಪ್ರತ್ಯುತ್ತರ ನೀಡಿದೆ. 

ಜಮ್ಮುವಿನ ಸಾಂಬಾ, ಪಠಾಣ್ ಕೋಟ್, ವೈಷ್ಣೋದೇವಿ ಮಂದಿರ ಆಸುಪಾಸಿನಲ್ಲಿ ಬೆಳಕಿಲ್ಲದೆ ಕತ್ತಲೆಯಲ್ಲೇ ಮುಳುಗಿದೆ. ಇದರ ನಡುವೆ ಡ್ರೋಣ್ ಕಾಣಿಸಿಕೊಂಡಿದ್ದು ಭಾರತದ ವಾಯು ರಕ್ಷಣಾ ಪಡೆಗಳು ಪಾಕ್ ಡ್ರೋನ್‌ಗಳನ್ನು ಸ್ಫೋಟಗೊಳಿಸಿವೆ. 

ಕಾಶ್ಮೀರವಷ್ಟೇ ಅಲ್ಲದೇ ಕಥುವಾ, ಅಮೃತ್ ಸರಗಳಲ್ಲಿಯೂ ಪಾಕ್ ಡ್ರೋನ್ ಗಳು ಭಾರತದ ಮೇಲೆ ದಾಳಿಗೆ ಯತ್ನಿಸಿದ್ದು, ಅವುಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸಲಾಗಿದೆ. 

ಪಾಕಿಸ್ತಾನದ ಭಯೋತ್ಪಾದಕ ಮತ್ತು ಮಿಲಿಟರಿ ತಾಣಗಳ ಮೇಲಿನ ದಾಳಿಯನ್ನು ನಾವು ನಿಲ್ಲಿಸಿದ್ದೇವೆ ಅಷ್ಟೇ. ಪಾಕಿಸ್ತಾನ ಅಪ್ರಚೋದಿತ ದಾಳಿಗಳು ನಡೆಸಿದರೆ ಅದಕ್ಕೆ ತಕ್ಕ ಉತ್ತರವನ್ನು ನಮ್ಮ ಸೇನಾ ಪಡೆಗಳು ನೀಡಲಿವೆ ಎಂದು ಮೋದಿ ಹೇಳಿದ್ದಾರೆ. 

ಯಾವುದೇ ಪರಮಾಣು ಬೆದರಿಕೆಗಳು ನಮ್ಮ ಮುಂದೆ ನಡೆಯುವುದಿಲ್ಲ ಎಂದು ಒತ್ತಿ ಹೇಳಿದ ಮೋದಿ, ಭಾರತದಲ್ಲಿ ಭಯೋತ್ಪಾದಕ ದಾಳಿಗಳಿಗೆ ಸೂಕ್ತ ಪ್ರತಿಕ್ರಿಯೆ ಎದುರಿಸಬೇಕಾಗುತ್ತದೆ ಎಂದು ದೇಶದ ಜನತೆಯನ್ನುದ್ದೇಶಿಸಿ ಮಾಡಿದ್ದ ಭಾಷಣದಲ್ಲಿ ಮೋದಿ ಎಚ್ಚರಿಕೆ ನೀಡಿದ್ದರು. ಇದಾಗಿ ಕೆಲವೇ ನಿಮಿಷಗಳಲ್ಲಿ ಪಾಕ್ ಉದ್ಧಟತನ ತೋರಿದ್ದು ಮತ್ತೆ ಭಾರತದ ಮೇಲೆ ದಾಳಿಗೆ ಯತ್ನಿಸಿದೆ.

However, shortly after Modi’s fiery speech, Pakistan appeared to have broken the ceasefire and started launching drones into Jammu & Kashmir and regions of Punjab.