ಬ್ರೇಕಿಂಗ್ ನ್ಯೂಸ್
26-04-25 07:46 pm HK News Desk ದೇಶ - ವಿದೇಶ
ಟೆಹರಾನ್, ಏ 26 : ಇರಾನ್ ನ ಬಂದರು ನಗರವಾದ ಅಬ್ಬಾಸ್ ನಲ್ಲಿ ಶನಿವಾರದಂದು ಪ್ರಬಲ ಸ್ಫೋಟವೊಂದು ಸಂಭವಿಸಿದ್ದು, ಈ ದುರ್ಘಟನೆಯಲ್ಲಿ ಕನಿಷ್ಛ 4 ಮಂದಿ ಸಾವಿಗೀಡಾಗಿ ಸುಮಾರು 500ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಲ್ಲಿನ ರಾಜಾಯೈ ಬಂದರಿನಲ್ಲಿ ಈ ಸ್ಫೋಟ ಸಂಭವಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಇದು ಬಾಂಬ್ ಸ್ಫೋಟವೋ ಅಥವಾ ಬಂದರಿನಲ್ಲಿ ಇರಿಸಲಾಗಿದ್ದ ಯಾವುದಾದರೂ ಕಚ್ಚಾ ವಸ್ತುವಿನ ಸ್ಫೋಟವೋ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಸದ್ಯಕ್ಕೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಆನಂತರ ಸೂಕ್ತ ತನಿಖೆಯಲ್ಲಿ ಈ ಬಗ್ಗೆ ನಿಖರ ಮಾಹಿತಿ ನೀಡಲಾಗುತ್ತದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.







ಟರ್ಕಿಯ ರಾಜಧಾನಿ ಬೈರೂತ್ ನ ಬಂದರಿನಲ್ಲಿ 2019ರಲ್ಲಿ ಹೀಗೆಯೇ ಪ್ರಬಲವಾದ ಸ್ಫೋಟ ಸಂಭವಿಸಿತ್ತು. ಅದು ಭಯೋತ್ಪಾದನೆಯ ಕೃತ್ಯವಾಗಿರಲಿಲ್ಲ. ಹಡಗಿನಲ್ಲಿ ತರಲಾಗಿದ್ದ ಕಂಟೈನರ್ ಒಂದರಲ್ಲಿ ಬಂದಿದ್ದ ಪಾರ್ಸೆಲ್ ಒಂದು ಸ್ಫೋಟಗೊಂಡಿತ್ತು. ಆ ತೀವ್ರತೆಯಿಂದಾಗಿ 200 ಮಂದಿ ಸಾವಿಗೀಡಾಗಿದ್ದರು. ಕಿಲೋಮೀಟರ್ ಗಳವರೆಗೆ ಅದರ ತೀವ್ರತೆ ಆವರಿಸಿತ್ತು. ಅನೇಕ ಮನೆಗಳು ಹಾಗೂ ಧ್ವಂಸವಾಗಿದ್ದವು.
ಇಲ್ಲೂ ಸಹ ಕಂಟೈನರ್ ನಲ್ಲೇ ಸ್ಫೋಟ!
ಇರಾನ್ ಬಂದರಿನಲ್ಲಿ ನಡೆದಿರುವ ಸ್ಫೋಟ ಕೂಡ ಕಂಟೈನರ್ ಒಂದರಲ್ಲಿ ಬಂದಿರುವ ಕಚ್ಚಾವಸ್ತುವೊಂದು ಸ್ಫೋಟವಾಗಿರುವುದರಿಂದಲೇ ಆಗಿರುವ ಸಾಧ್ಯತೆಯಿದೆ ಎಂದು ಸ್ಥಳೀಯ ತುರ್ತು ಸಂದರ್ಭ ನಿರ್ವಹಣಾಧಿಕಾರಿ ಮೆಹರ್ಬಾದ್ ಹಸನ್ ಝಾದೇ ಅವರು ಹೇಳಿದ್ದಾರೆ.
ಅವರು ಹೇಳುವ ಪ್ರಕಾರ, ಇರಾನ್ ನ ರಾಜಾಯ್ಯೈ ಬಂದರಿನಲ್ಲಿ ಸಾಮಾನ್ಯವಾಗಿ ಸರಕು ಸಾಗಣೆಯೇ ಪ್ರಧಾನವಾಗಿ ನಡೆಯುವ ವಾಣಿಜ್ಯ ಚಟುವಟಿಕೆಗಳಾಗಿವೆ. ಅಲ್ಲಿ ವಿಶೇಷವಾಗಿ, ಪೆಟ್ರೋಕೆಮಿಕಲ್ ವಸ್ತುಗಳು, ಕಚ್ಚಾ ತೈಲದ ಕಂಟೈನರ್ ಗಳೇ ಹೆಚ್ಚಾಗಿ ಆಮದು ರಫ್ತು ಆಗುತ್ತಿರುತ್ತವೆ. ಹಾಗಾಗಿ, ಯಾವುದೋ ತೈಲೋತ್ಪನ್ನ ವಸ್ತುವೇ ಸ್ಫೋಟವಾಗಿರಬಹುದು ಎಂದು ಶಂಕಿಸಲಾಗಿದೆ.
ಇರಾನ್ ಪ್ರಮುಖ ಮತ್ತು ಅತ್ಯಾಧುನಿಕ ಬಂದರು
ಬಂದರು ಟೆಹ್ರಾನ್ನಿಂದ ಆಗ್ನೇಯಕ್ಕೆ ಸುಮಾರು 1,050 ಕಿಲೋಮೀಟರ್ ದೂರದಲ್ಲಿ, ಹಾರ್ಮುಜ್ ಜಲಸಂಧಿಯ ಉದ್ದಕ್ಕೂ ಈ ಬಂದರು ಇದೆ. ಇದು ಇರಾನ್ ನ ಅತೀ ದೊಡ್ಡ ಮತ್ತು ಅತ್ಯಾಧುನಿಕ ಬಂದರು ಕೂಡ ಆಗಿದೆ. ಜಾಗತಿಕ ತೈಲ ವ್ಯಾಪಾರದ ಶೇ. 20ರಷ್ಟು ಇದರ ಮೂಲಕ ಹಾದುಹೋಗುತ್ತದೆ. ಸ್ಫೋಟದ ಸ್ಥಳದಿಂದ ದೊಡ್ಡ ಪ್ರಮಾಣದಲ್ಲಿ ಹೊಗೆ ಹೊರಬರುತ್ತಿರುವ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
At least 4 people were killed and 500 injured after several containers exploded at a key Iranian port on Saturday, causing a massive fire. Videos showed thick smoke billowing from the port area. "The explosion occurred in a part of the Shahid Rajaee port dock, and we are extinguishing the fire," state TV quoted Esmaeil Malekizadeh, a regional port official, as saying.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am