ಬ್ರೇಕಿಂಗ್ ನ್ಯೂಸ್
31-03-25 09:34 pm HK News Desk ದೇಶ - ವಿದೇಶ
ಮುಂಬೈ, ಮಾ.31: ಔರಂಗಜೇಬ್ ಸಮಾಧಿ ತೆರವು ಮಾಡಬೇಕೆಂದು ಹಿಂದುತ್ವವಾದಿ ಸಂಘಟನೆಗಳು ಧ್ವನಿ ಎತ್ತಿರುವಾಗಲೇ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಖಾರ ಪ್ರತಿಕ್ರಿಯೆ ನೀಡಿದ್ದು ನಮ್ಮ ಜನರು ಇತಿಹಾಸವನ್ನು ಪುಸ್ತಕದ ಅಧ್ಯಯನದಿಂದ ಕಲಿತುಕೊಳ್ಳಬೇಕೇ ವಿನಾ ವಾಟ್ಸಪ್ ಯುನಿವರ್ಸಿಟಿಯಿಂದ ಅಲ್ಲ ಎಂದು ಕೆಣಕಿದ್ದಾರೆ.
ವಾಟ್ಸಪ್ ಇತಿಹಾಸದಿಂದ ಪ್ರೇರಿತರಾದವರು ಔರಂಗಜೇಬ್ ಸಮಾಧಿಯನ್ನು ಕೆಡವಲು ಹೇಳುತ್ತಿದ್ದಾರೆ. ಆದರೆ ನೈಜ ಇತಿಹಾಸವನ್ನು ಪುಸ್ತಕ ಓದಿ ತಿಳಿದುಕೊಳ್ಳಬೇಕು. ನಾವು ಆಧುನಿಕ ಕಾಲದ ನೈಜ ವಿಚಾರಗಳನ್ನು ಮರೆಯುತ್ತಿದ್ದೇವೆ. ಛಾವಾ ಸಿನಿಮಾದಿಂದಾಗಿ ಹಿಂದುಗಳು ಎಚ್ಚತ್ತುಕೊಂಡರೆ ಏನೂ ಉಪಯೋಗವಿಲ್ಲ. ವಿಕ್ಕಿ ಕೌಶಲ್ ನಿಂದಾಗಿ ಸಂಭಾಜಿ ಮಹಾರಾಜ್ ತ್ಯಾಗ ಮಾಡುವುದರ ಬಗ್ಗೆಯಾಗಲೀ, ಅಕ್ಷಯ್ ಖನ್ನಾ ತೋರಿಸಿದ ಔರಂಗಜೇಬನ ಕುರಿತಾಗಲೀ ನೈಜ ಇತಿಹಾಸ ತಿಳಿಯಲು ಮುಂದಾಗಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಬಿಜಾಪುರ ಆದಿಲ್ ಶಾಹಿಗಳ ನೇನಾಧಿಪತಿಯಾಗಿದ್ದ ಅಫ್ಜಲ್ ಖಾನ್ ನನ್ನು ಶಿವಾಜಿ ಮಹಾರಾಜರ ಅಣತಿಯಂತೆ ಪ್ರತಾಪಗಢ ಕೋಟೆಯ ಬಳಿ ಸಮಾಧಿ ಮಾಡಲಾಗಿತ್ತು ಎಂದು ರಾಜ್ ಠಾಕ್ರೆ ಹೇಳಿದ್ದಾರೆ. ಸಂಭಾಜಿ ನಗರ್ ಜಿಲ್ಲೆಯಲ್ಲಿರುವ ಔರಂಗಜೇಬನ ಸಮಾಧಿಯನ್ನು ಕೆಡವಿ ಹಾಕಬೇಕು ಎಂದು ಹಿಂದು ಸಂಘಟನೆಗಳು ಅಭಿಯಾನ ಮಾಡಿರುವಾಗಲೇ ಹಿಂದುತ್ವವಾದಿ ರಾಜ್ ಠಾಕ್ರೆ ಈ ಪ್ರತಿಕ್ರಿಯೆ ನೀಡಿದ್ದಾರೆ.
ಔರಂಗಜೇಬ ಗುಜರಾತಿನ ದಾಹೋದ್ ನಲ್ಲಿ ಜನಿಸಿದ್ದ. ಆದರೆ ನಮ್ಮ ಇತಿಹಾಸಕಾರರು ರಾಜಕೀಯ ಲಾಭಕ್ಕಾಗಿ ಅದನ್ನು ತಿರುಚಿದ್ದಾರೆ. ಒಂದು ದೇಶವು ಕೇವಲ ಧರ್ಮದ ಆಧಾರದಲ್ಲಿ ಹೋದರೆ ಮುನ್ನಡೆಯಲು ಸಾಧ್ಯವಿಲ್ಲ. ಆಧುನೀಕರಣದ ಜೊತೆಗೆ ಹೆಜ್ಜೆ ಹಾಕುತ್ತಿರುವ ಟರ್ಕಿಯನ್ನು ನಾವು ಉದಾಹರಣೆಯಾಗಿ ನೋಡಬೇಕು ಎಂದು ರಾಜ್ ಠಾಕ್ರೆ ಹೇಳಿದ್ದಾರೆ.
Maharashtra Navnirman Sena (MNS) chief Raj Thackeray on Sunday condemned attempts to incite communal tensions over Aurangzeb's tomb and urged people not to view history through the lens of caste and religion. Addressing his annual Gudi Padwa rally at Shivaji Park in Mumbai, Thackeray cautioned against misleading historical narratives and WhatsApp forwards, asserting that history should be studied from credible sources rather than social media.
29-04-25 10:45 pm
Bangalore Correspondent
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
Praveen Nettaru, Mohsin Shukur, Karwar Police...
29-04-25 01:04 pm
30-04-25 03:14 pm
HK News Desk
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
30-04-25 04:06 pm
Mangalore Correspondent
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am