ಬ್ರೇಕಿಂಗ್ ನ್ಯೂಸ್
28-03-25 01:38 pm HK News Desk ದೇಶ - ವಿದೇಶ
ಹರಿಯಾಣ, ಮಾ 28: ಡಿಜಿಟಲ್ ವಂಚನೆ, ಡಿಜಿಟಲ್ ಅರೆಸ್ಟ್ನಂತಹ ಪ್ರಕರಣಗಳು ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿವೆ. ಜನರಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಅವರನ್ನ ಮರಳು ಮಾಡುವದರಲ್ಲಿ ವಂಚಕರು ಯಶಸ್ವಿಯಾಗುತ್ತಲೇ ಇದ್ದಾರೆ. ಇಷ್ಟು ದಿನ ನಾವು ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು, ಸಿಬಿಐ ಅಧಿಕಾರಿಗಳಿ, ಇಡಿ ಅಧಿಕಾರಿಗಳು ಎಂದು ಹೇಳಿ ವ್ಯಕ್ತಿಗಳನ್ನು ಡಿಜಿಟಲ್ ಅರೆಸ್ಟ್ ಮಾಡಿ ಹಣ ವಂಚಿಸುತ್ತಿದ್ದರು. ಆದರೆ, ಹರಿಯಾಣದ ಫರೀದಾಬಾದ್ನಲ್ಲಿ ನಿವೃತ್ತ ಪೈಲಟ್ರೊಬ್ಬರನ್ನ ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ಹೆಸರು ಹೇಳಿ ವಂಚಿಸಿದ್ದಾರೆ.
ನಿವೃತ್ತ ಪೈಲೆಟ್ ಶಕ್ತಿ ಸಿಂಗ್ ಲಂಬಾ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಚಾಟಿಂಗ್ ಮಾಡಿದ ವ್ಯಕ್ತಿಯೊಬ್ಬ ನಾನು ಎಲಾನ್ ಮಸ್ಕ್ ಕಂಪನಿಯ ಮ್ಯಾನೇಜರ್ ಎಂದು ಚಾಟಿಂಗ್ ಮಾಡಿದ್ದಾನೆ. ಅವರು ಭಾರತಕ್ಕೆ ಬಂದಾಗ ನಿಮಗೆ ಅವರನ್ನು ಭೇಟಿ ಮಾಡಿಸುತ್ತೇನೆ, ನೀವು ಅವರ ಕಂಪನಿಯಲ್ಲಿ ಹೂಡಿಕೆ ಮಾಡಿ ಎಂದು ದುಂಬಾಲು ಬಿದ್ದಿದ್ದಾನೆ. ಇದನ್ನು ನಂಬಿದ ಶಕ್ತಿಸಿಂಗ್ ಲಂಬಾ ಅವರು ಪ್ರಾರಂಭದಲ್ಲಿ ಎರಡು ಲಕ್ಷ ರೂಪಾಯಿ ನೀಡಿದ್ದಾರೆ.
ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಎಲಾನ್ ಮಸ್ಕ್ ತಾಯಿ ಹೆಸರನಲ್ಲಿ ಶಕ್ತಿಸಿಂಗ್ ಜೊತೆ ಚಾಟಿಂಗ್ ನಡೆದಿದೆ. ನಿಮಗೆ ಉಡುಗೊರೆಯಾಗಿ ರೋಲೆಕ್ಸ್ ವಾಚ್ ಕಳುಹಿಸುತ್ತಿದ್ದೇವೆ ಎಂದು ವಾಚ್ ಫೋಟೋ ತೋರಿಸಿ ಚಾಟಿಂಗ್ ಮಾಡಿದ್ದಾರೆ. ಶಕ್ತಿಸಿಂಗ್ ಲಂಬಾ ತಾನು ಮಸ್ಕ್ ತಾಯಿಯ ಜೊತೆಯೇ ಚಾಟ್ ಮಾಡುತ್ತಿದ್ದೇನೆ ಎಂದು ನಂಬಿದ್ದಾರೆ.
ಹೀಗೆ ಹಲವು ಜಾಲಗಳನ್ನು ಬೀಸಿ ಶಕ್ತಸಿಂಗ್ರಿಂದ ಒಟ್ಟು 72 ಲಕ್ಷ ರೂಪಾಯಿಯನ್ನು ಹೂಡಿಕೆ ನೆಪದಲ್ಲಿ ದೋಚಲಾಗಿದೆ. ಶಕ್ತಿಸಿಂಗ್ ಅವರ ವಿವಿಧ ಖಾತೆಗಳಿಂದ ಒಟ್ಟು 72 ಲಕ್ಷ ರೂಪಾಯಿಯನ್ನು ವರ್ಗಾವಣೆ ಮಾಡಿಸಿಕೊಂಡು ಟೋಪಿ ಹಾಕಲಾಗಿದೆ. ಕೊನೆಗೆ ನಾನು ವಂಚಕರ ಬಲೆಗೆ ಬಿದ್ದಿದ್ದೇನೆ ಎಂದು ಅರಿತ ನಿವೃತ್ತ ಪೈಲೆಟ್ ಶಕ್ತಿಸಿಂಗ್ ಲಂಬಾ, ಸದ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
A retired pilot in Faridabad was duped of Rs 72 lakh by fraudsters who lured him with the promise of an opportunity to meet the world's richest man, Elon Musk. Shakti Singh Lumba said he was contacted via his social media account by a person claiming to be a manager at Elon Musk's company.
30-04-25 05:08 pm
Bangalore Correspondent
R Ahsok, Cm Siddaramaiah, Pak: ಕಾಂಗ್ರೆಸ್ನವರಿ...
29-04-25 10:45 pm
CM Siddaramaiah, Belagavi, BJP Suresh Kumar:...
29-04-25 09:51 pm
Protest Kalaburagi, islamabad Locality: ಕಲಬುರ...
29-04-25 09:20 pm
Kudupu Murder, Mob attack, Parameshwar: ಕುಡುಪ...
29-04-25 04:28 pm
30-04-25 03:14 pm
HK News Desk
Pakistan, No-fly zone islamabad: ಭಾರತದ ಪ್ರತೀಕ...
30-04-25 02:13 pm
ಮೋದಿ 'ಗಾಯಬ್' ಎಂದು ಕಾಂಗ್ರೆಸ್ ಪೋಸ್ಟ್ ; ಕಾಂಗ್ರೆಸ...
29-04-25 03:45 pm
'ನನಗೆ ಪಾಕಿಸ್ತಾನದಲ್ಲಿ ಯಾರೂ ಇಲ್ಲ, ದಯವಿಟ್ಟು ಉಳಿಸ...
28-04-25 06:52 pm
ಪಾಕಿಸ್ತಾನದ ಶಾಂತಿ ಸಮಿತಿ ಕಚೇರಿ ಎದುರೇ ಬಾಂಬ್ ಸ್ಫೋ...
28-04-25 05:53 pm
30-04-25 04:06 pm
Mangalore Correspondent
ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆ...
30-04-25 11:26 am
Puttur Elephant Attack: ಕಾಡಾನೆ ತಿವಿತಕ್ಕೆ ಪುತ್...
29-04-25 11:00 pm
Mangalore, Ullal Nethravathi Bridge: ಉಳ್ಳಾಲ ನ...
29-04-25 05:45 pm
Mangalore, Dr Kalladka Bhat: ಹೆಣ್ಣು ಮಕ್ಕಳು ವ್...
29-04-25 12:40 pm
30-04-25 04:09 pm
Mangalore Correspondent
Mangalore Mudipu Murder, Mob, Police, Crime:...
29-04-25 09:59 pm
Kudupu Murder, Mangalore Crime, Police: ಕುಡುಪ...
29-04-25 02:53 pm
Belthagady, Blackmail, Mangalore crime: ಬೆಳ್ತ...
28-04-25 11:39 am
Shootout Bakrebail, Mangalore Crime: ಬಾಕ್ರಬೈಲ...
28-04-25 11:24 am