ಬ್ರೇಕಿಂಗ್ ನ್ಯೂಸ್
28-03-25 01:38 pm HK News Desk ದೇಶ - ವಿದೇಶ
ಹರಿಯಾಣ, ಮಾ 28: ಡಿಜಿಟಲ್ ವಂಚನೆ, ಡಿಜಿಟಲ್ ಅರೆಸ್ಟ್ನಂತಹ ಪ್ರಕರಣಗಳು ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿವೆ. ಜನರಲ್ಲಿ ಎಷ್ಟೇ ಜಾಗೃತಿ ಮೂಡಿಸಿದರೂ ಅವರನ್ನ ಮರಳು ಮಾಡುವದರಲ್ಲಿ ವಂಚಕರು ಯಶಸ್ವಿಯಾಗುತ್ತಲೇ ಇದ್ದಾರೆ. ಇಷ್ಟು ದಿನ ನಾವು ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು, ಸಿಬಿಐ ಅಧಿಕಾರಿಗಳಿ, ಇಡಿ ಅಧಿಕಾರಿಗಳು ಎಂದು ಹೇಳಿ ವ್ಯಕ್ತಿಗಳನ್ನು ಡಿಜಿಟಲ್ ಅರೆಸ್ಟ್ ಮಾಡಿ ಹಣ ವಂಚಿಸುತ್ತಿದ್ದರು. ಆದರೆ, ಹರಿಯಾಣದ ಫರೀದಾಬಾದ್ನಲ್ಲಿ ನಿವೃತ್ತ ಪೈಲಟ್ರೊಬ್ಬರನ್ನ ವಿಶ್ವದ ನಂಬರ್ 1 ಶ್ರೀಮಂತ ಎಲಾನ್ ಮಸ್ಕ್ ಹೆಸರು ಹೇಳಿ ವಂಚಿಸಿದ್ದಾರೆ.
ನಿವೃತ್ತ ಪೈಲೆಟ್ ಶಕ್ತಿ ಸಿಂಗ್ ಲಂಬಾ ಜೊತೆ ಸೋಷಿಯಲ್ ಮೀಡಿಯಾದಲ್ಲಿ ಚಾಟಿಂಗ್ ಮಾಡಿದ ವ್ಯಕ್ತಿಯೊಬ್ಬ ನಾನು ಎಲಾನ್ ಮಸ್ಕ್ ಕಂಪನಿಯ ಮ್ಯಾನೇಜರ್ ಎಂದು ಚಾಟಿಂಗ್ ಮಾಡಿದ್ದಾನೆ. ಅವರು ಭಾರತಕ್ಕೆ ಬಂದಾಗ ನಿಮಗೆ ಅವರನ್ನು ಭೇಟಿ ಮಾಡಿಸುತ್ತೇನೆ, ನೀವು ಅವರ ಕಂಪನಿಯಲ್ಲಿ ಹೂಡಿಕೆ ಮಾಡಿ ಎಂದು ದುಂಬಾಲು ಬಿದ್ದಿದ್ದಾನೆ. ಇದನ್ನು ನಂಬಿದ ಶಕ್ತಿಸಿಂಗ್ ಲಂಬಾ ಅವರು ಪ್ರಾರಂಭದಲ್ಲಿ ಎರಡು ಲಕ್ಷ ರೂಪಾಯಿ ನೀಡಿದ್ದಾರೆ.
ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಎಲಾನ್ ಮಸ್ಕ್ ತಾಯಿ ಹೆಸರನಲ್ಲಿ ಶಕ್ತಿಸಿಂಗ್ ಜೊತೆ ಚಾಟಿಂಗ್ ನಡೆದಿದೆ. ನಿಮಗೆ ಉಡುಗೊರೆಯಾಗಿ ರೋಲೆಕ್ಸ್ ವಾಚ್ ಕಳುಹಿಸುತ್ತಿದ್ದೇವೆ ಎಂದು ವಾಚ್ ಫೋಟೋ ತೋರಿಸಿ ಚಾಟಿಂಗ್ ಮಾಡಿದ್ದಾರೆ. ಶಕ್ತಿಸಿಂಗ್ ಲಂಬಾ ತಾನು ಮಸ್ಕ್ ತಾಯಿಯ ಜೊತೆಯೇ ಚಾಟ್ ಮಾಡುತ್ತಿದ್ದೇನೆ ಎಂದು ನಂಬಿದ್ದಾರೆ.
ಹೀಗೆ ಹಲವು ಜಾಲಗಳನ್ನು ಬೀಸಿ ಶಕ್ತಸಿಂಗ್ರಿಂದ ಒಟ್ಟು 72 ಲಕ್ಷ ರೂಪಾಯಿಯನ್ನು ಹೂಡಿಕೆ ನೆಪದಲ್ಲಿ ದೋಚಲಾಗಿದೆ. ಶಕ್ತಿಸಿಂಗ್ ಅವರ ವಿವಿಧ ಖಾತೆಗಳಿಂದ ಒಟ್ಟು 72 ಲಕ್ಷ ರೂಪಾಯಿಯನ್ನು ವರ್ಗಾವಣೆ ಮಾಡಿಸಿಕೊಂಡು ಟೋಪಿ ಹಾಕಲಾಗಿದೆ. ಕೊನೆಗೆ ನಾನು ವಂಚಕರ ಬಲೆಗೆ ಬಿದ್ದಿದ್ದೇನೆ ಎಂದು ಅರಿತ ನಿವೃತ್ತ ಪೈಲೆಟ್ ಶಕ್ತಿಸಿಂಗ್ ಲಂಬಾ, ಸದ್ಯ ಪೊಲೀಸರಿಗೆ ದೂರು ನೀಡಿದ್ದಾರೆ.
A retired pilot in Faridabad was duped of Rs 72 lakh by fraudsters who lured him with the promise of an opportunity to meet the world's richest man, Elon Musk. Shakti Singh Lumba said he was contacted via his social media account by a person claiming to be a manager at Elon Musk's company.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 03:51 pm
Mangaluru Correspondent
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
Forensic Expert Dr Mahabala Shetty, Dharmasth...
01-08-25 10:02 pm
02-08-25 07:20 pm
Bengaluru Correspondent
Suhas Shetty Murder, NIA Raid Mangalore: ಸುಹಾ...
02-08-25 04:43 pm
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm