ಬ್ರೇಕಿಂಗ್ ನ್ಯೂಸ್
17-12-20 04:36 pm Headline Karnataka News Network ದೇಶ - ವಿದೇಶ
ವಾರಣಾಸಿ, ಡಿ.17: ಮದುವೆ ಫಿಕ್ಸ್ ಆದಬಳಿಕ ಹುಡುಗ ಕೈಕೊಡುವುದನ್ನು ಕೇಳಿದ್ದೇವೆ. ಮದುವೆ ನಿರಾಕರಿಸಿ, ಹುಡುಗಿ ಬೇರೆ ಹುಡುಗನ ಜೊತೆ ಓಡಿ ಹೋಗಿದ್ದನ್ನೂ ಕೇಳಿದ್ದೇವೆ. ಆದರೆ, ಇಲ್ಲಿ ಮಾತ್ರ ಬೇರೆಯದ್ದೇ ಕತೆ ಆಗಿದೆ. ಹುಡುಗನ ಕಡೆಯವರು ಸಂಜೆ ಹೊತ್ತಿಗೆ ಹುಡುಗಿ ಮನೆಗೆಂದು ದಿಬ್ಬಣ ತೆರಳಿದ್ದಾರೆ. ಆದರೆ, ಹುಡುಗಿ ಮನೆಯನ್ನು ಪತ್ತೆ ಮಾಡಲಾಗದೆ ಇಡೀ ರಾತ್ರಿ ಬಸವಳಿದಿದ್ದಾರೆ.
ಹೌದು.. ಹುಡುಗನ ಮನೆಯವರು, ಸಂಬಂಧಿಕರೆಲ್ಲ ಸೇರಿ ಹುಡುಕಿದ್ರೂ ಹುಡುಗಿಯ ಮನೆ ಪತ್ತೆ ಮಾಡಲಾಗದೆ ಹೈರಾಣಾದ ಪ್ರಸಂಗ ಉತ್ತರ ಪ್ರದೇಶದಲ್ಲಿ ನಡೆದಿದೆ. ಮಾವೋ ಜಿಲ್ಲೆಯ ರಾಣಿಪುರ ಎಂಬಲ್ಲಿ ಘಟನೆ ನಡೆದಿದ್ದು, ಇಡೀ ರಾತ್ರಿ ಊರಲ್ಲಿ ಅಲೆದಾಡಿದ ಮಂದಿ ಬೆಳಗ್ಗಿನ ಹೊತ್ತಿಗೆ ತಮ್ಮೂರಿಗೆ ಮರಳಿದ್ದಾರೆ.
ವಿಷ್ಯ ಆಗಿದ್ದು ಏನಪ್ಪಾಂದ್ರೆ, ಹುಡುಗನ ಕಡೆಯವರಿಗೆ ಸಂಬಂಧ ಮಾಡಿದ್ದು ಒಬ್ಬ ಮಧ್ಯವರ್ತಿ ಮಹಿಳೆ. ಹುಡುಗನಿಗೆ ಈ ಹಿಂದೆ ಮದುವೆಯಾಗಿದ್ದು, ಪತ್ನಿಯನ್ನು ಬಿಟ್ಟಿದ್ದ. ಆತನ ಪತ್ನಿ ಒಬ್ಬಂಟಿಯಾಗಿ ಬಿಹಾರದ ಸಮಸ್ತಿಪುರದ ತನ್ನ ಮನೆಯಲ್ಲಿ ವಾಸ ಇದ್ದಾಳೆ. ಈ ನಡುವೆ, ಬೇರೆ ಮದುವೆಯಾಗಲು ಹುಡುಗ ಮತ್ತು ಆತನ ತಾಯಿ ರೆಡಿ ಮಾಡಿಕೊಂಡಿದ್ದಾರೆ. ಹೊಸ ಸಂಬಂಧದ ಬಗ್ಗೆ ಹೇಳಿಕೊಂಡು ಬಂದಿದ್ದ ಮಹಿಳೆಯೊಬ್ಬಳು ಹೊಟೇಲ್ ಒಂದರಲ್ಲಿ ಹುಡುಗ ಮತ್ತು ಆತನ ತಾಯಿ ಜೊತೆ ಮಾತುಕತೆ ನಡೆಸಿದ್ದಾಳೆ. ಆದರೆ, ಹುಡುಗನ ಕಡೆಯವರು ಹುಡುಗಿ ಮನೆಗೆ ಹೋಗಲಿಲ್ಲ. ನೀವು ದಿಬ್ಬಣ ತಗೊಂಡು ಬನ್ನಿ. ಅಲ್ಲಿ ಅರೇಂಜ್ ಮಾಡಿಸ್ತೀನಿ ಎಂದು 20 ಸಾವಿರ ಹಣವನ್ನೂ ಮಹಿಳೆ ಪಡೆದಿದ್ದಳು. ಹುಡುಗಿ ಮನೆಯವರಿಗೆ ಹಣ ಕೊಟ್ಟು ಅಲ್ಲಿ ವ್ಯವಸ್ಥೆ ಮಾಡಬೇಕು ಎಂದಿದ್ದಳು.
ಡಿ.10ರಂದು ಮದುವೆಗೆ ದಿನ ನಿಶ್ಚಯ ಆಗಿದ್ದು, ಹುಡುಗನ ಕಡೆಯವರು ಮುನ್ನಾದಿನ ಸಂಜೆಯೇ ಹೊರಟಿದ್ದಾರೆ. ಅಜಾಮ್ ಘರ್ ಜಿಲ್ಲೆಯ ಕೊತ್ವಾಲಿ ನಗರದ ಕಾನ್ಶೀರಾಮ್ ಕಾಲನಿಯಿಂದ ಹೊರಟಿದ್ದು ಸರಿಯಾದ ಸಮಯಕ್ಕೇ ತಲುಪಿದ್ದರು. ಆದರೆ, ಹುಡುಗಿ ಮನೆಯನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಸಂಬಂಧ ಕುದುರಿಸಿದ್ದ ಮಹಿಳೆಯೂ ನಾಪತ್ತೆಯಾಗಿದ್ದಳು. ರಾತ್ರಿಯಿಡೀ ರಾಣಿಪುರ ಗ್ರಾಮದಲ್ಲಿ ಹುಡುಕಾಡಿ, ಮರುದಿನ ಬೆಳಗ್ಗೆ ಹುಡುಗನ ಸಂಬಂಧಿಕರು ಪೆಚ್ಚು ಮೋರೆ ಹಾಕ್ಕೊಂಡು ಮರಳಿದ್ದಾರೆ.
ಮನೆಗೆ ಆಗಮಿಸಿ, ಸಂಬಂಧ ಕುದುರಿಸಿದ್ದ ಮಹಿಳೆಯ ವಿರುದ್ಧ ಕೊತ್ವಾಲಿ ನಗರ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಮಧ್ಯ ಪ್ರವೇಶ ಮಾಡಿದ್ದು, ಮಹಿಳೆ ಮತ್ತು ಹುಡುಗನ ಕಡೆಯವರನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದಾರೆ.
A wedding procession of a bridegroom that reached Ranipur in Mau district from Kanshi Ram Colony in Kotwali town of Uttar Pradesh's Azamgarh district, could not find the address of the bride
06-10-25 05:27 pm
HK News Desk
Basavaraj Rayareddy, Mallikarjuna kharge, CM...
05-10-25 09:41 pm
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
06-10-25 07:21 pm
HK News Desk
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
06-10-25 07:19 pm
Mangalore Correspondent
ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಹೃದ್ರೋಗ...
06-10-25 04:57 pm
ಟ್ರಾಫಿಕ್ ಸಿಬಂದಿ ಕಾರು ನಿಲ್ಲಿಸಲೆತ್ನಿಸಿ ಒಡೆದ ಗಾಜ...
06-10-25 02:58 pm
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm