ಬ್ರೇಕಿಂಗ್ ನ್ಯೂಸ್
18-02-25 10:49 pm HK News Desk ದೇಶ - ವಿದೇಶ
ಪಾಟ್ನಾ, ಫೆ.19 : ಆತ ಇಬ್ಬರು ಹೆಂಡಿರ ಮುದ್ದಿನ ಪತಿರಾಯ. 25 ವರ್ಷಗಳ ಹಿಂದೆ ಮೊದಲ ಮದುವೆಯಾಗಿದ್ದ ಈ ವ್ಯಕ್ತಿ ಕಳೆದ 7 ವರ್ಷದ ಹಿಂದೆ ಮೊದಲ ಪತ್ನಿಗೆ ಗೊತ್ತಾಗದಂತೆ ಗುಟ್ಟಾಗಿ ಎರಡನೇ ಮದುವೆ ಆಗಿದ್ದ. ವಿಷಯ ತಿಳಿದು ಮೊದಲ ಹೆಂಡತಿ ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಇಕ್ಕಟ್ಟಿಗೆ ಸಿಲುಕಿದ್ದ.
ಹೌದು, ಬಿಹಾರದಲ್ಲಿ ಬೆಳಕಿಗೆ ಬಂದಿರುವ ಈ ವಿಚಿತ್ರ ಪ್ರಕರಣವೀಗ ದೇಶದ ಗಮನ ಸೆಳೆದಿದೆ. ಇದು ಒಬ್ಬನೇ ಗಂಡನನ್ನು ಇಬ್ಬರು ಪತ್ನಿಯರು ಹಂಚಿಕೊಂಡಿರುವ ಅಪರೂಪದ ಪ್ರಸಂಗ. ಪೊಲೀಸ್ ಕೌಟುಂಬಿಕ ಸಾಂತ್ವನ ಕೇಂದ್ರ ನೀಡಿರುವ ಒಪ್ಪಂದದ ಪ್ರಕಾರ, ಪತಿರಾಯ ಮೊದಲ ಹೆಂಡತಿ ಬಳಿ ವಾರದಲ್ಲಿ ನಾಲ್ಕು ದಿನ ಮತ್ತು ಎರಡನೇ ಹೆಂಡತಿ ಬಳಿ ಮೂರು ದಿನಗಳ ಕಾಲ ಸಂಸಾರ ನಡೆಸಬೇಕಾಗಿದೆ.
ಮೊದಲ ಪತ್ನಿ ಪೂರ್ಣಿಮಾ ಗಂಡನ ನಡೆಯಿಂದ ಬೇಸತ್ತು ಪೂರ್ನಿಯಾ ಪೊಲೀಸ್ ಠಾಣೆ ಕಚೇರಿಗೆ ತೆರಳಿ, ತನ್ನ ಪತಿ ಶಂಕರ್ ವಿರುದ್ಧ ದೂರು ನೀಡಿದ್ದರು. ತಾವಿಬ್ಬರು 2000ನೇ ಇಸ್ವಿಯಲ್ಲಿ ಮದುವೆಯಾಗಿದ್ದು, ಇಬ್ಬರು ಮಕ್ಕಳು ಸಹ ಇದ್ದಾರೆ. ನನಗೆ ಗೊತ್ತಾಗದಂತೆ ನನ್ನ ಗಂಡ ಉಷಾ ದೇವಿ ಎಂಬವಳನ್ನ ಎರಡನೇ ಮದುವೆಯಾಗಿದ್ದಾನೆ ಎಂದು ಎಸ್ಪಿ ಎದುರು ಅಳಲು ತೋಡಿಕೊಂಡಿದ್ದರು.
ಶಂಕರ್ ಅವರ ಮೊದಲ ಪತ್ನಿ ಪೂರ್ಣಿಮಾ, ತನ್ನ ಪತಿ ಕುಟುಂಬದ ನಿರ್ವಹಣೆಗೆ ಹಣ ನೀಡುತ್ತಿಲ್ಲ. ಮಕ್ಕಳ ಶಿಕ್ಷಣವನ್ನು ನೋಡಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ್ದರು. ಅವರ ದೂರು ಆಲಿಸಿದ್ದು, ಈ ಕುರಿತಂತೆ ಪೊಲೀಸ್ ಕೌಟುಂಬಿಕ ಸಾಂತ್ವನ ಕೇಂದ್ರದಲ್ಲಿ ದೂರು ನೀಡುವಂತೆ ಸೂಚಿಸಿ, ಪ್ರಕರಣವನ್ನು ಅಲ್ಲಿಗೆ ವರ್ಗಾಯಿಸಲಾಗಿತ್ತು ಎಂದು ಎಸ್ಪಿ ಕಾರ್ತಿಕೇಯಾ ಶರ್ಮಾ ಮಾಹಿತಿ ನೀಡಿದ್ದಾರೆ.
A beloved husband of two wives, husband now victim of the wives quarrel in patna.
22-08-26 03:01 pm
HK News Staffer
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
ಬೆಂಗಳೂರಿನಲ್ಲಿ ಎಚ್1ಎನ್1 ಸೋಂಕು ಹೆಚ್ಚಳ ; ಖಾಸಗಿ ಶ...
19-08-26 09:52 pm
20-08-26 10:55 am
HK News Staffer
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
ಬಿಜೆಪಿಯ ಯುವ ಮೋರ್ಚಾಗೆ ಹೊಸ ಸಾರಥಿ ; ತೇಜಸ್ವಿ ಸೂರ್...
18-08-26 02:42 pm
22-08-26 01:37 pm
HK News Staffer
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
Mfc Hotel Raid, Mangalorr: ಕೆಎಫ್ ಸಿ ಬಳಿಕ ಮಂಗಳ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
22-08-26 12:43 pm
HK News Staffer
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm