ಬ್ರೇಕಿಂಗ್ ನ್ಯೂಸ್
01-02-25 09:51 pm HK News Desk ದೇಶ - ವಿದೇಶ
ಚಂಡೀಗಢ, ಫೆ.1: ಅಂಗವಿಕಲ ಮಹಿಳೆಯೊಬ್ಬರನ್ನು ಅವಮಾನಿಸಿ, ಅವರಿಂದ ಅಕ್ರಮವಾಗಿ 40 ರುಪಾಯಿ ಟೋಲ್ ಶುಲ್ಕವನ್ನು ಪಡೆದಿದ್ದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಗ್ರಾಹಕರ ಆಯೋಗದಿಂದ 17 ಸಾವಿರ ರೂಪಾಯಿ ದಂಡ ವಿಧಿಸಿದ ಪ್ರಸಂಗ ಚಂಡೀಗಢದಲ್ಲಿ ನಡೆದಿದೆ.
ಚಂಡೀಗಢ ನಿವಾಸಿ, ಅಂಗವಿಕಲ ಮಹಿಳೆ ಗೀತಾ ಎಂಬವರು ದಿವ್ಯಾಂಗನ್ ಯೋಜನೆಯಡಿ ಹೊಸ ಕಾರು ಖರೀದಿಸಿದ್ದರು. ಸರಕಾರದ ಕಾನೂನು ಪ್ರಕಾರ, ದತ್ತು ನಿಮಯದಡಿ ಖರೀದಿಸಲ್ಪಟ್ಟ ವಾಹನಕ್ಕೆ ಟೋಲ್ ವಿನಾಯ್ತಿ ಇರುವ ಬಗ್ಗೆ ರಿಜಿಸ್ಟ್ರೇಶನ್ ಸರ್ಟಿಫಿಕೇಟ್ (ಆರ್ ಸಿ) ನಲ್ಲಿ ಉಲ್ಲೇಖವಾಗಿರುತ್ತದೆ. 2024ರ ಎಪ್ರಿಲ್ 28ರಂದು ಗೀತಾ ಅವರು ತನ್ನ ಕುಟುಂಬಸ್ಥರೊಂದಿಗೆ ಹಿಮಾಚಲ ಪ್ರದೇಶದ ಕಸೌಲಿಗೆ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಕಾರಿನಲ್ಲಿ ತೆರಳುವಾಗ ಹೆದ್ದಾರಿಯಲ್ಲಿ ಯಾವುದೇ ಟೋಲ್ ನಲ್ಲಿ ಶುಲ್ಕ ವಿಧಿಸಿರಲಿಲ್ಲ.
ಅದೇ ದಿನ ಹಿಂತಿರುಗಿ ಬರುತ್ತಿದ್ದಾಗ ಚಂಡೀಗಢ ಜಿಲ್ಲೆಯ ಚಂಡಿ ಮಂದಿರ ಟೋಲ್ ಗೇಟ್ ನಲ್ಲಿ ಕಾರನ್ನು ನಿಲ್ಲಿಸಲಾಗಿತ್ತು. ಈಕೆಯ ಆರ್ ಸಿಯನ್ನು ತೋರಿಸಿದರೂ, ಅಲ್ಲಿನ ಸಿಬಂದಿ ಅವಾಚ್ಯವಾಗಿ ನಿಂದಿಸಿ ನೀವು ಅಂಗವಿಕಲೆ ಎನ್ನುವುದಕ್ಕೆ ಯಾವ ದಾಖಲೆ ಇದೆ, ವೈದ್ಯರ ಸರ್ಟಿಫಿಕೇಟ್ ಇದೆಯಾ, ಕಾರಿನಿಂದ ಹೊರಗಿಳಿದು ನಡೆದು ತೋರಿಸಿ ಎಂದು ಆವಾಜ್ ಹಾಕಿದ್ದ. ಇವರು ಎಷ್ಟು ವಾದ ಮಾಡಿದರೂ, ಅಲ್ಲಿನ ಸಿಬಂದಿ ಕೇಳಿರಲಿಲ್ಲ. ಬಳಿಕ 40 ರೂಪಾಯಿ ಶುಲ್ಕವನ್ನು ಕಟ್ಟಿಯೇ ಹೋಗುವಂತೆ ಮಾಡಿದ್ದ. ಇದರಿಂದ ಬೇಸತ್ತ ಮಹಿಳೆ ಹೆದ್ದಾರಿ ಪ್ರಾಧಿಕಾರದ ಕಸ್ಟಮರ್ ಕೇರ್ ನಂಬರ್ ಪಡೆದು ದೂರು ದಾಖಲಿಸಿದ್ದರು. ಇಮೇಲ್ ಮೂಲಕವೂ ದೂರು ಹೇಳಿಕೊಂಡಿದ್ದರು. ಆದರೆ ಹೆದ್ದಾರಿ ಪ್ರಾಧಿಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.
ಆನಂತರ, ಚಂಡೀಗಢ ಜಿಲ್ಲಾ ಗ್ರಾಹಕರ ಆಯೋಗಕ್ಕೆ ಮಹಿಳೆ ದೂರು ನೀಡಿದ್ದರು. ಆಯೋಗದಿಂದ ನೋಟೀಸ್ ನೀಡಿದರೂ, ಹೆದ್ದಾರಿ ಪ್ರಾಧಿಕಾರ ಸ್ಪಂದನೆ ಮಾಡಿರಲಿಲ್ಲ. ಆನಂತರ, 2024ರ ಆಗಸ್ಟ್ 16ರಂದು ದೂರನ್ನು ವಿಚಾರಣೆಗೆ ಸ್ವೀಕರಿಸಿತ್ತು. ಮಹಿಳೆ ತನ್ನ ಕಾರಿನ ಬಗ್ಗೆ ದಾಖಲೆಗಳನ್ನು ಕೊಟ್ಟಿದ್ದಲ್ಲದೆ, ಸರ್ಕಾರದ ಕಾನೂನು ಪ್ರಕಾರವೇ ಟೋಲ್ ವಿನಾಯ್ತಿ ಪಡೆದಿರುವ ಬಗ್ಗೆಯೂ ದಾಖಲೆ ನೀಡಿದ್ದರು. ಹೀಗಿರುವಾಗ ಹೆದ್ದಾರಿ ಪ್ರಾಧಿಕಾರ ಬಲವಂತದಿಂದ ಟೋಲ್ ಪಡೆಯುವ ಹಾಗಿಲ್ಲ ಎಂದು ವಾದ ಮಂಡಿಸಿದ್ದರು. ಅಲ್ಲದೆ, ಕಸೌಲಿಗೆ ಅದೇ ಹೆದ್ದಾರಿಯಲ್ಲಿ ತೆರಳುವಾಗ ಇಲ್ಲದ ಟೋಲ್ ಶುಲ್ಕವನ್ನು ಮರಳಿ ಬರುವಾಗ ಮಾತ್ರ ಯಾಕೆ ಸ್ವೀಕರಿಸಲಾಯಿತು. ಇದು ತಪ್ಪು ನಡೆಯಲ್ಲವೇ ಎಂದು ಪ್ರಶ್ನೆ ಮಾಡಲಾಗಿತ್ತು.
ಗ್ರಾಹಕರದ ಆಯೋಗದ ಸದಸ್ಯರಾದ ಸುರ್ಜೀತ್ ಕೌರ್ ಮತ್ತು ಬ್ರಿಜ್ ಮೋಹನ್ ಮಹಿಳೆಯ ಅಹವಾಲನ್ನು ಮನ್ನಿಸಿ, ಹೆದ್ದಾರಿ ಪ್ರಾಧಿಕಾರಕ್ಕೆ ದಂಡ ವಿಧಿಸಿ ಆದೇಶ ಮಾಡಿದ್ದಾರೆ. ಟೋಲ್ ಪ್ಲಾಜಾದಲ್ಲಿ ಅಂಗವಿಕಲ ಮಹಿಳೆಯನ್ನು ಅವಮಾನಿಸಿದ್ದಾರೆ. ಭಾರತ ಸರಕಾರವು ಅಂಗವಿಕಲರಿಗೆ ತಮ್ಮ ವೈಕಲ್ಯದ ನೋವನ್ನು ನಿವಾರಿಸುವ ಸಲುವಾಗಿ ವಿಶೇಷ ಸೌಲಭ್ಯಗಳನ್ನು ಕೊಟ್ಟಿರುವಾಗ ಅದನ್ನು ನಿರಾಕರಿಸುವುದು ತಪ್ಪು. ಟೋಲ್ ಸಿಬಂದಿ ಶುಲ್ಕ ವಿಧಿಸುವುದು ಕಾನೂನು ರೀತ್ಯಾ ತಪ್ಪು ಮಾತ್ರವಲ್ಲದೆ, ಸರ್ಕಾರಿ ಸೇವೆಯನ್ನು ನಿರಾಕರಿಸಿದ್ದು ಮತ್ತೊಂದು ತಪ್ಪು. ಹೀಗಾಗಿ ಹೆದ್ದಾರಿ ಪ್ರಾಧಿಕಾರವು 40 ರೂ. ಶುಲ್ಕವನ್ನು ಹಿಂತಿರುಗಿಸುವುದರ ಜೊತೆಗೆ ಹತ್ತು ಸಾವಿರ ರೂ. ಪರಿಹಾರ, 7 ಸಾವಿರ ರೂ. ಕಾನೂನು ವ್ಯಾಜ್ಯದ ಬಾಬ್ತು ಮೊತ್ತವನ್ನು ಮಹಿಳೆಗೆ ನೀಡಬೇಕು ಎಂದು ಆದೇಶ ಮಾಡಿದ್ದಾರೆ.
The District Consumer Disputes Redressal Commission of Chandigarh has penalised the National Highways Authority of India (NHAI) for wrongly charging Rs 40 in toll tax and allegedly humiliating an orthopaedically disabled woman at the Chandimandir Toll Plaza. The Commission has directed NHAI to pay Rs 17,000 to the complainant.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm