ಬ್ರೇಕಿಂಗ್ ನ್ಯೂಸ್
14-01-25 07:18 pm HK News Desk ದೇಶ - ವಿದೇಶ
ಪ್ರಯಾಗರಾಜ್, ಜ.14: ಮಹಾಕುಂಭ ಮೇಳಕ್ಕೆ ಗೂಗಲ್ ಸಂಸ್ಥೆಯು ಗುಲಾಬಿ ದಳಗಳಿಂದ ಪುಷ್ಪ ವೃಷ್ಟಿ ಮಾಡಿದೆ. ಗೂಗಲ್ ಸರ್ಚ್ ಬಾಕ್ಸ್ನಲ್ಲಿ ಕುಂಭ ಮೇಳ ಎಂದು ಟೈಪ್ ಮಾಡಿ ಸರ್ಚ್ ಮಾಡಿದರೆ ತಕ್ಷಣ ಮೊಬೈಲ್ ಸ್ಕ್ರೀನ್ ಮೇಲೆ ಗುಲಾಬಿ ದಳಗಳು ಸುರಿಯುತ್ತವೆ.
ಕುಂಭಮೇಳ ಭಾರತದ ಆಧ್ಯಾತ್ಮಿಕ ವೈಭವವನ್ನು ಸಾರುವ ಕಾರ್ಯಕ್ರಮ. 45 ದಿನಗಳಲ್ಲಿ ಸುಮಾರು 40 ಕೋಟಿಗೂ ಹೆಚ್ಚು ಜನರು ಕುಂಭ ಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ಇದೇ ಕಾರಣಕ್ಕೆ ಗೂಗಲ್ ಸಂಸ್ಥೆಯು ಮಹಾ ಕುಂಭಮೇಳಕ್ಕೆ ಆದ್ಯತೆ ನೀಡಿದ್ದು ಹೂ ಮಳೆ ಸುರಿಸಲು ತೊಡಗಿದೆ. ನ.14ರ ಮಕರ ಸಂಕ್ರಾಂತಿಯ ದಿನದಂದು ಗೂಗಲ್ ಕುಂಭಮೇಳದ ಬಗ್ಗೆ ಸರ್ಚ್ ಮಾಡುವ ಗ್ರಾಹಕರಿಗೆ ಹೂಮಳೆ ಸುರಿಸಿದೆ.
ಹೂವು ಸುರಿಯುವಾಗ ಸ್ಕ್ರೀನ್ ಕೆಳಗೆ ಕಾಣುವ ಮೂರು ಬಟನ್ ಪೈಕಿ ಮಧ್ಯದಲ್ಲಿರುವ ಹೂವಿನ ಬಟನ್ ಕ್ಲಿಕ್ ಮಾಡಿದರೆ, ಹೆಚ್ಚು ಹೆಚ್ಚು ಹೂವುಗಳು ಉದುರುತ್ತವೆ. ಹೀಗೆ ನೀವು ಹೆಚ್ಚು ಕ್ಲಿಕ್ ಮಾಡಿದರೆ ಹೆಚ್ಚು ಹೂವುಗಳು ಬೀಳುತ್ತವೆ. ಇದನ್ನು ಯಾರೊಂದಿಗಾದರೂ ಹಂಚಿಕೊಳ್ಳಲು ಬಯಸಿದರೆ, ಕೆಳಗಿನ ಬಲಭಾಗದ ಮೂರನೇ ಬಟನ್ ಕ್ಲಿಕ್ ಮಾಡಿ ಹಂಚಿಕೊಳ್ಳಬಹುದು. ಗೂಗಲ್ ತಂದಿರುವ ಈ ವಿಶೇಷ ಗ್ರಾಫಿಕ್ಸ್ ಅನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ತ್ರಿವೇಣಿ ಸಂಗಮಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಭಕ್ತರು ಹರ ಹರ ಮಹಾದೇವ, ಜೈ ಶ್ರೀರಾಮ್ ಘೋಷಣೆಗಳನ್ನು ಹಾಕುತ್ತಿದ್ದಾರೆ. 12 ಕಿಮೀ ವ್ಯಾಪ್ತಿಯಲ್ಲಿ ವ್ಯವಸ್ಥೆ ಮಾಡಿರುವ ಸ್ನಾನ ಘಟ್ಟಗಳಲ್ಲಿ ಸಂತರು, ಯಾತ್ರಿಕರು, ಅಘೋರಿಗಳು ಮತ್ತು ಭಕ್ತರು ತುಂಬಿ ತುಳುಕಿದ್ದಾರೆ. ಮಕರ ಸಂಕ್ರಾಂತಿಯ ದಿನ ಮಂಗಳವಾರ ಬೆಳಗ್ಗೆ 8.30ಕ್ಕೆ ಶಾಹಿ ಸ್ನಾನ ಆರಂಭವಾಗಿದೆ. ಸೋಮವಾರ ಪುಷ್ಯ ಹುಣ್ಣಿಮೆಯಂದು ನಿರ್ವಾಣಿ ಅಖಾಡದ ನಾಗಾ ಸಾಧುಗಳು ಪವಿತ್ರ ಸ್ನಾನ ಮಾಡುವ ಮೂಲಕ ಕುಂಭಮೇಳ ಆರಂಭಿಸಿದ್ದಾರೆ. ಲೋಕದ ಪರಿವೇ ಇಲ್ಲದಂತೆ ದೇವರ ಧ್ಯಾನದಲ್ಲೇ ತಲ್ಲೀನವಾಗಿರುವ ನಾಗಾ ಸಾಧುಗಳು, ಅಘೋರಿಗಳ ಪಾಲಿಗೆ ಕುಂಭ ಮೇಳ ಮಹೋನ್ನತ ಉತ್ಸವ ಎನ್ನುವಂತಾಗಿದೆ.
Google pays homage to Maha Kumbh Mela 2025—the largest religious gathering in the world—through a unique, interactive feature available on its search platform for Indian users. This captivating digital tribute highlights the cultural and spiritual significance of the event that attracts millions of devotees from across the globe.
07-04-26 07:26 pm
HK News Staffer
ಏಪ್ರಿಲ್ 9ಕ್ಕೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ;...
07-04-26 03:51 pm
ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ ; ಬಳ್ಳಾರಿ,...
07-04-26 12:37 pm
ಇನ್ನೆರಡು ವರ್ಷ ಸಿದ್ದರಾಮಯ್ಯ ಅವರೇ ಸಿಎಂ, ಹೈಕಮಾಂಡ್...
06-04-26 08:51 pm
ದಟ್ಟ ಕಾಡಿನ ಮಧ್ಯೆ ದಾರಿ ತಪ್ಪಿದ್ದ ಶರಣ್ಯ ಕಡೆಗೂ ಪತ...
05-04-26 10:45 pm
07-04-26 10:44 pm
HK News Staffer
ಇರಾನ್ ನಾಗರಿಕತೆ ಇಂದು ರಾತ್ರಿಯೇ ಅಂತ್ಯವಾಗಲಿದೆ, 47...
07-04-26 09:52 pm
Pakistan News, Fuel Crisis: ಇಂಧನ ಬಿಕ್ಕಟ್ಟು ;...
07-04-26 08:01 pm
ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಪ್ರಜ್ಞಾಹೀನ...
07-04-26 11:45 am
ಟ್ರಂಪ್ ವಾರ್ನಿಂಗ್ ಗೆ ಇರಾನ್ ಟಕ್ಕರ್ ; ವಿದ್ಯುತ್ ಸ...
07-04-26 11:42 am
07-04-26 01:22 pm
HK News Staffer
ಧರ್ಮಸ್ಥಳ ಬಂಗ್ಲೆಗುಡ್ಡೆ ಕಾಡಿನಲ್ಲಿ ಅಪರಿಚಿತ ಶವ ಪತ...
06-04-26 07:58 pm
ಉಡುಪಿ ; ಬಾವಿಗೆ ಬಿದ್ದು ಮೂರು ದಿನ ನರಳಾಡಿತ್ತು ವೃದ...
06-04-26 07:43 pm
ಕೇರಳಕ್ಕೆ ಅಕ್ರಮ ಜಾನುವಾರು ಸಾಗಣೆ; ಕಡಬದಲ್ಲಿ ಪೊಲೀಸ...
03-04-26 11:43 am
ಧರ್ಮಸ್ಥಳ ಎಐ ವಿಡಿಯೋ ಪ್ರಕರಣ; ಯೂಟ್ಯೂಬರ್ ಎಂ.ಡಿ....
02-04-26 02:43 pm
07-04-26 10:15 pm
HK News Staffer
Arif Murder Case, Mangalore: ಟ್ಯಾಬ್ಲೆಟ್ ಆರೀಫ್...
07-04-26 06:18 pm
ಚಿಕ್ಕಮಗಳೂರು ; ಭದ್ರಾ ನದಿಗೆ ಹಾರಿ ಶಿವಮೊಗ್ಗದ ನರ್ಸ...
07-04-26 04:04 pm
ಪೊಲೀಸ್ ಕಸ್ಟಡಿಯಲ್ಲಿದ್ದ ತಂದೆ-ಮಗನಿಗೆ ಚಿತ್ರಹಿಂಸೆ...
07-04-26 10:08 am
ತಮಿಳಿನ ಖ್ಯಾತ ಕಿರುತೆರೆ ನಟಿ ಸುಭಾಷಿಣಿ ಬಾಲಸುಬ್ರಹ್...
06-04-26 05:40 pm