ಬ್ರೇಕಿಂಗ್ ನ್ಯೂಸ್
14-01-25 07:18 pm HK News Desk ದೇಶ - ವಿದೇಶ
ಪ್ರಯಾಗರಾಜ್, ಜ.14: ಮಹಾಕುಂಭ ಮೇಳಕ್ಕೆ ಗೂಗಲ್ ಸಂಸ್ಥೆಯು ಗುಲಾಬಿ ದಳಗಳಿಂದ ಪುಷ್ಪ ವೃಷ್ಟಿ ಮಾಡಿದೆ. ಗೂಗಲ್ ಸರ್ಚ್ ಬಾಕ್ಸ್ನಲ್ಲಿ ಕುಂಭ ಮೇಳ ಎಂದು ಟೈಪ್ ಮಾಡಿ ಸರ್ಚ್ ಮಾಡಿದರೆ ತಕ್ಷಣ ಮೊಬೈಲ್ ಸ್ಕ್ರೀನ್ ಮೇಲೆ ಗುಲಾಬಿ ದಳಗಳು ಸುರಿಯುತ್ತವೆ.
ಕುಂಭಮೇಳ ಭಾರತದ ಆಧ್ಯಾತ್ಮಿಕ ವೈಭವವನ್ನು ಸಾರುವ ಕಾರ್ಯಕ್ರಮ. 45 ದಿನಗಳಲ್ಲಿ ಸುಮಾರು 40 ಕೋಟಿಗೂ ಹೆಚ್ಚು ಜನರು ಕುಂಭ ಮೇಳದಲ್ಲಿ ಭಾಗವಹಿಸುತ್ತಿದ್ದಾರೆ. ಇದೇ ಕಾರಣಕ್ಕೆ ಗೂಗಲ್ ಸಂಸ್ಥೆಯು ಮಹಾ ಕುಂಭಮೇಳಕ್ಕೆ ಆದ್ಯತೆ ನೀಡಿದ್ದು ಹೂ ಮಳೆ ಸುರಿಸಲು ತೊಡಗಿದೆ. ನ.14ರ ಮಕರ ಸಂಕ್ರಾಂತಿಯ ದಿನದಂದು ಗೂಗಲ್ ಕುಂಭಮೇಳದ ಬಗ್ಗೆ ಸರ್ಚ್ ಮಾಡುವ ಗ್ರಾಹಕರಿಗೆ ಹೂಮಳೆ ಸುರಿಸಿದೆ.
ಹೂವು ಸುರಿಯುವಾಗ ಸ್ಕ್ರೀನ್ ಕೆಳಗೆ ಕಾಣುವ ಮೂರು ಬಟನ್ ಪೈಕಿ ಮಧ್ಯದಲ್ಲಿರುವ ಹೂವಿನ ಬಟನ್ ಕ್ಲಿಕ್ ಮಾಡಿದರೆ, ಹೆಚ್ಚು ಹೆಚ್ಚು ಹೂವುಗಳು ಉದುರುತ್ತವೆ. ಹೀಗೆ ನೀವು ಹೆಚ್ಚು ಕ್ಲಿಕ್ ಮಾಡಿದರೆ ಹೆಚ್ಚು ಹೂವುಗಳು ಬೀಳುತ್ತವೆ. ಇದನ್ನು ಯಾರೊಂದಿಗಾದರೂ ಹಂಚಿಕೊಳ್ಳಲು ಬಯಸಿದರೆ, ಕೆಳಗಿನ ಬಲಭಾಗದ ಮೂರನೇ ಬಟನ್ ಕ್ಲಿಕ್ ಮಾಡಿ ಹಂಚಿಕೊಳ್ಳಬಹುದು. ಗೂಗಲ್ ತಂದಿರುವ ಈ ವಿಶೇಷ ಗ್ರಾಫಿಕ್ಸ್ ಅನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ತ್ರಿವೇಣಿ ಸಂಗಮಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಭಕ್ತರು ಹರ ಹರ ಮಹಾದೇವ, ಜೈ ಶ್ರೀರಾಮ್ ಘೋಷಣೆಗಳನ್ನು ಹಾಕುತ್ತಿದ್ದಾರೆ. 12 ಕಿಮೀ ವ್ಯಾಪ್ತಿಯಲ್ಲಿ ವ್ಯವಸ್ಥೆ ಮಾಡಿರುವ ಸ್ನಾನ ಘಟ್ಟಗಳಲ್ಲಿ ಸಂತರು, ಯಾತ್ರಿಕರು, ಅಘೋರಿಗಳು ಮತ್ತು ಭಕ್ತರು ತುಂಬಿ ತುಳುಕಿದ್ದಾರೆ. ಮಕರ ಸಂಕ್ರಾಂತಿಯ ದಿನ ಮಂಗಳವಾರ ಬೆಳಗ್ಗೆ 8.30ಕ್ಕೆ ಶಾಹಿ ಸ್ನಾನ ಆರಂಭವಾಗಿದೆ. ಸೋಮವಾರ ಪುಷ್ಯ ಹುಣ್ಣಿಮೆಯಂದು ನಿರ್ವಾಣಿ ಅಖಾಡದ ನಾಗಾ ಸಾಧುಗಳು ಪವಿತ್ರ ಸ್ನಾನ ಮಾಡುವ ಮೂಲಕ ಕುಂಭಮೇಳ ಆರಂಭಿಸಿದ್ದಾರೆ. ಲೋಕದ ಪರಿವೇ ಇಲ್ಲದಂತೆ ದೇವರ ಧ್ಯಾನದಲ್ಲೇ ತಲ್ಲೀನವಾಗಿರುವ ನಾಗಾ ಸಾಧುಗಳು, ಅಘೋರಿಗಳ ಪಾಲಿಗೆ ಕುಂಭ ಮೇಳ ಮಹೋನ್ನತ ಉತ್ಸವ ಎನ್ನುವಂತಾಗಿದೆ.
Google pays homage to Maha Kumbh Mela 2025—the largest religious gathering in the world—through a unique, interactive feature available on its search platform for Indian users. This captivating digital tribute highlights the cultural and spiritual significance of the event that attracts millions of devotees from across the globe.
19-09-25 02:16 pm
Bangalore Correspondent
ಮೋಸದಿಂದಲೇ ಕಣ್ರೀ ಬಿಜೆಪಿ ಚುನಾವಣೆ ಗೆದ್ದಿದೆ! ರಾಹು...
19-09-25 09:45 am
ಬೆಂಗಳೂರು ಗಬ್ಬೆದ್ದು ನಾರುತ್ತಿದೆ, ರಾಜಧಾನಿ ಈಗ ಗುಂ...
19-09-25 09:42 am
Traffic Violation, Bangalore: ರಾಜ್ಯದಲ್ಲಿ ಸಂಚಾ...
18-09-25 05:34 pm
Ksrtc Bus, Driver, Heart Attack: ಬಸ್ ಓಡಿಸುವಾಗ...
17-09-25 06:02 pm
19-09-25 02:24 pm
HK News Desk
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
18-09-25 11:11 pm
Mangalore Correspondent
Mangalore, UT Khader: ಹಿಂದುಳಿದ ವರ್ಗಗಳ ಆಯೋಗ ಸ್...
18-09-25 09:12 pm
ಮಾಜಿ ಸೈನಿಕರಿಗೆ ಸರ್ಕಾರಿ ಸವಲತ್ತು ನೀಡದೆ ನಿರ್ಲಕ್ಷ...
18-09-25 09:09 pm
Banglegudde, Dharmasthala, SIT: ಬಂಗ್ಲೆಗುಡ್ಡೆ...
18-09-25 07:40 pm
Ajith Kumar Rai, Mangalore: ಬಂಟ- ನಾಡವರು ಒಂದೇ,...
18-09-25 06:11 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm