ಬ್ರೇಕಿಂಗ್ ನ್ಯೂಸ್
02-12-24 10:44 pm HK News Desk ದೇಶ - ವಿದೇಶ
ಚೆನ್ನೈ, ಡಿ.2: ತಮಿಳುನಾಡು ರಾಜ್ಯದಾದ್ಯಂತ ಫೆಂಗಾಲ್ ಚಂಡಮಾರುತ ಹಾವಳಿ ಎಬ್ಬಿಸಿದೆ. ಪುದುಚೇರಿ ಸೇರಿದಂತೆ ಉತ್ತರ ತಮಿಳುನಾಡಿನ ತಿರುವಣ್ಣಾಮಲೈ, ಕೃಷ್ಣಗಿರಿ, ಧರ್ಮಾಪುರಿ, ವಿಲ್ಲುಪುರಂ ಜಿಲ್ಲೆಗಳಲ್ಲಿ ಹೆಚ್ಚು ಪೀಡನೆ ಮಾಡಿದೆ. 14 ಜಿಲ್ಲೆಗಳಲ್ಲಿ ಒಂದೂವರೆ ಕೋಟಿ ಜನರು ಚಂಡಮಾರುತದಿಂದ ಬೆಳೆ, ಆಸ್ತಿ ನಷ್ಟ ಅನುಭವಿಸಿದ್ದಾರೆ. 2.11 ಲಕ್ಷ ಹೆಕ್ಟೇರ್ ಕೃಷಿ ಹಾನಿಯಾಗಿದೆ ಎಂದು ಸಿಎಂ ಎಂ.ಕೆ ಸ್ಟಾಲಿನ್ ತಿಳಿಸಿದ್ದಾರೆ.
ಅಣ್ಣಾಮಲೈಯಾರ್ ಬೆಟ್ಟ ಪ್ರದೇಶದಲ್ಲಿ ಮಗು ಸೇರಿದಂತೆ ಐದು ಜನರು ಸಾವು ಕಂಡಿದ್ದಾರೆ. ಡಿ.1ರಂದು ಕೃಷ್ಣಗಿರಿಯಲ್ಲಿ 50 ಸೆಂಟಿ ಮೀಟರ್, ವಿಲ್ಲುಪುರಂನಲ್ಲಿ 42 ಸೆ.ಮೀ. ಮಳೆಯಾಗಿದೆ. ಇದೇ ವೇಳೆ. ಡಿ.2ರಂದು ಉತ್ತರ ಕೇರಳದ ಕಾಸರಗೋಡು, ಕಣ್ಣೂರು, ವಯನಾಡ್, ಕೋಜಿಕ್ಕೋಡ್, ಮಲ್ಲಪ್ಪುರಂ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಡಿ.2ರಂದು ಉತ್ತರ ಕೇರಳ ಭಾಗದಲ್ಲಿ ಭಾರೀ ಮಳೆಯಾಗಿದ್ದು, ಹಲವೆಡೆ ನಾಶ- ನಷ್ಟ ಉಂಟಾಗಿದೆ.
ಪುದುಚೇರಿಯಲ್ಲಿ ಕಳೆದ 30 ವರ್ಷಗಳಲ್ಲಿ ಅತ್ಯಧಿಕ ಮಳೆ ದಾಖಲಾಗಿದೆ. ಪ್ರವಾಹದ ಸ್ಥಿತಿ ತಲೆದೋರಿದ್ದು, ಸಂಕಷ್ಟಕ್ಕೀಡಾದ ಜನರನ್ನು ಸ್ಥಳಾಂತರ ಮಾಡಲಾಗಿದೆ. ಡಿ.1ರ ಸಂಜೆಯ ಬಳಿಕ ಪುದುಚೇರಿ ಏರ್ಪೋರ್ಟ್ ಬಂದ್ ಮಾಡಲಾಗಿತ್ತು. ಹವಾಮಾನ ತಜ್ಞರ ಪ್ರಕಾರ, ಈ ಬಾರಿಯ ಚಂಡಮಾರುತ ಅತಿ ನಿಧಾನಗತಿಯಿಂದ ಕೂಡಿದೆಯಂತೆ. ನವೆಂಬರ್, ಡಿಸೆಂಬರ್ ನಲ್ಲಿ ಬರುತ್ತಿದ್ದ ಸೈಕ್ಲೋನ್ ಇಷ್ಟು ನಿಧಾನಗತಿಯಲ್ಲಿ ಬಂದಿದ್ದು ಈ ಹಿಂದೆ ಕಂಡಿಲ್ಲ. 24 ಗಂಟೆಯಲ್ಲಿ ಕೇವಲ 500 ಕಿಮೀ ಅಷ್ಟೇ ಸಂಚರಿಸಿದ್ದರಿಂದ ಇದರ ಹಾವಳಿ ಹೆಚ್ಚಿದೆ. ಗಂಟೆಗೆ ಕೇವಲ 15 ಕಿಮೀ ಅಷ್ಟೇ ಸೈಕ್ಲೋನ್ ಸಂಚರಿಸುತ್ತಿರುವುದರಿಂದ ಮಳೆಯೂ ಹೆಚ್ಚು ಬೀಳುತ್ತಿದೆ ಎಂದು ತಿಳಿಸಿದ್ದಾರೆ.
ಡಿ.2ರಂದು ಚಂಡಮಾರುತ ಕರ್ನಾಟಕ ಪ್ರವೇಶ ಮಾಡಿದ್ದು, ಉತ್ತರ ಕೇರಳದ ಮೂಲಕ ಕರ್ನಾಟಕ ಕರಾವಳಿಯಿಂದಾಗಿ ಗೋವಾಕ್ಕೆ ತಲುಪುವ ಸಾಧ್ಯತೆಯಿದೆ. ಹೀಗಾಗಿ ಡಿ.2 ಮತ್ತು 3ರಂದು ಭಾರೀ ಮಳೆಯಾಗುವ ಬಗ್ಗೆ ಸೂಚನೆ ನೀಡಲಾಗಿದೆ.
Cyclone Fengal has progressed towards Tamil Nadu and made landfall on the Puducherry coasts at 7pm on Saturday. It is now likely to remain in Tamil Nadu, and weaken into a deep depression. Budget carrier IndiGo announced that it is resuming operations. The cylcone triggered heavy rainfall, shutting down airport operations till 4am on December 1.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
06-10-25 02:58 pm
Mangalore Correspondent
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm