ಬ್ರೇಕಿಂಗ್ ನ್ಯೂಸ್
27-11-24 12:36 pm HK News Desk ದೇಶ - ವಿದೇಶ
ತ್ರಿಶ್ಶೂರ್, ನ.27: ಮರದ ದಿಮ್ಮಿ ಸಾಗಿಸುತ್ತಿದ್ದ ಲಾರಿಯೊಂದು ರಸ್ತೆ ಬದಿ ಮಲಗಿದ್ದ ಅಲೆಮಾರಿಗಳ ಮೇಲೆ ಚಲಿಸಿದ ಪರಿಣಾಮ ಇಬ್ಬರು ಮಕ್ಕಳ ಸಹಿತ ಐವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕೇರಳದ ತ್ರಿಶ್ಶೂರ್ ಜಿಲ್ಲೆಯ ತ್ರಿಪ್ರಯಾರ್ ಎಂಬಲ್ಲಿ ನಡೆದಿದೆ.
ಕಣ್ಣೂರಿನಿಂದ ಎರ್ನಾಕುಲಂ ಕಡೆಗೆ ತೆರಳುತ್ತಿದ್ದ ಲಾರಿ ನಸುಕಿನಲ್ಲಿ ರಸ್ತೆ ಬದಿ ಮಲಗಿದ್ದ ಅಲೆಮಾರಿ ಕುಟುಂಬಸ್ಥರ ಮೇಲೆ ನುಗ್ಗಿದೆ. ಘಟನೆಯಲ್ಲಿ ಕಾಳಿಯಪ್ಪನ್(50), ನಾಗಮ್ಮ(39), ಬಂಗಾಯಿ(28), ಜೀವನ್ (4) ಮತ್ತು ಇನ್ನೊಂದು ಮಗು ಮೃತಪಟ್ಟಿದೆ. ಗಾಯಗೊಂಡ ಮೂವರ ಸ್ಥಿತಿ ಚಿಂತಾಜನಕವಾಗಿದೆ. ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಡೈವರ್ಶನ್ ಬೋರ್ಡ್ ಕಾಣಿಸದೆ ಲಾರಿ ಚಾಲಕ ನೇರವಾಗಿ ನುಗ್ಗಿಸಿದ್ದಾನೆ. ಚಾಲಕ ಮತ್ತು ಕ್ಲೀನರ್ ಮದ್ಯ ಸೇವಿಸಿದ್ದು, ಘಟನೆ ಸಂದರ್ಭದಲ್ಲಿ ಕ್ಲೀನರ್ ಲಾರಿ ಚಲಾಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಟಿಂಬರ್ ಲಾರಿ ಚಾಲಕ ಕಣ್ಣೂರು ಆಲಂಗೋಡ್ ನಿವಾಸಿ ಜೋಸ್ (54) ಮತ್ತು ಕ್ಲೀನರ್ ಅಲೆಕ್ಸ್ (35) ಅವರನ್ನು ಬಂಧಿಸಲಾಗಿದೆ. ಲಾರಿ ಚಾಲಕ ಮತ್ತು ಕ್ಲೀನರ್ ಪ್ರಯಾಣದುದ್ದಕ್ಕೂ ಮದ್ಯ ಸೇವಿಸುತ್ತ ಬಂದಿದ್ದರು. ಅತಿಯಾದ ಮದ್ಯ ಸೇವನೆ ತಪಾಸಣೆ ವೇಳೆ ಪತ್ತೆಯಾಗಿದೆ. ಇದಕ್ಕಾಗಿ ಇವರ ಮೇಲೆ ಉದ್ದೇಶಪೂರ್ವಕ ಕೊಲೆ ಎನ್ನುವ ನೆಲೆಯಲ್ಲಿ ಕೇಸು ದಾಖಲಿಸಲಾಗಿದೆ. ಪೊನ್ನಾನಿಯಿಂದ ಕ್ಲೀನರ್ ಅಲೆಕ್ಸ್ ಲಾರಿ ಚಲಾಯಿಸಿದ್ದು, ಆತನಲ್ಲಿ ಡ್ರೈವಿಂಗ್ ಲೈಸನ್ಸ್ ಇಲ್ಲ. ಡಿವೈಡರ್ ಮತ್ತು ಬ್ಯಾರಿಕೇಡ್ ನೋಡದೆ ಲಾರಿ ಚಲಾಯಿಸಿದ್ದು, 50 ಮೀಟರ್ ಮುನ್ನುಗ್ಗಿ ಬಂದ ಮೇಲೆ ರಸ್ತೆ ಬದಿ ಮಲಗಿದ್ದವರ ಮೇಲೆ ಹಾಯಿಸಿದ್ದಾನೆ. ಸಾರಿಗೆ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ.
In a tragic incident at Nattika in Thrissur district, a lorry carrying timber lost control and rammed into a group of people who were sleeping, killing five of them, including two children. The accident took place around 4 a.m. on Tuesday (November 26, 2024).
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
06-10-25 02:58 pm
Mangalore Correspondent
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm