ಬ್ರೇಕಿಂಗ್ ನ್ಯೂಸ್
28-10-24 08:38 pm HK News Desk ದೇಶ - ವಿದೇಶ
ಎರ್ನಾಕುಲಂ, ಅ.28: ಕೇರಳದಲ್ಲಿ ಅಡುಗೆ ಸಂಬಂಧಿತ ಯೂಟ್ಯೂಬರ್ ಆಗಿ ಹೆಸರು ಮಾಡಿದ್ದ ದಂಪತಿ ದಿಢೀರ್ ಸಾವಿಗೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಎರ್ನಾಕುಲಂ ಜಿಲ್ಲೆಯ ಪರಶ್ಶಲಾ ಗ್ರಾಮದಲ್ಲಿ ನಡೆದಿದೆ. ಸೆಲ್ಲು ಫ್ಯಾಮಿಲಿ ಹೆಸರಿನ ಯೂಟ್ಯೂಬ್ ನಡೆಸುತ್ತಿದ್ದ ಪ್ರಿಯಾ (38) ಮತ್ತು ಆಕೆಯ ಪತಿ ಸೆಲ್ವರಾಜ್ (45) ಮೃತರು.
ದಂಪತಿಯ ಮಗ ಎರ್ನಾಕುಲಂನಲ್ಲಿ ನರ್ಸಿಂಗ್ ಓದುತ್ತಿದ್ದು, ಶುಕ್ರವಾರ ರಾತ್ರಿ ಫೋನಲ್ಲಿ ಮಾತನಾಡಿದ್ದ. ಮರುದಿನ ಫೋನ್ ರಿಸೀವ್ ಮಾಡುತ್ತಿರಲಿಲ್ಲ. ಹೀಗಾಗಿ ಶನಿವಾರ ಸಂಜೆಯ ವೇಳೆಗೆ ಮಗ ಮನೆಗೆ ಆಗಮಿಸಿದ್ದು, ತಾಯಿ ಪ್ರಿಯಾ ಬೆಡ್ ನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿದ್ದರೆ, ತಂದೆ ನೇಣಿಗೆ ಶರಣಾಗಿರುವ ರೀತಿ ಪತ್ತೆಯಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸೆಲ್ಲು ಫ್ಯಾಮಿಲಿ ಹೆಸರಿನ ಯೂಟ್ಯೂಬ್ ನಲ್ಲಿ ದಿನವೂ ಇವರು ವಿಡಿಯೋ ಅಪ್ಲೋಡ್ ಮಾಡುತ್ತಿದ್ದರು. ಶುಕ್ರವಾರ ರಾತ್ರಿ 9 ಗಂಟೆಗೆ 55 ಸೆಕೆಂಡಿನ ವಿಡಿಯೋ ಹಾಕಿದ್ದು, ಅದರಲ್ಲಿ ಸಾವಿನ ಕಡೆಗೆ ಅಂತಿಮ ಯಾತ್ರೆ ಎನ್ನುವ ಅರ್ಥವುಳ್ಳ ಸಾಲುಗಳ ಸಾಂಗ್ ಬಳಸಿದ್ದರು. ಹೀಗಾಗಿ ಇವರು ಮೊದಲೇ ಸಾವಿಗೆ ಶರಣಾಗುವ ಬಗ್ಗೆ ಪ್ಲಾನ್ ಮಾಡಿಕೊಂಡಿದ್ದರೇ ಅನ್ನುವ ಅನುಮಾನ ಬಂದಿದೆ. ಪರಿಸರದ ನಿವಾಸಿಗಳು ಇವರ ದಿಢೀರ್ ಸಾವಿನ ಬಗ್ಗೆ ಅಚ್ಚರಿಗೊಂಡಿದ್ದಾರೆ. ಮನೆಗೆ ಮಕ್ಕಳು ಬಿಟ್ಟರೆ, ಪ್ರಿಯಾ ತಾಯಿ ಮಾತ್ರ ಬರುತ್ತಿದ್ದರು. ವರ್ಷದ ಹಿಂದೆ ಮಗಳಿಗೆ ಮದುವೆಯಾಗಿತ್ತು. ಮನೆಯಲ್ಲಿ ಇಬ್ಬರೇ ಹೆಚ್ಚಾಗಿ ಇರುತ್ತಿದ್ದರು. ಮನೆ ಕಟ್ಟುವುದಕ್ಕಾಗಿ ಜಾಗ ಖರೀದಿಯನ್ನೂ ಮಾಡಿದ್ದರು ಎಂದು ಸ್ಥಳೀಯರು ಮನೋರಮಾ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಪ್ರಿಯಾ ಹಿಂದೆ ಕುಟುಂಬಶ್ರೀಯಲ್ಲಿ ಸಕ್ರಿಯವಾಗಿದ್ದರು. ಆನಂತರ, ಅದನ್ನು ಬಿಟ್ಟು ಯೂಟ್ಯೂಬಲ್ಲಿ ಮಾತ್ರ ಸಕ್ರಿಯವಾಗಿದ್ದರು. ಸಾಮಾಜಿಕವಾಗಿ ಹೆಚ್ಚು ಬೆರೆಯುತ್ತಿರಲಿಲ್ಲ. ಈಕೆಯ ಪತಿ ಸೆಲ್ವರಾಜ್ ಮೇಸ್ತ್ರಿಯಾಗಿದ್ದು, ಸ್ಥಳೀಯರ ಜೊತೆಗೆ ಮಾತ್ರ ಬೆರೆಯುತ್ತಿದ್ದರು. ಸಂಬಂಧಿಕರ ಜೊತೆಗೆ ಹೆಚ್ಚು ಬೆರೆಯುತ್ತಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
A couple, who ran a YouTube channel, was found dead at their residence in Kerala's Parassala town on Sunday, with the police suspecting it as a case of death by suicide. The incident came to light after their neighbours, who noticed an unusual absence, alerted the police.
13-12-25 10:47 pm
HK News Desk
ಕುರ್ಚಿ ಗುದ್ದಾಟ ; ಪರಮೇಶ್ವರ್ ಸಿಎಂ ಆಗಲೆಂದು ಹಾರೈಸ...
13-12-25 08:38 pm
BJP MLA Subhash Guttedar: ಅಳಂದ ಮತಗಳವು ಪ್ರಕರಣ...
13-12-25 04:00 pm
Pet Parrot, Bangalore Youth Death: 2 ಲಕ್ಷ ರೂ....
12-12-25 08:47 pm
Yatnal, Dk Shivakumar, Vijayendra: ಡಿಕೆ ಸಿಎಂ,...
12-12-25 07:47 pm
13-12-25 08:34 pm
HK News Desk
ಕಾರ್ತಿಗೈ ದೀಪೋತ್ಸವ ವಿವಾದ ; ಮಸೀದಿಯವರೇ ಆಕ್ಷೇಪಿಸಿ...
12-12-25 11:00 pm
ಮೋದಿ ಉತ್ತರಾಧಿಕಾರಿ ಯಾರು ? ಆರೆಸ್ಸೆಸ್ ನಿರ್ಧರಿಸುತ...
11-12-25 04:24 pm
ಮಂಗಳೂರು ಏರ್ಪೋರ್ಟ್ಗೆ ವಿದೇಶಿ ನೇರ ವಿಮಾನ ವ್ಯವಸ್...
11-12-25 02:09 pm
ತಮಿಳುನಾಡಿನಲ್ಲಿ ಕಾರ್ತಿಗೈ ದೀಪಕ್ಕೆ ಹೈಕೋರ್ಟ್ ಅನುಮ...
10-12-25 11:13 pm
13-12-25 11:02 pm
Mangalore Correspondent
ಕೆಂಜಾರು ಬಳಿ ಗೋವುಗಳನ್ನು ಕಡಿದು ಹತ್ಯೆ ; ಪೊದೆಯಲ್ಲ...
13-12-25 04:36 pm
ಸತತ ನಾಲ್ಕು ಗಂಟೆ ಸ್ಕೇಟಿಂಗ್ ನಲ್ಲಿ ಶಾಸ್ತ್ರೀಯ ನೃತ...
12-12-25 10:28 pm
ದೈವ ನರ್ತನದ ಬಗ್ಗೆ ನಮಗೆ ಸಂಶಯಗಳಿಲ್ಲ, ಗ್ರಾಮ ದೈವಕ್...
12-12-25 07:32 pm
ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧ ಪೂರೈಕೆ ; ಅಧಿಕ...
12-12-25 02:02 pm
13-12-25 12:51 pm
HK News Desk
ಹಣ್ಣಿನ ವ್ಯಾಪಾರಿಯನ್ನು ಅಡ್ಡಗಟ್ಟಿ 19 ಸಾವಿರ ನಗದು...
12-12-25 01:58 pm
Hassan Crime, Murder: ಸ್ನೇಹಿತನನ್ನು ಪಾರ್ಟಿಗೆ ಕ...
11-12-25 09:53 pm
Bangalore Crime, Blackmail, Suicide: ಬೆತ್ತಲೆ...
11-12-25 07:49 pm
Imprisonment in Malpe Case: ಮಲ್ಪೆಯಲ್ಲಿ ನೆಲೆಸಿ...
10-12-25 10:14 pm