ಬ್ರೇಕಿಂಗ್ ನ್ಯೂಸ್
28-10-24 08:38 pm HK News Desk ದೇಶ - ವಿದೇಶ
ಎರ್ನಾಕುಲಂ, ಅ.28: ಕೇರಳದಲ್ಲಿ ಅಡುಗೆ ಸಂಬಂಧಿತ ಯೂಟ್ಯೂಬರ್ ಆಗಿ ಹೆಸರು ಮಾಡಿದ್ದ ದಂಪತಿ ದಿಢೀರ್ ಸಾವಿಗೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಎರ್ನಾಕುಲಂ ಜಿಲ್ಲೆಯ ಪರಶ್ಶಲಾ ಗ್ರಾಮದಲ್ಲಿ ನಡೆದಿದೆ. ಸೆಲ್ಲು ಫ್ಯಾಮಿಲಿ ಹೆಸರಿನ ಯೂಟ್ಯೂಬ್ ನಡೆಸುತ್ತಿದ್ದ ಪ್ರಿಯಾ (38) ಮತ್ತು ಆಕೆಯ ಪತಿ ಸೆಲ್ವರಾಜ್ (45) ಮೃತರು.
ದಂಪತಿಯ ಮಗ ಎರ್ನಾಕುಲಂನಲ್ಲಿ ನರ್ಸಿಂಗ್ ಓದುತ್ತಿದ್ದು, ಶುಕ್ರವಾರ ರಾತ್ರಿ ಫೋನಲ್ಲಿ ಮಾತನಾಡಿದ್ದ. ಮರುದಿನ ಫೋನ್ ರಿಸೀವ್ ಮಾಡುತ್ತಿರಲಿಲ್ಲ. ಹೀಗಾಗಿ ಶನಿವಾರ ಸಂಜೆಯ ವೇಳೆಗೆ ಮಗ ಮನೆಗೆ ಆಗಮಿಸಿದ್ದು, ತಾಯಿ ಪ್ರಿಯಾ ಬೆಡ್ ನಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿದ್ದರೆ, ತಂದೆ ನೇಣಿಗೆ ಶರಣಾಗಿರುವ ರೀತಿ ಪತ್ತೆಯಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸೆಲ್ಲು ಫ್ಯಾಮಿಲಿ ಹೆಸರಿನ ಯೂಟ್ಯೂಬ್ ನಲ್ಲಿ ದಿನವೂ ಇವರು ವಿಡಿಯೋ ಅಪ್ಲೋಡ್ ಮಾಡುತ್ತಿದ್ದರು. ಶುಕ್ರವಾರ ರಾತ್ರಿ 9 ಗಂಟೆಗೆ 55 ಸೆಕೆಂಡಿನ ವಿಡಿಯೋ ಹಾಕಿದ್ದು, ಅದರಲ್ಲಿ ಸಾವಿನ ಕಡೆಗೆ ಅಂತಿಮ ಯಾತ್ರೆ ಎನ್ನುವ ಅರ್ಥವುಳ್ಳ ಸಾಲುಗಳ ಸಾಂಗ್ ಬಳಸಿದ್ದರು. ಹೀಗಾಗಿ ಇವರು ಮೊದಲೇ ಸಾವಿಗೆ ಶರಣಾಗುವ ಬಗ್ಗೆ ಪ್ಲಾನ್ ಮಾಡಿಕೊಂಡಿದ್ದರೇ ಅನ್ನುವ ಅನುಮಾನ ಬಂದಿದೆ. ಪರಿಸರದ ನಿವಾಸಿಗಳು ಇವರ ದಿಢೀರ್ ಸಾವಿನ ಬಗ್ಗೆ ಅಚ್ಚರಿಗೊಂಡಿದ್ದಾರೆ. ಮನೆಗೆ ಮಕ್ಕಳು ಬಿಟ್ಟರೆ, ಪ್ರಿಯಾ ತಾಯಿ ಮಾತ್ರ ಬರುತ್ತಿದ್ದರು. ವರ್ಷದ ಹಿಂದೆ ಮಗಳಿಗೆ ಮದುವೆಯಾಗಿತ್ತು. ಮನೆಯಲ್ಲಿ ಇಬ್ಬರೇ ಹೆಚ್ಚಾಗಿ ಇರುತ್ತಿದ್ದರು. ಮನೆ ಕಟ್ಟುವುದಕ್ಕಾಗಿ ಜಾಗ ಖರೀದಿಯನ್ನೂ ಮಾಡಿದ್ದರು ಎಂದು ಸ್ಥಳೀಯರು ಮನೋರಮಾ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಪ್ರಿಯಾ ಹಿಂದೆ ಕುಟುಂಬಶ್ರೀಯಲ್ಲಿ ಸಕ್ರಿಯವಾಗಿದ್ದರು. ಆನಂತರ, ಅದನ್ನು ಬಿಟ್ಟು ಯೂಟ್ಯೂಬಲ್ಲಿ ಮಾತ್ರ ಸಕ್ರಿಯವಾಗಿದ್ದರು. ಸಾಮಾಜಿಕವಾಗಿ ಹೆಚ್ಚು ಬೆರೆಯುತ್ತಿರಲಿಲ್ಲ. ಈಕೆಯ ಪತಿ ಸೆಲ್ವರಾಜ್ ಮೇಸ್ತ್ರಿಯಾಗಿದ್ದು, ಸ್ಥಳೀಯರ ಜೊತೆಗೆ ಮಾತ್ರ ಬೆರೆಯುತ್ತಿದ್ದರು. ಸಂಬಂಧಿಕರ ಜೊತೆಗೆ ಹೆಚ್ಚು ಬೆರೆಯುತ್ತಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
A couple, who ran a YouTube channel, was found dead at their residence in Kerala's Parassala town on Sunday, with the police suspecting it as a case of death by suicide. The incident came to light after their neighbours, who noticed an unusual absence, alerted the police.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am