ಬ್ರೇಕಿಂಗ್ ನ್ಯೂಸ್
22-08-24 09:58 pm HK News Desk ದೇಶ - ವಿದೇಶ
ನವದಹೆಲಿ, ಆಗಸ್ಟ್ 22: ಬಾಂಗ್ಲಾ ಕುರಿತು ಅಣಕಿಸಿ ಸುದ್ದಿ ಮಾಡಿದ್ದಕ್ಕಾಗಿ ಜೀ ನ್ಯೂಸ್ ಮೀಡಿಯಾ ವೆಬ್ ಸೈಟನ್ನು ಹ್ಯಾಕ್ ಮಾಡಲಾಗಿದೆ. ಬಾಂಗ್ಲಾದೇಶ ಪರವಾದ ಹ್ಯಾಕರ್ ಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ.
ಗೂಗಲ್ ನಲ್ಲಿ ಜೀ ಮೀಡಿಯಾ ನ್ಯೂಸ್ ವೆಬ್ ಸರ್ಚ್ ಮಾಡಿದರೆ, ‘’Hacked by SYSTEMADMINBD’’ ಎಂಬುದಾಗಿ ಪೇಜ್ ತೆರೆದುಕೊಳ್ಳುತ್ತದೆ. ಬಾಂಗ್ಲಾದೇಶದ ಬಗ್ಗೆ ಅಣಕಿಸಿ ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ ಜೀ ಮೀಡಿಯಾ ಸೈಟ್ ಅನ್ನು ಹ್ಯಾಕ್ ಮಾಡಿದ್ದೇವೆ. ಇವರು ಇದೇ ರೀತಿಯ ಕುಹಕತನ ಮುಂದುವರಿಸಿದರೆ, ಅವರ ಸುದ್ದಿ ಚಾನೆಲನ್ನೇ ಮುಗಿಸುತ್ತೇವೆ ಎಂದು ಅದೇ ಪುಟದಲ್ಲಿ ಬೆದರಿಕೆ ಒಡ್ಡಲಾಗಿದೆ.
2024ರ ಆಗಸ್ಟ್ 21ರಂದು ವೆಬ್ ಹ್ಯಾಕ್ ಆಗಿರುವುದನ್ನು ತೋರಿಸುತ್ತಿದ್ದು, ಅದರಲ್ಲಿ ಜೀ ಟಿವಿ ಬಾಂಗ್ಲಾ ನ್ಯೂಸ್ ನಲ್ಲಿ ನೀಡಲಾಗಿರುವ ಹೆಡ್ ಲೈನಿನ ಸ್ಕ್ರೀನ್ ಶಾಟ್ ಕೊಡಲಾಗಿದೆ. India left the water, Bangladesh is floating ಎಂದು ಕೊಡಲಾಗಿದ್ದ ಸುದ್ದಿ ಹೆಡಿಂಗನ್ನು ಇವರು ಆಕ್ಷೇಪಿಸಿದ್ದಾರೆ. ಆ ಸುದ್ದಿಯಲ್ಲಿ ಭಾರತದ ಕಡೆಯಿಂದ ನೀರು ಬಿಡಲಾಗಿದ್ದು, ಡಾಂಬೂರ್ ಅಣೆಕಟ್ಟು ಪ್ರಾಜೆಕ್ಟ್ ನಲ್ಲಿ ನೀರನ್ನು ಭಾರೀ ಪ್ರಮಾಣದಲ್ಲಿ ಹೊರಕ್ಕೆ ಬಿಡಲಾಗಿದೆ. ಇದರಿಂದಾಗಿ ಬಾಂಗ್ಲಾನ್ನರು ನೀರಿನಲ್ಲಿ ಮುಳುಗಲಿದ್ದಾರೆ ಎಂದು ಬರೆಯಲಾಗಿತ್ತು.
SYSTEMADMINBD ಎನ್ನುವ ಹ್ಯಾಕರ್ಸ್ ತಂಡ 2023ರಲ್ಲಿ ಕಾರ್ಯಾಚರಣೆಯಲ್ಲಿದ್ದು, ಇಸ್ರೇಲ್, ಭಾರತ, ಬಾಂಗ್ಲಾಕ್ಕೆ ಸಂಬಂಧಪಟ್ಟ ಉದ್ಯಮಗಳು, ಸರಕಾರಿ ಒಡೆತನದ ಕಂಪನಿಗಳ ವೆಬ್ ಗಳನ್ನು ಹ್ಯಾಕ್ ಮಾಡುತ್ತಿದ್ದಾರೆ. ಯುರೋಪ್ ದೇಶಗಳಲ್ಲಿಯೂ ಇವರ ಹಾವಳಿ ಇದೆ. ಇದೇ ಮೊದಲ ಬಾರಿಗೆ ಭಾರತದ ಬಹುದೊಡ್ಡ ಮಾಧ್ಯಮ ಸಂಸ್ಥೆಯ ವೆಬ್ ಸೈಟನ್ನೇ ಹ್ಯಾಕ್ ಮಾಡಿದೆ.
The official website of Zee Media Corporation has been hacked and defaced allegedly by a Bangladeshi hackers group, as claimed in a message displayed on the homepage of the website.
13-08-25 07:03 pm
Bangalore Correspondent
ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ, ರಾಹುಲ್ ಗಾಂಧಿ...
12-08-25 10:39 pm
Rajendra Swamiji of Kodimath, Dharmasthala: ಧ...
12-08-25 07:43 pm
ಕೆಎನ್ ರಾಜಣ್ಣ ರಾಜಿನಾಮೆ ಅಲ್ಲ, ಸಚಿವ ಸ್ಥಾನದಿಂದ ಕಿ...
11-08-25 11:01 pm
ರಾಜ್ಯಪಾಲರ ವಿರುದ್ಧ ಅವಹೇಳನ ಹೇಳಿಕೆ ; ಐವಾನ್ ಡಿಸೋಜ...
11-08-25 10:26 pm
13-08-25 11:56 am
HK News Desk
ಪುಣ್ಯಕ್ಷೇತ್ರ ಯಾತ್ರೆ ಹೊರಟವರ ಮೇಲೆರಗಿದ ಜವರಾಯ ; ರ...
13-08-25 10:41 am
'ದೇಶ ಸುರಕ್ಷಿತ ಕೈಯಲ್ಲಿದೆ' ; ನರೇಂದ್ರ ಮೋದಿ ಸರ್ಕ...
12-08-25 02:49 pm
ಕಾಶ್ಮೀರಿ ಪಂಡಿತರ ಗುರಿಯಾಗಿಸಿ ಮಾರಣಹೋಮ ; 35 ವರ್ಷಗ...
12-08-25 11:42 am
ಕರ್ನಾಟಕ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಾರ್ವತ್ರಿ...
12-08-25 11:35 am
13-08-25 10:22 pm
Mangalore Correspondent
Dharmasthala News Today, Point No 13: ಕಡೆಗೂ ಪ...
13-08-25 10:01 pm
The Ocean Pearl Brings “Flavors of India” to...
13-08-25 08:23 pm
ಹಠಾತ್ ಕುಸಿದು ಬಿದ್ದು ಕಾಲೇಜು ಬಸ್ ನಿರ್ವಾಹಕ ಸಾವು...
13-08-25 01:49 pm
ಶವ ಹೂತ ಪ್ರಕರಣ ; ಕೊನೆಗೂ ಎಂಟ್ರಿಯಾದ ರಾಷ್ಟ್ರೀಯ ಮಾ...
13-08-25 10:37 am
13-08-25 05:40 pm
Udupi Correspondent
Fraud, Laxmi Hebbalkar: ಸಚಿವೆ ಲಕ್ಷ್ಮೀ ಹೆಬ್ಬಾಳ...
13-08-25 04:14 pm
ಅನೈತಿಕ ಸಂಬಂಧ ಶಂಕೆ ; ಅತ್ತೆ ಮೇಲಿನ ದ್ವೇಷದಿಂದ ಕೊಲ...
12-08-25 12:36 pm
Mangalore Digital Arrest, Fraud: ಚೀನಾಕ್ಕೆ ಡ್ರ...
11-08-25 12:37 pm
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm