ಬ್ರೇಕಿಂಗ್ ನ್ಯೂಸ್
08-08-24 07:44 pm HK News Desk ದೇಶ - ವಿದೇಶ
ನವದೆಹಲಿ, ಆಗಸ್ಟ್ 8: ಬಾಂಗ್ಲಾ ರಾಜಧಾನಿಯಲ್ಲಿ ಹಿಂಸಾಚಾರ ಭುಗಿಲೆದ್ದು ಪ್ರಧಾನಿ ನಿವಾಸಕ್ಕೆ ಪ್ರತಿಭಟನಾಕಾರರು ನುಗ್ಗುತ್ತಾರೆ ಎಂದು ತಿಳಿಯುತ್ತಲೇ ಆರ್ಮಿಯಿಂದ ಪ್ರಧಾನಿ ಶೇಖ್ ಹಸೀನಾ ಅವರು ದೇಶ ತೊರೆಯುವುದಕ್ಕೆ ಕೇವಲ 45 ನಿಮಿಷ ನೀಡಲಾಗಿತ್ತು. ಇದರಿಂದಾಗಿ ಶಾಕ್ ಆಗಿದ್ದ ಶೇಖ್ ಹಸೀನಾ ಏನು ಮಾಡುವುದೆಂದು ತೋಚದೆ ತನ್ನ ಬಟ್ಟೆಬರೆ, ಇನ್ನಿತರ ಅಗತ್ಯ ವಸ್ತುಗಳನ್ನೆಲ್ಲ ಬಿಟ್ಟು ಉಟ್ಟ ಬಟ್ಟೆಯಲ್ಲೇ ದೇಶ ತೊರೆದಿದ್ದರು ಎಂದು ಮೂಲಗಳನ್ನು ಉಲ್ಲೇಖಿಸಿ ಇಂಡಿಯಾ ಟುಡೇ ವರದಿ ಮಾಡಿದೆ.
ಆರ್ಮಿ ಸೂಚನೆ ಸಿಗುತ್ತಲೇ ತನ್ನ ಸೋದರಿ ಶೇಖ್ ರೆಹನಾ ಮತ್ತು ಇತರ ಆಪ್ತರ ಜೊತೆಗೆ ದೇಶ ತೊರೆದು ಸೇನೆಯ ಹೆಲಿಕಾಪ್ಟರ್ ನಲ್ಲಿ ನೇರವಾಗಿ ಭಾರತಕ್ಕೆ ಬಂದಿದ್ದರು. ಈ ನಡುವೆ, ಇಂಗ್ಲೆಂಡ್ ಗೆ ಹಾರಲು ಅಲ್ಲಿನ ಸರಕಾರದ ಅನುಮತಿ ಕೇಳಿದ್ದರು. ಆದರೆ, ಅವಕಾಶ ಸಿಗದೇ ಇದ್ದುದರಿಂದ ಭಾರತದ ಗಾಜಿಯಾಬಾದ್ ನಲ್ಲಿರುವ ವಾಯುನೆಲೆಗೆ ಬಂದು ಇಳಿದಿದ್ದರು. ಪ್ರಧಾನಿ ನಿವಾಸಕ್ಕೆ ಪ್ರತಿಭಟನಾಕಾರರು ನುಗ್ಗುತ್ತಾರೆಂಬ ಭಯದಲ್ಲಿ ಶೇಖ್ ಹಸೀನಾ ಮತ್ತು ಜೊತೆಗಿದ್ದವರು ಗಡಿಬಿಡಿಯಲ್ಲೇ ದೇಶ ತೊರೆದಿದ್ದರು ಎಂದು ಮೂಲಗಳು ತಿಳಿಸಿವೆ.
ಗಾಜಿಯಾಬಾದ್ ವಾಯುನೆಲೆ ಬಳಿಯಲ್ಲೇ ಭಾರತೀಯ ಸೇನೆಯ ಭದ್ರತೆಯಲ್ಲಿ ಶೇಖ್ ಹಸೀನಾ ಉಳಿದುಕೊಂಡಿದ್ದಾರೆ. 48 ಗಂಟೆಯ ಬಳಿಕ ಹಸೀನಾ ಅವರಿಗಾಗಿ ಬಟ್ಟೆ, ಇನ್ನಿತರ ಡೈಲೀ ಬಳಕೆಯ ವಸ್ತುಗಳನ್ನು ಜೊತೆಗೆ ಬಂದಿದ್ದ ಪ್ರೋಟೋಕಾಲ್ ಸಿಬಂದಿ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಖರೀದಿಸಿದ್ದಾರೆ. ಹಸೀನಾ ಬೇರೆ ದೇಶಕ್ಕೆ ತೆರಳುವ ತನಕವೂ ಭಾರತದಲ್ಲಿ ಭದ್ರತೆ ನೀಡುವುದಕ್ಕೆ ಕೇಂದ್ರ ಸರಕಾರ ಒಪ್ಪಿದೆ. ಅಲ್ಲದೆ, ಆಗಿರುವ ಶಾಕ್ ನಿಂದ ಹೊರಬರಲು ಮತ್ತು ಒತ್ತಡ ನಿವಾರಿಸಿಕೊಳ್ಳಲು ಭಾರತೀಯ ಸೆಕ್ಯುರಿಟಿ ಸಿಬಂದಿಯೂ ಸಹಕಾರ ನೀಡಿದ್ದಾರೆ.
ಇತ್ತ ಇಂಗ್ಲೆಂಡ್ ಸರಕಾರ ಶೇಖ್ ಹಸೀನಾ ತಮ್ಮಲ್ಲಿಗೆ ಬರುವುದಕ್ಕೆ ಅನುಮತಿ ನೀಡಿಲ್ಲ. ಶೇಖ್ ಹಸೀನಾ ಅವರ ಪುತ್ರ ಸೇರಿದಂತೆ ಕುಟುಂಬಸ್ಥರು ಅಲ್ಲಿ ನೆಲೆಸಿದ್ದರೂ, ಬಾಂಗ್ಲಾದಿಂದ ತಪ್ಪಿಸಿಕೊಂಡು ಬಂದಿರುವ ಶೇಖ್ ಹಸೀನಾಗೆ ಆಶ್ರಯ ನೀಡಲು ನಿರಾಕರಣೆ ಮಾಡಿದೆ. ಹೀಗಾಗಿ ತ್ರಿಶಂಕು ಸ್ಥಿತಿಯಲ್ಲಿರುವ ಹಸೀನಾ ಯುರೋಪ್ ಖಂಡದ ಬೇರಾವುದೇ ದೇಶಕ್ಕೆ ತೆರಳುವುದಕ್ಕೆ ಮುಂದಾಗಿದ್ದಾರೆ. ಫಿನ್ಲೆಂಡ್ ನಲ್ಲಿಯೂ ಶೇಖ್ ಹಸೀನಾ ಕುಟುಂಬಸ್ಥರು ನೆಲೆಸಿದ್ದು, ಅಲ್ಲಿ ತೆರಳುವ ಸಾಧ್ಯತೆಯೂ ಇದೆ. ಇದೇ ವೇಳೆ, ಬಾಂಗ್ಲಾದಲ್ಲಿ ಹಂಗಾಮಿ ಸರಕಾರ ನಡೆಸಲು ಕಸರತ್ತು ನಡೆದಿದ್ದು ಹಂಗಾಮಿ ಮುಖ್ಯಸ್ಥರಾಗಿರುವ ಮೊಹಮ್ಮದ್ ಯೂನಿ
Former Bangladesh Prime Minister Sheikh Hasina and her team, who reached India on Monday fleeing a violent uprising against her Awami League government, could not even carry extra clothes or daily use items, government sources.
17-06-25 05:35 pm
Bangalore Correspondent
Dk Shivakumar, Plan Crash: ವಿಮಾನ ದುರಂತ ; ಬಿಜೆ...
16-06-25 10:44 pm
Judge Heart Attack, Kalaburagi Court: ನ್ಯಾಯಾಲ...
16-06-25 02:56 pm
ಎರಡೇ ವರ್ಷಗಳಲ್ಲಿ ಬೆಂಗಳೂರಿನ ಶಾಸಕರ ಆದಾಯ ವಿಪರೀತ ಹ...
15-06-25 09:29 pm
Lokayukta, Crypto Firms, Notice: ಲೋಕಾಯುಕ್ತ ಹೆ...
14-06-25 11:05 pm
18-06-25 09:54 pm
HK News Desk
ಖಾಸಗಿ ವಾಹನಗಳಿಗೆ ಫಾಸ್ಟ್ ಟ್ಯಾಗ್ ಮತ್ತಷ್ಟು ಸುಲಭ ;...
18-06-25 08:49 pm
NHAI, Kasaragod: ಕಾಸರಗೋಡು– ಕಣ್ಣೂರು ಮಧ್ಯೆ ಹೆದ್...
18-06-25 04:09 pm
ಕೊಲೆಗಡುಕ, ಬ್ಲಡಿ ಬಾಸ್ಟರ್ಡ್.. ಪಾಕ್ ಸೇನಾ ಮುಖ್ಯಸ್...
18-06-25 01:29 pm
ಇಸ್ರೇಲ್ ದಾಳಿಗೆ ಕಂಗೆಟ್ಟ ಟೆಹ್ರಾನ್ ; ಯುದ್ಧ ನಿಲ್ಲ...
17-06-25 11:02 pm
18-06-25 06:38 pm
Mangalore Correspondent
NHRC, Dakshina Kannada, MLA Bharath Shetty: ಹ...
18-06-25 02:10 pm
Mangalore Accident, Jeppinamogaru, Aman Rao,...
18-06-25 10:24 am
Mangalore DC Mullai Muhilan Transferred, Dars...
17-06-25 09:57 pm
Mangalore Jail Jammer: ಜೈಲಿನ ಜಾಮರ್ ಸಮಸ್ಯೆಗೆ ದ...
17-06-25 08:17 pm
17-06-25 05:06 pm
Bangalore Correspondent
Kolar ATM Robbery: ಕರ್ನಾಟಕದಲ್ಲಿ ಹೆಚ್ಚುತ್ತಿರುವ...
17-06-25 12:10 pm
Fake Currency Racket, Shivamogga: ಖೋಟಾ ನೋಟು ಚ...
16-06-25 03:05 pm
Bangalore Crime, House Maid, Chamrajpet: ಕೆಲಸ...
14-06-25 11:02 pm
Lokayukta Corruption, Bengaluru SP Srinath Jo...
14-06-25 05:59 pm