ಬ್ರೇಕಿಂಗ್ ನ್ಯೂಸ್
30-07-24 02:25 pm HK News Desk ದೇಶ - ವಿದೇಶ
ನವದೆಹಲಿ, ಜುಲೈ.30: ಮುಂಬೈ ಮೂಲದ 16 ವರ್ಷದ ಈಜುಪಟು ಜಿಯಾ ರೈ ಇಂಗ್ಲೆಂಡ್ ಮತ್ತು ಫ್ರಾನ್ಸ್ ಮಧ್ಯೆ ಇರುವ 34 ಕಿಮೀ ಉದ್ದದ ಕಡಲ್ಗಾಲುವೆಯನ್ನು ಅತಿ ವೇಗದಲ್ಲಿ ಈಜಿ ದಡ ಸೇರುವ ಮೂಲಕ ವಿಶ್ವದಾಖಲೆ ಮಾಡಿದ್ದಾರೆ. ಜುಲೈ 28-29ರಂದು 17 ಗಂಟೆ 25 ನಿಮಿಷಗಳಲ್ಲಿ ಜಿಯಾ ಈ ಸಾಧನೆ ಮಾಡಿದ್ದು, ಕಡಲ್ಗಾಲುವೆ ದಾಟಿದ ಅತಿ ವೇಗದ ಮತ್ತು ಅತಿ ಕಿರಿಯ ಪ್ಯಾರಾ ಸ್ವಿಮ್ಮರ್ ಎಂಬ ದಾಖಲೆ ಸೇರಿದ್ದಾರೆ.
ಆಟಿಸಮ್ ಎನ್ನುವ ನರಸಂಬಂಧೀ ಕಾಯಿಲೆ ಎದುರಿಸುತ್ತಿರುವ ಜಿಯಾ ರೈ ಮುಂಬೈನಲ್ಲಿ ನೌಕಾಪಡೆ ಉದ್ಯೋಗಿಯಾಗಿರುವ ಮದನ್ ರೈ ಅವರ ಪುತ್ರಿ. ಅತಿ ಕಿರಿಯ ವಯಸ್ಸಿನಲ್ಲೇ ವಿಶ್ವ ದಾಖಲೆ ಮಾಡಿರುವ ಜಿಯಾ ಅವರನ್ನು ಪಶ್ಚಿಮ ನೌಕಾಪಡೆಯ ಕಮಾಂಡ್ ವತಿಯಿಂದ ಅಭಿನಂದಿಸಿ ಟ್ವಿಟರ್ ನಲ್ಲಿ ಪೋಸ್ಟ್ ಮಾಡಲಾಗಿದೆ.

![]()


ಈ ಹಿಂದೆ ಭಾರತ ಮತ್ತು ಶ್ರೀಲಂಕಾ ಮಧ್ಯೆ ಇರುವ ಪಾಕ್ ಸ್ಟ್ರೈಟ್ (ರಾಮಸೇತು ಇರುವ ಪ್ರದೇಶ) ಕಡಲ್ಗಾಲುವೆಯನ್ನು 13 ಗಂಟೆ 10 ನಿಮಿಷಗಳಲ್ಲಿ ಈಜುವ ಮೂಲಕ ಜಿಯಾ ರೈ ವಿಶ್ವ ದಾಖಲೆ ಮಾಡಿದ್ದರು. 2022ರ ಮಾರ್ಚ್ 20ರಂದು ಶ್ರೀಲಂಕಾದ ತಲೈಮನ್ನಾರ್ ದ್ವೀಪದಿಂದ ರಾಮೇಶ್ವರ ಬಳಿಯಿರುವ ಧನುಷ್ಕೋಡಿಗೆ 29 ಕಿಮೀ ಉದ್ದದ ಜಲಸಂಧಿಯನ್ನು ಕೇವಲ 13 ಗಂಟೆಗಳಲ್ಲಿ ಈಜಿದ್ದು, ಈ ಸಾಧನೆ ಮಾಡಿದ ಅತಿ ಕಿರಿಯ ಕ್ರೀಡಾಪಟು ಎಂಬ ಸಾಧನೆ ಮಾಡಿದ್ದಾರೆ.
2022ರ ಡಿಸೆಂಬರ್ ನಲ್ಲಿ ಮುಂಬೈನಿಂದ ಗೋವಾದ ವಸಾಯಿ ಬಂದರಿನ ವರೆಗೆ 1100 ಕಿಮೀ ದೂರವನ್ನು ಆರು ತಂಡದ ಸದಸ್ಯರ ಜೊತೆ ಸೇರಿ ಈಜಿದ ಸಾಧನೆಯನ್ನೂ ಜಿಯಾ ರೈ ಹೊಂದಿದ್ದಾರೆ. ಆರು ಮಂದಿಯ ತಂಡದ ಸದಸ್ಯರು ರಿಲೇ ಮೂಲಕ 11 ದಿನ, 22 ಗಂಟೆ, 13 ನಿಮಿಷಗಳಲ್ಲಿ 1100 ಕಿಮೀ ದೂರವನ್ನು ಕ್ರಮಿಸಿದ್ದಾರೆ. ಆರು ಮಂದಿಯಲ್ಲಿ ಜಿಯಾ ರೈ ಮಾತ್ರ ಅತಿ ಕಿರಿಯ ಮತ್ತು ಏಕೈಕ ಹುಡುಗಿಯಾಗಿದ್ದರು.
ಜಿಯಾ ರೈ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರೂ ಒಮ್ಮೆ ಮನ್ ಕಿ ಬಾತ್ ಸರಣಿಯಲ್ಲಿ ಉಲ್ಲೇಖಿಸಿದ್ದರು. 2021ರಲ್ಲಿ ಮನ್ ಕಿ ಭಾಷಣದ ಸಂದರ್ಭದಲ್ಲಿ ಜಿಯಾ ರೈ ಮಾಡಿರುವ ಏಷ್ಯಾ ಬುಕ್ ಆಫ್ ರೆಕಾರ್ಡ್, ಇಂಡಿಯಾ ಬುಕ್ ಆಫ್ ರೆಕಾರ್ಡ್ ಬಗ್ಗೆ ಹೇಳಿದ್ದರು. ರಾಜ್ಯ, ರಾಷ್ಟ್ರ ಮಟ್ಟದ ಈಜು ಸ್ಪರ್ಧೆಗಳಲ್ಲಿಯೂ ಜಿಯಾ ರೈ ಸಾಧನೆ ಮಾಡಿದ್ದಾರೆ.
Jiya Rai, a 16-year-old Mumbai resident diagnosed with Autism Spectrum Disorder, has achieved a remarkable milestone by becoming the youngest and fastest para swimmer to cross the English Channel. She completed this incredible feat between July 28 and 29.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am