ಬ್ರೇಕಿಂಗ್ ನ್ಯೂಸ್
22-07-24 01:24 pm HK News Desk ದೇಶ - ವಿದೇಶ
ಮಧ್ಯಪ್ರದೇಶ, ಜುಲೈ 22: 7ನೇ ತರಗತಿ ವಿದ್ಯಾರ್ಥಿಯೊಬ್ಬ ರೀಲ್ಸ್ ಮಾಡಲು ತನ್ನ ಕುತ್ತಿಗೆಗೆ ದಾರ ಕಟ್ಟಿಕೊಂಡಿದ್ದ. ಆದರೆ ಅದು ಬಿಗಿದುಕೊಂಡು ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಮಧ್ಯಪ್ರದೇಶದ ಮೊರೆನಾದಲ್ಲಿ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮೃತನನ್ನ 11 ವರ್ಷದ ಕರಣ್ ಪರ್ಮಾರ್ ಎಂದು ಗುರುತಿಸಲಾಗಿದೆ. ಕರಣ್ ಲೇನೆ ರಸ್ತೆಯ ಖಾಲಿ ಜಾಗದಲ್ಲಿ ಇತರ ಮಕ್ಕಳೊಂದಿಗೆ ಆಟವಾಡುತ್ತಿದ್ದ. ಅದೇ ಸಮಯದಲ್ಲಿರೀಲ್ಸ್ ಮಾಡಲು ದಾರವನ್ನು ಕುತ್ತಿಗೆಗೆ ಕಟ್ಟಿಕೊಂಡು ನೇಣು ಹಾಕಿಕೊಳ್ಳಲು ಪ್ರಯತ್ನಿಸಿದ. ದುರದೃಷ್ಟವಶಾತ್, ಆ ವೇಳೆ ದಾರ ಕುತ್ತಿಗೆಗೆ ಬಿಗಿದುಕೊಂಡ ಪರಿಣಾಮ ಅವನ ಪ್ರಾಣಪಕ್ಷಿ ಹಾರಿಹೋಗಿದೆ.
ಅವನೊಂದಿಗೆ ಆಟವಾಡುತ್ತಿದ್ದ ಸ್ನೇಹಿತರು ಅವನು ಉಸಿರುಗಟ್ಟಿ ಒದ್ದಾಡುತ್ತಿರುವುದನ್ನು ನಟನೆ ಎಂದು ತಪ್ಪಾಗಿ ಭಾವಿಸಿದರು. ಹಾಗಾಗಿ ಅವರಿಗೆ ಅದು ನಿಜ ಎಂದು ತಿಳಿಯುವ ಹೊತ್ತಿಗೆ ಕರಣ್ ಸಾವನಪ್ಪಿದ್ದ ಎನ್ನಲಾಗಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊದಲ್ಲಿ ಮರಕ್ಕೆ ನೇತಾಡುತ್ತಿರುವ ನೂಲನ್ನು ಮೊದಲು ಕಾಣಬಹುದು. ಅದಕ್ಕೆ ಕರಣ್ ತನ್ನ ಕುತ್ತಿಗೆಗೆ ಹಾಕಿ, ನಂತರ ಒದ್ದಾಡುತ್ತಿರುವಂತೆ ನಟಿಸುತ್ತಿದ್ದರೆ, ಈ ಅಪಾಯದ ಬಗ್ಗೆ ಅರಿವಿಲ್ಲದ ಆತನ ಸ್ನೇಹಿತರು ಅವನು ಕೇವಲ ನಟಿಸುತ್ತಿದ್ದಾರೆ ಎಂದು ನಂಬಿದ್ದರು. ನಂತರ ನಿಜ ಅರಿತುಕೊಂಡ ಸ್ನೇಹಿತರು ಅವನ ಬಳಿಗೆ ಬರುವುದರೊಳಗೆ ಆತ ಸಾವನಪ್ಪಿರುವುದು ತಿಳಿದಿದೆ. ಗಾಬರಿಗೊಂಡ ಅವರು ಫೋನ್ ಅನ್ನು ಅಲ್ಲಿಯೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.
ವರದಿ ಪ್ರಕಾರ, ಕರಣ್ ಪರ್ಮಾರ್ 7 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಶಾಲೆಯಿಂದ ಹಿಂದಿರುಗಿದ ನಂತರ, ಲೇನ್ ರಸ್ತೆಯಲ್ಲಿರುವ ತನ್ನ ಮನೆಯ ಮುಂಭಾಗದ ಖಾಲಿ ಜಾಗದಲ್ಲಿ ಆಟವಾಡಲು ಹೋಗಿದ್ದ. ಎತ್ತರದ ಗೋಡೆಯ ಮೇಲೆ ನಿಂತು, ಕುತ್ತಿಗೆಗೆ ನೂಲನ್ನು ಹಾಕಿಕೊಂಡು ವಿಡಿಯೊ ಮಾಡುತ್ತಿದ್ದ, ಆಗ ಜಾರಿ ಬಿದ್ದ ಪರಿಣಾಮ ಹಗ್ಗ ಬಿಗಿಯಾಗಿ ಉಸಿರುಗಟ್ಟಿ ಸಾವನಪ್ಪಿದ. ವಿಚಾರ ತಿಳಿದ ನಂತರ, ಕರಣ್ ಮನೆಯವರು ಸ್ಥಳಕ್ಕೆ ಬಂದು, ತಕ್ಷಣ ಅವನನ್ನು ಆಸ್ಪತ್ರೆಗೆ ಕರೆದೊಯ್ಯದರು. ಅಲ್ಲಿ ವೈದ್ಯರು ಅವನು ಸತ್ತಿದ್ದಾನೆ ಎಂದು ತಿಳಿಸಿದ್ದಾರೆ. ಘಟನೆಯ ನಂತರ ಅಂಬಾ ಪೊಲೀಸರು ಸಿವಿಲ್ ಆಸ್ಪತ್ರೆಗೆ ಬಂದು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
11-Year-Old Dies While Making a Reel with Noose In Morena; Friends Mistake Suffocation for Acting#MPNews #MadhyaPradesh #Reel #reelsinstagram #reels #instagram #INSTA #Meta pic.twitter.com/YPtiWvK0d7
— Siraj Noorani (@sirajnoorani) July 21, 2024
A minor boy died in Madhya Pradesh's Monera district while attempting a 'suicide' stunt for a social media reel. Reportedly, on June 21, 11-year-old Karan Parmar was playing with his friends on an empty plot near his house after returning from school.
06-10-25 10:47 pm
Bangalore Correspondent
ಕಫ್ ಸಿರಪ್ ದುರಂತ ; ರಾಜ್ಯದಲ್ಲಿ ಕಟ್ಟೆಚ್ಚರ, ಎಲ್ಲ...
06-10-25 05:27 pm
Basavaraj Rayareddy, Mallikarjuna kharge, CM...
05-10-25 09:41 pm
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
06-10-25 07:56 pm
HK News Desk
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
06-10-25 10:42 pm
Mangalore Correspondent
ದಕ್ಷಿಣ ಕನ್ನಡದ 38 ಕಡೆ ಆಯುಷ್ಮಾನ್ ಭಾರತ್- ಆರೋಗ್ಯ...
06-10-25 07:19 pm
ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಹೃದ್ರೋಗ...
06-10-25 04:57 pm
ಟ್ರಾಫಿಕ್ ಸಿಬಂದಿ ಕಾರು ನಿಲ್ಲಿಸಲೆತ್ನಿಸಿ ಒಡೆದ ಗಾಜ...
06-10-25 02:58 pm
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm