ಬ್ರೇಕಿಂಗ್ ನ್ಯೂಸ್
22-06-24 08:59 pm HK News Desk ದೇಶ - ವಿದೇಶ
ಮುಂಬೈ, ಜೂನ್.22: ಮಾಜಿ ಸಂಸದ ಶತ್ರುಘ್ನಾ ಸಿನ್ಹಾ ಅವರ ಪುತ್ರಿ ನಟಿ ಸೋನಾಕ್ಷಿ ಸಿನ್ಹಾ ತನ್ನ ಬಹುಕಾಲದ ಗೆಳೆಯ ಜಹೀರ್ ಇಕ್ಬಾಲ್ ಅವರನ್ನು ಮದುವೆಯಾಗುವುದಕ್ಕೆ ವೇದಿಕೆ ಸಿದ್ಧವಾಗಿದೆ. ಎರಡು ದಿನಗಳ ಹಿಂದೆ ಶತ್ರುಘ್ನಾ ಸಿನ್ಹಾ ಅವರು ತನ್ನ ಮಗಳ ಬಯಕೆಗೆ ಒಪ್ಪಿಗೆ ನೀಡಿದ್ದಾರೆ. ಇದರ ಬೆನ್ನಲ್ಲೇ ಜಹೀರ್ ಇಕ್ಬಾಲ್ ಅವರ ಇಕ್ಬಾಲ್ ರತನ್ಸಿ ಹೇಳಿಕೆ ನೀಡಿದ್ದು, ಮದುವೆಯಾದ ಬಳಿಕ ಸೋನಾಕ್ಷಿ ಸಿನ್ಹಾ ಇಸ್ಲಾಂಗೆ ಮತಾಂತರ ಆಗಲ್ಲ ಎಂದಿದ್ದಾರೆ.
ಜೂನ್ 23ರಂದು ಅವರು ಸಿವಿಲ್ ಮ್ಯಾರೇಜ್ ಆಗಲಿದ್ದಾರೆ. ಹಿಂದು ಪದ್ಧತಿ ಅಥವಾ ಮುಸ್ಲಿಂ ವಿಧಿಯಂತೆ ಮದುವೆ ಆಗೋದಿಲ್ಲ. ನಾಗರಿಕ ಕಾನೂನು ಪ್ರಕಾರ ರಿಜಿಸ್ಟರ್ ಅಷ್ಟೇ ಆಗಲಿದ್ದಾರೆ. ಮದುವೆ ಬಳಿಕ ಆಕೆ ಮತಾಂತರ ಆಗೋದೂ ಇಲ್ಲ. ಅವರಿಬ್ಬರ ಹೃದಯಗಳು ಬೆಸೆದಿವೆ, ಧರ್ಮ ಅದಕ್ಕೆ ಅಡ್ಡ ಬರೋದಿಲ್ಲ ಎಂದು ಇಕ್ಬಾಲ್ ರತನ್ಸಿ ಹೇಳಿದ್ದಾರೆ.

ಸೋನಾಕ್ಷಿ ಸಿನ್ಹಾ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುವುದಕ್ಕೆ ತಂದೆ ಶತ್ರುಘ್ನಾ ಸಿನ್ಹಾ ಒಪ್ಪಿಕೊಂಡಿಲ್ಲ, ಅಸಮ್ಮತಿ ತೋರಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದರ ಬೆನ್ನಲ್ಲೇ ಶತ್ರುಘ್ನಾ ಸಿನ್ಹಾ ಪ್ರತಿಕ್ರಿಯೆ ಕೊಟ್ಟಿದ್ದು ಮದುವೆಗೆ ತನ್ನದೇನೂ ಆಕ್ಷೇಪ ಇಲ್ಲ ಎಂದಿದ್ದರು. ನನ್ನ ಕುಟುಂಬದ ಬಗ್ಗೆ ಸುಳ್ಳು ವರದಿಗಳನ್ನು ಬಿತ್ತರಿಸಲಾಗುತ್ತಿದೆ. ಯಾರ ಜೀವನ ಹೇಗಿದೆಯೋ ಯಾರಿಗೊತ್ತು. ಇದು ನನ್ನ ಒಬ್ಬಳೇ ಮಗಳ ಜೀವನದ ಪ್ರಶ್ನೆ. ನನಗೆ ಆಕೆಯ ಬಗ್ಗೆ ಹೆಮ್ಮೆ ಇದೆ, ನಾನು ಮದುವೆಯಲ್ಲಿ ಪಾಲ್ಗೊಳ್ಳುತ್ತೇನೆ, ನಾನು ಮದುವೆಗೆ ಹೋಗದೇ ಇರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಒಂದೆಡೆ ಸೋನಾಕ್ಷಿ – ಜಹೀರ್ ಮದುವೆಯನ್ನು ಅದ್ದೂರಿಯಾಗಿ ಮಾಡಲು ಸಿದ್ಧತೆ ನಡೆಸಲಾಗಿದ್ದರೆ, ಜಾಲತಾಣದಲ್ಲಿ ಇವರ ಮದುವೆಗೆ ಪರ- ವಿರೋಧ ಚರ್ಚೆ ನಡೆಸಿದ್ದಾರೆ.
Sonakshi Sinha and her longtime boyfriend Zaheer Iqbal are all set to tie the knot. The couple will have a civil marriage on June 23, the groom-to-be’s father, Iqbal Ratansi has revealed. In a recent interview, Zaheer’s father shed light on their marriage when he told Free Press Journal, “It will have neither Hindu nor Muslim rituals. It will be a civil marriage.”
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am