ಬ್ರೇಕಿಂಗ್ ನ್ಯೂಸ್
17-05-24 05:59 pm HK News Desk ದೇಶ - ವಿದೇಶ
ಲಕ್ನೋ, ಮೇ.17: ಎಸ್ಪಿ ಮತ್ತು ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ರಾಮನ ಮಂದಿರಕ್ಕೆ ಬುಲ್ಡೋಜರ್ ನುಗ್ಗಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಮಾಜವಾದಿ ಪಾರ್ಟಿಯ ಮುಖಂಡನೊಬ್ಬ ರಾಮ ನವಮಿಯಂದೇ ರಾಮನ ಮಂದಿರ ಉಪಯೋಗಕ್ಕಿಲ್ಲದ್ದು ಎಂದು ಹೇಳುತ್ತಾನೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್, ಸುಪ್ರೀಂ ಕೋರ್ಟಿನ ತೀರ್ಪನ್ನು ರದ್ದುಪಡಿಸುವ ಬಗ್ಗೆ ಮಾತನಾಡುತ್ತದೆ. ಅವರಿಗೆ ಕುಟುಂಬ ಮತ್ತು ಅಧಿಕಾರ ಮಾತ್ರ ಬೇಕು. ಎಸ್ಪಿ ಅಧಿಕಾರಕ್ಕೆ ಬಂದರೆ ರಾಮನ ಮಂದಿರಕ್ಕೆ ಬುಲ್ಜೋಜರ್ ನುಗ್ಗಿಸಿ, ರಾಮನನ್ನು ಮತ್ತೆ ಟೆಂಟಿನಲ್ಲಿ ಕೂರಿಸುವ ಕೆಲಸ ಮಾಡಲಿದ್ದಾರೆ ಎಂದು ಆರೋಪಿಸಿದ ಮೋದಿ, ಆದರೆ ಬುಲ್ಡೋಜರ್ ಎಲ್ಲಿಗೆ ನುಗ್ಗಿಸಬೇಕು ಎನ್ನುವುದನ್ನು ಕಾಂಗ್ರೆಸ್ ಮತ್ತು ಎಸ್ಪಿ ನಾಯಕರು ಉತ್ತರ ಪ್ರದೇಶದ ಸಿಎಂ ಯೋಗಿ ಬಳಿ ಕಲಿಯಬೇಕು ಎಂದು ಹೇಳಿದ್ದಾರೆ.
ಎಸ್ಪಿ- ಕಾಂಗ್ರೆಸ್ ಪಾಲಿಗೆ ವೋಟ್ ಬ್ಯಾಂಕಿಗಿಂತ ಮೇಲಿನದ್ದು ಯಾವುದೂ ಇಲ್ಲ. ತುಷ್ಟೀಕರಣಕ್ಕಾಗಿಯೇ ಶರಣಾಗತಿ ಮಾಡಿಕೊಂಡಿದೆ. ಮೋದಿ ಈ ದೇಶಕ್ಕೆ ತುಷ್ಟೀಕರಣ ರಾಜಕೀಯದ ಸತ್ಯವನ್ನು ಹೇಳುತ್ತಿದ್ದರೆ, ಎಸ್ಪಿ- ಕಾಂಗ್ರೆಸ್ ಮಾತ್ರ ಮೋದಿ ಹಿಂದು- ಮುಸ್ಲಿಮರನ್ನು ಒಡೆಯುತ್ತಿದ್ದಾರೆ ಎಂದು ದೂರುತ್ತಿದೆ. ಇವರ ವೋಟ್ ಬ್ಯಾಂಕ್ ರಾಜಕೀಯವನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ಮುಸ್ಲಿಂ ಸೋದರಿಯರು ಮತ್ತು ತಾಯಂದಿರು ತ್ರಿಪಲ್ ತಲಾಖ್ ನಿಷೇಧದಿಂದ ಸಂತಸಗೊಂಡಿದ್ದು, ಬಿಜೆಪಿಯನ್ನು ಹರಸಲಿದ್ದಾರೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ಸರ್ಕಾರ ಮತ್ತೆ ಗೆಲುವು ಸಾಧಿಸುವುದನ್ನು ತಿಳಿದು ಇಂಡಿಯಾ ಒಕ್ಕೂಟ ನಡುಗುತ್ತಿದೆ. ಜೂನ್ 4ರ ದಿನ ಹೆಚ್ಚು ದೂರವಿಲ್ಲ. ಇಡೀ ಜಗತ್ತು ನೋಡುತ್ತಿದೆ, ಮೋದಿ ಸರಕಾರ ಹ್ಯಾಟ್ರಿಕ್ ಆಗುವುದನ್ನು ಕಾಯುತ್ತಿದೆ ಎಂದು ಮೋದಿ ಹೇಳಿದ್ದಾರೆ.
Prime Minister Narendra Modi on Friday claimed that the Congress and Samajwadi Party would bulldoze the Ram temple if elected to power. He suggested they take “tuition” from Uttar Pradesh Chief Minister Yogi Adityanath on “where to run bulldozers.” The Prime Minister made the comment while addressing an election rally in Barabanki, Uttar Pradesh.
22-08-26 10:15 pm
HK News Staffer
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
ದೇಶದ ರಾಜಕೀಯದಲ್ಲಿ ಬಹುದೊಡ್ಡ ಬಿರುಗಾಳಿ; ವಿರುದ್ಧ ಧ...
21-08-26 03:42 pm
ಆಟೋಗಳ ರೀತಿ ಗಂಟೆಗೆ 55 ಕಿಮೀ ಓಡುವ ರೈಲುಗಳನ್ನೇ ‘ಸೂ...
19-08-26 09:55 pm
22-08-26 08:37 pm
HK News Staffer
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
'ಜನ ಗಣ ಮನ' ಗೀತೆಯನ್ನು ಬ್ರಿಟನ್ ರಾಣಿಯ ಹೊಗಳಲು ಬರೆ...
19-08-26 12:10 pm
22-08-26 01:37 pm
HK News Staffer
ಮಂಗಳೂರು ರೈಲ್ವೇ ಕೊನೆಗೂ ಕರ್ನಾಟಕಕ್ಕೆ ಸೇರ್ಪಡೆ ; ಅ...
21-08-26 09:54 pm
Mfc Hotel Raid, Mangalorr: ಕೆಎಫ್ ಸಿ ಬಳಿಕ ಮಂಗಳ...
21-08-26 08:17 pm
ಬೆಂಗಳೂರು, ಮಂಗಳೂರು ಸೇರಿ ರಾಜ್ಯಾದ್ಯಂತ 36 ರೈಲ್ವೇ...
21-08-26 03:12 pm
ಬೆಳ್ತಂಗಡಿ ; ಹುಳ ಬಿದ್ದ ಪಡಿತರ ಅಕ್ಕಿ ಪೂರೈಕೆ, 50ಕ...
20-08-26 05:16 pm
22-08-26 12:43 pm
HK News Staffer
ಬಾಳೆಹಣ್ಣಿಗೆ ಕೃತಕ ಬಣ್ಣ, ಕೆಮಿಕಲ್ ಬಳಸಿ ಹಣ್ಣಾಗಿಸು...
21-08-26 12:20 pm
ಇಷ್ಟದ ವಿದ್ಯಾರ್ಥಿಯನ್ನು ಕಂಡು “ಏಯ್ ಬಾಬೂ” ಎಂದಿದ್ದ...
21-08-26 11:03 am
ಎಸಿಪಿ ಕಚೇರಿ ಅಂಗಳದಲ್ಲೇ ಮಹಾಲಕ್ಷ್ಮಿ ದೇವಸ್ಥಾನಕ್ಕೆ...
20-08-26 08:06 pm
8.50 ಲಕ್ಷ ನಗದು ಹಣದೊಂದಿಗೆ ಬೈಕಿನಲ್ಲಿ ಬರುತ್ತಿದ್ದ...
20-08-26 05:33 pm