ಬ್ರೇಕಿಂಗ್ ನ್ಯೂಸ್
30-04-24 02:52 pm HK News Desk ದೇಶ - ವಿದೇಶ
ನವದೆಹಲಿ, ಎ.30: ಭಾರತದಲ್ಲಿ ಕೋವಿಶೀಲ್ಡ್ ಹೆಸರಲ್ಲಿ ಕೋವಿಡ್ ಸೋಂಕಿಗೆ ಎದುರಾಗಿ ನೀಡಲಾಗಿದ್ದ ಆಕ್ಸ್ ಫರ್ಡ್ ಆಸ್ಟ್ರಾ ಜೆನೆಕಾ ಕಂಪನಿಯ ವ್ಯಾಕ್ಸಿನ್ ಅಪರೂಪಕ್ಕೆ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತದೆ ಎಂದು ಮಾತೃ ಕಂಪನಿ ಮೊದಲ ಬಾರಿಗೆ ಕೋರ್ಟಿನಲ್ಲಿ ಒಪ್ಪಿಕೊಂಡಿದೆ.
ಜಗತ್ತಿನ ಹಲವಾರು ರಾಷ್ಟ್ರಗಳಲ್ಲಿ ಕೊರೊನಾ ಸೋಂಕಿನ ವಿರುದ್ಧ ಈ ವ್ಯಾಕ್ಸಿನನ್ನು ವ್ಯಾಪಕವಾಗಿ ಬಳಕೆ ಮಾಡಲಾಗಿತ್ತು. ಇದರಿಂದ ಅಡ್ಡ ಪರಿಣಾಮ ಎದುರಿಸಿದ ಕುಟುಂಬಸ್ಥರು, ಸಾವಿಗೆ ತುತ್ತಾದ ಕುಟುಂಬಸ್ಥರು ಇಂಗ್ಲೆಂಡಿನಲ್ಲಿ ಆಸ್ಟ್ರಾ ಜೆನೆಕಾ ಕಂಪನಿಯ ವ್ಯಾಕ್ಸಿನ್ ವಿರುದ್ಧ ಕೋರ್ಟ್ ಹೋರಾಟ ಆರಂಭಿಸಿದ್ದರು. ಜಾಮಿ ಸ್ಕಾಟ್ ಎನ್ನುವ ವ್ಯಕ್ತಿ 2021ರಲ್ಲಿ ಈ ವ್ಯಾಕ್ಸಿನ್ ಪಡೆದ ಬಳಿಕ ಶಾಶ್ವತವಾಗಿ ಮೆದುಳಿಗೆ ಸಂಬಂಧಿಸಿದ ತೊಂದರೆಗೆ ಒಳಗಾಗಿದ್ದರು. ಆ ವ್ಯಕ್ತಿ ಸೇರಿದಂತೆ ಇಂಗ್ಲೆಂಡಿನಲ್ಲಿ ಹಲವರಿಗೆ ಥ್ರೋಂಬೋಸಿಸ್ ಎನ್ನುವ ತೊಂದರೆ ಕಾಣಿಸಿಕೊಂಡಿತ್ತು. Thrombocytopenia Syndrome (TTS) ಎನ್ನುವ ವೈಜ್ಞಾನಿಕ ಹೆಸರುಳ್ಳ ಈ ತೊಂದರೆ ಕಾಣಿಸಿಕೊಂಡರೆ ರಕ್ತ ಹೆಪ್ಪುಗಟ್ಟುವುದು ಮತ್ತು ದೇಹದಲ್ಲಿ ಪ್ಲೇಟ್ ಲೆಟ್ಸ್ ಕಣಗಳ ಕೊರತೆ ಉಂಟಾಗುವುದೆಂದು ಹೇಳಲಾಗುತ್ತದೆ.
ಇಂಗ್ಲೆಂಡಿನ ಹೈಕೋರ್ಟಿನಲ್ಲಿ ಆಸ್ಟ್ರಾ ಝೆನೆಕಾ ಕಂಪನಿಯ ಪರ ವಕೀಲರು ಸುದೀರ್ಘ ವಿಚಾರಣೆ ಬಳಿಕ ತಮ್ಮ ವ್ಯಾಕ್ಸಿನ್ ಕಾರಣದಿಂದ ಅಪರೂಪಕ್ಕೆ ಟಿಟಿಎಸ್ ಎನ್ನುವ ತೊಂದರೆ ಕಾಣಿಸಿಕೊಳ್ಳಬಹುದು ಎಂದಿರುವುದು ಜಗತ್ತಿನಾದ್ಯಂತ ಚರ್ಚೆಗೆ ಕಾರಣವಾಗಿದೆ. ಇಂಗ್ಲೆಂಡಿನಲ್ಲಿ ಭಾರೀ ವಿರೋಧ, ಕೋರ್ಟ್ ಹೋರಾಟ, ಸಾವಿಗೆ ತುತ್ತಾದ ಕುಟುಂಬಕ್ಕೆ ಪರಿಹಾರ ನೀಡಬೇಕೆಂಬ ಒತ್ತಾಯದಿಂದಾಗಿ ಆಸ್ಟ್ರಾ ಝೆನೆಕಾ ಉತ್ಪಾದಿಸಿದ ವ್ಯಾಕ್ಸಿನ್ ಬಳಕೆಗೆ ನಿಷೇಧ ಹೇರಲಾಗಿತ್ತು. ಇದೀಗ ಕಂಪನಿಯು ಲಸಿಕೆಯ ಕಾರಣದಿಂದ ಅಪರೂಪಕ್ಕೆ ಇಂತಹ ತೊಂದರೆ ಕಾಣಿಸಿಕೊಳ್ಳಬಹುದು ಎಂದು ಒಪ್ಪಿಕೊಂಡಿರುವುದು ಮೃತ ಕುಟುಂಬಸ್ಥರಿಗೆ ಮತ್ತು ಅದರಿಂದಾಗಿ ತೊಂದರೆ ಎದುರಿಸುತ್ತಿರುವ ಕುಟುಂಬಗಳಿಗೆ ಪರಿಹಾರ ನೀಡಬೇಕೆಂಬ ಒತ್ತಾಯಕ್ಕೆ ಬಲ ಬಂದಿದೆ.
A big update has emerged in connection with COVID vaccine and its rare side effects, which are being questioned by several health experts. British-Swedish multinational pharmaceutical and biotechnology company AstraZeneca has admitted in court papers that its COVID vaccine, Covishield, can cause rare side effect The Telegraph reported.
28-06-26 06:30 pm
HK News Staffer
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್...
27-06-26 08:31 pm
ಅಂಬಾನಿ ಕೊಟ್ಟ 900 ಕೋಟಿ ದೇಣಿಗೆಗೂ ಲೆಕ್ಕ ಇಲ್ಲ, ಈಗ...
27-06-26 04:21 pm
ಆರ್ಎಸ್ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದ...
26-06-26 08:30 pm
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
28-06-26 04:03 pm
HK News Staffer
ದೇಶಾದ್ಯಂತ ಕಿಡ್ನಿ ಕಸಿ ಪ್ರಕ್ರಿಯೆ ಫಲಿತಾಂಶಗಳ ಬಹಿರ...
27-06-26 09:10 pm
40 ಸೆಕೆಂಡ್ ನಲ್ಲಿ ಎರಡು ಬಾರಿ ಭೂಕಂಪ ; ತತ್ತರಿಸಿ ಹ...
25-06-26 12:13 pm
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
27-06-26 02:44 pm
HK News Staffer
Rss ಸಂಘಟನೆಯನ್ನು ರಿಜಿಸ್ಟರ್ ಮಾಡಿದ್ರೆ ಒಳ್ಳೇದು ;...
26-06-26 09:42 pm
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
28-06-26 09:38 pm
HK News Staffer
Derlakatte Accident, Mangalore: ದೇರಳಕಟ್ಟೆ ಬಳಿ...
27-06-26 08:01 pm
ಬೆಂಗಳೂರಿನಿಂದ ಪ್ರಿಯತಮೆಯ ಅಪಹರಣ ; ಅಂಕೋಲಾಕ್ಕೆ ಹೋಗ...
27-06-26 04:23 pm
ಬೆಂಗಳೂರಿನಲ್ಲಿ ಅಕ್ರಮ ಹಣದ ಭಾರಿ ಬೇಟೆ ; ಕುರುಬರಹಳ್...
27-06-26 04:19 pm
ಮಂತ್ರಾಲಯ ಯಾತ್ರೆ ಮಧ್ಯೆ ಯಮನಂತೆ ನುಗ್ಗಿದ ಲಾರಿ! ಡಿ...
27-06-26 11:46 am