ಬ್ರೇಕಿಂಗ್ ನ್ಯೂಸ್
13-04-24 09:17 pm HK NEWS ದೇಶ - ವಿದೇಶ
ನವದೆಹಲಿ, ಎ.13: ಪಾಕಿಸ್ಥಾನ- ಅಫ್ಘಾನಿಸ್ತಾನ ಗಡಿಭಾಗದ ಖೈಬರ್ ಪಂಕ್ತುಖ್ವಾ ಪ್ರಾಂತ್ಯದಲ್ಲಿದ್ದ ಅತಿ ಪುರಾತನ ಬೃಹತ್ ಹಿಂದು ದೇವಾಲಯವನ್ನು ನೆಲಸಮ ಮಾಡಲಾಗಿದೆ.
ಕೇದಾರನಾಥ ದೇವಾಲಯ ಮಾದರಿಯ ಗೋಪುರವುಳ್ಳ ಬೃಹತ್ ದೇವಸ್ಥಾನ 1947ರಿಂದಲೇ ಪಾಳು ಬಿದ್ದ ಸ್ಥಿತಿಯಲ್ಲಿತ್ತು. ಸ್ವಾತಂತ್ರ್ಯ ಕಾಲದಲ್ಲಿ ಭಾರತ- ಪಾಕಿಸ್ಥಾನ ವಿಂಗಡಣೆಯಾದಾಗ ಎರಡೂ ರಾಷ್ಟ್ರಗಳಿಂದ ಬಹಳಷ್ಟು ಹಿಂದು- ಮುಸ್ಲಿಮರು ಅತ್ತಿತ್ತ ವಲಸೆ ಹೋಗಿದ್ದರು. ಈ ದೇವಸ್ಥಾನಕ್ಕೆ ಸಂಬಂಧಪಟ್ಟ ಹಿಂದುಗಳೂ ಪಾಕಿಸ್ತಾನ ಬಿಟ್ಟು ಭಾರತಕ್ಕೆ ಬಂದಿದ್ದರು. ದೇವಸ್ಥಾನ ಮತ್ತು ಗೋಪುರ ಮಾತ್ರ ಹಾಗೆಯೇ ಉಳಿದುಕೊಂಡಿತ್ತು. ಸ್ಥಳೀಯ ಕಿಡಿಗೇಡಿಗಳು ಗೋಪುರದ ಇಟ್ಟಿಗೆ, ಕಲ್ಲುಗಳನ್ನು ಒಂದೊಂದಾಗಿಯೇ ಒಡೆದು ವಿಘ್ನಗೊಳಿಸಿದ್ದರೂ ಬೃಹತ್ ದೇವಸ್ಥಾನದ ಮಾದರಿ ಉಳಿದಿತ್ತು.
ಲಾಂಡಿ ಕೋಟಾಲ್ ಬಾಝಾರ್ ಎನ್ನುವ ಪ್ರದೇಶದಲ್ಲಿದ್ದ ದೇವಸ್ಥಾನವನ್ನು ಇದೀಗ ಪೂರ್ತಿ ನೆಲಸಮ ಮಾಡಲಾಗಿದ್ದು, ಅಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಸ್ಥಳೀಯರು ಮುಂದಾಗಿದ್ದಾರೆ. 1992ರಲ್ಲಿ ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ನೆಲಸಮ ಮಾಡಿದ್ದಕ್ಕೆ ಪ್ರತಿಯಾಗಿ ಈ ದೇವಸ್ಥಾನವನ್ನೂ ಕೆಡವಿ ಹಾಕಲು ಕಿಡಿಗೇಡಿಗಳು ಮುಂದಾಗಿದ್ದರು. ಕಲ್ಲಿನ ಬೃಹತ್ ಶಿಲಾಮಂದಿರ ಆಗಿದ್ದರಿಂದ ಅರೆಬರೆಯಾಗಿ ದೇವಸ್ಥಾನದ ಗೋಪುರ ಉಳಿದುಕೊಂಡಿತ್ತು. ಸ್ಥಳೀಯರು ಖೈಬರ್ ಟೆಂಪಲ್ ಎಂದೇ ಉಲ್ಲೇಖ ಮಾಡುತ್ತಿದ್ದರು.
ಪ್ರಾಚ್ಯವಸ್ತು ಇಲಾಖೆಗೆ ಸಂಬಂಧಪಟ್ಟ ಸ್ಮಾರಕಗಳನ್ನು ಹಾಗೆಯೇ ಉಳಿಸಿಕೊಳ್ಳಬೇಕೆಂದು ಪಾಕಿಸ್ತಾನದಲ್ಲಿಯೂ ಕಾನೂನು ಇದ್ದರೂ ಅದನ್ನು ಪಾಲನೆ ಮಾಡುತ್ತಿಲ್ಲ ಎಂದು ಪಾಕಿಸ್ತಾನ್ ಹಿಂದು ಮಂದಿರ ಮ್ಯಾನೇಜ್ಮೆಂಟಿನ ಹಾರೂನ್ ಸಾರಬ್ದಿಯಾಲ್ ಹೇಳಿದ್ದಾರೆ. ಸ್ಥಳೀಯ ಜಿಲ್ಲಾಡಳಿತ ದಾಖಲೆಯಲ್ಲಿ ಇಂದು ಮಂದಿರವೆಂದು ಉಲ್ಲೇಖ ಇಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಪಾಕಿಸ್ತಾನದ ಡಾನ್ ಪತ್ರಿಕೆ ಮತ್ತು ಭಾರತದ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
A historical Hindu temple near the Pakistan-Afghanistan border has been demolished and construction for a commercial complex has started at the site in the Khyber Pakhtunkhwa province that was closed since 1947 when the original occupants migrated to India.
20-05-24 07:03 pm
Bangalore Correspondent
Zip line accident at Jungle Trailz Bangalore:...
20-05-24 05:53 pm
Bangalore rave party raid, drugs, actors: ಇಲೆ...
20-05-24 01:44 pm
Charmadi Ghat, Blocked: ಚಾರ್ಮಾಡಿ ಘಾಟಿಯಲ್ಲಿ ಕೆ...
20-05-24 12:38 pm
ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಬೆಂಕಿ ; ಬ...
19-05-24 11:54 am
20-05-24 08:15 pm
HK News Desk
Ebrahim Raisi dead in helicopter crash: ಹೆಲಿಕ...
20-05-24 11:35 am
ಬ್ಯಾಂಕ್ ಖಾತೆಗೆ ಬರೋಬ್ಬರಿ 9900 ಕೋಟಿ ಹಣ ಜಮೆ ; ಮ...
19-05-24 04:30 pm
Priyanka Gandhi, Rahul Gandhi: ರಾಹುಲ್ ಗೆ ದೇಶದ...
18-05-24 10:18 pm
Pavithra Jayaram, Chandrakanth suicide: ಸೀರಿಯ...
18-05-24 09:15 pm
20-05-24 10:43 pm
Mangalore Correspondent
Mangalore Rain News: ಮಂಗಳೂರಿನಲ್ಲಿ ದಿಢೀರ್ ಬಿರು...
20-05-24 10:34 pm
Mangalore crime, CCB Police, Talapady: ಗಡಿಭಾಗ...
20-05-24 10:17 pm
Mangalore News, Rain, Harekala girl death: ಹ...
20-05-24 09:56 pm
Dr Dhananjaya Sarji campaigns in Bantwal, Man...
20-05-24 09:39 pm
18-05-24 04:05 pm
HK News Desk
ಹೊಸದುರ್ಗ ; ಮನೆಯಲ್ಲಿ ಮಲಗಿದ್ದ ಬಾಲಕಿಯನ್ನು ನಸುಕಿನ...
17-05-24 09:52 pm
Kalaburagi police bus, crime: ಕುಡಿದ ನಶೆಯಲ್ಲಿ...
17-05-24 07:23 pm
7-8 ಬಾರಿ ಎದೆ, ಹೊಟ್ಟೆಗೆ ತಿವಿದಿದ್ದಾನೆ, ನೆಲಕ್ಕೆ...
17-05-24 05:38 pm
Bangalore crime, Police: ಇವ್ನು ಬೆಸ್ಕಾಂ ಸಹಾಯಕ...
17-05-24 05:17 pm