ಬ್ರೇಕಿಂಗ್ ನ್ಯೂಸ್
12-04-24 08:16 pm HK NEWS ದೇಶ - ವಿದೇಶ
ನವದೆಹಲಿ, ಎ.12: ಇಸ್ರೇಲ್ ಮೇಲೆ ಇನ್ನೆರಡು ದಿನದಲ್ಲಿ ಇರಾನ್ ಭಾರೀ ದೊಡ್ಡ ಪ್ರಮಾಣದಲ್ಲಿ ವೈಮಾನಿಕ ದಾಳಿ ನಡೆಸಲು ಸಜ್ಜಾಗಿದೆ ಎಂದು ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಇದರ ಬೆನ್ನಲ್ಲೆ ಅಮೆರಿಕ, ಭಾರತ ಸೇರಿದಂತೆ ತನ್ನ ಪ್ರಜೆಗಳನ್ನು ಇಸ್ರೇಲ್ ಮತ್ತು ಇರಾನ್ ದೇಶಕ್ಕೆ ತೆರಳದಂತೆ ಸೂಚನೆ ನೀಡಿದೆ.
ಇರಾನ್ ದೇಶದ ಸುಪ್ರೀಂ ನಾಯಕ ಅಯಾತೊಲ್ಲಾ ಅಲಿ ಖೊಮೇನಿ ನೇರ ಉಸ್ತುವಾರಿಯಲ್ಲೇ ಆ ದೇಶ ಯುದ್ಧಕ್ಕೆ ರೆಡಿಯಾಗುತ್ತಿದೆ ಎನ್ನಲಾಗುತ್ತಿದ್ದು, ಜಾಗತಿಕ ರಾಷ್ಟ್ರಗಳ ಒತ್ತಡ. ಅದರಿಂದಾಗುವ ಅಪಾಯದ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ಅಯಾತೊಲ್ಲಾ ಖೊಮೇನಿ ಅವರ ಸಲಹೆಗಾರರ ಆಪ್ತ ವ್ಯಕ್ತಿಯೊಬ್ಬರು ಹೇಳಿದ್ದಾರೆ ಎಂಬ ಮಾಹಿತಿ ಆಧರಿಸಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಇಸ್ರೇಲ್, ಗಾಜಾ ಪಟ್ಟಿ ಮತ್ತು ಹಮಾಸ್ ಉಗ್ರರ ಮೇಲೆ ನಿರಂತರ ದಾಳಿ ನಡೆಸುತ್ತಿರುವುದರಿಂದ ಇರಾನ್ ದೇಶವು ಪದೇ ಪದೇ ಎಚ್ಚರಿಕೆ ಕೊಡುತ್ತಲೇ ಬಂದಿತ್ತು. ಇತ್ತೀಚೆಗೆ ಇರಾನ್ ದೇಶದ ವ್ಯಾಪ್ತಿಯ ಸಿರಿಯಾ ಭಾಗದ ಡಮಾಸ್ಕಸ್ ನಗರದ ಕಾನ್ಸುಲೇಟ್ ಒಂದಕ್ಕೆ ದಾಳಿ ನಡೆಸಲಾಗಿತ್ತು. ಅದರಲ್ಲಿ ಇರಾನ್ ದೇಶದ ಪ್ರಮುಖ ನಾಯಕ ಮತ್ತು ಆರು ಮಂದಿ ಮಿಲಿಟರಿ ವ್ಯಕ್ತಿಗಳು ಸಾವನ್ನಪ್ಪಿದ್ದರು.
ಡಮಾಸ್ಕಸ್ ಮೇಲಿನ ದಾಳಿಯನ್ನು ಇಸ್ರೇಲ್ ಮಾಡಿದೆ ಎಂದು ಇರಾನ್ ಆರೋಪ ಮಾಡಿತ್ತು. ಆದರೆ ಇಸ್ರೇಲ್ ಆ ದಾಳಿಯನ್ನು ನಿರಾಕರಿಸಿದ್ದೂ ಇಲ್ಲ, ಒಪ್ಪಿಕೊಂಡಿದ್ದೂ ಇಲ್ಲ. ಹೀಗಾಗಿ ಇಸ್ರೇಲ್ ಆ ದಾಳಿಯ ಹಿಂದೆ ಇದೆ ಎನ್ನುವ ಮಾತು ಮುಸ್ಲಿಂ ರಾಷ್ಟ್ರಗಳಿಂದ ಕೇಳಿಬಂದಿತ್ತು. ಇಸ್ರೇಲಿಗೆ ತಕ್ಕ ಶಿಕ್ಷೆ ಆಗಲೇಬೇಕು. ಅದು ಆಗಿಯೇ ತೀರುತ್ತೆ ಎಂದು ಡಮಾಸ್ಕಸ್ ದಾಳಿಯ ಬಳಿಕ ಇರಾನ್ ನಾಯಕ ಅಯೊತೊಲ್ಲಾ ಖೊಮೇನಿ ಹೇಳಿದ್ದರು.
ಇದೇ ವೇಳೆ, ಬಿಬಿಸಿ ಸಂಸ್ಥೆಯ ಯುಎಸ್ ಪಾಲುದಾರ ಸಿಬಿಎಸ್ ನ್ಯೂಸ್, ಇರಾನ್ ದಾಳಿ ಬಹುತೇಕ ಶುಕ್ರವಾರದ ಹೊತ್ತಿಗೆ ಆಗುವ ಸಾಧ್ಯತೆ ಇದೆಯೆಂದು ವರದಿ ಮಾಡಿದೆ. ನೂರಕ್ಕೂ ಹೆಚ್ಚು ಡ್ರೋಣ್, ಡಜನ್ ಗೂ ಹೆಚ್ಚು ಕ್ರೂಸ್ ಮಿಸೈಲ್ ಮತ್ತು ಬ್ಯಾಲಿಸ್ಟಿಕ್ ಮಿಸೈಲ್ ಇಸ್ರೇಲ್ ಮೇಲೆ ಟಾರ್ಗೆಟ್ ಮಾಡಲಿದೆ ಎಂದು ಅಮೆರಿಕದ ಇಬ್ಬರು ಸೇನಾಧಿಕಾರಿಗಳ ಹೇಳಿಕೆ ಅಧರಿಸಿ ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
Iran is likely to launch a direct attack on Israel within the next 48 hours and the Jewish nation is preparing for it, according to a report. The Wall Street Journal reported on Friday, citing a person who had been briefed by the Iranian leadership.
17-05-24 10:47 pm
HK News Desk
Ramnagara Drowning, Three killed: ರಾಮನಗರ ; ಹೊ...
17-05-24 04:55 pm
Hubballi Anjali Murder, Vishwa Arrest: ಹುಬ್ಬಳ...
17-05-24 12:30 pm
South Teachers Constituency, Srikantegowda:...
16-05-24 10:37 pm
Hassan News, Drowning: ಹಾಸನ ; ಕೆರೆಯಲ್ಲಿ ಈಜಲು...
16-05-24 07:17 pm
17-05-24 09:56 pm
HK News Desk
PM Modi, Ayodhya Ram Temple, Yogi Adityanath:...
17-05-24 05:59 pm
Cannes 2024, Aishwarya Rai Bachchan: ಕೇನ್ಸ್ ಚ...
17-05-24 02:44 pm
Girl dies inside cae, marrige Rajasthan: ಮದುವ...
16-05-24 04:30 pm
PM Modi, Hindu-Muslim: ನಾನೆಂದಿಗೂ ಹಿಂದು- ಮುಸ್ಲ...
15-05-24 02:05 pm
17-05-24 09:17 pm
Mangalore Correspondent
MLA Ashok Rai Puttur: ಶಾಸಕನಾಗಿ ಒಂದು ವರ್ಷ ; ಜನ...
17-05-24 04:32 pm
Mangalore Airport, Missing: ಕದ್ರಿಯಿಂದ ಆಟೋದಲ್ಲ...
16-05-24 09:59 pm
Mangalore NIA, Terror, Ammar Abdul Rahiman, I...
16-05-24 05:38 pm
Mangalore accident, Kallapu: ಹೆದ್ದಾರಿ ಕ್ರಾಸ್...
16-05-24 02:48 pm
17-05-24 09:52 pm
HK News Desk
Kalaburagi police bus, crime: ಕುಡಿದ ನಶೆಯಲ್ಲಿ...
17-05-24 07:23 pm
7-8 ಬಾರಿ ಎದೆ, ಹೊಟ್ಟೆಗೆ ತಿವಿದಿದ್ದಾನೆ, ನೆಲಕ್ಕೆ...
17-05-24 05:38 pm
Bangalore crime, Police: ಇವ್ನು ಬೆಸ್ಕಾಂ ಸಹಾಯಕ...
17-05-24 05:17 pm
Bangalore crime, Fraud, Parameshwara ministe...
17-05-24 02:09 pm