ರಾಜಸ್ಥಾನದ ನ್ಯಾಯಾಧೀಶನ ವಿರುದ್ಧ ಎಫ್ಐಆರ್ ; ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಗೆ ಗಾಯದ ನೆಪದಲ್ಲಿ ಬಟ್ಟೆ ಬಿಚ್ಚುವಂತೆ ಕಿರುಕುಳ

04-04-24 06:48 pm       HK News Desk   ದೇಶ - ವಿದೇಶ

ರಾಜಸ್ಥಾನದ ನ್ಯಾಯಾಧೀಶನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅತ್ಯಾಚಾರ ಪ್ರಕರಣದ ಸಂತ್ರಸ್ತೆಗೆ ತನ್ನ ಗಾಯಗಳನ್ನ ತೋರಿಸಲು ಹೇಳಿ ಬಟ್ಟೆ ಬಿಚ್ಚಲು ಹೇಳಿದ ಕಾರಣಕ್ಕೆ ನ್ಯಾಯಾಧೀಶನ ವಿರುದ್ಧ ದೂರು ದಾಖಲು ಮಾಡಲಾಗಿದೆ. 

ಜೈಪುರ, ಏ.04: ರಾಜಸ್ಥಾನದ ನ್ಯಾಯಾಧೀಶನ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅತ್ಯಾಚಾರ ಪ್ರಕರಣದ ಸಂತ್ರಸ್ತೆಗೆ ತನ್ನ ಗಾಯಗಳನ್ನ ತೋರಿಸಲು ಹೇಳಿ ಬಟ್ಟೆ ಬಿಚ್ಚಲು ಹೇಳಿದ ಕಾರಣಕ್ಕೆ ನ್ಯಾಯಾಧೀಶನ ವಿರುದ್ಧ ದೂರು ದಾಖಲು ಮಾಡಲಾಗಿದೆ. 

ಮಾರ್ಚ್ 30 ರಂದು ಈ ಘಟನೆ ನಡೆದಿದ್ದು, ಸಂತ್ರಸ್ಥೆಯು ಪ್ರಕರಣವೊಂದರಲ್ಲಿ ತನ್ನ ಹೇಳಿಕೆಯನ್ನು ದಾಖಲಿಸಲು ಹೋಗಿದ್ಲು. 

ಆರೋಪಿ ಹಿಂಡೌನ್ ಸಿಟಿ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್ ವಿರುದ್ಧ  ಸೆಕ್ಷನ್ 345 ಅಡಿಯಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ (ಎಸ್‌ಸಿ/ಎಸ್‌ಟಿ) ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಎಫ್‌ಐಆರ್ ಪ್ರಕಾರ, ಸಂತ್ರಸ್ಥೆ ಮಹಿಳೆ ಹೇಳಿಕೆ ನೀಡಿದ ನಂತರ ಆಕೆಯ ಗಾಯಗಳನ್ನು ನೋಡಲು ನ್ಯಾಯಾಧೀಶ ತನ್ನ ಬಟ್ಟೆಗಳನ್ನು ತೆಗೆಯುವಂತೆ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ.

ಆದ್ರೆ ಸಂತ್ರಸ್ತೆ ಆಕ್ಷೇಪಿಸಿದ್ದು,  ಮ್ಯಾಜಿಸ್ಟ್ರೇಟ್ ಮುಂದೆ ತನ್ನ ಬಟ್ಟೆಗಳನ್ನು ತೆಗೆಯಲು ಆಗೋದಿಲ್ಲ, ಮಹಿಳಾ ನ್ಯಾಯಾಧೀಶರು ಇದ್ದಿದ್ದರೆ ಮಾಡುತ್ತಿದ್ದೆ ಎಂದಿದ್ದಾಳೆ.

A magistrate was booked on Tuesday in Rajasthan’s Karauli district for allegedly asking an 18-year-old Dalit gang-rape survivor to strip in the court to show her injuries, an officer familiar with the matter said on Wednesday.