ಬ್ರೇಕಿಂಗ್ ನ್ಯೂಸ್
15-02-24 11:14 pm HK NEWS ದೇಶ - ವಿದೇಶ
ಪಾಟ್ನಾ, ಫೆ.15: ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದ ಮಹಿಳೆಯನ್ನು ಅಂತ್ಯ ಸಂಸ್ಕಾರಕ್ಕಾಗಿ ಒಯ್ಯುತ್ತಿದ್ದಾಗ ದಿಢೀರ್ ಆಗಿ ಬದುಕಿ ಬಂದ ಘಟನೆ ಬಿಹಾರದಲ್ಲಿ ನಡೆದಿದೆ.
ಮೃತದೇಹವನ್ನು ಛತ್ತೀಸ್ಗಢದಿಂದ ಬಿಹಾರಕ್ಕೆ ತರುವಾಗ 18 ಗಂಟೆ ಪ್ರಯಾಣ ತಗಲಿತ್ತು. ಪ್ರಯಾಣದ ಬಳಿಕ ಆಕೆ ಏಕಾಏಕಿ ಮಾರ್ಗಮಧ್ಯೆ ಮಹಿಳೆ ಜೀವ ಪಡೆದಿದ್ದು ಕುಟುಂಬಸ್ಥರು ಅಚ್ಚರಿಗೆ ಒಳಗಾಗಿದ್ದಾರೆ. ರಾಮವತಿ ದೇವಿ ಎಂಬ ಮಹಿಳೆ ಈ ರೀತಿ ಮರುಜನ್ಮ ಪಡೆದಾಕೆ. ಈಕೆ ಬಿಹಾರದ ಬೇಗುಸರಾಯ್ ಜಿಲ್ಲೆಯ ನೀಮಾ ಚಂದ್ಪುರ ಗ್ರಾಮದ ನಿವಾಸಿ. ತನ್ನ ಇಬ್ಬರು ಮಕ್ಕಳಾದ ಮುರಾರಿ ಶಾವೋ ಮತ್ತು ಘನಶ್ಯಾಮ್ ಶಾವೋ ಜೊತೆ ಇತ್ತೀಚೆಗೆ ಛತ್ತೀಸ್ಗಢಕ್ಕೆ ತೆರಳಿದ್ದರು. ಫೆಬ್ರವರಿ 11 ರಂದು ರಾಮವತಿಗೆ ಉಸಿರಾಟದ ಸಮಸ್ಯೆ ಉಂಟಾಗಿತ್ತು. ತಕ್ಷಣವೇ ಆಕೆಯನ್ನು ಕೊರ್ವಾ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ವೇಳೆ ಆಕೆ ಮೃತಪಟ್ಟಿರುವುದಾಗಿ ಅಲ್ಲಿನ ವೈದ್ಯರು ತಿಳಿಸಿದ್ದರು.
ಪುತ್ರರಿಬ್ಬರು ತಾಯಿಯನ್ನು ತಮ್ಮೂರಿಗೆ ತಂದು ಅಂತ್ಯಸಂಸ್ಕಾರ ಮಾಡಲು ಬಯಸಿದ್ದು, ಅದರಂತೆ ಬಿಹಾರಕ್ಕೆ ಶವವನ್ನು ವಾಪಸ್ ತರುತ್ತಿದ್ದರು. ಫೆಬ್ರವರಿ 12 ರಂದು ಖಾಸಗಿ ವಾಹನದಲ್ಲಿ ದೇಹವನ್ನು ಬೇಗುಸರೈಗೆ ತರಲಾಗುತ್ತಿತ್ತು. ಛತ್ತೀಸ್ಗಢದಿಂದ 18 ಗಂಟೆಗಳ ಪ್ರಯಾಣದ ನಂತರ ಬಿಹಾರದ ಔರಂಗಾಬಾದ್ ತಲುಪಿದಾಗ ಅಚ್ಚರಿ ಎಂಬಂತೆ ರಾಮವತಿ ಇದ್ದಕ್ಕಿದ್ದಂತೆ ಎದ್ದು ಕುಳಿತಿದ್ದಾರೆ.
ಇದನ್ನು ಕಂಡು ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ. ರಸ್ತೆ ಬದಿ ವಾಹನ ನಿಲ್ಲಿಸಿ ಆಕೆಯನ್ನು ಭಯದಿಂದಲೇ ಪರೀಕ್ಷಿಸಿದ್ದಾರೆ. ಮಹಿಳೆ ಜೀವಂತವಾಗಿರುವುದನ್ನು ಕಂಡುಕೊಂಡ ಅವರು ಬೇಗುಸರಾಯ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಆಕೆಯನ್ನು ವೆಂಟಿಲೇಟರ್ನಲ್ಲಿರಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ವಾಹನದಲ್ಲಿ ಕರೆತರುತ್ತಿದ್ದಾಗ ಕಾರ್ಡಿಯೋ ಪಲ್ಮನರಿ ರೆಸಸಿಟೇಶನ್ (ಸಿಪಿಆರ್) ಆಗಿ ಮಹಿಳೆ ಬದುಕಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಅಂದರೆ, ವಾಹನ ಅಲುಗಾಡಿದಾಗ ದೇಹ ಕುಲುಕಿ ಮಹಿಳೆಗೆ ಉಸಿರಾಟ ಮರು ಆರಂಭವಾಗಿದೆ. ಹೃದಯಸ್ತಂಭನ ಉಂಟಾದಾಗ ಸಿಪಿಆರ್ ಮಾಡಲಾಗುತ್ತದೆ. ಅದಿಲ್ಲಿ ಸಹಜವಾಗಿ ಆಗಿದೆ ಎಂದಿದ್ದಾರೆ.
An elderly woman who was declared dead in Chhattisgarh, miraculously came back to life as soon as she entered her native state Bihar.
21-11-25 05:25 pm
HK News Desk
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
21-11-25 06:10 pm
HK News Desk
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
21-11-25 10:39 pm
Mangalore Correspondent
ನವೆಂಬರ್ 23ರಿಂದ ಪ್ರತಿ ವಾರ 'ಸಂಸದ್ ಖೇಲ್ ಮಹೋತ್ಸವ'...
21-11-25 10:03 pm
ಸುರತ್ಕಲ್- ನಂತೂರು- ಬಿಸಿ ರೋಡ್ ಹೆದ್ದಾರಿ ಎನ್ಎಚ...
21-11-25 09:55 pm
Snake Bite, Mangalore, Detection Kit: ಹಾವು ಕಚ...
21-11-25 08:45 pm
ಮಾನಸಿಕ ಖಿನ್ನತೆ ; ಶಿಕ್ಷಕಿ ತಾಯಿಯನ್ನು ಕಾಲೇಜು ಬಿಟ...
20-11-25 10:48 pm
21-11-25 11:07 pm
Bangalore Correspondent
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am