ಬ್ರೇಕಿಂಗ್ ನ್ಯೂಸ್
05-02-24 06:34 pm HK News Desk ದೇಶ - ವಿದೇಶ
ತಿರುವನಂತಪುರಂ, ಫೆ.5: ಅಯೋಧ್ಯೆ ರಾಮ ಮಂದಿರ ಮತ್ತು ಬಾಬ್ರಿ ಮಸೀದಿ ಜೊತೆ ಜೊತೆಯಾಗಿ ನಿರ್ಮಾಣಗೊಳ್ಳುತ್ತಿರುವುದು ದೇಶದಲ್ಲಿ ಜಾತ್ಯತೀತ ತತ್ವವನ್ನು ಮತ್ತಷ್ಟು ಜಾಗೃತಗೊಳಿಸಲಿದೆ. ರಾಮ ಮಂದಿರಕ್ಕಾಗಿ ಮುಸ್ಲಿಮರು ಪ್ರತಿಭಟನೆ ನಡೆಸುವ ಅಗತ್ಯವಿಲ್ಲ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಕೇರಳ ರಾಜ್ಯಾಧ್ಯಕ್ಷ ಪಾಣಕ್ಕಾಡ್ ಸಯ್ಯದ್ ಸಾದಿಕ್ ಆಲಿ ಶಿಹಾಬ್ ತಂಗಳ್ ಹೇಳಿಕೆ ನೀಡಿರುವುದು ಕೇರಳದಲ್ಲಿ ಪರ- ವಿರೋಧ ಹೇಳಿಕೆಗೆ ಕಾರಣವಾಗಿದೆ.
ಮಲಪ್ಪರಂ ಜಿಲ್ಲೆಯ ಮಂಜೇರಿಯಲ್ಲಿ ಶಿಹಾಬ್ ತಂಗಳ್ ಸಮಾವೇಶದಲ್ಲಿ ನೀಡಿರುವ ಹೇಳಿಕೆಯ ವಿಡಿಯೋ ವೈರಲ್ ಆಗಿದ್ದು, ಎಡರಂಗದ ಜೊತೆ ಸೇರಿ ರಾಜ್ಯದಲ್ಲಿ ಅಧಿಕಾರ ಅನುಭವಿಸುತ್ತಿರುವ ಐಎನ್ನೆಲ್ ನಾಯಕರು ಲೀಗ್ ರಾಜ್ಯಾಧ್ಯಕ್ಷರ ಹೇಳಿಕೆಯನ್ನು ವಿರೋಧಿಸಿದ್ದಾರೆ. ಆದರೆ, ಕಾಂಗ್ರೆಸ್ ಮತ್ತು ಐಯುಎಂಎಲ್ ನಾಯಕರು ಶಿಹಾಬ್ ತಂಗಳ್ ಹೇಳಿಕೆಯನ್ನು ಸಮರ್ಥಿಸಿದ್ದು, ಸಮಾಜ ಒಡೆಯದಂತೆ ಮತ್ತು ದ್ವೇಷ ಹಬ್ಬದಂತೆ ಮುನ್ನೆಚ್ಚರಿಕೆಯ ಸಲುವಾಗಿ ಈ ಹೇಳಿಕೆ ನೀಡಿದ್ದಾರೆ ಎಂದಿವೆ.
ದೇಶದಲ್ಲಿ ಬಹಳಷ್ಟು ಜನರು ರಾಮನನ್ನು ಆರಾಧಿಸುತ್ತಾರೆ. ಅದು ವಾಸ್ತವ ಆಗಿರುವಾಗ, ನಾವು ಅದನ್ನು ವಿರೋಧಿಸಲಾಗದು. ಅದನ್ನು ಪ್ರತಿಭಟಿಸುವ ಅಗತ್ಯವೂ ಇಲ್ಲ. ಕೋರ್ಟ್ ಆದೇಶದಂತೆ ದೇವಸ್ಥಾನ ಮತ್ತು ಮಸೀದಿ ನಿರ್ಮಾಣ ಆಗ್ತಿದೆ. ಇವೆರಡೂ ಭಾರತದ ಒಳಗೇ ಇರುವಂಥವು. ದೇಗುಲ, ಮಸೀದಿ ಒಟ್ಟೊಟ್ಟಿಗೆ ನಿರ್ಮಾಣ ಆಗ್ತಿರೋದು ದೇಶದ ಜಾತ್ಯತೀತ ತತ್ವ ಬಲಗೊಳ್ಳುತ್ತಿರುವುದಕ್ಕೆ ಉತ್ತಮ ನಿದರ್ಶನ. ಬಾಬ್ರಿ ಮಸೀದಿಯನ್ನು ಕರಸೇವಕರು ಒಡೆದು ಹಾಕಿದ್ದಾರೆ ಎನ್ನುವುದು ಗೊತ್ತಿದೆ. ಅದಕ್ಕಾಗಿ ನಾವು ಆ ಸಂದರ್ಭದಲ್ಲಿ ಪ್ರತಿಭಟನೆಯನ್ನೂ ಮಾಡಿದ್ದೆವು ಎಂದು ಶಿಹಾಬ್ ತಂಗಳ್ ಹೇಳಿದ್ದಾರೆ.
Congress’ ally in Kerala, the Indian Union Muslim League’s state President Panakkad Sayyid Sadiq Ali Shihab Thangal sparked a controversy with his recent remark on Ayodhya Ram Mandir. Addressing an event on January 24 at Manjeri near Malappuram, Thangal said, “There is no need to protest against the construction of the Ram temple at Ayodhya as both the new temple and the proposed mosque would strengthen secularism in the country.”
07-10-25 11:20 pm
Bangalore Correspondent
Big Boss, Prashanth Sambargi, Dk Shivakumar,...
07-10-25 10:49 pm
Big Boss Kannada, Close, Update: ಬಿಗ್ ಬಾಸ್ ಮನ...
07-10-25 10:18 pm
Big Boss Kannada Closed: ಕನ್ನಡ ಶೋ ಬಿಗ್ ಬಾಸ್ ಗ...
07-10-25 07:32 pm
ದಸರಾ ರಜಾ ಅವಧಿ ವಿಸ್ತರಣೆ ಮಾಡಿ ಎಂದು ಮನವಿ ; 10 ದಿ...
07-10-25 05:23 pm
07-10-25 11:16 pm
HK News Desk
ವಿಶ್ವಸಂಸ್ಥೆ ಮಹಾಧಿವೇಶನಕ್ಕೆ ಪಿಪಿ ಚೌಧರಿ ನೇತೃತ್ವದ...
07-10-25 01:53 pm
ಮೊಘಲ್ ಆಕ್ರಮಣದಿಂದ ವಿಷ್ಣು ಮೂರ್ತಿ ಭಗ್ನ ; ಪ್ರತಿಮೆ...
06-10-25 07:56 pm
ಬಿಹಾರ ಚುನಾವಣೆಗೆ ಮುಹೂರ್ತ ನಿಗದಿ ; ಎರಡು ಹಂತದಲ್ಲಿ...
06-10-25 07:21 pm
ಕುಂಬಳೆಯಲ್ಲಿ ಡಿವೈಎಫ್ಐ ನಾಯಕಿ, ಯುವ ವಕೀಲೆ ಆತ್ಮಹತ್...
05-10-25 11:07 pm
07-10-25 11:14 pm
Mangalore Correspondent
Mangaluru, Sudheer Reddy: ಶಾರದೋತ್ಸವ ಗೊಂದಲ ಇತ್...
07-10-25 10:54 pm
Ullal News, Mangalore, BJP, Police: ಉಳ್ಳಾಲ ಶಾ...
07-10-25 05:17 pm
Talapady, Mangalore, Crime: ತಲಪಾಡಿ ಅಕ್ಷಯ ಫಾರ್...
07-10-25 05:04 pm
ಫಿಶ್ ಮೀಲ್ ಲಾರಿಗಳಿಂದ ಉಳ್ಳಾಲದಲ್ಲಿ ಗಬ್ಬುನಾತ ! ರಸ...
07-10-25 03:33 pm
07-10-25 10:13 pm
Mangalore Correspondent
Kasaragod Gang War, Crime: ಕುಂಬಳೆ ಸೀತಾಂಗೋಳಿಯಲ...
07-10-25 10:31 am
Kali Yogish, Arrest, Mangalore: ಮಂಗಳೂರು, ಮೈಸೂ...
05-10-25 03:22 pm
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm