ಬ್ರೇಕಿಂಗ್ ನ್ಯೂಸ್
30-01-24 01:38 pm HK News Desk ದೇಶ - ವಿದೇಶ
ನವದೆಹಲಿ, ಜ.30: ಅಮೆರಿಕದ ಸೇನಾಪಡೆ ಸದ್ಯದಲ್ಲೇ ಇರಾನ್ ಮೇಲೆ ದಾಳಿ ನಡೆಸಲಿದೆ. ಅದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದೆ ಎಂದು ಪೆಂಟಗಾನ್ ಮೂಲಗಳನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇತ್ತೀಚೆಗೆ ಇರಾನ್ ಪ್ರೇರಿತ ಬಂಡುಕೋರರು ಅಮೆರಿಕದ ನೌಕಾಪಡೆ ಮೇಲೆ ದಾಳಿ ನಡೆಸಿದ್ದು ಮೂವರು ಯೋಧರು ಸಾವನ್ನಪ್ಪಿದ್ದರು. ಕೃತ್ಯದ ಹಿನ್ನೆಲೆಯಲ್ಲಿ ಪ್ರತಿದಾಳಿ ನಡೆಸಬೇಕೆಂದು ಅಮೆರಿಕದ ಅಧ್ಯಕ್ಷ ಜೋ ಬಿಡೆನ್ ಅವರಿಗೆ ರಾಜಕೀಯ ಸಲಹೆಗಾರರು ಒತ್ತಡ ಹೇರಿದ್ದಾರೆ.
ಆದರೆ ಜೋ ಬಿಡೆನ್ ಇನ್ನೂ ಪ್ರತಿ ದಾಳಿಗೆ ಓಕೆ ಎಂದಿಲ್ಲ. ಇಸ್ರೇಲ್- ಹಮಾಸ್ ಸಂಘರ್ಷ ನಡೆಯುತ್ತಿರುವುದರಿಂದ ಅಮೆರಿಕವು ಇರಾನ್ ಮೇಲೆ ದಾಳಿ ನಡೆಸುವುದಕ್ಕೆ ಮೀನ ಮೇಷ ಎಣಿಸುತ್ತಿದೆ. ಆದರೆ ಸೇನಾ ಪಡೆ ಮತ್ತು ರಾಜಕೀಯ ತಜ್ಞರು ತೀವ್ರ ಪ್ರತಿದಾಳಿ ನಡೆಸಲೇಬೇಕೆಂದು ಅಧ್ಯಕ್ಷ ಜೋ ಬಿಡೆನ್ ಮೇಲೆ ಒತ್ತಡ ಹೇರಿದ್ದಾರೆ. ಇತ್ತೀಚೆಗೆ ಅಮೆರಿಕದ ಸೇನಾ ಪಡೆಯ ಮೇಲೆ ಇರಾನ್ ಸೇನಾಪಡೆಯಿಂದಲೇ ಡ್ರೋಣ್ ದಾಳಿಯಾಗಿತ್ತು ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಇರಾನ್ ಹೊರಗಿನ ಸೇನಾಪಡೆ ಮತ್ತು ಬಂಡುಕೋರರ ಮೇಲೆ ಪ್ರತಿದಾಳಿ ನಡೆಸಬೇಕೆಂಬ ಅಭಿಪ್ರಾಯ ಬಲಗೊಳ್ಳುತ್ತಿದೆ.
ಈ ವಿಚಾರದಲ್ಲಿ ಜೋ ಬಿಡೆನ್ ತನ್ನ ರಾಜಕೀಯ ಸಲಹೆಗಾರರ ಜೊತೆಗೆ ಚರ್ಚಿಸುತ್ತಿದ್ದಾರೆ. ಚರ್ಚೆಯ ಬಳಿಕವೇ ಈ ಬಗ್ಗೆ ಜೋ ಬಿಡೆನ್ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಇತ್ತೀಚೆಗೆ ಇರಾನ್ ದಾಳಿಯ ಬಳಿಕ ಪೆಂಟಗಾನ್ ಮೂಲಗಳನ್ನು ಉಲ್ಲೇಖಿಸಿ ಅಲ್ಲಿನ ಮಾಧ್ಯಮಗಳು ಅಮೆರಿಕವು, ಇರಾನ್ ಜೊತೆಗೆ ಯುದ್ಧ ಬಯಸುವುದಿಲ್ಲ. ನಾವು ಅತಿಕ್ರಮಣವನ್ನೂ ಮಾಡುವುದಿಲ್ಲ. ಆದರೆ ಏನು ಆಗಬೇಕೋ ಅದನ್ನು ಮಾಡಿಯೇ ಮಾಡುತ್ತೇವೆ ಎಂದಿದ್ದವು. ವೈಟ್ ಹೌಸ್ ನಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯ ವಕ್ತಾರ ಜಾನ್ ಕಿರ್ಬಿ ಕೂಡ ಇದೇ ಮಾತುಗಳನ್ನು ಉಲ್ಲೇಖಿಸಿದ್ದರು. ಇರಾನಿನ ಟೆಹ್ರಾನಲ್ಲಿರುವ ಬಂಡುಕೋರ ಗುಂಪುಗಳೇ ಈ ದಾಳಿ ನಡೆಸಿವೆ. ಇಸ್ಲಾಮಿಕ್ ಉಗ್ರವಾದಿ ಗುಂಪುಗಳಲ್ಲ ಎಂದವರು ಹೇಳಿದ್ದರು.
The United States is reportedly preparing to launch retaliatory attacks against Iran-backed groups, which were allegedly behind the recent drone attack on US troops in Jordan, killing three soldiers. According to Pentagon sources, the retaliation would likely begin in the next couple of days and come in waves against a range of targets once the president gave the go-ahead, Politico reported, citing officials.
18-08-25 10:47 pm
Bangalore Correspondent
ನಿಮ್ಮ ಮನೆ ಹುಡುಗಿನ ನಮ್ಮ ಸಮುದಾಯದ ಯುವಕನಿಗೆ ಮದುವೆ...
18-08-25 10:35 pm
Dk Shivakumar, Dharmasthala Case: ಧರ್ಮಸ್ಥಳ ವಿ...
18-08-25 08:45 pm
SIT, Dharmasthala Case, Pralhad Joshi: ಯಾರೋ ಅ...
18-08-25 01:25 pm
ಬೆಂಗಳೂರು ; ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ...
16-08-25 10:03 pm
18-08-25 09:19 pm
HK News Desk
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಇಂಡಿಯಾ ಒಕ್ಕೂಟದಿ...
18-08-25 01:28 pm
ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್.ಡಿ.ಎ ಕೂಟದಿಂದ ಅಚ್ಚ...
17-08-25 09:09 pm
ಜಮ್ಮು, ಕಾಶ್ಮೀರದಲ್ಲಿ ಮತ್ತೆ ಮೇಘ ಸ್ಫೋಟ, ಏಳು ಮಂದಿ...
17-08-25 03:02 pm
ಭಾರತಕ್ಕೆ ಮರಳಿದ ಗಗನಯಾತ್ರಿ ಶುಭಾಂಶು ಶುಕ್ಲಾ ; ದೆಹ...
17-08-25 12:54 pm
18-08-25 06:14 pm
Mangalore Correspondent
Unidentified Girl Body Found, Dharmasthala, R...
18-08-25 04:07 pm
ವಿಟ್ಲ ; ಖ್ಯಾತ ಇಂಟೀರಿಯರ್ ಡಿಸೈನರ್, ಪ್ರಗತಿ ಪರ ಕೃ...
17-08-25 11:06 pm
Mangalore Rain, School Holiday: ಚಂಡಮಾರುತಕ್ಕೆ...
17-08-25 10:50 pm
Mangalore, Thokottu, Police: ತೊಕ್ಕೊಟ್ಟು ಮೊಸರು...
17-08-25 05:26 pm
17-08-25 10:07 pm
Mangalore Correspondent
Mangalore Police, Drugs, Arrest: ಗಾಂಜಾ ಸೇವನೆ...
16-08-25 10:49 pm
Bengaluru Woman Hurls Abuses at Traffic Cops:...
16-08-25 07:06 pm
ಉತ್ತರ ಪ್ರದೇಶದಲ್ಲಿ ಮತ್ತೊಂದು ಮತಾಂತರ ಜಾಲ ; ಹಿಂದು...
16-08-25 11:25 am
Gold Robbery, Mangalore, Kerala: ಕೇರಳದ ಚಿನ್ನದ...
16-08-25 10:20 am