ಬ್ರೇಕಿಂಗ್ ನ್ಯೂಸ್
26-10-20 11:31 am Headline Karnataka News Network ದೇಶ - ವಿದೇಶ
ಆಸ್ಟ್ರೇಲಿಯಾ, ಅಕ್ಟೋಬರ್ 26 : ಆಸ್ಟ್ರೇಲಿಯಾದ ತಾಸ್ಮೇನಿಯಾ ದ್ವೀಪ ಸಮೂಹದ ಬಳಿಯ ಕಡಲಿನಲ್ಲಿ ತಿಮಿಂಗಿಲಗಳ ಮಾರಣಹೋಮ ನಡೆದು ತಿಂಗಳು ಕಳೆಯುವ ಮೊದಲೇ ನಮೀಬಿಯಾ ಕಡಲ ತೀರದಲ್ಲಿ 7 ಸಾವಿರಕ್ಕೂ ಹೆಚ್ಚು ಸೀಲ್ ಗಳ ಶವ ಪತ್ತೆಯಾಗಿದೆ.
ಸಾಮಾನ್ಯವಾಗಿ ಈ ಪ್ರದೇಶ ಸೀಲ್ಗಳ ಸಂತಾನೋತ್ಪತ್ತಿ ತಾಣವಾಗಿದ್ದು ನವೆಂಬರ್ ಮಧ್ಯದಿಂದ ಡಿಸೆಂಬರ್ ಮಧ್ಯದವರೆಗೆ ಮರಿಗಳಿಗೆ ಜನ್ಮ ನೀಡುತ್ತವೆ. ಈ ಕಾರಣಕ್ಕೆ ಸಾವಿರ ಸಾವಿರ ಸಂಖ್ಯೆಯಲ್ಲಿ ಸೀಲ್ ಗಳು ನಮೀಬಿಯಾ ಕಡಲ ತೀರಕ್ಕೆ ಬರುತ್ತವೆ. ಆದರೆ ಮರಿಗಳಿಗೆ ಜನ್ಮ ನೀಡುವ ಮೊದಲೇ ಸಾವಿರಾರು ಸೀಲ್ಗಳ ಮಾರಣಹೋಮ ನಡೆದಿದೆ.
ಮೇಲ್ನೋಟಕ್ಕೆ ಇದು ಹವಾಮಾನ ವೈಪರೀತ್ಯ ಕಾರಣದಿಂದ ಆಗಿದೆ ಎಂದು ಕೆಲವರು ವಾದಿಸಿದರೆ, ಇನ್ನೂ ಕೆಲವರು ಆಹಾರ ಕೊರತೆಯೂ ಸೀಲ್ಗಳ ಸಾವಿಗೆ ಕಾರಣವಾಗಿರಬಹುದು ಎಂದು ವಾದಿಸುತ್ತಾರೆ. ಇಷ್ಟೆಲ್ಲದರ ಮಧ್ಯೆ ಸೀಲ್ಗಳಿಗೆ ಬ್ಯಾಕ್ಟೀರಿಯಾಗಳ ಸೋಂಕು ತಗುಲಿ, ಈ ರೀತಿ ಸಾಮೂಹಿಕವಾಗಿ ಸಾವನ್ನಪ್ಪಿರಬಹುದು ಎಂಬುದು ಇನ್ನೂ ಕೆಲವರ ವಾದ. ಆದರೆ ಈ ಘಟನೆಗೆ ನಿಖರವಾದ ಕಾರಣ ಏನು ಎಂಬುದು ಸ್ಪಷ್ಟವಾಗಿಲ್ಲ. ಹೀಗಾಗಿ ನಮೀಬಿಯಾ ಸರ್ಕಾರ ತನಿಖೆಗೆ ಮುಂದಾಗಿದೆ.
ಇಂತಹದ್ದೇ ಘಟನೆ 26 ವರ್ಷಗಳ ಹಿಂದೆ ನಮೀಬಿಯಾದಲ್ಲಿ ನಡೆದಿದ್ದು, ಆಗಲೂ ಸಾವಿರ ಸಾವಿರ ಸೀಲ್ಗಳು ಮೃತಪಟ್ಟಿದ್ದವು. 1994ರಲ್ಲಿ 10 ಸಾವಿರ ಸೀಲ್ಗಳು ಮೃತಪಟ್ಟು, 15 ಸಾವಿರ ಭ್ರೂಣಗಳು ಭೂಮಿಗೆ ಬರುವ ಮೊದಲೇ ಕಣ್ಣುಮುಚ್ಚಿದ್ದವು.
The number of dead seals found washed ashore on the coast of Namibia has risen to more than 7,000, non-profit group Ocean Conservation Namibia.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
04-10-25 10:29 pm
Mangalore Correspondent
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
ಮಂಗಳೂರಿನಲ್ಲಿ ಗಣತಿ ಕಾರ್ಯಕ್ಕೆ 425 ಮಂದಿ ಗೈರು: ಶಿ...
02-10-25 11:05 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm